Sunday, December 20, 2009

ಎಟಿಆರ್ ವರದಿ ಜಾರಿಗೂ ಬದ್ದತೆ ಇರಬೇಕಲ್ಲವೇ?



ಅದು ಎಸ್ ಎಂ ಕೃಷ್ಣ ಮುಖ್ಯಮಂತ್ರಿ ಯಾಗಿದ್ದ ದಿನಗಳು, ಒಮ್ಮೆ ವಿಧಾನಸಭೆಯಲ್ಲಿ ಅರಕಲಗೂಡು ಶಾಸಕ ಎ ಟಿ ರಾಮಸ್ವಾಮಿ ನ್ಯಾಯಾಂಗ ಇಲಾಖೆಯಲ್ಲಿ ನಡೆದಿದ್ದ ಕಂಪ್ಯೂಟರ್ ಖರೀದಿ ಹಗರಣ ಹಾಗೂ ನ್ಯಾಯಾಧೀಶರುಗಳು ನಿವೇಶನಗಳನ್ನು ಹೊಂದುವ ಕುರಿತು ನೇರಾನೇರವಾಗಿ ಆರೋಪಿಸಿ ಚರ್ಚೆಗೆ ಮತ್ತು ಕ್ರಮಕ್ಕೆ ಪಟ್ಟು ಹಿಡಿದು ಕುಳಿತು ಬಿಟ್ಟಿದ್ದರು. ಕಾನೂನು ಎಲ್ಲರಿಗೂ ಒಂದೇ ಹಾಗಿರುವಾಗ ನ್ಯಾಯಾಂಗ ಇಲಾಖೆಯ ಲೋಪದೋಷಗಳು ಮತ್ತು ನ್ಯಾಯಾಧೀಶರು ಮಾಡುವ ಲೆಕ್ಕಪತ್ರಗಳು ಪರಿಶೀಲನೆಗೊಳಪಡಬೇಕು ಎಂಬುದು ಅವರ ಸ್ಪಷ್ಠ ನಿಲುವಾಗಿತ್ತು. ಹಾಗೆಯೆ ಮುಂದೆ ಅವರು ಅಕ್ರಮ ಭೂ ಒತ್ತುವರಿ ಪತ್ತೆ ಜಂಟಿ ಸದನ ಸಮಿತಿಯ ಅಧ್ಯಕ್ಷರಾದಾಗ ಸದನಕ್ಕ ಸಲ್ಲಿಸಿದ ಎರಡನೇ ವರದಿಯಲ್ಲಿ ಸುಪ್ರೀಂ ಕೋರ್ಟ್ ಮತ್ತ ಉಚ್ಚನ್ಯಾಯಾಲಯದ ನ್ಯಾಯಾಧೀಶರುಗಳು ಅಕ್ರಮವಾಗಿ ಹೇಗೆ ನಿವೇಶನಗಳನ್ನು ಪಡೆದಿದ್ದಾರೆ, ಎಷ್ಟು ಪ್ರಮಾಣದಲ್ಲಿ ಸರ್ಕಾರಿ ಭೂಮಿ ಒತ್ತುವರಿ ಮಾಡಿದ್ದಾರೆ ಎಂಬುದನ್ನು ಸವಿಸ್ತಾರವಾಗಿ ವಿವರಿಸಿದ್ದರಾದರು ಅದನ್ನು ಚರ್ಚೆಗೆ ತರುವ ಇಲ್ಲವೇ ಕ್ರಮ ಜರುಗಿಸುವ ಇಚ್ಚಾಶಕ್ತಿ ಸರ್ಕಾರಕ್ಕಾಗಲೀ, ವಿಧಾನ ಪರಿಷತ್ ಸದಸ್ಯರು,ವಿಧಾನ ಸಭಾ ಸದಸ್ಯರಿಗಿರಲಿಲ್ಲದಿದ್ದುದು ಪ್ರಜಾಪ್ರಭುತ್ವ ವ್ಯವಸ್ಥೆಯ ದುರಂತ. ಈ ವಿಚಾರವನ್ನು ಇಲ್ಲಿ ಪ್ರಸ್ಥಾಪಿಸುತ್ತಿರುವುದಕ್ಕ ಕಾರಣವಿದೆ. ಸಧ್ಯ ರಾಜ್ಯ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶ ತಮಿಳು ನಾಡು ಮೂಲದ ಪಿ ಡಿ ದಿನಕರನ್ ಸರ್ಕಾರಿ ಜಮೀನನ್ನ ಅಕ್ರಮವಾಗಿ ಒತ್ತುವರಿ ಮಾಡಿದ್ದಾರೆ ಎಂದು ಆರೋಪಿಸಿ ಎರಡೂ ರಾಜ್ಯಗಳ ಬಾರ್ ಕೌನ್ಸಿಲ್ ಸದಸ್ಯರು, ಕೆಲವು ನ್ಯಾಯಾಧೀಶರುಗಳು, ಸಂಸದರು, ಮಾಜಿ ಕೇಂದ್ರ ಸಚಿವರುಗಳು ಒಮ್ಮತದ ಉಗ್ರ ಪ್ರತಿಭಟನೆಯನ್ನು ನಡೆಸುತ್ತಿದ್ದಾರೆ. ನ್ಯಾಯಾಂಗ ಕಲಾಪಕ್ಕೂ ಅಡ್ಡಿ ಪಡಿಸುತ್ತಿದ್ದಾರೆ, ಪ್ರತಿಭಟನೆಯ ಸಂಧರ್ಭದಲ್ಲಿ ಕಾನೂನಿಗೆ ಅಪಚಾರವಾಗುವಂತೆ ವಕೀಲರುಗಳು ನಡೆದುಕೊಳ್ಳುತ್ತಿದ್ದಾರೆ. ಕೋರ್ಟು ಕಲಾಪಗಳನ್ನು ಬಹಿಷ್ಕರಿಸುತ್ತಿದ್ದಾರೆ, ಇದರಿಂ ದ ಕಕ್ಷಿದಾರರುಗಳು ಸಹಾ ತೊಂದರೆ ಅನುಭವಿಸುವಂತಾಗಿದೆ. ಇದೆಲ್ಲಾ ನಡೆದಿರುವುದು ರಾಜ್ಯದ ಮುಖ್ಯ ನ್ಯಾಯಾಧೀಶ ಪಿ ಡಿ ದಿನಕರನ್ ರ ಮೇಲಿರುವ ಆಪಾದನೆಗಳ ಹಿನ್ನೆಲೆಯಲ್ಲಿ ಅವರನ್ನು ಸುಪ್ರಿಂಕೋರ್ಟು ನ್ಯಾಯಾಧೀಶರಾಗಿ ಆಯ್ಕೆ ಸಮಿತಿಯು ಪರಿಗಣಿಸಬಾರದ ಎಂಬ ಕಾರಣಕ್ಕಾಗಿ!
ವಿಚಾರಕ್ಕೆ ಬರುವ ಮುನ್ನ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶ ಪಿ ಡಿ ದಿನಕರನ್ ಬಗ್ಗೆ ಒಂದು ಸಣ್ಣ ಅವಲೋಕನ ಮಾಡೋಣ. 59ರ ವಯೋಮಾನದ ಪೌಲ್ ಡೇನಿಯಲ್ ದಿನಕರನ್ ತಮಿಳು ನಾಡಿನ ಅಗರಿಯಾನ್ ವರ್ಗಕ್ಕೆ ಸೇರಿದ ದಲಿತ ಕ್ರೈಸ್ತರು. ನಾರ್ಥ ಅರ್ಕೋಟ್ ಜಿಲ್ಲೆಯ ಅರಕ್ಕೋಣಮ್ ನಲ್ಲಿ ಬಾಲ್ಯದ ಓದು, ಮಡ್ರಾಸ್ ಕ್ರೈಸ್ತ ಕಾಲೇಜಿನಲ್ಲಿ ಕೆಮಿಸ್ಟ್ರಿ, ನಂತರ ರಾಜಕೀಯ ಶಾಸ್ತ್ರ ಮತ್ತು ಸಾರ್ವಜನಿಕ ಆಡಳಿತದಲ್ಲಿ ಸ್ನಾತಕ ಪದವಿ ಪಡೆದರು. ಮುಂದೆ ಮದ್ರಾಸ್ ಲಾ ಕಾಲೇಜಿನಲ್ಲಿ ಕಾನೂನು ಪದವಿ ಪಡೆದು ಮದ್ರಾಸ್ ಉಚ್ಚ ನ್ಯಾಯಾಲಯದಲ್ಲೇ ವಕೀಲ ವೃತ್ತಿ ಆರಂಭಿಸಿದರು. ರಾಜ್ಯ ಮತ್ತು ಕೇಂದ್ರಾಢಳಿತ ಟ್ರಿಬ್ಯೂನಲ್ ಸಮಿತಿಗಳಿಗೆ ಸಲಹೆಗಾರರಾದರು, ಪಾಂಡಿಚೆರಿ ವಿವಿಗೆ ಕಾನೂನು ಸೇವೆ ನೀಡಿದ್ದರು, ಹೀಗ ಆರಂಭಗೊಂಡ ವೃತ್ತಿ ಜೀವನದ ಉತ್ತುಂಗಕ್ಕೇರಿ ಹಲವು ಉನ್ನತ ಹುದ್ದೇಗಳನ್ನು ಅಲಂಕರಿಸಿದರು. ಸುಪ್ರಿಂ ಕೋರ್ಟು ೨೮ ಆಗಸ್ಟ್ ೨೦೦೯ ರಂದು ಇವರನ್ನು ಸುಪ್ರೀಂ ಕೋರ್ಟು ನ್ಯಾಯಾಧೀಶರನ್ನಾಗಿ ಘೋಷಿಸಿತು.
ಆಗ ಸ್ಪೋಟಗೊಂಡದ್ದೇ ದಿನಕರನ್ ಬಗೆಗಿನ ಅಸಹನೆ ಅರಕ್ಕೋಣಂ ನಲ್ಲಿ ಅವರು ಸರ್ಕಾರಿ ಭೂ ಒತ್ತುವರಿ ಮಾಡಿದ್ದಾರೆ ಹಾಗಾಗಿ ಅವರ ಹೆಸರನ್ನು ಸುಪ್ರಿಂ ಕೋರ್ಟು ನ್ಯಾಯಾಧೀಶರ ಹುದ್ದೆಗ ಅಂತಿಮಗೊಳಿಸಬಾರದು ಎಂದು ಸೆಪ್ಟಂಬರ್ 20ರಂದು ತಮಿಳುನಾಡು ಬಾರ್ ಕೌನ್ಸಿಲ್ ುಪರಾಷ್ಟ್ರಪತಿಗಳ ಬಳಿ ದೂರು ದಾಖಲಿಸಿತು. ಹಿರಿಯ ವಕೀಲ ಮಾಜಿ ಕೇಂದ್ರ ಸಚಿವ ರಾಂ ಜೇಠ್ ಮಲಾನಿ ಕೂಡ ಇದಕ್ಕೆ ಧ್ವನಿ ಗೂಡಿಸಿದರು. ತಮಿಳುನಾಡಿನಲ್ಲಿ ಭಾರಿ ಪ್ರತಿಭಟನೆ ವ್ಯಕ್ತವಾಯಿತು, ಅದು ರಾಜ್ಯಕ್ಕೂ ವ್ಯಾಪಿಸುತ್ತಿದ್ದಂತೆ ತನಿಖೆಗಾಗಿ ಪ್ರತ್ಯೇಕ ಸಮಿತಿ ರಚನೆಯಾಯ್ತು, ಮತ್ತು ವೇಲ್ಲೋರ್ ಜಿಲ್ಲೆ ಯ ಡಿಸಿ ಯವರಿಗೆ ವರದಿ ನೀಡುವಂತೆ ಕೋರಲಾಯಿತು. ಆ ವರದಿಯಲ್ಲೇನಿದೆ ಎಂಬ ವಿಚಾರ ಇನ್ನೂ ಬಾಹ್ಯ ಜಗತ್ತಿಗೆ ತಿಳಿಯುವ ಮುನ್ನವೇ ಅಕ್ರಮವಾಗಿ ಒತ್ತುವರಿ ಮಾಡಿದೆಯೆನ್ನಲಾದ ಭೂಮಿಗೆ ಹಾಕಲಾಗಿದ್ದ ಬೇಲಿಯನ್ನು ಅಲ್ಲಿ ನಸ್ಥಳೀಯರು ತೆರವು ಗೊಳಿಸಿದರು. ಆಯ್ಕೆ ಸಮಿತಿ ದಿನಕರನ್ ಹೆಸರನ್ನು ಕೈಬಿಟ್ಟಿದೆ, ಆದರೆ ದಿನಕರನ್ ಮೌನ ಮುರಿದು ನಾನು ಏನೂ ತಪ್ಪು ಮಾಡಿಲ್ಲನ ನನ್ನನ್ನು ಈ ಬಗ್ಗೆ ಯಾರೂ ಏನೂ ಕೇಳಿಲ್ಲ, ಆಧಾರ ರಹಿತ ಆರೋಪಗಳನ್ನು ನಿಜವೆಂದು ಏಕೆ ಭಾವಿಸಬೇಕು ಎಂದು ಪ್ರಶ್ನಿಸಿದ್ದಾರೆ. ಈ ನಡುವೆ ಉಚ್ಚ ನ್ಯಾಯಾಲಯ ದನ್ಯಾಯಾಧೀಸ ಶೈಲೆಂದ್ರಕುಮಾರ್, ಮು.ನ್ಯಾ. ದಿನಕರನ್ ಕಲಾಪಗಳಲ್ಲಿ ಪಾಲ್ಗೊಳ್ಳದಿದ್ದರು ಆಡಳಿತಾತ್ಮಕ ಕಲಾಪಗಳಲ್ಲಿ ಪಾಲ್ಗೊಳ್ಳುತ್ತಿರುವುದನ್ನು ಬಹಿರಂಗವಾಗಿ ಪ್ರಶ್ನಿಸಿದ್ದಾರೆ. ಸಧ್ಯ ನ್ಯಾಯಮೂರ್ತಿ ದಿನಕರನ್ ಬಗ್ಗೆ ಎಲ್ಲರು ಸೆಟೆದು ಕೊಂಡು ನಿಂತಿರುವಾಗಲೇ ಕಾಂಗ್ರೆಸ್ ಸಂಸದರಾದ ಪ್ರವೀಣ್ ರಾಷ್ಟ್ರಪಾಲ್ , ಜೆ ಡಿ ಸೀಲಂ ಮತ್ತಿತರು 'ದಲಿತ' ಎಂಬ ಹಿನ್ನೆಲೆ ಇಟ್ಟುಕೊಂಡು ದಿನಕರನ್ ಬೆಂಬಲಕ್ಕೆ ನಿಂತಿದ್ದಾರೆ. ಸದರಿ ವಿಚಾರ ರಾಜ್ಯ ಸಭೆಯಲ್ಲಿ ಪ್ರಸ್ತಾಪವಾದರೆ ಅದನ್ನು ವಿರೋಧಿಸಲು ಸಜ್ಜಾಗಿದ್ದಾರೆ. ಈ ಎಲ್ಲ ಬೆಳವಣಿಗೆಗಳು ನ್ಯಾಯಾಂಗ ವ್ಯವಸ್ಥೆಯ ಬಗೆ ಸಾರ್ವಜನಿಕವಾಗಿ ಎಂತಹ ಅಭಿಪ್ರಾಯವನ್ನು ಮೂಡಿಸುತ್ತವೆ. ದಲಿತ ಎನ್ನುವ ಕಾರಣಕ್ಕೆ ಒಂದು ವಿಚಾರವನ್ನು ಬೆಂಬಲಿಸುವುದು ತಪ್ಪು ಹಾಗೇಯೇ ಮು.ನ್ಯಾ.ಮೂರ್ತಿ ಒಬ್ಬರ ಬಗ್ಗೆ ಸ್ಪಷ್ಟ ವರದಿ ಕೈ ಸೇರುವ ಮುನ್ನವೇ ಅವರ ವಿರುದ್ದ ಕಾನೂನು ವಿರೋಧಿ ಚಟುವಟಿಕೆಗಳು ನಡೆಯುವುದು ಘೋರ ತಪ್ಪಾಗುತ್ತದೆ. ಮತ್ತೊಂದು ಪ್ರಮುಖ ಅಂಶವೆಂದರೆ ನ್ಯಾಯಾಧೀಶರುಗಳ ಆಸ್ತಿ ಘೋಷಣೆಯಾಗಬೇಕು ಯಾರೂ ಕಾನೂನಿಗೆ ಅತೀತರಲ್ಲ ಎನ್ನುವ ನ್ಯಾಯಮೂರ್ತಿ ಶೈಲೆಂದ್ರ ಕುಮಾರ್ ಪ್ರಶಂಸನಾರ್ಹರು. ತಪ್ಪು ಮಾಡಿದವರು ಯಾರೇ ಆಗಲಿ ಅದು ಚರ್ಚೆಗ ೆಬರಬೇಕು ಮತ್ತು ಕಳಂಕರಹಿತವಾಗಿ ನ್ಯಾಯಾಂಗ ವ್ಯವಸ್ಥೆ ಮುನ್ನೆಡೆಯಬೇಕು ಎಂಬುದರಲ್ಲ ಿಎರಡೂ ಮಾತಿಲ್ಲ.
ಈಗ ವಿಚಾರಕ್ಕೆ ಬರುತ್ತೇನೆ, ಉಚ್ಚ ನ್ಯಾಯಾಲಯದ ನ್ಯಾಯಾಧೀಶರು ಅಧಿನ ನ್ಯಾಯಾಲಯಗಳಿಗೆ ಸುಮಾರು ೧೬.50ಕೋಟ ಿವೆಚ್ಚದಲ್ಲಿ ಕಂಪ್ಯೂಟರುಗಳನ್ನು ಖರಿದಿಸಿದಾಗ ಅದನ್ನು ವಿರೋದಿಸಿದ್ದು ಶಾಸಕ ಎ ಟ ರಾಮಸ್ವಾಮಿ, ನ್ಯಾಯಾಧೀಶರುಗಳಿಗೆ ಹಣಕಾಸು ಸ್ವಾಯತ್ತತೆ ಕೊಡಬಾರದು, ಹಾಗೇನಾದರೂ ಕೊಟ್ಟಿದ್ದೇ ಆದಲ್ಲಿ ಅದು ಸಾರ್ವಜನಿಕ ಪರಿಶೀಲನೆಗೆ ಒಳಪಡಬೇಕು ಎಂದು ಅವರು ಚರ್ಚೆ ಮಂಡಿಸಿದಾಗ ಎಲ್ಲರ ಕ್ರೂರ ದೃಷ್ಟಿ ಅವರೆಡೆಗೆ ಬಿತ್ತೆ ವಿನಹ ಸರ್ಕಾರ ಹೋಗಲಿ ಸಹ ಸದಸ್ಯರೂ ಸಹ ಅವರನ್ನು ಬೆಂಬಲಿಸಲಿಲ್ಲ. ಅದೇ ರಾಮಸ್ವಾಮಿ ಮುಂದೆ ಜಂಟಿ ಸದನ ಸಮಿತಿ ಸದಸ್ಯರಾದಾಗ 76ಮಂದಿ ಉ ಚ್ಚ ನ್ಯಾಯಾಲಯದ ನ್ಯಾಯಾಧೀಶರುಗಳು ಮತ್ತು 8ಮಂದಿ ಸುಪ್ರಿಂ ಕೋರ್ಟು ನ್ಯಾಯಾಧೀಶರುಗಳು ಅಕ್ರಮವಾಗಿ ಸರ್ಕಾರಿ ನಿವೇಶನಗಳನ್ನು ಕರ್ನಾಟಕ ನ್ಯಾಯಾಂಗ ಇಲಾಖ ೆನೌಕರರ ಗೃಹ ನಿರ್ಮಾಣ ಸಹಕಾ ರಸಂಘ ದ ಮೂಲಕ ಪಡೆದಿದ್ದನ್ನು ಪತ್ತೆ ಹಚ್ಚಿ ಕ್ರಮಕ್ಕೆ ವರದಿ ಶಿಫಾರಸ್ಸು ಮಾಡಿದರು. ಅದು ಸದನದಲ್ಲಿ ಮಂಡನೆಯೂ ಆಗಿದೆ. ರಾಜ್ಯದಲ್ಲಿ ಹೆಸರು ಮಾಡಿದ ಅನೇಕ ನ್ಯಾಯಾಧೀಶರುಗಳ ಹೆಸರು ಸಹಾ ಆ ಪಟ್ಟಿಯಲ್ಲಿದೆ. ಆದರೆ ಕ್ರಮ ಜರುಗಿಸುವ ಎದೆಗಾರಿಕೆಯನ್ನು ಯಾರೂ ಈವರೆಗೆ ಮಾಡಿಲ್ಲ. ಎ ಟಿ ಆರ್ ಈ ಬಗ್ಗೆ ಪದೇ ಪದೇ ಪ್ರಸ್ತಾಪಿಸುತ್ತಿದ್ದಾರಾದರೂ ಆಢಳಿತಶಾಹಿ ವ್ಯವಸ್ಥೆ ಇರಲಿ ಕೆಲವು ಪತ್ರಕರ್ತರು ಸದರಿ ವಿಷಯವನ್ನು ಬರೆಯಲು ಹಿಂದೆ ಮುಂದೆ ನೋಡುತ್ತಿದ್ದಾರೆಂಬುದು ಏಕೋ ತಿಳಿಯುತ್ತಿಲ್ಲ. ಪ್ರಜಾಪ್ರಭುತ್ವದ 3ಅಂಗಗಳ ಪೈಕಿ ಕಾರ್ಯಾಂಗ ಮತ್ತು ಶಾಸಕಾಂಗ ಮಾತ್ರ ಸಾರ್ವಜನಿಕ ವಾಗಿ ಪರಿಶೀಲನೆಗೆ ಒಳಪಡುವುದಾದರೆ ನ್ಯಾಯಾಂಗ ವ್ಯವಸ್ಥೆಯು ಸಹಾ ಸಾರ್ವಜನಿ ಕವಾಗಿ ಪರಿಶೀಲನೆಗೆ ದಕ್ಕಬೇಕು. ಉಚ್ಚ ನ್ಯಾಯಾಲಯಗಳ ನ್ಯಾಯಾಧೀಶರುಗಳಿಗೆ ಸಂವಿಧಾನಾತ್ಮಕವಾಗಿ ರಕ್ಷಣೆ ನೀಡಲಾಗಿದೆ ಹಾಗಾಗಿ ಅವರು ಸಾರ್ವಜನಿಕ ಸೇವಕರಲ್ಲ. ಆದ್ದರಿಂದಲೇ ಅವರು ಯಾವುದೇ ಸಂಘ ಸಂಸ್ಥೆಗಳ ಸದಸ್ಯರಾಗುವಂತಿಲ್ಲ ಎಂದು ಕೆ ಎಸ್ ಭಕ್ತವತ್ಸಲಂ ಮತ್ತು ಎಂ ಎಫ್ ಸಾಲ್ಡಾನಾ ನೇತೃತ್ವದ ವಿಭಾಗೀಯ ಪೀಠ ಐಎಲ್ಆರ್ ೧೯೯೫(೧)ಕ.ರಾ.೩೧,39ರಲ್ಲಿ ಸ್ಪಷ್ಟ ತೀರ್ಪು ನೀಡಿದೆ. ಈ ತೀರ್ಪಿನನ್ವಯ ಎಟಿ ರಾಮಸ್ವಾಮಿ ವರದಿಯಲ್ಲಿ ಉಲ್ಲೇಖಿಸಲಾಗಿರು ವ 76ಮಂದಿ ಉಚ್ಚ ನ್ಯಾಯಾಲಯದ ನ್ಯಾಯಾಧೀಶರು, 8ಮಂದಿ ಸುಪ್ರಿಂ ಕೋರ್ಟ ನ್ಯಾಯಾಧೀಶರುಗಳ ವಿರುದ್ದ ಕ್ರಮವಾಗಬೇಕಿದೆ. ದಿನಕರನ್ ರ ವಿರುದ್ದ ಧ್ವನಿ ಎತ್ತುತ್ತಿರು ವ ಬಾರ್ ಕೌನ್ಸಿಲ್ ಸದಸ್ಯರು ಮತ್ತು ಇತರೆ ನ್ಯಾಯಾಧೀಶರು ಎ ಟಿ ರಾಮಸ್ವಾಮಿ ವರದಿಯಲ್ಲಿ ತಿಳಿಸಿರುವ 84ಮಂದಿ ನ್ಯಾಯಾಧೀಶರ ವಿರುದ್ದ ಕ್ರಮ ಜರುಗಿಸಲು ಬದ್ದತೆಯ ಹೋರಾಟ ಪ್ರದರ್ಶಿಸ ಬೇಕಿದೆ. ಒಂದು ಕಣ್ಣಿಗೆ ಸುಣ್ಣ ಮತ್ತೊಂದು ಕಣ್ಣಿಗೆ ಬೆಣ್ಣೆ ಬೇಡಾ ಅಲ್ಲವೇ?? ಯಾಕೆಂದರೆ ಪ್ರಜಾಪ್ರಭುತ್ವದಲ್ಲ ಎಲ್ಲರಿಗೂ ನಿರ್ಭಿತವಾದ ನ್ಯಾಯ ವಿತರಣೆಯಾಗ ಬೇಕಲ್ಲವೇ? ನ್ಯಾಯಾಧೀಶರು,ವಕೀಲರು,ನ್ಯಾಯಾಂಗ ವ್ಯವಸ್ಥೆ ಪ್ರಜಾಪ್ರಭುತ್ವದಲ್ಲಿ ರೋಲ್ ಮಾಡೆಲ್ ಆಗಬೇಕಲ್ಲವೇ?

ಮಾಧ್ಯಮದ ಅಂಗಡಿಗಳು ಮತ್ತು ಪತ್ರಕರ್ತರು!

ಕಾಸ್ಟ್ ಕಟಿಂಗ್ ಮತ್ತು ನಿಶ್ಚಿತ ಆದಾಯದ ಕೊರತೆಯಿಂದ ಮಾಧ್ಯಮ ಸಂಸ್ಥೆಗಳು ಪತ್ರಕರ್ತರನ್ನು ಪರ್ಫಾರ್ಮೆನ್ಸ್ ವೀಕ್ ಎಂಬ ಕಾರಣ ನೀಡಿ ತೆಗೆಯುವ ಪ್ರಕ್ರಿಯೆ ಈಗ ನಡೆಯುತ್ತ...