Sunday, May 30, 2010

ಇದು ಪಧವೀಧರ ಕ್ಷೇತ್ರದ ಚುನಾವಣೆ ಸಮಯ!

ಸಾರ್ ನಂಗೆ ಅಪಾಯಿಂಟ್ಮೆಂಟ್ ಆಯ್ತು !, ಎಂಥಾ ಕೆಲ್ಸ ಮಾರಾಯಾ? ಅದೇ ಸಾರ್ ಯಾರೋ ಲಕ್ಷ್ಮಣ್ ಅಂತೆ, ಇಲ್ಲಿವರ್ಗೂ ಅವನ ಮುಖ ನೋಡಿಲ್ಲ, ಮನೆ ಮನೆಗೆ ಹೋಗೋದು ಪಧವೀಧರರನ್ನು ಬೇಟ ಆಗೋದು, ಅವರ ಅಡ್ರೆಸ್ ಮತ್ತು ಫೋನ್ ನಂಬರು ತಗೊಳ್ಳೋದು ಅಷ್ಟೆ. ತಿಂಗಳಿಗೆ 10ಸಾವಿರ ಪೇಮೆಂಟ್ ಅದರ ಮೇಲೆ ದಿನಭತ್ಯೆ 75ರೂಪಾಯಿ. ನಂದೇನೂ ಓಟಿಲ್ಲ ಬಿಡಿ ಸಾರ್,ಏನೋ ಸುಮ್ನೆ ಇದೀನಲ್ಲಾಂತ ಮಾಡ್ತಿದೀನಿ, ಅಂದ ಹಾಗೆ ವಿಷ್ಯ ಗೊತ್ತಾ ಸಾರ್ ಈ ಒದ್ದೋರು ಇದಾರಲ್ಲ ಟೀಚರುಗಳು, ಲೆಕ್ಚರರುಗಳು, ನೌಕರರುಗಳು, ಹೀಗೀಗೆ ನಮ್ಮತ್ರ ಇಷ್ಟು ಓಟೈತೆ ಎಷ್ಟು ಕೋಡ್ತೀರಿ? ನೈಟ್ ಗುಂಡು-ತುಂಡು ಪಾರ್ಟಿ ಎಲ್ಲಿರುತ್ತೆ? ಎಲ್ಲಿಗೆ ಬರ್ಬೇಕು ಹೇಳಿ? ಅಂತಾರೆ ಅಂತ ಬಡಬಡಿಸಿದವನು ಒಬ್ಬ ಪರಿಚಿತ ಪಧವೀಧರ ಯುವಕ. ಇದು ಪಧವೀಧರ ಕ್ಷೆತ್ರದ ಚುನಾವಣೆಯ ಸಂಧರ್ಭ. ವಿದಾನ ಪರಿಷತ್ ನಲ್ಲಿ ಪಧವೀಧರರನ್ನು ಪ್ರತಿನಿಧಿಸುವ ಅವರ ಸಮಸ್ಯೆಗಳನ್ನು ಚರ್ಚಿಸುವ ವೇದಿಕೆಗೆ ಚುನಾವಣೆ ಘೋಷಣೆಯಾಗಿದೆ. ಇಂಥಹ ಸನ್ನಿವೇಶದಲ್ಲಿ ಚುನಾವಣೆಯ ಭರಾಟೆಯೂ ಜೋರಾಗಿಯೇ ಸಾಗಿದೆ.
ರಾಜ್ಯದಲ್ಲಿ ಕಳೆದ ಒಂದೂವರೆ ವರ್ಷಗಳಿಂದಲೂ ಒಂದರ ಹಿಂದೊಂದು ಚುನಾವಣೆಗಳು ಬೆಂಬಿಡದಂತೆ ಬರುತ್ತಿವೆ. ವಿಧಾನ ಸಭೆಯ ಉಪ ಚುನಾವಣೆ, ಬಿಬಿಎಂಪಿ ಚುನಾವಣೆ, ವಿಧಾನ ಪರಿಷತ್ ಚುನಾವಣೆ, ಗ್ರಾಮಪಂಚಾಯ್ತಿ ಚುನಾವಣೆ ಈಗ ಪಧವೀಧ ರಕ್ಷೆತ್ರದ ವಿಧಾನ ಪರಿಷತ್ ಚುನಾವಣೆ. ಗಮನಿಸಿ ನೋಡಿ ಎಲ್ಲಾ ಚುನಾವಣೆಗಳಲ್ಲೂ ಹೆಂಡ-ಖಂಡ-ದುಡ್ಡು ಭರಾಟೆಯೇ ಜೋರು. ಬಹುತೇಕ ಪ್ರಜ್ಞಾವಂತ ಮನಸ್ಥಿತಿಯ ಜನರು ವಿಧಾನ ಸಭೆಗೆ ಬರುತ್ತಾರೆಂದೆ ಬಾವಿಸಲಾಗುತ್ತದೆ, ಆಪಾದಮಸ್ತಕವೆನಿಸುವಂತೆ ರಾಜಕೀ ಯವಿಭಾಗದಿಂದ, ಸಾಹಿತ್ಯ ಹಾಗೂ ಶೈಕ್ಷಣಿಕ ವಲಯದಿಂದಲೂ ಪುಡಾರಿಗಳನ್ನ ಓಲೈಸುವ ಬಾಲಬಡುಕ ಮಂದಿ ವಿಧಾನ ಪರಿಷತ್ ಗೆ ಆಯ್ಕೆಯಾಗುತ್ತಿರುವುದು ದುರಂತದ ಸಂಗತಿ. ಇಂಥಹ ಸನ್ನಿವೇಶದಲ್ಲಿ ಪಧವೀಧ ರಕ್ಷೆತ್ರಕ್ಕೆ ನಡೆಯುತ್ತಿರುವ ಚುನಾವಣೆಯಲ್ಲೂ ರಾಜಕೀಯ ಪಕ್ಷಗಳು ತನ್ನ ಬಾಲ ಹಿಡಿಯುವ ಕೋಡಂಗಿಗಳನ್ನೇ ಚುನಾವಣೆಗೆ ನಿಲ್ಲಿಸುತ್ತಿದೆ, ಇಂಥಹವರಿಂದ ಯಾವ ಪ್ರಯೋಜನವೂ ಆಗದು. ರಾಜಕೀಯ ಪಕ್ಷಗಳ ಬೆಂಬಲ ಬೆನ್ನಿಗಿರುವುದರಿಂದ ಇಂತಹ ಮಂದಿ ಕೋಟಿ ಗಟ್ಟಲೆ ಹಣ ಸುರಿದು ಮತದಾರ ಮಾರುಕಟ್ಟೆಯಲ್ಲಿ ತನ್ನ ಮತವನ್ನು ಮಾರಿಕೊಳ್ಳುವಂತಹ ಪರಿಸ್ತಿತಿಯನ್ನು ಸೃಷ್ಟಿಸಿ ಬಿಟ್ಟಿದೆ. ಪರಿಣಾಮ ಪಧವೀಧರರನ್ನು-ನೌಕರರನ್ನು ಕಲೆ ಹಾಕಿ ಭರ್ಜರಿ ಪಾರ್ಟಿಗಳನ್ನು ಮಾಡಿ ಮತಗಳನ್ನು ಕೊಳ್ಳಲಾಗುತ್ತಿದೆ. ಪದವಿ-ಸ್ನಾತಕ ಪದವಿಗಳನ್ನು ಪಡೆದು ನಿರುದ್ಯೋಗಿಗಳಾಗಿರುವ, ನೌಕರಿಯಲ್ಲಿರುವವರು(ಕ್ಷಮಿಸಿ ಎಲ್ಲರೂ ಅಲ್ಲ!) ಯಾವ ನಾಚಿಕೆಯೂ ಇಲ್ಲದೇ ಎಲ್ಲಾ ಪಾರ್ಟಿಗಳಲ್ಲೂ ಭಾಗವಹಿಸುತ್ತಾ ಮಜಾ ಉಡಾಯಿಸಿ ಅಂತಿಮವಾಗಿ ತಮಗೆಬೇಕಾದವರಿಗೆ ಮತ ಚಲಾಯಿಸುತ್ತಾರೆ. ಇದು ಯಾವ ಸೀಮೆ ಚುನಾವಣೆ ಸ್ವಾಮಿ? ಇವತ್ತು ವಿದಾನಸಭೆ-ಗ್ರಾಮಪಂಚಾಯ್ತಿ ಚುನಾವಣೆಗಳಲ್ಲಿ ಮತ ಹಾಕುವ ಸಾಮಾನ್ಯ ಮತದಾ ರ ಚುನಾವಣೆ ಆಮಿಷಕ್ಕೆ ಒಳಗಾದಾಗ ತಾವೇನೋ ಸಾಚಾ ಅನ್ನುವಂತೆ ಮಾತನಾಡಿಕೊಳ್ಳುವ ಇದೇ ಪಧವಿಧರರು ತಾವು ಕಿಸಿಯುವುದಾದರೂ ಏನು? ಮತ್ತೊಮ್ಮೆ ಕ್ಷಮಿಸಿಎಲ್ಲರಿಗೂ ಹೇಳುತ್ತಿಲ್ಲ ಶೈಕ್ಷಣಿಕ ವರ್ಗದಿಂದ ಅತ್ಯಂತ ಹೆಚ್ಚು ಮಂದಿ ಚುನಾವಣೆ ಭ್ರಷ್ಟತೆಗೆ ಕಾರಣರಾಗಿದ್ದಾರೆ. ಇವತ್ತು ಪ್ರತೀ ಊರುಗಳಲ್ಲಿ ಶೈಕ್ಷಣಿಕ ಕ್ಷೆತ್ರದ ಕೆಲವು ಜನರು ಗುಂಪುಗಾರಿಕೆ ಮಾಡುತ್ತಾ ವಿಧಾನ ಪರಿಷತ್ ಚುನಾವಣೆಯ ಭರಾಟೆಯನ್ನು ಹೆಚ್ಚಿಸಿದ್ದಾರೆ, ಚುನಾವಣೆಯ ಮೌಲ್ಯವನ್ನ ಹಾಳು ಗೆಡವಿದ್ದಾರೆ. ಚುನಾವಣೆಗೆ ನಿಂ ತಪಕ್ಷದ ಅಭ್ಯರ್ತಿಯೋರ್ವ (ಹಿಂದಿನ ಭಾರಿಯೂ ಈತನೆ ಪ್ರತಿನಿಧಿ) ವಿಧಾನ ಪರಿಷತ್ ನಲ್ಲಿ ಬಾಯಿ ಬಿಡದೇ ಸಿಕ್ಕಷ್ಟು ದೋಚಿಕೊಂಡು ದುಂಡಗಾಗಿ ಚುನಾವಣೆ ಸನ್ನಿಹಿತವಾಗುತ್ತಿದ್ದಂತೆ ತನ್ನ ವ್ಯಾಪ್ತಿಯ ಪ್ರತೀ ಶಾಲೆಗಳಿಗೆ ಆಟದ ಸಾಮಾಗ್ರಿಗಳನ್ನು ಹಂಚುತ್ತಾನೆ, ಅದೇ ರೀತಿ ಪಾರ್ಟಿಗಳನ್ನ ಏರ್ಪಡಿಸುತ್ತಾನೆ ಆ ಮೂಲಕ ಕಲಿತವರ ಮತಗಳನ್ನು ಸೆಳೆಯುವ ಪ್ರಯತ್ನ ಮಾಡುತ್ತಾನೆಂದರೆ ಇದಿನ್ಯಾವ ರೀತಿಯ ಚುನಾವಣೆ ಊಹಿಸಿ. ಇಂತಹವರ ನಡುವೆ ಈ ಭಾರಿ ಚುನಾವಣೆಯ ಮೌಲ್ಯಗಳನ್ನು ಪ್ರತಿನಿಧಿಸುವ ರೀತಿಯಲ್ಲಿ ಇದೇ ಪ್ರಥಮ ಭಾರಿಗೆ ಜಿಲ್ಲೆಯಿಂದ ಪ್ರಜ್ಞಾವಂತ ಮನಸ್ಥಿತಿಯ ಆರ್ ಪಿ ವೆಂಕಟೇಶಮೂರ್ತಿ ಅಭ್ಯರ್ತಿಯಾಗಿ ಕಣಕ್ಕಿಳಿದಿದ್ದಾರೆ. ಒಂದು ಚುನಾವಣೆಯಲ್ಲಿ ಒಬ್ಬ ಪ್ರಜ್ಞಾವಂತನನ್ನ, ಮುಕ್ತ ಮನಸ್ಥಿತಿಯ ಹೋರಾಟಗಾರನನ್ನ ಜಿಲ್ಲೆಯ ಪಧವೀಧರರ ಸ್ವಾಭಿಮಾನದ ಸಂಕೇತವಾಗಿ ಬೆಂಬಲಿಸಬೇಕಾದ ಅಗತ್ಯವಿದೆ. 'ದುರ್ಜನರ ದುಷ್ಟತನಕ್ಕಿಂತ, ಸಜ್ಜನರ ಮೌನ ಅತ್ಯಂತ ಅಪಾಯಕಾರಿ' ಎಂಬ ಮಾತಿದೆ ಹಾಗಾಗಿ ಒಂದು ಒಳ್ಳೆಯ ವಾತಾವರಣ ಸೃಷ್ಟಿಯಾಗಬೇಕಾದರೆ ಒಳ್ಳೆಯ ಸಂಗತಿಗಳನ್ನ ಉತ್ತಮ ವಿಚಾರವಂತರನ್ನು ಬೆಂಬಲಿಸ ಬೇಕಾದ ಅಗತ್ಯವಿದೆ.

Sunday, May 23, 2010

ಕನ್ನಡ ಕಟ್ಟುವ ಕೆಲಸ ಅಂದ್ರೆ ಏನು?



ಹೌದು ಇಂತಹದ್ದೊಂದು ಪ್ರಶ್ನೆ ಕಾಡಿದ್ದು 3-4ವಾರಗಳ ಹಿಂದೆ. ಅದು ಹಲ್ಮಿಡಿ ಗ್ರಾಮದಲ್ಲಿ ಆಯೋಜಿಸಲಾಗಿದ್ದ ಜನಪದ ಪರಿಷತ್ ಕಾರ್ಯಕ್ರಮ, ಪ್ರಧಾನ ಭಾಷಣಕಾರರಾಗಿ ಮಾತನಾಡುತ್ತಿದ್ದ ರಾಜ್ಯ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನಲ್ಲೂರು ಪ್ರಸಾದ್ ಎಡಬಿಡಂಗಿಯಂತೆ ಮಾತನಾಡುತ್ತಿದ್ದರು. "ಹಲ್ಮಿಡಿ" ಗ್ರಾಮ ಕನ್ನಡ ಅಕ್ಷ ರಲೋಕ ದಹೆಬ್ಬಾಗಿಲು, ಇಲ್ಲಿ ಮೂಲ ಸೌಕರ್ಯಗಳ ಅಭಿವೃದ್ದಿಯಾಗಿಲ್ಲ, ಗ್ರಾಮಕ್ಕೆ ಸರಿಯಾದುದೊಂದು ರಸ್ತೆಯಿಲ್ಲ,ಇಲ್ಲಿ ಪ್ರವಾಸೋಧ್ಯಮದ ಕೇಂದ್ರ ಆರಂಭವಾಗಬೇಕು, ಜಿಲ್ಲಾಡಳಿತ ನಿರ್ಲಕ್ಷ್ಯ ವಹಿಸಿದೆ,ಆಡಳಿತ ಸತ್ತಿದೆ, ಶಾಸಕರುಗಳು ಗಮನ ಹರಿಸುತ್ತಿಲ್ಲ ", " ಆದರೆ ಸಿಎಂ ಯಡ್ಡಿಯೂರಪ್ಪ ಒಳ್ಳೆಯವರು ಅವರನ್ನ ಅಪ್ರೋಚ್ ಮಾಡಿದರೆ ಅಭಿವೃದ್ದಿ ಆಗುತ್ತೆ, ಆದ್ರೆ ಅಧಿಕಾರಸ್ಥರು ಈ ಬಗ್ಗೆ ಗಮನ ಹರಿಸುತ್ತಿಲ್ಲ" ಹೀಗೆ ಪುಂಖಾನುಪುಂಖವಾಗಿ ಅವತ್ತು ಮಾತನಾಡಿದ್ದು ಇದೆ ನಲ್ಲೂರು ! ಕನ್ನಡದ ಕೆಲಸಕ್ಕೆ ಅಧಿಕಾರಸ್ಥರ ಓಲೈಕೆ ಬೇಕಾ? ಅನಿಸಿತು ಆ ಕ್ಷಣಕ್ಕೆ. ಇದೇ ನಲ್ಲೂರು ಪ್ರಸಾದ್ ಕಸಾಪ ದ ರಾಜ್ಯಾಧ್ಯಕ್ಷರಾಗಿದ್ದಾರೆ, ಅವರ ಹುದ್ದೆಗಿರುವ ತಾಕತ್ತು ಬಳಸಿ ಗುಟುರು ಹಾಕಿದರೆ ಸಾಕಲ್ವಾ?ಕನ್ನಡದ ಕೆಲಸಕ್ಕೆ ಯಾವ ಸಿಎಂ ಆದರೇನು? ಪಿಎಂ ಆದರೇನು? ಇವತ್ತು ಹಾಸನ ಜಿಲ್ಲೆಯಲ್ಲಿ ಅನುದಾನವಿದ್ದರೂ ಸ್ಥಗಿತಗೊಂಡಿರುವ ಹೊಯ್ಷಳ ಮಹೋತ್ಸವ ನಡೆದಿಲ್ಲವೆಂದರೆ ಅದಕ್ಕೆ ಕಾರಣ ಬಿಜೆಪಿ ಸರ್ಕಾರ ಜಿಲ್ಲೆಯ ಬಗ್ಗೆ ತಳೆದಿರುವ ಮಲತಾಯಿ ಧೋರಣೆಯೇ ಕಾರಣ. ಕನ್ನಡ ಭಾಷೆಗೆ ಸಂಬಂದಿಸಿದಂತೆ ಅತೀ ಮುಖ್ಯ ಎನಿಸಿರುವ ಹಲ್ಮಿಡಿ ಗ್ರಾಮ ದಬಗ್ಗೆ ಅಲ್ಲಿನ ಸ್ಮಾರಕದ ಬಗ್ಗೆ ಆಸ್ಥೆ ವಹಿಸದಿರಲು ರಾಜ್ಯ ಸರ್ಕಾರ ನೇರ ಹೊಣೆ ಯಲ್ಲವೇ? ಸರ್ಕಾರದ ಇಂತಹ ನಿಲುವುಗಳ ಬಗ್ಗೆ ಸ್ಥಳೀಯ ಆಡಳಿತವನ್ನು ದೋಷಿಸದೇ ರಾಜ್ಯ ಮಟ್ಟದಲ್ಲಿ ಸರಿಯಾದ ಗುದ್ದು ಹಾಕಿದರೆ ಇದೆಲ್ಲಾ ಎಷ್ಟರ ಮಾತು ಪ್ರಸಾದ್?
ಹೌದು ಕನ್ನಡ ಕಟ್ಟುವ ಕೆಲಸ ಎಂದರೇನು? ಕನ್ನಡ ಭಾಷೆಯ ಪ್ರಾಮುಖ್ಯತೆ ಕರ್ನಾಟಕದಲ್ಲಿ ಎಷ್ಟರ ಮಟ್ಟಿಗೆ ಇದೆ? ಕನ್ನಡಕ್ಕೆ ಸಂಬಂಧಿಸಿದ ರಚನಾತ್ಮಕ ಕೆಸಲಗಳು ಹೇಗೆ ಸಾಗಿದೆ? ಇತರೆ ಭಾಷೆಗಳಿಗೆ ಹೋಲಿಸಿದರೆ ಕನ್ನಡ ಕಟ್ಟುವ ಕೆಲಸ ಹೇಗಿದೆ? ಬೇರೆ ಬಾಷೆಗಳಿಗಿಂ ತಕನ್ನಡ ಹೇಗೆ ಭಿನ್ನವಾಗಿದೆ? ಕನ್ನಡದ ಹೋರಾಟ ಯಾ ವದಿಕ್ಕಿನಲ್ಲಿ ಸಾಗಿದೆ? ಎಂಬೆಲ್ಲಾ ಪ್ರಶ್ನೆಗಳು ಹುಟ್ಟಿದ್ದು ಒನ್ಸ್ ಎಗೇನ್ ಅದೇ ಹಲ್ಮಿಡಿಯ ಕಾರ್ಯಕ್ರಮದಲ್ಲಿ. ಇರಲಿ ಈಗ ನೇರವಾಗಿ ವಿಚಾರಕ್ಕೆ ಬರುತ್ತೇನೆ. ಅದು ಹಾಸನ ನಗರದ ಕಾಲೇಜು ವಿದ್ಯಾರ್ಥಿಗಳ ಕಾರ್ಯಕ್ರಮ ಪ್ರಧಾನ ಭಾಷಣಕಾರರೊಬ್ಬರು ಪ್ರಶ್ನೆ ಹಾಕಿದರು. ಕನ್ನಡ ದಪ್ರಥಮ ಶಾಸನ ಎಲ್ಲಿದೆ? " ಬೆಳಗಾಂ, ಹಾವೇರಿ, ದಾರವಾಡ ಹೀಗೆ ನಾನಾ ಬಗೆಯ ಉತ್ತರಗಳು ವಿದ್ಯಾರ್ಥಿ ಸಮೂಹದಿಂದ ಕೇಳಿಬಂತು. ಪ್ರಶ್ನೆ ಹಾಕಿದವರಿಗೆ ಪಿಚ್ಚೆನ್ನಿಸಿತು. ಬರೀ ವಿದ್ಯಾರ್ಥಿಗಳೇ ಯಾಕೇ ಸ್ವಾಮಿ ಇವತ್ತು ಶಾಲಾ-ಕಾಲೇಜುಗಳಲ್ಲಿ ಮಕ್ಕಳಿಗೆ ಪಾಠ ಹೇಳುವ ಎಷ್ಟೋ ಮಂದಿಗೆ ಹಲ್ಮಿಡಿ ಶಾಸನದ ಬಗ್ಗೆ ತಿಳಿದಿದೆಯೇ ವಿನಹ ಅದು ಸಿಕ್ಕಿದ್ದು ಎಲ್ಲಿ ಎಂಬುದು ಯಾರಿಗೂ ತಿಳಿದಿಲ್ಲದಿರುವುದು ವಿಷಾಧನೀಯಕರ ಸಂಗತಿ. ಹಲ್ಮಿಡಿ ನಾ ಅದೆಲ್ಲಿದೆ ಎಂದು ಕೇಳುವವರ ಸಂಖ್ಯೆಯೇ ಹೆಚ್ಚು. ಇಂತಹ ಸನ್ನಿವೇಶದಲ್ಲಿ ಸದರಿ ಪ್ರಶ್ನೆ ಎತ್ತಿದ ಭಾಷಣಕಾರ ಹಲ್ಮಿಡಿಯ ಶಾಶ್ವತ ನೆನಪು ಉಳಿಯಬೇಕೆಂದರೆ ಆ ಗ್ರಾಮದಲ್ಲಿ ಒಂದು ಸ್ಮಾರಕವಾಗಬೇಕು, ಅದು ಕನ್ನಡದ ಮಣ್ಣಿ ನಮಕ್ಕಳಿಗೆ ಯಾತ್ರಾ ಸ್ಥಳವಾಗಬೇಕು, ಎಂದೆಲ್ಲಾ ಯೋಚಿಸಿ ಕಾರ್ಯಪ್ರವೃತ್ತ ವಾದವರು ಅದೇ ಭಾಷಣಕಾರ.ಇಂತಹದ್ದೊಂದು ಹಠಕ್ಕೆ ಬಿದ್ದು ಅಂದು ಕೊಂಡಿದ್ದನ್ನು ಅತ್ಯಂತ ಕಡಿಮೆ ಅವಧಿಯಲ್ಲಿ ಹಲವರ ಸಹಕಾರದೊಂದಿಗೆ ಮಾಡಿಮುಗಿಸಿದ ಹಾಸನದ ಮದನಗೌಡ! ಅಂದು ಸರ್ಕಾರದಲ್ಲಿ ಸಚಿವರಾಗಿದ್ದ ರಾಣಿಸತೀಶ್, ಜಿಲ್ಲಾಧಿಕಾರಿಯಾಗಿದ್ದ ಅತೀಖ್ ಮತ್ತಿತರರು ಮದನಗೌಡರ ಬೆನ್ನಿಗೆ ನಿಂತು ಅಕ್ಷರ ಲೋಕದ ಹೆಬ್ಬಾಗಿಲಿಗೆ ಒಂದು ಸ್ಪಷ್ಟ ರೂಪ ಕೊಟ್ಟರು. ಅದುವರೆಗೂ ಹನುಮಿಡಿ ಗ್ರಾಮವೆಂದೇ ಕರೆಸಿಕೊಳ್ಳುತ್ತಿದ್ದ ಗ್ರಾಮಕ್ಕೂ ಮದನಗೌಡ ಹೊಸ ಹೆಸರು ನೀಡಿದರು. ಈಗ ಅದು ಹಲ್ಮಿಡಿ ಗ್ರಾಮವೆಂದೇ ಕರೆಯಲ್ಪಡುತ್ತಿದೆ. ಊರಿನಲ್ಲಿ ಸುಂದರವಾದ ಕನ್ನಡ ಸ್ಮಾರಕವೇನೋ ಇದೆ ಆದರೆ ಮೂಲಭೂತ ಸೌಕರ್ಯಗಳ ಕೊರತೆ ಬೆಟ್ಟದಷ್ಟಿದೆ. ಹಾಸನ ಜಿಲ್ಲೆಯಿಂದ ಚಿಕ್ಕಮಗಳೂರಿಗೆ ಸಾಗುವ ಹಾದಿಯಲ್ಲಿ 15ಕಿಮಿ ಸಾಗಿದರೆ ಎಡಕ್ಕೆ ತಿರುವು ತೆಗೆದುಕೊಳ್ಳುವ ಕಚ್ಚಾ ರಸ್ತೆಯ ಏರಿಳಿತಗಳಲ್ಲಿ ಕಷ್ಟಪಟ್ಟು ಸಾಗಿದರೆ ಸಿಗುವುದೇ ಹಲ್ಮಿಡಿ ಗ್ರಾಮ. ತಿರುವು ತೆಗೆದುಕೊಳ್ಳುವ ಹಾದಿಯಲ್ಲಿ ನಿಲ್ಲಿಸಿರುವ ಹಲ್ಮಿಡಿ ಗ್ರಾಮ ದ/ಸ್ಮಾರಕದ ವಿವರ ಸಾರುವ ಫಲಕದಲ್ಲ ಕನಿಷ್ಠವೆಂದರೂ 20ತಪ್ಪುಗಳು ಕಾಣಸಿಗುತ್ತವೆ! ಇದು ಆಡಳಿತಗಾರರ ನಿರ್ಲಕ್ಷ್ಯದ ಒಂದು ಸಣ್ಣ ಸ್ಯಾಂಪಲ್ ಅಷ್ಟೇ. ಕಾರ್ಯಕ್ರಮಕ್ಕೆ ನನ್ನೊಂದಿಗೆ ಬಂದಿದ್ದ ಕನ್ನಡ ಸಂಘಟನೆಯೊಂದರ ಮುಖಂಡ ಇಂತಹದ್ದೊಂದು ಗ್ರಾಮದ ಬಗ್ಗೆ/ಸ್ಮಾರಕದ ಬಗ್ಗೆ ಗೊತ್ತಿರಲಿಲ್ಲ ಎಂದರು ಬೆಪ್ಪಾಗುವ ಸರದಿ ನನ್ನದಾಗಿತ್ತು.
ಇವತ್ತು ಶಾಲಾ-ಕಾಲೇಜುಗಳ ಶೈಕ್ಷಣಿಕ ಪ್ರವಾಸವನ್ನು ದೇವಸ್ಥಾನಗಳಿಗೆ, ವಿಹಾರ ತಾಣಗಳಿಗೆ ಏರ್ಪಡಿಸಲಾಗುತ್ತದೆ, ಆದರೆ ಅಪ್ಪಿತಪ್ಪಿಯೂ ಹಲ್ಮಿಡಿ ಗ್ರಾಮಕ್ಕೆ ಅವರ ಸವಾರಿ ಹೋಗುವುದಿಲ್ಲ. ಗ್ರಾಮಗಳ ಉದ್ದಾರಕ್ಕೆ ಸರ್ಕಾರದಿಂದ ಸುವರ್ಣ ಗ್ರಾಮ ಯೋಜನೆ, ಉದ್ಯೋಗ ಖಾತ್ರಿಯಂತಹ ಕಾರ್ಯಕ್ರಮಗಳಿವೆ ಆದರೆ ಅಂತಹ ಯೋಜನೆಗಳ ಫಲವೂ ಕೂಡ ಈ ಗ್ರಾಮಕ್ಕ ದಕ್ಕಿದ ಕುರುಹುಗಳಿಲ್ಲದಿರುವುದು ದುರಂತ. ನಲ್ಲೂರು ಪ್ರಸಾದ್ ಹೇಳುವಂತೆ ಇಲ್ಲ ಪ್ರವಾಸೋಧ್ಯಮ ಇಲಾಖೆ ಕೇಂದ್ರ ಸ್ಥಾಪನೆಯಾದರೆ, ಮೂಲ ಸೌಕರ್ಯ ಗ್ರಾಮಕ್ಕೆ ಲಭಿಸಿದರೆ ಗಮನ ಸೆಳೆಯಬಹುದೇನೋ? ಆದರೆ ಅದನ್ನು ಅನುಷ್ಟಾನಕ್ಕೆ ತರು ವತಾಕತ್ತು ಅಧಿಕಾರಸ್ಥರಿಗೆ ಬರಬೇಕಷ್ಟೇ. ತಮಿಳು ಸಂತ ತಿರುವಳ್ಳುವರ್ ನ ಪ್ರತಿಮೆ ಸ್ಥಾಪನೆಗೆ ಮುತುವರ್ಜಿ ವಹಿಸುವ ರಾಜ್ಯ ಸರ್ಕಾರ ಕನ್ನಡ ಸ್ಮಾರಕದ ಅಭಿವೃದ್ದಿಯ ಬಗ್ಗೆಯೂ ವೈಯುಕ್ತಿಕ ದ್ವೇಷ ಬಿಟ್ಟು ಕೆಲ ಸ ಮಾಡಬೇಕಾಗಿದೆ. ನೆರೆಯ ಹೆಸರಿನಲ್ಲಿ ಹಾಸನ ಜಿಲ್ಲೆಯ ಹೊಯ್ಸಳ ಮಹೋತ್ಸವ ಸ್ಥಗಿತಗೊಳಿಸುವ ರಾಜ್ಯ ಸರ್ಕಾರ, ತೆಲುಗು ಪರಂಪರೆಯ ಕೃಷ್ಣದೇವರಾಯ ಮಹೋತ್ಸವವನ್ನು ಅದ್ದೂರಿಯಾಗಿ ನಡೆಸುತ್ತದೆ ಎಂದರೆ ಇದು ಯಾರಾದರೂ ಒಪ್ಪುವ ಮಾತೇ?

Sunday, May 2, 2010

'ಪೃಥ್ವಿ' ,ದೇವೇಗೌಡರಿಗೆ ಇಷ್ಟವಾಗಿದ್ದೇಕೆ ಗೊತ್ತಾ?

ಮೊನ್ನೆ ಶನಿವಾರ ಹಾಲಿ ಸಂಸದ-ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ 'ಪೃಥ್ವಿ' ಸಿನಿಮಾಕ್ಕೆ ಹೊರಟ ಸುದ್ದಿ ವೆಬ್ ಪೋರ್ಟಲ್ ಪ್ರಕಟವಾಗುತ್ತಿದ್ದಂತೆಯೇ ನನಗೆ ಕುತೂಹಲ ತಡೆಯಲಾಗಲಿಲ್ಲ, ಅಂತಹದ್ದೇನಿದೆ ಎಂಬ ಕುತೂಹಲ ತಡೆಯಲಾರದೇ ನಾನು ಸಿನಿಮಾ ನೋಡಲು ಹೊರಟೆ. ದೇವೇಗೌಡರಂತಹ ಪ್ರಬುದ್ದ ರಾಜಕಾರಣಿ ಒಂದು ಸಿನಿಮಾ ನೋಡಲು ಹೊರಡುತ್ತಾರೆಂದರೆ ಅದು ತಳ್ಳಿಹಾಕು ವ ಮಾತಲ್ಲ, ಏಕೆಂದರೆ ಇವತ್ತು ರಾಷ್ಟ್ರ ರಾಜಕಾರಣದಲ್ಲಿ ತಮ್ಮ ಛಾಪು ಮೂಡಿಸಿರುವ ದೇವೇಗೌಡರು ಯಾವುದನ್ನು ಕಾರಣವಿಲ್ಲದೇ ಮಾಡಲಾರರು.
ಇರಲಿ ಇನ್ನು ಸಿನಿಮಾ ವಿಚಾರಕ್ಕೆ ಬರೋಣ. 'ಪೃಥ್ವಿ' ಒಂದು ಸಮಕಾಲೀನ ವ್ಯವಸ್ಥೆಯ ಲೋಪದೋಷವನ್ನು ಯಾವುದೇ ಮಸಾಲೆ ಬೆರೆಸದೇ ತುಂಬಾ ನೇರಾ ನೇರವಾಗಿ ಹಾಗೂ ತಣ್ಣಗೆ ಸತ್ಯವನ್ನು ಹೇಳುವ ಚಿತ್ರ. ಇದರಲ್ಲಿ ಯಾವುದೆ ಸಿನಿಮಾ ಗಿಮಿಕ್ ಗಳಿಲ್ಲ. ಪಾತ್ರಕ್ಕೆ ತಕ್ಕಂತಹ ಮ್ಯಾನರಿಸಂ ಪ್ರದರ್ಶಿಸಿರುವ ಪುನೀತ್ ಇದೇ ಪ್ರಥಮ ಭಾರಿಗೆ ತಮ್ಮ ಮಾಮೂಲು ಇಮೇಜ್ ಬಿಟ್ಟು ಹೊಸ ಶೈಲಿಯಲ್ಲಿ ನಟಿಸಿದ್ದಾರೆ. ಕಥೆ ಮಾತ್ರ ಪಕ್ಕಾ ಅಸಲು ಬಳ್ಳಾರಿ ಗಣಿ ಧಣಿಗಳ ಕಥೆ! ಇನ್ನು ನೇರವಾಗಿ ಹೇಳ ಬೇಕೆಂದರೆ ಜನಾರ್ಧನ ರೆಡ್ಡಿ ಕಥೆ! ಸಿನಿಮಾದಲ್ಲಿ ಕಥೆ ಹೇಳುವಾಗ ಸಣ್ಣಪುಟ್ಟ ದೋಷಗಳಿದ್ದರೂ ಕಥೆ ಸಾಗುವ ಧಾಟಿ, ಹೇಳ ಬೇಕಾದ್ದನ್ನು ಹೇಳುವ ನಿರ್ದೇಶಕರ ಜಾಣತನ ಸಿನಿಮಾವನ್ನು ಎತ್ತರಕ್ಕೆ ತಂದು ನಿಲ್ಲಿಸಿದೆ. ತಂದೆಯ ಆಸೆಯಂತೆ ಭಾರತೀಯ ಸಾರ್ವಜನಿ ಕಸೇವೆಗೆ ಆಯ್ಕೆಯಾಗುವ ಮಗ ಪೃಥ್ವಿ ಜಿಲ್ಲಾಧಿಕಾರಿಯಾಗಿ ಬರುವುದು ಬಳ್ಳಾರಿಗೆ! ಬಳ್ಳಾರಿಯ ಜನತೆ ಗಣಿಗಾರಿಕೆಯಿಂದ ಹೇಗೆ ಸಂಕಷ್ಟಕ್ಕೆ ಸಿಲುಕಿದ್ದಾರೆ? ಗಣಿಧಣಿಗಳ ಅಟ್ಟಹಾಸ ಅಲ್ಲಿ ಹೇಗಿದೆ? ಅಲ್ಲಿನ ಸರ್ಕಾರಿ ವ್ಯವಸ್ಥೆ ಹೇಗಿದೆ? ಯಾಕೆ ಆ ರೀತಿ ಆಗಿದೆ? ಸತ್ಯ ಶೋಧಿಸಲು ಹೋಗುವವರಿಗೆ ಅಲ್ಲಿ ಸಿಗು ವಗೌರವ ಏನು? ಎಂಬ ಪ್ರಶ್ನೆಗಳಿಗೆಲ್ಲಾ ಉತ್ತರ ಕೊಡುತ್ತಾ ಸಾಗುವ ಪೃಥ್ವಿ ಸಿನಿಮಾ ಪ್ರೇಕ್ಷಕರನ್ನು ಆವರಿಸಿಕೊಳ್ಳುತ್ತದೆ. ಮುಂದೇನು ಎಂದು ಕಾಯು ವಕುತೂಹಲವನ್ನು ನೀಡುತ್ತದೆ. ಚಿತ್ರದ ಓಟಕ್ಕೆ ಪೂರಕವಾಗುವಂತೆ ಅತ್ಯಂತ ಸರಳ ಆದರೆ ಸಾಹಿತ್ಯ ಶ್ರೀಮಂತಿಕೆಯನ್ನು ಜಯಂತ್ ಕಾಯ್ಕಿಣಿ ನೀಡಿದ್ದಾರೆ. ಮಣಿಕಾಂತ್ ಕದ್ರಿ ಯವರ ಹೊಸತನದ ಸಂಗೀತ, ಜೋರ್ಡಾನ ದೇಶದ ದೃಶ್ಯ ವೈಭವ ಕಣ್ಣಿಗೆ ಕಟ್ಟುತ್ತದೆ. ಸಾಕ್ಷ್ಯ ಚಿತ್ರಗಳನ್ನು ಮಾಡಿಕೊಂಡಿದ್ದ ಜೇಕಬ್ ವರ್ಗೀಸ್ ಕಳೆದ ವರ್ಷ 'ಸವಾರಿ' ಎಂಬ ಯಶಸ್ವಿ ಚಿತ್ರ ನೀಡಿದ್ದರು. ಈಗ ಗಣಿಧಣಿಗಳ ಕಥೆಯನ್ನು ಹೊಂದಿದ 'ಪೃಥ್ವಿ' ನಿರ್ದೇಶಿಸಿದ್ದಾರೆ.
ಕನ್ನಡ ಸಿನಿಮಾಗಳಲ್ಲಿ ಪ್ರಯೋಗ ಶೀಲತೆ ಯುಗ ಮುಗಿದು ಹೆಚ್ಚುಕಮ್ಮಿ 2ದಶಕಗಳಾಗಿದೆ. ಶಂಕರ್ ನಾಗ್ ನಿರ್ದೇಶನದ 'ಮಿಂಚಿನ ಓಟ', ಆಕ್ಸಿಡೆಂಟ್, ನಂತರ ಬಂದದ್ದು ಹಸಿ ಹಸಿ ಸತ್ಯವನ್ನು ತೆರೆದಿಟ್ಟ ಎಂ ಎಸ್ ಸತ್ಯು ನಿರ್ದೇಶನದ 'ಬರ' ಚಿತ್ರ. ಇವೆಲ್ಲಾ ಸಮಕಾಲಿನ ಸತ್ಯಗಳನ್ನು ಯಾವುದೇ ಗಿಮಿಕ್ ಇಲ್ಲದೇ ನೇರವಾಗಿ ಹೇಳಿದ ಆಫ್ ಬೀಟ್ ಸಿನಿಮಾಗಳು. ಇಂತಹ ಪ್ರಯತ್ನ ವನ್ನು ಮತ್ತೆ ಮಾಡುವ ಪ್ರಯತ್ನವಾಯಿತೇ ವಿನಹ ಪೂರ್ಣ ಪ್ರಮಾಣದ Off beat ಸಿನಿಮಾಗಳು ಬಂದದ್ದು ಕಡಿಮೆ. ಬರ ಸಿನಿಮಾ ಸರ್ಕಾರದ ಕಣ್ಣು ತೆರೆಸುವ ಮಹತ್ವದ ಪ್ರಯತ್ನವನ್ನು ಮಾಡಿತಲ್ಲದೇ ರಾಜ್ಯ-ರಾಷ್ಟ್ರದ ಜನತೆಗೆ ಬೀದರ್ ಜಿಲ್ಲೆಯ ಅಂದಿನ ಬರ ಪರಿಸ್ಥಿತಿಯನ್ನ ಮನವರಿಕೆ ಮಾಡುವಲ್ಲಿ ಯಶಸ್ವಿಯಾಗಿತ್ತು. ಅಂತಹುದೇ ಪ್ರಯತ್ನವನ್ನು ಈ 'ಪೃಥ್ವಿ' ಸಿನಿಮಾ ಮಾಡಿದೆ ಎಂದರೆ ತಪ್ಪಾಗಲಾರದು. ಒಂದು ಸತ್ಯವನ್ನು ಹೇಳುವಾಗ ಲೋಪವಾಗದಂತೆ ಕಾಯ್ದುಕೊಳ್ಳುವುದು ಬಹಳ ಮುಖ್ಯವಾಗುತ್ತದೆ ಅಂತಹ ಎಚ್ಚರಿಕೆಯನ್ನು ಇಡೀ ಚಿತ್ರದಲ್ಲಿ ನಿರ್ದೇಶಕರು ತೆಗೆದುಕೊಂಡಿದ್ದಾರಾದರೂ ಅಂತಿಮ ಹಂತದಲ್ಲಿ ನಾಯಕ ನಟ ಹತಾಶನಾಗಿ ಕಾನೂನು ಕೈಗೆತ್ತಿಕೊಳ್ಳುವ ರೀತಿ ಮಾತ್ರ ಸರಿಯೋ ? ತಪ್ಪೋ ಎಂಬ ಗೋಂದಲ ಹುಟ್ಟುಹಾಕುತ್ತದೆ. ಅಷ್ಟರ ಮಟ್ಟಿಗೆ ಒಂದು ಪ್ರಜ್ಞಾವಂತ ಮನಸ್ಥಿತಿಯನ್ನು ಆವರಿಸಿಕೊಳ್ಳುವ ಚಿತ್ರ ಪೃಥ್ವಿ. ಕೆಲವು ಟ್ಯಾಬ್ಲಾಯ್ಡ್ ಪತ್ರಿಕೆಗಳಲ್ಲಿ ಸದರಿ ಚಿತ್ರವನ್ನು ಜನಾರ್ಧನ ರೆಡ್ಡಿಯ ವಿರೋಧಿ ಬಣದ ಸಂಸದ ಅನಿಲ್ ಲಾಡ್ ಪರೋಕ್ಷವಾಗಿ ನಿರ್ಮಿಸಿದ್ದಾನೆ, ಇಂತಹ ಚಿತ್ರದಲ್ಲ ನಟಿಸಲು ಪುನೀತ್ ಯೋಚನೆ ಮಾಡಬೇಕಿತ್ತು ಎಂದು ಬರೆದಿವೆ. ಆದರೆ ಅದೇ ವಾರಪತ್ರಿಕೆಗಳು ರೌಡಿಗಳ, ದೇಶ ದ್ರೋಹಿಗಳ ಎಂಜಲು ತಿಂದು ಕ್ರೈಂ, ಸೆಕ್ಸ್ ಬರೆಯುವಾಗ ಸಿದ್ದಾಂತಗಳು ನೆನಪಿಗೆ ಬಾರದು.
ಒಂದು ತಣ್ಣಗಿನ ಸತ್ಯ ಎಂತಹವರನ್ನು ನಡುಗಿಸಿ ಬಿಡುತ್ತದೆ, ಅಂತಹ ಸತ್ಯದ ಹುಡುಕಾಟ, ವಾಸ್ತವ ನೆಲೆಗಟ್ಟಿನ ಚಿಂತನೆಗಳು ನಮಗೆ ಅಗತ್ಯವಾಗಿ ಬೇಕಿವೆ. ಅದು ಮಾಧ್ಯಮಗಳಲ್ಲಿ ಮಾತ್ರ ಪರಿಣಾಮಕಾರಿಯಾಗಿ ಕಾಣಲು ಸಾಧ್ಯ, ವ್ಯವಸ್ಥೆಗೆ ಅದು ಎಚ್ಚರಿಕೆಯ ಗಂಟೆಯೂ ಆಗಬಲ್ಲದು. ಗಣಿಗಾರಿಕೆಯ ಬಗ್ಗೆ ಲೋಕಾಯುಕ್ತ ಸಂತೋಷ ಹೆಗಡೆ ವರ್ಷದ ಹಿಂದೆಯೇ ವಸ್ತುನಿಷ್ಟ ವರದಿ ನೀಡಿದ್ದರೂ ಸಹಾ ಕ್ರಮ ಜರುಗಿಸು ವ ಯೋಗ್ಯತೆ ಮಾತ್ರ ಸರ್ಕಾರಕ್ಕಿಲ್ಲ, ಗಣಿಧಣಿಗಳ ದುಡ್ಡು ಪಡೆದು ಶಾಸಕರನ್ನು ಸೆಳೆಯುವ ಪಕ್ಷ, ಅದೇ ಪಕ್ಷದ ಶಾಸಕ-ಮಂತ್ರಿಯ ಸೆಕ್ಸ್ ಬೀದಿಗೆ ಬಿದ್ದರೂ ಮೀಸೆ ಮಣ್ಣಾಗಲಿಲ್ಲವೆಂಬ ಧೋರಣೆ ಪ್ರದರ್ಶಿಸಿ ಖುಲ್ಲಂ ಖುಲ್ಲ ಕೇಸು ಮುಚ್ಚಿಸಿ ಕ್ಯಾಬಿನೆಟ್ ದರ್ಜೆ ನೀಡು ವಸರ್ಕಾರ, ನೇರಾ ನೇರವಾಗಿ ಲಂಚ ಪಡೆದು ಸಿಕ್ಕಿಬಿದ್ದ ಶಾಸಕನಿಗೆ ಕ್ಲಿನ್ ಚಿಟ್ ಪಡೆದುಕೊಳ್ಳುವ ಸರ್ಕಾರ, ಅತ್ಯಾಚಾರಿ ಮಂತ್ರಿಯನ್ನು ಬಗಲಲ್ಲಿಟ್ಟುಕೊಳ್ಳುವ ಸರ್ಕಾರ, ಗಣಿಧಣಿಗ ಳ ಕಪಿಮುಷ್ಟಿಗಗೆ ಸಿಲುಕಿ ಅಸಹಾಯಕತೆ ಪ್ರದರ್ಶಿಸುವ ಮುಖ್ಯಮಂತ್ರಿಯನ್ನಿಟ್ಟುಕೊಂಡ ಸರ್ಕಾರ ಇದ್ದರೆಷ್ಟು ಬಿಟ್ಟರೆಷ್ಟು? ಒಬ್ಬ ಅಯೋಗ್ಯ ಮಂತ್ರಿ ಹರತಾಳು ಹಾಲಪ್ಪ ಅತ್ಯಾಚಾರ ಪ್ರಕರಣದಿಂ ದ ಮನೆಗೆ ಹೋಗಿದ್ದಾನೆ. ಇನ್ನೊಬ್ಬ ಕಾಮುಕ ಮಂತ್ರಿಯಾಗಿದ್ದಾನೆ, ಇಂತ ಹ ಸರ್ಕಾರ ಜನತೆಗೆ ನೆಮ್ಮದಿಯ ಆಡಳಿತ ನೀಡಿತೆ. ಒಬ್ಬ ಸಚಿವ ಹರತಾಳು ಹಾಲಪ್ಪನನ್ನು ಮನೆಗೆ ಕಳಿಸಿದಂತೆ ಅಬಕಾರಿ ಸಚಿವ ರೇಣುಕಾಚಾರ್ಯ, ಶಾಸಕ ಸಂಪಂಗಿಯನ್ನ, ಸಿಬಿಐ ತನಿಖೆಗೆ ಒಳಪಟ್ಟಿರುವ ರೆಡ್ಡಿ ಸಹೋದರರನ್ನು ಯಾಕೆ ಮನೆಗೆ ಕಳಿಸಿಲ್ಲ? ಜನ ಸರ್ಕಾರ ದ ಮೇಲೆ ವಿಶ್ವಾಸ ಇಟ್ಟಿರುತ್ತಾರೆ, ಆದರೆ ಎಡಬಿಡಂಗಿ ಧೋರಣೆಗಳು ವ್ಯಕ್ತವಾದಾಗ ಜನರ ಜಾಗೃತಾವಸ್ಥೆ ಸರಿಯಾದ ಪಾಠ ಕಲಿಸುತ್ತದೆ. ಇವತ್ತು ಬಿಜೆಪಿ ಸರ್ಕಾರ ದಮೇಲೆ ಜನ ಅಪಾರ ವಿಶ್ವಾಸ ಇಟ್ಟು ವಿಧಾನ ಸೌಧದಲ್ಲಿ ಕೂರಿಸಿದ್ದಾರೆ. ಅದಕ್ಕೆ ಪೂರಕವಾಗಿ ಆಢಳಿತಗಾರರು ನಡೆದು ಕೊಳ್ಳಬೇಕು ಇಲ್ಲವಾದಲ್ಲಿ ಅಪಾಯ ಕಟ್ಟಿಟ್ಟ ಬುತ್ತಿ.

ಮಾಧ್ಯಮದ ಅಂಗಡಿಗಳು ಮತ್ತು ಪತ್ರಕರ್ತರು!

ಕಾಸ್ಟ್ ಕಟಿಂಗ್ ಮತ್ತು ನಿಶ್ಚಿತ ಆದಾಯದ ಕೊರತೆಯಿಂದ ಮಾಧ್ಯಮ ಸಂಸ್ಥೆಗಳು ಪತ್ರಕರ್ತರನ್ನು ಪರ್ಫಾರ್ಮೆನ್ಸ್ ವೀಕ್ ಎಂಬ ಕಾರಣ ನೀಡಿ ತೆಗೆಯುವ ಪ್ರಕ್ರಿಯೆ ಈಗ ನಡೆಯುತ್ತ...