Sunday, July 26, 2009

ಕಾವೇರಿ ಕುಟುಂಬದ ಸಭೆ ಇಂದು, ಜಲವಿವಾದ ಪರಿಹಾರ ಕಂಡೀತೆ?

ಕಾವೇರಿ ಜಲವಿವಾದಕ್ಕೆ ಶತಮಾನಗಳ ಇತಿಹಾಸವಿದೆ. Madras Presidency and the Princely State of ಮೈಸೂರ್ ನಡುವೆ ಕ್ರಮವಾಗಿ ೧೮೯೨ ಹಾಗೂ 1924ರಲ್ಲಿ ಆದ ಒಪ್ಪಂದಗಳು ಈಗ ಜಾರಿಯಲ್ಲಿವೆ. ಕಾವೇರಿ ಜಲವಿವಾದಕ್ಕೆ ಸರಿಯಾದ ನ್ಯಾಯ ರಾಜ್ಯಕ್ಕೆ ದೊರಕಿಲ್ಲ. ರಾಜಕಾರಣಿಗಳ ಇಚ್ಚಾಶಕ್ತಿಯ ಕೊರತೆ ಹಾಗೂ ನ್ಯಾಯಾಲಯಗಳಲ್ಲಿ ರಾಜ್ಯದ ರೈತರ ಹಿತಾಸಕ್ತಿಯನ್ನು ಸರಿಯಾದ ರೀತಿಯಲ್ಲಿ ಮನವರಿಕೆ ಮಾಡಿಕೊಡುವಲ್ಲಿ ವೈಫಲ್ಯತೆ ಕಂಡಿರುವುದು ನಮ್ಮ ರೈತರಿಗೆ ಮುಳುವಾಗಿ ಪರಿಣಮಿಸಿದೆ. ಇದುವರೆಗೂ ಹಲವಾರು ಸರ್ಕಾರಗಳು ಮುಖ್ಯಮಂತ್ರಿಗಳು ಆಗಿ ಹೋಗಿದ್ದಾರೆ. ಆದರೆ ಯಾರೂ ಸಮರ್ಥವಾದ ರಾಜಕೀಯ ಇಚ್ಚಾಶಕ್ತಿ ಪ್ರದರ್ಶಿಸದೇ ಜಲವಿವಾದ ಜೀವಂತವಾಗಿರುವಂತೆ ನೋಡಿಕೊಂಡಿದ್ದಾರೆ. ಇದೆಲ್ಲ ಯಾಕೆ ನೆನಪಾಯಿತೆಂದರೆ, ನಾಳೆ ಕರ್ನಾಟಕ, ಕೇರಳ, ತಮಿಳುನಾಡು ಮತ್ತು ಪಾಂಡಿಚೆರಿ ರಾಜ್ಯಗಳ ಕಾವೇರಿ ಕುಟುಂಬದ ಮಹತ್ವದ ಸಭೆ ನಡೆಯಲಿದೆ. ಜಲವಿವಾದ ಬಗೆಹರಿಸಲು ಟ್ರಿಬ್ಯೂನಲ್ ರಚನೆಯಾಗಿದ್ದರೂ ಸಹಾ ಜಲವಿವಾದ ಬಗೆ ಹರಿಯುವ ಲಕ್ಷಣಗಳಿಲ್ಲ. ಹೀಗಿರುವಾಗ ನಾಲ್ಕು ರಾಜ್ಯಗಳ ಸಮಾನ ಮನಸ್ಕರು ಕಾವೇರಿ ಕುಟುಂಬ ರಚಿಸಿಕೊಂಡು ಜಲವಿವಾದ ಪರಿಹಾರಕ್ಕೆ
ಕಂಡು ಹಿಡಿಯಲು ಮುಂದಾಗಿದ್ದಾರೆ.
ಮೈಸೂರು ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರ ವಿಬಾಗದಲ್ಲಿರುವ ಪ್ರೊ. ಕೆ ಸಿ ಬಸವರಾಜು ಕರ್ನಾಟಕ ಕಾವೇರಿ ಕುಟುಂಬದ ನಾಯಕರು. ಜಲವಿವಾದಕ್ಕೆ ಪರಿಹಾರ ಕಂಡು ಹಿಡಿಯಲು ಕಾವೇರಿ ಕುಟುಂಬದೊಂದಿಗೆ ಹಲವಾರು ಭಾರಿ ತಮಿಳುನಾಡು, ಕೇರಳ ಹಾಗೂ ಪಾಂಡಿಚೆರಿಗೆ ಭೇಟಿ ನೀಡಿದ್ದಾರೆ. ಮೊನ್ನೆ ಮಾತಿಗೆ ಸಿಕ್ಕ ಅವರು ಕಾವೇರಿ ವಿವಾದಕ್ಕೆ ಕಾವೇರಿ ಕುಟುಂಬ ಅಂತಿಮ ರೂಪ ನೀಡುತ್ತಿದೆ, ಕುಟುಂಬದ ಸದಸ್ಯರು 6ಮಾಡ್ಯುಲ್ ಗಳಲ್ಲಿ ವಿಚಾರವನ್ನು ಪ್ರಸ್ತಾಪಿಸಿ ವಿವಾದ ಇತ್ಯರ್ಥ್ಯಕ್ಕೆ ಮುಂದಾಗಿದ್ದೇವೆ ಎಂದರು. ನಾಳೆ ಸಭೆ ಇದೆ ಎಂದರು. ಮುಂದಿನ ಮಾರ್ಚ್ ವೇಳೆಗೆ ಎಲ್ಲ ರಾಜ್ಯಗಳಲ್ಲು ಸಭೆ ನಡೆಸಿ ಅಂತಿಮ ತೀರ್ಮಾನಕ್ಕೆ ಬರಲಿದ್ದೇವೆ ಎಂದರಾದರೂ ಸಮನ್ವಯದ ಯಾವ ಆಂಶ ನಿಮ್ಮ ಮುಂದಿದೆ ಎಂಬ ಪ್ರಶ್ನೆಗೆ ಉತ್ತರಿಸಲು ನಿರಾಕರಿಸಿದರು.
ಸಧ್ಯ ಕರ್ನಾಟಕಕ್ಕೆ 270ಟಿಎಂಸಿ, ತಮಿಳುನಾಡಿಗೆ 192ಟಿಎಂಸಿ ನೀರು ಹಂಚಿಕೆ ಇದೆ. ಆದರೆ ತಮಿಳುನಾಡು 410ಟಿಎಂಸಿ, ಕರ್ನಾಟಕ 500ಟಿಎಂಸಿ ಬೇಡಿಕೆ ಇರಿಸಿದೆ.

ಮಾಧ್ಯಮದ ಅಂಗಡಿಗಳು ಮತ್ತು ಪತ್ರಕರ್ತರು!

ಕಾಸ್ಟ್ ಕಟಿಂಗ್ ಮತ್ತು ನಿಶ್ಚಿತ ಆದಾಯದ ಕೊರತೆಯಿಂದ ಮಾಧ್ಯಮ ಸಂಸ್ಥೆಗಳು ಪತ್ರಕರ್ತರನ್ನು ಪರ್ಫಾರ್ಮೆನ್ಸ್ ವೀಕ್ ಎಂಬ ಕಾರಣ ನೀಡಿ ತೆಗೆಯುವ ಪ್ರಕ್ರಿಯೆ ಈಗ ನಡೆಯುತ್ತ...