Sunday, December 28, 2014

ಮಠ ನಿಯಂತ್ರಣ ವಿದೇಯಕ್ಕಕೆ ತಾರತಮ್ಯ ಬೇಕೆ?



ಪ್ರಗತಿ ಪರ ನಿಲುವಿನ ಸಿದ್ರಾಮಣ್ಣ ಅಧಿಕಾರಕ್ಕೆ ಬಂದ ಮೇಲೆ ವಿಧಾನ ಸಭಾ  ಅಧಿವೇಶನಗಳಲ್ಲಿ  ಅವರು ಮಂಡಿಸಿದ ವಿಧೇಯಕಗಳು ಹಿನ್ನೆಡೆ ಅನುಭವಿಸಿವೆ. ಎರಡು ವಿಧೇಯಕಗಳು ಸಾರ್ವತ್ರಿಕವಾದ ನಂಬಿಕೆ ಹಾಗೂ ವಿಶ್ವಾಸವನ್ನು ಕುರಿತಾದ ಸಂಗತಿಗಳ ಕುರಿತಾದುದು. ಆದರೆ ಸ್ಪಷ್ಟ ದಿಕ್ಸೂಚಿಯಿಲ್ಲದ ಎಡಬಿಡಂಗಿತನದ ಅಂಶಗಳು ಸದರಿ ವಿದೇಯಕಗಳು ಹಿಮ್ಮೆಟ್ಟಲು ಕಾರಣವಾಗಿದೆ ಎನ್ನಬಹುದು. ಮೊನ್ನೆ ಬೆಳಗಾವಿಯಲ್ಲಿ ನಡೆದ ವಿಧಾನ ಸಭಾ ಅದಿವೇಶನದಲ್ಲಿ ಮಠ-ಮಾನ್ಯಗಳನ್ನು ವ್ಯತಿರಿಕ್ತ ಸನ್ನಿವೇಶಗಳಲ್ಲಿ ನಿಯಂತ್ರಿಸುವ ಕಾನೂನು ಅನುಷ್ಠಾನಕ್ಕೆ ತರುವ ವಿಧೇಯಕಕ್ಕೆ ಪ್ರಭಾವಿ ಶಕ್ತಿಗಳು ಚಿತಾವಣೆಯಿಂದ ಹಿನ್ನೆಡೆ ಅನುಭವಿಸುವಂತಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ವಿದೇಯಕವನ್ನು ಮುಂದಿನ ಅಧಿವೇಶನದಲ್ಲಿ ಹಿಂಪಡೆಯುವ ಮಾತುಗಳನ್ನಾಡಿದ್ದಾರೆ. ಇವುಗಳ ಹಿನ್ನೆಲೆ ಏನು ಹಿತಾಸಕ್ತಿಗಳೇನು ಎಂಬುದು ಸ್ಪಷ್ಟವಾಗಿ ಸಾರ್ವತ್ರಿಕ ಚರ್ಚೆಗೆ ಬರಬೇಕಿದೆ. 

      ಸಧ್ಯ ಮಠ-ಮಾನ್ಯಗಳ ನಿಯಂತ್ರಣ ಕಾಯ್ದೆ ಕುರಿತು ಅಸಹನೆ ಮತ್ತು ತೀವ್ರವಾದ ಪ್ರತಿಭಟನೆ ವ್ಯಕ್ತವಾಗುತ್ತಿರುವುದು ರಾಜ್ಯದ ಸಮಸ್ತ ಮಠಾದಿಪತಿಗಳಿಂದ. ಹಿಂದೆ ಮೌಡ್ಯತೆಯ ನಿಷೇಧದ ಕುರಿತು ಕಾಯ್ದೆ ರೂಪಿಸುವ ಸಲುವಾಗಿ ಸುಮ್ಮನೆ ಒಂದು ಡ್ರಾಫ್ಟ್ ಸರ್ಕಾರಕ್ಕೆ ಸಲ್ಲಿಕೆಯಾಗಿದ್ದಕ್ಕೆ ಸಂಘ-ಪರಿವಾರಿಗಳು ಸಿಡಿದೆದ್ದಿದ್ದರು. ಬಹುಶ: ಇದುವರೆಗಿನ ಸರ್ಕಾರಗಳು ಈ ಕುರಿತು ಅಷ್ಟಾಗಿ ತಲೆಕೆಡಿಸಿಕೊಳ್ಳದ ಹೊತ್ತಿನಲ್ಲಿ ಈಗಿನ ಕಾಂಗ್ರೆಸ್ ಸರ್ಕಾರ ಗಂಭೀರ ಪ್ರಯತ್ನಗಳನ್ನು ಮಾಡುತ್ತಿದೆ ಅದು ಪ್ರಶಂಸನೀಯವೇ ಸರಿ ಆದರೆ ಈ ದಿಸೆಯಲ್ಲಿ ಸರ್ಕಾರ ಮಿತಿಗಳು ಅನುಮಾನಕ್ಕೆ ಎಡೆ ಮಾಡುತ್ತಿವೆ. ಅಲ್ಪಸಂಖ್ಯಾತರಿಗೆ  ಮಾತ್ರ ಶಾದಿ ಭಾಗ್ಯ ಯೋಜನೆಯನ್ನು ಜಾರಿಗೆ ತಂದಂತೆಯೇ ಈ ವಿಧೇಯಕಗಳ ಮಿತಿಯೂ ಇದೆಯಲ್ಲವೇ? ಶಿಕ್ಷಣದ ಹಕ್ಕು ಕಾಯ್ದೆಯಿಂದ ಅಲ್ಪ ಸಂಖ್ಯಾತ ಶಿಕ್ಷಣ ಸಂಸ್ಥೆಗಳನ್ನು ಹೊರತು ಪಡಿಸಿದಂತೆಯೇ ಈ ವಿಧೇಯಕವನ್ನು ಹಿಂದೂ ಸಮಾಜಕ್ಕೆ ಮಾತ್ರ ಅನ್ವಯವಾಗುವಂತೆ ಉಲ್ಲೇಖಿಸಿ ರೂಪಿಸಿದ್ದು ನುಂಗಲಾರದ ತುತ್ತಾಗಿ ಪರಿಣಮಿಸಿದೆ. 
       ಹಿಂದೆ ಎಸ್ ಎಂ ಕೃಷ್ಣ ಸರ್ಕಾರ ಇದ್ದಾಗ ವಿದೇಶದಿಂದ ಬಂದ ಬೆನ್ನಿ ಹಿನ್ ನನ್ನು ವಿಧಾನ ಸೌಧದ ಅಂಗಳಕ್ಕೆ ಕರೆಸಿ ಆತನಿಂದ ಕಣ್ಕಟ್ಟು ವಿದ್ಯೆಯನ್ನು ನಿಜವೆಂಬಂತೆ ಬಿಂಬಿಸಿ ಆತನ ವ್ಯಾಪಾರಿ ನಿಲುವಿಗೆ ಬೆನ್ನು ತಟ್ಟಿದ್ದ ಕಾಂಗ್ರೆಸ್ ಸರ್ಕಾರ ಈಗ ಹಿಂದೂ ಧಾರ್ಮಿಕ ನಂಬಿಕೆಗಳು ಮತ್ತು ಭಕ್ತಿ ಭಾವದ ಕೇಂದ್ರಗಳೆಡೆಗೆ ತನ್ನ ವಕ್ರದೃಷ್ಟಿ ಬೀರಿದೆ ಎಂಬ ವಾದ ಸಾರ್ವತ್ರಿಕವಾಗಿ ಇದೆ. ಇದು ನಿಜವೂ ಹೌದು. ಆದರೆ ಅದೇ ನಂಬಿಕೆಯ ಮತ್ತು ಧಾರ್ಮಿಕ ಕೇಂದ್ರಗಳು ಎಷ್ಟು ಹದಗೆಟ್ಟಿವೆ ಮತ್ತು ಯಾಕೆ ಅವನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳಬೇಕು ಎಂಬ ವಾದವೂ ಚಾಲ್ತಿಯಲ್ಲಿದೆ ಅದೂ ಕೂಡಾ ಒಪ್ಪುವಂತಹುದೆ! ದರ್ಗಾಗಳಲ್ಲಿ ನಡೆಯುವ 
ಧಾರ್ಮಿಕ ಕ್ರಿಯೆಗಳು, ದೇಗುಲಗಳಲ್ಲಿ ನಡೆಯುವ ಆಚರಣೆಗಳು, ಚರ್ಚ್ ಗಳಲ್ಲಿ ಕ್ರಿಯೆಗಳು ಎಲ್ಲವೂ ನಂಬಿಕೆಯ ತಳಹದಿಯಲ್ಲೆ ನಡೆಯುವಂತಹವು. ಇವನ್ನು ಹೊರತು ಪಡಿಸಿದಂತೆ ಹೊಟ್ಟೆ ಪಾಡಿಗಾಗಿ ಸಾರ್ವಜನಿಕರನ್ನು ಮೋಸ ಪಡಿಸುವ ಜ್ಯೋತಿಷ್ಯ, ವಾಸ್ತುಶಾಸ್ತ್ರ,ಅಂಕಿ-ಸಂಖ್ಯೆ ಲೆಕ್ಕಾಚಾರಗಳು, ಹೋಮ -ಹವನ ಮಾಡಿಸುವುದು, ಮಂತ್ರ -ತಾಯಿತ ಇತ್ಯಾದಿ ಚಟುವಟಿಕೆಗಳು ನಂಬಿಕೆಯ ಬುಡವನ್ನೇ ಅಲ್ಲಾಡಿಸುವ ಹೀನ ಕೃತ್ಯಗಳೇ ಸರಿ. ದೇವರ ಹೆಸರಿನಲ್ಲಿ, ಧರ್ಮದ ಹೆಸರಿನಲ್ಲಿ ನಡೆಯುವ ಮತಾಂತರ ಪ್ರಕ್ರಿಯೆ, ಅಸಹ್ಯಕರ ಆಚರಣೆ ಗಳಿಗೆ ತಿಲಾಂಜಲಿ ಇಡಲು ಮೌಢ್ಯ ನಿರ್ಬಂಧಕ ಕಾನೂನು ಬೇಕು ನಿಜ ಆದರೆ ಭಾರತೀಯ ಸಾಮಾಜಿಕ ವ್ಯವಸ್ಥೆಯ ಮುಖ್ಯ ಅಡಿಪಾಯ ನಿಂತಿರುವುದೇ ನಂಬಿಕೆಯ ತಳಹದಿಯ ಮೇಲೆ. ಆ ನಂಬಿಕೆ ತಳಹದಿಯ ಪಿಲ್ಲರ್ ಗಳು ಧರ್ಮ-ದೇವರು! ಹಾಗಾಗಿ ಖಚಿತವಾದ ನಿಟ್ಟಿನಲ್ಲಿ ನಿಲುವುಗಳನ್ನು ಮತ್ತು ಫರ್ಮಾನುಗಳನ್ನು ಹೊರಡಿಸುವುದು ತ್ರಾಸದಾಯಕ ಕೆಲಸ. 
      ಪಕ್ಕದ ಮಹಾರಾಷ್ಟ್ರದಲ್ಲಿ ಇಂತಹದ್ದೊಂದು ಕಾನೂನನ್ನು ಜಾರಿಗೆ ತರಲಾಗಿದೆ ಎಂದು ಕೇಳಿದ್ದೇನೆ ಅಲ್ಲಿನ ಇತಿ ಮಿತಿಗಳನ್ನು ನೋಡಿ ರಾಜ್ಯದಲ್ಲೂ ಈ ಕುರಿತು ವಿದೇಯಕ ಜಾರಿಗೆ ತರಬಹುದು.ಇನ್ನು ಮಠ ಮಾನ್ಯಗಳನ್ನು ನಿಯಂತ್ರಣಕ್ಕೆ ತರುವ ಸರ್ಕಾರದ ನಿಲುವು. ಬಿಜೆಪಿ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಪ್ರಥಮದಲ್ಲಿಯೇ ಮಠ-ಮಾನ್ಯಗಳನ್ನು ಓಲೈಸುವ ಜೊತೆಗೆ ಅಲ್ಪಸಂಖ್ಯಾತರ ದರ್ಗಾಗಳನ್ನು, ಮಸೀದಿಗಳನ್ನು, ಚರ್ಚಗಳನ್ನು ಅಭಿವೃದ್ದಿ ಪಡಿಸುವ ನಿಟ್ಟಿನಲ್ಲು ಕೋಟಿ ಕೋಟಿ ಅನುದಾನವನ್ನು ಬಿಡುಗಡೆ ಮಾಡಿತ್ತು. ಅಲ್ಲಿ ತಾರತಮ್ಯ ಇರಲಿಲ್ಲ ನಿಜ ! ಆದರೆ ಭಾವನಾತ್ಮಕವಾದ ಓಟ್ ಬ್ಯಾಂಕ್ ಲೆಕ್ಕಾಚಾರ ಕೆಲಸ ಮಾಡಿತ್ತು ಎಂಬುದನ್ನು ತಳ್ಳಿ ಹಾಕುವಂತಿಲ್ಲ. ಈಗ ರಾಜ್ಯದಲ್ಲಿರುವ ಕಾಂಗ್ರೆಸ್ ಸರ್ಕಾರವೂ ಸಹಾ ಅದೇ ಲೆಕ್ಕಾಚಾರವನ್ನು ವಿಭಿನ್ನ ನಿಲುವಿನ ಮೂಲಕ ಮಾಡುತ್ತಿದೆ.ಆದರೆ ತಾರತಮ್ಯದ ನಿಲುವುಗಳ ಮೂಲಕ ಸಾಮಾಜಿಕ ವ್ಯವಸ್ಥೆಯ ಶಾಂತಿ ಸುವ್ಯವಸ್ಥೆಯನ್ನು ಒಡೆಯುವ ಕೆಲಸಕ್ಕೆ ಕೈ ಹಾಕಿರುವುದು ಅತ್ಯಂತ ವಿಷಾಧನೀಯ. 
        ಹಾಗೆಂದ ಮಾತ್ರಕ್ಕೆ ಮಠ-ಮಾನ್ಯ-ಚರ್ಚ್-ಮಸೀದಿಗಳ ಉಸಾಬರಿಗೆ ಹೋಗ ಬಾರದು ಎಂದಲ್ಲ. ಇಲ್ಲಿ ಪ್ರಜಾತಾಂತ್ರಿಕ ವ್ಯವಸ್ಥೆ ಇದೆ, ಹೀಗಿರುವಾಗ ಸಮಾನ ಕಾನೂನಿನ ಪರಿಮಿತಿಯಲ್ಲಿ ಸಮಸ್ತರಿಗೆ ಒಪ್ಪಿಯಾಗುವ ನಿಲುವುಗಳು ಮಾತ್ರ ಹೆಚ್ಚಿನ ಪ್ರಾಶಸ್ತ್ಯ ದಕ್ಕಿಸಿಕೊಳ್ಳುತ್ತವೆ ಎಂಬುದನ್ನು ಅರಿಯಬೇಕಲ್ಲವೇ? ಯಾವುದೇ ಸಾರ್ವತ್ರಿಕವಾದ ಧಾರ್ಮಿಕ ಸಂಸ್ಥೆಗಳು ಜನರಿಗೆ ಉತ್ತರದಾಯಿಗಳಾಗಿರ ಬೇಕು. ಆದರೆ ಅವು ಸರ್ವಾಧಿಕಾರದ ಕೇಂದ್ರಗಳಾಗಿವೆ, ವ್ಯವಹಾರ ವಹಿವಾಟಿನ ಕೇಂದ್ರಗಳಾಗಿವೆ, ಸೇವೆಯನ್ನು ಮಾರಾಟಕ್ಕಿಡುವ, ನಂಬಿಕೆಗಳನ್ನು ವ್ಯಾಪಾರ ಮಾಡಿಕೊಂಡ ಕೇಂದ್ರಗಳಾಗಿವೆ, ಜಾತಿಯನ್ನು ಪೋಷಿಸುವ ಕೆಂದ್ರಗಳಾಗಿವೆ, ಸಮಾಜ ಬಾಹಿರ ಕೃತ್ಯಕ್ಕೆ ಅವಕಾಶ ನೀಡುವ ಚಟುವಟಿಕೆಗಳ ತಾಣವಾಗಿವೆ, ಧಾರ್ಮಿಕ ಆಘಾತ ನೀಡುವ ಮತಾಂತರ ಪ್ರಚೋದಿಸುವ ಕೇಂದ್ರಗಳಾಗಿವೆ ಹೀಗಿರುವಾಗ ಪ್ರಜಾ ತಾಂತ್ರಿಕ ವ್ಯವಸ್ಥೆಯಲ್ಲಿ ಇವಕ್ಕೆಲ್ಲ ಅಂಕುಶ ಬೇಡವೇ? ಸರ್ಕಾರದಿಂದ ಮತ್ತು ಜನರಿಂದ ಕೋಟಿ ಕೋಟಿ ಹಣವನ್ನು, ದ್ರವ್ಯವನ್ನು, ಭೂಮಿಯನ್ನು, ಸ್ಥಿರಾಸ್ತಿಯನ್ನು ಪಡೆಯುವ ಮಠ-ಮಾನ್ಯ-ಚರ್ಚ್, ದರ್ಗಾ, ಮಸೀದಿಗಳಿಂದ ಲೆಕ್ಕ ಕೇಳುವುದು ತಪ್ಪೇ? ಸಾರ್ವಜನಿಕ ಹಿತಾಸಕ್ತಿಗೆ ವಿರುದ್ದವಾಗಿ ಹೋದಾಗ ಅದನ್ನು ಪ್ರಶ್ನಿಸುವವರಾದರು ಯಾರು ? ಕಾನೂನಿಯ ಅಂಕೆಯಿಂದ ಹೊರಗುಳಿಯುವುದು ಎಂದರೆ ಅದಕ್ಕೆ ದುರಂತ ಮತ್ತೊಂದು ಇರಲಾರದು ಎಂಬುದು ನನ್ನ ಭಾವನೆ, ಇದು ದೇಶದ ಸಂವಿಧಾನಕ್ಕೆ ವಿರುದ್ದವಾದುದು ಆಗಿರುತ್ತದಲ್ಲವೇ?

          ಮಠ ಮಾನ್ಯಗಳು ಸಾರ್ವಜನಿಕ ಸ್ವತ್ತುಗಳು, ಈ ಕಾರಣಕ್ಕಾಗಿಯೆ ರಾಜ್ಯ ಸರ್ಕಾರ ಹಿಂದು ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ತಿದ್ದುಪಡಿ ವಿದೇಯಕವನ್ನು ವಿದಾನಸಬಾ ಅದಿವೇಶನದಲ್ಲಿ ಮಂಡಿಸಿದೆ. ವಿದೇಯಕವೂ ಹಿಂದೂ ಧಾರ್ಮಿಕಸಂಸ್ಥೆಗಳಲ್ಲದೇ ಮುಸಲ್ಮಾನ, ಕ್ರೈಸ್ತ, ಜೈನ ಇತರೆ ಧಾರ್ಮಿಕ ಸಂಸ್ಥೆಗಳನ್ನು ಸಹಾ ವಿದೇಯಕದಲ್ಲಿ ತರಬೇಕು, ಅವುಗಳಿಗೆ ವಿನಾಯ್ತಿ ಏಕೆ? ವಿಧೇಯಕದ ವಿರುದ್ದ ರಾಜ್ಯದ ಅನೇಕ ಮಠ ಮಾನ್ಯಗಳ ಮಠಾದೀಶರುಗಳು ಆಕ್ರೋಶ ವ್ಯಕ್ತ ಪಡಿಸಿದ್ದಾರೆ ಇದು ಸಹಜ. ಧಾರ್ಮಿಕ ಐಕ್ಯತೆ ಸಮಾನತೆ ತನ್ನಿ ಶಾಂತಿ ಸಹಬಾಳ್ವೆಗೆ ಅವಕಾಶ ಕಲ್ಪಿಸಿ ಎಂದು ಮಠಾದಿಪತಿಗಳಿಗೆ ಜನ ದೇವರ ಸ್ಥಾನಮಾನ ಕೊಟ್ಟರೆ ಈ ಬೃಹಸ್ಪತಿಗಳು ರಾಜ ಮಹಾರಾಜರಂತೆ ಅಡ್ಡ ಪಲ್ಲಕಿ ಉತ್ಸವ, ಕಿರೀಟದಾರಣೆ, ಐಷಾರಾಮಿ ಕಾರು, ವಿದೇಶ ಪ್ರವಾಸ, ಜ್ಯೋತಿಷ್ಯ, ಮೂಡನಂಬಿಕೆ ಪ್ರೋತ್ಸಾಹ ಇಟ್ಟುಕೊಂಡು ಉತ್ಸವ ಮೂರ್ತಿಗಳಾಗಿ ಮೆರೆಯುತ್ತಿದ್ದಾರೆ, ಅಲ್ಲಲ್ಲಿ ಕೆಲವರು ನೈತಿಕತೆ ಕುಂದುವ ಕ್ರಿಯೆಗಳಲ್ಲಿ ಪಾಲ್ಗೊಳ್ಳುತ್ತ ಸಮಾಜದಲ್ಲಿ ಅಸಹನೆಗೆ ಕಾರಣವಾಗಿದ್ದಾರೆ. ಹೈಟೆಕ್ ಅಸ್ಪತ್ರೆಗಳು, ಶಿಕ್ಷಣ ಸಂಸ್ಥೆಗಳು, ರಿಯಲ್ ಎಸ್ಟೇಟ್ ಮಾಲೀಕರಾಗಿ, ಚುನಾವಣೆ ಬಂದಾಗ ಜಾತಿಯ ಶಕ್ತಿ ಕೇಂದ್ರಗಳಾಗಿ, ಕೋಮುಸೌಹಾರ್ದದ ವಿರುದ್ದ ಬೊಬ್ಬೆ ಹಾಕುವ ಈ ಮಂದಿ ಸರ್ವಸಮ್ಮತ ವ್ಯಕ್ತಿಗಳಾಗಿ ಉಳಿದಿಲ್ಲ, ಆದ್ದರಿಂದ ಎಲ್ಲ ಧಾರ್ಮಿಕ ಕೇಂದ್ರಗಳ ಮೇಲೆ ಸರ್ಕಾರದ ಅಂಕುಶ ಹಾಕುವ ವಿಧೇಯಕ ಮಂಡನೆಯಾಗಲಿ, ಮಠಾದಿಪತಿಗಳು, ಮುಲ್ಲಾಗಳು, ಪಾದ್ರಿಗಳು,ಧರ್ಮಾದಿಕಾರಿಗಳು, ಮೌಲ್ವಿಗಳು ಕಾನೂನಿಗಿಂತ ದೊಡ್ಡವರಲ್ಲ ಅಲ್ಲವೇ????

Sunday, December 7, 2014

ಶಿಕ್ಷಕ(ಕಿ)ರಿದ್ದಾರೆ ಎಚ್ಚರಿಕೆ!

ಆ ಪ್ರೊಫೆಸರ್ ಡಿಪಾರ್ಟ್ ಮೆಂಟಲ್ಲಿ ಅವಳಿಗೆ ಜಾಸ್ತಿ ಮಾರ್ಕ್ಸ್ ಜಾಸ್ತಿ ಕೊಡ್ತಾನೆ, ಅದು ಯಾವಾಗ್ಲೂ ಹ್ಯಾಪ ಮೋರೆ ಹಾಕ್ಕೊಂಡು ಬರುತ್ತೆ ಯಾರ್ನೂ ಮಾತಾಡ್ಸಲ್ಲ, ಆದ್ರೆ ಅವಳ ಚೆಂದಕ್ಕೆ ಬಿದ್ದವ್ನೇ ಅದ್ಕೆ ಅವಳಿಗೆ ಪರೀಕ್ಷೆಲಿ ಒಳ್ಳೆ ಮಾರ್ಕು ಕೋಡ್ತಾನೆ, ಪಿಎಚ್ ಡಿ ಗೂ ಅದೇ ಪ್ರೊಫೆಸರ್ ಹತ್ರಾನೆ ಅವಳು ರಿಜಿಸ್ಟರ್ ಮಾಡ್ಸಿರ್ ಬೇಕು ಬಿಡು ಮಗಾ ಇನ್ನ ಅವಳ ಕಥೆ! ಅನ್ನೋ ಕಾಲ ಒಂದಿತ್ತು,ಈಗ ಅದು ಮಾಮೂಲು! ಆಮೇಲೆ ಡಿಗ್ರೀ ಕಾಲೇಜುಗಳ ಕಾರೀಡಾರಿನಲ್ಲೂ ಇಂಥವೇ ಡೈಲಾಗುಗಳು ಕೇಳಿ ಕೇಳಿ ಸಾಕಾಗಿತ್ತು. ನಾವು ಮಹರಾಜ ಕಾಲೇಜಿನಲ್ಲಿ ಪಿಜಿ ಕಲಿಯುವ ಹೊತ್ತಿಗೆಲ್ಲ ಮಂಡ್ಯದ ಪಿಜಿ ಸೆಂಟರ್ ಕೋಆರ್ಡಿನೇಟರ್ ಒಬ್ಬ ವಿದ್ಯಾರ್ಥಿನಿಯೋರ್ವರಿಗೆ ಲೈಂಗಿಕ ಕಿರುಕುಳ ನೀಡಿ ಕೆಲಸದಿಂದಲೇ ವಜಾ ಆಗಿದ್ದ, ಆತನಿಗೆ ಖ್ಯಾತ ಸಾಹಿತಿ ಎಂಬ ಹೆಸರು ಬೇರೆ, ದುರಾದೃಷ್ಟಕ್ಕೆ ನಾನು ಪದವಿ ಕಲಿಯುವಾಗ ಆತನೇ ಬರೆದ ಪುಸ್ತಕ ನನಗೆ ಪಠ್ಯ ಮತ್ತು ಆತನೇ ನನಗೆ ಅದ್ಯಾಪಕ, ಸದರಿ ಅದ್ಯಾಪಕ ತರಗತಿಗಳಲ್ಲಿ ಬಾಯಿ ಬಿಟ್ಟರೆ ಬರೀ ಪೋಲೀ ಮಾತು! ಈಗಲೂ ವರ್ತಮಾನದಲ್ಲಿ ನಮ್ಮೊಡನೆ ಆತ ಇದ್ದಾನೆಂದು ಹೇಳಿಕೊಂಡರೆ ಅದು ಶಿಕ್ಷಕ ಸಮದಾಯಕ್ಕೆ ನಾಚಿಕೆಗೇಡು. 
         ವಿಶ್ವ ವಿದ್ಯಾಲಯಗಳಲ್ಲಿ ಮಾತ್ರ ಕಾಣ ಬರುತ್ತಿದ್ದ ಈ ಕಾಯಿಲೆ ಮುಂದೆ ಪದವಿ ಕಾಲೇಜು, ಪಿಯು ಕಾಲೇಜಿಗೂ ವಿಸ್ತರಿಸಿತು. ಅದರಲ್ಲೂ ಮುಖ್ಯವಾಗಿ ಬಿಎಡ್ ಮತ್ತು ಟಿ ಸಿ ಹೆಚ್ ಕಾಲೇಜುಗಳಲ್ಲಿ ಇದು ಅತಿಯಾಗಿತ್ತು. ವಾರ್ಷಿಕ ಟೂರು ಶೈಕ್ಷಣಿಕ ಟೂರು, ಅದಕ್ಕೆ ಎಲ್ಲರೂ ಕಡ್ಡಾಯವಾಗಿ ಬರಲೇ ಬೇಕು, ಹೆಣ್ಣು ಮಕ್ಕಳು ಚೆಂದ ವಾಗಿದ್ದರಂತೂ ಮುಗಿಯಿತು, ಮನೆಗಳಿಗೆ ತೆರಳಿ ಪೋಷಕರಿಗೆ ಒತ್ತಡ ಹಾಕಿ ವಾರ, ಹದಿನೈದು ದಿನ ಶೈಕ್ಷಣಿಕ ಪ್ರವಾಸದ ಹೆಸರಿನಲ್ಲಿ ಮಜವೋ ಮಜ. ಪ್ರವಾಸದ ಮಜಾ ಮುಗಿಸಿಕೊಂಡು ಬಂದಾದ ಮೇಲೆ ರಾಮಾಯಣ-ಮಹಾಭಾರತ ರಂಪವಾಗಿ ಒಂದೋ ಆತ ಅಥವಾ ಆಕೆ ಮದುವೆಯಾಗಿ ಬಿಡುತ್ತಿದ್ದರು ಇಲ್ಲವೇ ಊರು ಬಿಡುತ್ತಿದ್ದರು. ಅವತ್ತಿನ ಪಳೆಯುಳಿಕೆಗಳು ಇಂದಿಗೂ ಕಣ್ಣೆದುರಿಗಿವೆ. ನಂತರದ್ದು ಪಿಯುಸಿ, 14-15ರ ವಿದ್ಯಾರ್ಥಿ/ನಿ ಯರುಗಳನ್ನು ನಾಲ್ಕೈದು ದಿನ ಶೈಕ್ಷಣಿಕ ಪ್ರವಾಸ ಅಂತ ಕರೆದುಕೊಂಡು ಹೋದರೆ ವಿದ್ಯಾರ್ಥಿನಿಯರ ಪಾಡು ಬೇಡ. ನನ್ನ ಪರಿಚಯದ ಪಿಯು ವಿದ್ಯಾರ್ಥಿನಿಯೋರ್ವಳನ್ನು ಕುತೂಹಲಕ್ಕೆ ಕೇಳಿದ್ದೆ ಎಲ್ಲಿಗೆ ಟೂರ್ ಹೋಗ್ತಿದ್ದೀರಿ? ಅದು ಬಾಲಕಿಯರ ಪಿಯು ಕಾಲೇಜು. ಬೆಂಗಳೂರು ಹೋಗ್ತಿದ್ದೀವಿ, ಮತ್ತೊಂದು ಕಾಲೇಜು ವಿದ್ಯಾರ್ಥಿನಿ ಹೇಳಿದಳು ಕೊಡೈಕೆನಾಲ್ ಗೆ, ಕ್ಷಣ ಕಾಲ ಗಾಬರಿಯಾಗಿ ಹೋಯ್ತು ಸರಿ ಬೆಂಗಳೂರಿನಲ್ಲಿ ಏನು ನೋಡಲಿಕ್ಕಿದೆ ? ವಂಡರ್ ಲಾಗೆ ಹೋಗ್ತಿದೀವಿ. ಸರಿ ಟೂರು ಮುಗೀತು, ಮಕ್ಕಳು ಮರಳಿ ಬಂದರು , ನಾನು ಮತ್ತೆ ಕೇಳಿದೆ ಹೇಗಿತ್ತು ಟೂರು? ಸಾರ್ ಒಬ್ಬರು ಮಿಸ್ ಇನ್ನ ನಾಲ್ಕೈದು ಜನ ಸರ್ ಗಳು, ನಾನು ಮತ್ತೆ ಸರ್ ಮೇಲಿಂದ ಜಾರಿ ನೀರಿಗೆ ಬೀಳುವ ಆಟ ಆಡಿದ್ವಿ, ಸರ್ರು ನನ್ನ ಗಟ್ಟಿಯಾಗಿ ಹಿಡ್ಕೊಂಡಿದ್ರು, ಬಟ್ಟೆ ಬದಲಿಸೋಕೆ ಹೋದ್ವಾ ಸರ್ರು ನಮ್ ಜೊತೆನೆ ಬಟ್ಟೆ ಚೇಂಚ್ ಮಾಡಿದ್ರು! ಆಮೇಲೆ ರಾತ್ರಿ ಉಳ್ಕೊಂಡಿದ್ವಲ್ಲ ಯಾವ್ದೋ ಚೌಲ್ಟ್ರಿ ಒಂದೇ ಹಾಲ್  ಅಲ್ಲಿ ಸರ್ರ್ ಗಳು ನಮಗೆ ಸೀರೆ ಉಡಿಸೋದು ನಾವು ಅವರಿಗೆ ಸೀರೆ ಉಡಿಸಿದ್ವಿ ಸಖತ್ ಖುಷಿಯಾಯ್ತು ಸರ್ ಅಂದವಳ ಮುಖದಲ್ಲಿ ಮುಗ್ಧತೆಯಿತ್ತೆ ವಿನಹ ಆಕೆ ವಿವರಿಸಿದ ಅಷ್ಟೂ ಸಂಗತಿಗಳ ಸೀರಿಯಸ್ ನೆಸ್ ಗೊತ್ತಿರಲಿಲ್ಲ. ನಾನಂತೂ ಅದೆಲ್ಲ ಕೇಳಿಸಿಕೊಂಡು ದಂಗು ಬಡಿದವನಂತಾಗಿದ್ದೆ. 
        ಪದವಿ ಓದುವ ದಿನಗಳಲ್ಲಿ ಬಿಂದಾಸ್ ಜೀವನ ಶೈಲಿಯ ಕೊಡಗು ಭಾಗದ ಯುವತಿಯೊಬ್ಬಳು ಅತಿಥಿ ಉಪನ್ಯಾಸಕಿ, ಆಕೆಯ ಗಂಡ ಸೈನ್ಯದಲ್ಲಿ ಸೇವೆ ಸಲ್ಲಿಸುತ್ತಿದ್ದ, ಮೊದಲೇ ಸಿರಿವಂತದ ಕುಟುಂಬದ ಆ ಯುವತಿ ತರಗತಿಗಳಲ್ಲಿ ಹುಡುಗರೆಡೆಗೆ ಮಾದಕ ನೋಟ ಬೀರುತ್ತಿದ್ದಳು ವೀಕೆಂಡ್ ಗಳಲ್ಲಿ ಅದೇ ಕಾಲೇಜಿನ ಸಿರಿವಂತ ಹುಡುಗರ ಜೊತೆ ಕಲರ್ ಕಲರ್ ಟೀ ಶರ್ಟು ಮತ್ತು ಟೈಟು ಜೀನ್ಸ್ ತೊಟ್ಟು ಬೈಕ್ ಗಳಲ್ಲಿ ಹೊರಟು ಬಿಡುತ್ತಿದ್ದಳು. ಪ್ರೌಢಶಾಲಾ ಹಂತದಲ್ಲಿ ಪಿಟಿ ಮಾಸ್ಟರ್ ಮೊದಲ ಸೆಲೆಬ್ರಿಟಿ, ಆ ಮೇಲೆ ಪಾಠದ ಬದಲಿಗೆ ಮೋಜಿನ ಮಾತುಗಳನ್ನು ಪುಂಖಾನು ಪುಂಖವಾಗಿ ಆಡುವ ಶಿಕ್ಷಕ ಹೆಚ್ಚು ಅಚ್ಚುಮೆಚ್ಚಿನ ಶಿಕ್ಷಕನಾಗಿ ಬಿಡುತ್ತಾನೆ ಹದಿಹರೆಯದ ಮಕ್ಕಳಿಗೆ. ಪಿಟಿ ಮಾಸ್ಟರ್(ಕ್ಷಮಿಸಿ ಎಲ್ಲರೂ ಅಲ್ಲ) ವಿದ್ಯಾರ್ಥಿಗಳ ದೈಹಿಕ ಸೌಂದರ್ಯವನ್ನು ಕಣ್ಣಂಚಲ್ಲೇ ಅಳೆದು ಎಲ್ಲಾ ಹಂತದಲ್ಲೂ ಆಧ್ಯತೆ ಕೊಡುತ್ತಾ ಹೋಗುತ್ತಾನೆ, ಕ್ರೀಡಾ ಕೂಟಗಳಿಗೆ ಬೇಕು ಬೇಕಾದವರನ್ನು ಆಯ್ದು ಕರೆದುಕೊಂಡು ಹೋಗುತ್ತಾನೆ, ಅಲ್ಲಿ ಏನೇನು ನಡೆಯ ಬಹುದು ಎಂಬುದನ್ನು ಬರೆದರೆ ಇನ್ನೊಂದು ಕಥೆಯಾಗ ಬಹುದು. ಇವೆಲ್ಲ ಹಾಳಾಗಿ ಹೋಗಲಿ ಎಂದರೆ ಪೂರ್ವ ಪ್ರಾಥಮಿಕ ಹಂತದಿಂದ ಪ್ರಾಥಮಿಕ ಹಂತಕ್ಕೆ ಬರುವ ಮಕ್ಕಳಿಗೆ ಶಿಕ್ಷಕರೆ ಮಾದರಿ. ಅವರು ಏನು ಹೇಳಿದರೂ ಅದೇ ವೇದ ವಾಕ್ಯ. ಮಕ್ಕಳ ಮನಸ್ಥಿತಿಯ ಸದುಪಯೋಗ ಪಡೆಯುವ ಶಿಕ್ಷಕ/ಕಿ ನೈತಿಕ ಪ್ರಜ್ಞೆಯನ್ನು ಮೀರಿ ವರ್ತಿಸಿ ಬಿಡುತ್ತಾರೆ. ಬೆಳೆಯುತ್ತಿರುವ ಮಕ್ಕಳ ಹೆಗಲ ಮೇಲೆ ಕೈ ಹಾಕುವುದು, ತೊಡೆ ಚಿವುಟುವುದು, ಪಾಠ ಮಾಡುವಾಗ ಶಿಕ್ಷಿಸುವ ನೆಪದಲ್ಲಿ ಇಲ್ಲವೇ ಶಹಬ್ಬಾಸ್ ಗಿರಿ ಹೇಳುವ ನೆಪದಲ್ಲಿ ಬಿಗಿದಪ್ಪುವುದು, ಕೆನ್ನೆ ಚಿವುಟುವುದು ಇತ್ಯಾದಿ ಕ್ರಿಯೆಗಳನ್ನು ಮಾಡುವುದು ಮಾಮೂಲು. ಒಮ್ಮೆ ಹಳ್ಳಿಯೊಂದರಿಂದ ಫೋನ್ ಕರೆ ಮಕ್ಕಳೊಂದಿಗೆ ಅಶ್ಲೀಲವಾಗಿ ವರ್ತಿಸಿದ ಮುಖ್ಯ ಶಿಕ್ಷಕನ ನಡವಳಿಕೆ ಖಂಡಿಸಿ ಶಾಲಾ ಕೊಠಡಿಯಲ್ಲಿ ಬೀಗ ಹಾಕಲಾಗಿದೆ, ಸರಿ ಇದೇನಪ್ಪಾ ಅಂದುಕೊಂಡು ಶಿಕ್ಷಣಾಧಿಕಾರಿಗಳ ಜೊತೆ ಸ್ಥಳಕ್ಕೆ ಧಾವಿಸಿದೆವು, ಮಕ್ಕಳೆಲ್ಲ ಗೋಡೆ ಸ್ಲೇಟುಗಳ ಮೇಲೆ ಶಿಕ್ಷಕನ ಕೃತ್ಯಗಳ ಕುರಿತು ತೋಚಿದಂತೆ ಬರೆದು ಪ್ರತಿಭಟನೆ ನಡೆಸುತ್ತಿದ್ದವು ಅವರೊಂದಿಗೆ ಪೋಷಕರು ಸೇರಿಕೊಂಡಿದ್ದರು. ಅಲ್ಲಿ ಏನಾಯ್ತು ಎಂದು ನೋಡಿದರೆ ತರಗತಿಯಲ್ಲಿ 7ನೇ ಇಯತ್ತೆ ಕಲಿಯುವ ಹುಡುಗಿ  ಋತುಮತಿಯಾಗಿದ್ದಾಳೆ, ಸರಿ ಶಾಲೆಗೆ ಬಂದಿಲ್ಲ, ಕೆಲ ದಿನಗಳ ನಂತರ ಆ ಹುಡುಗಿ ಶಾಲೆಗೆ ಬಂದಿದ್ದಾಳೆ, ಮಕ್ಕಳು ಕೇಳಿವೆ ಋತುಮತಿ ಆಗೋದು ಅಂದ್ರೆ ಏನು? ಶಾಲೆಯ ಮುಖ್ಯ ಶಿಕ್ಷಕ ಏನು ಮಾಡಿದ್ದಾನೆ ಗೊತ್ತೆ ಆ ಬಾಲೆಯ ದಾವಣಿಯೆತ್ತಿ ಇದನ್ನೆ ಹಾಗನ್ನೋದು ಅನ್ನೋದ, ಈ ಘಟನೆಯಿಂದ ಶಾಕ್ ಗೆ ಒಳಗಾದ ಆ ಬಾಲೆ ಅಳುತ್ತಲೇ ಮನೆಗೆ ಓಡಿ ಪೋಷಕರಿಗೆ ಹೇಳಿದ್ದಾಳೆ, ಗಾಬರಿಯಾದ ಪೋಷಕರು ಶಾಲೆಗೆ ಧಾವಿಸಿದ್ದಾರೆ , ಆಗ ಮುಖ್ಯ ಶಿಕ್ಷಕನ ರಂಕು ರಂಕಿನ ಕಥೆಗಳು ಬೀದಿಗೆ ಬಿದ್ದಿವೆ. ದಿನಾ ರಿಯಾಲಿಟಿ ಶೋ ಮತ್ತು ಟೀವಿ ಸೀರಿಯಲ್ ನೋಡುವ ಆತ ಅದರಲ್ಲಿ ಬರುವ ಪಾತ್ರಗಳನ್ನು ವರ್ಣನೆ ಮಾಡ ಮಕ್ಕಳೊಂದಿಗೆ ಚರ್ಚಿಸುತ್ತಿದ್ದ, ಟೀವಿ ಸೀರಿಯಲ್ ನಲ್ಲಿ ಯಾವುದು ತಾನೆ ಒಳ್ಳೆಯದಿದೆ? ಎಲ್ಲವೂ ಹಾದರದ ಕಥೆಗಳೇ ಇಲ್ಲವೇ ಬಾಲ್ಯ ವಿವಾಹಗಳದ್ದು. ಮನೆಯಂಗಳದಲ್ಲಿ ತಪ್ಪದೇ ಇವನ್ನು ನೋಡುವ ಮಕ್ಕಳೊಂದಿಗೆ ಶಾಲೆಯಲ್ಲೂ ಆ ಕುರಿತು ಚರ್ಚಿಸಿದರೆ ಪಾತ್ರಗಳೊಂದಿಗೆ ಮಕ್ಕಳನ್ನು ಥಳುಕು ಹಾಕಿದರೆ ಅದರ ಪರಿಣಾಮವೇನು? 
      ಮೊನ್ನೆ ಮೊನ್ನೆ ರಾಜಧಾನಿಯಲ್ಲಿ 2-3 ಶಾಲೆಗಳಲ್ಲಿ 3,4,5,6 ವರ್ಷದ ಪುಟ್ಟ ಕಂದಮ್ಮಗಳ ಮೇಲೆ ಕಂಡರಿಯದಂತಹ ಅತ್ಯಾಚಾರ ಪ್ರಕರಣಗಳು ಬೆಳಕಿಗೆ ಬಂದವು, ಕೆಲವು ಪ್ರಕರಣಗಳಲ್ಲಿ ಪಿ ಟಿ ಮಾಸ್ತರ್, ಶಿಕ್ಷಕ, ಅಟೆಂಡರ್, ಮಕ್ಕಳನ್ನು ಶಾಲೆಗೆ ಬಿಡಲು ಕರೆದೊಯ್ಯುವ ವಾಹನ ಚಾಲಕ-ನಿರ್ವಾಹಕರುಗಳು ಕಂಡು ಬಂದರು. ಬಹುತೇಕ ಪ್ರಕರಣಗಳಲ್ಲಿ ಇಂತಹ ಶೋಷಣೆಗೆ ಒಳಗಾದವರು ಹೆಣ್ಣು ಮಕ್ಕಳು ಎಂದು ಕೊಂಡರೂ ಸಹಾ ಸರಿ ಸುಮಾರು ಅಷ್ಟೆ ಪ್ರಮಾಣದಲ್ಲಿ ಗಂಡು ಮಕ್ಕಳು ಸಹಾ ಲೈಂಗಿಕ ತೃಷೆಗೆ ಬಲಿಯಾಗಿದ್ದಾರೆ. ಹೈಸ್ಕೂಲ್ ನಲ್ಲಿ ಮನೆ ಪಾಠಕ್ಕೆ ಹೋಗುವ ಗಂಡು ಮಕ್ಕಳ ಜನನಾಂಗಗಳನ್ನು ಮುಟ್ಟಿ ಮುಟ್ಟಿ ನೋಡುತ್ತಿದ್ದ ಶಿಕ್ಷಕನೊಬ್ಬನಿದ್ದ, ಕಳೆದ ವರ್ಷ ಹಾಸನ ಜಿಲ್ಲೆಯ ಡಿಪ್ಲೋಮ ವಿದ್ಯಾರ್ತಿಯೊಬ್ಬ ಅನೈಸರ್ಗಿಕ ಕ್ರಿಯೆಗೆ ಬಲಿಯಾಗಿ ಪ್ರಕರಣವನ್ನು ಸಾರ್ವತ್ರಿಕ ಗೊಳಿಸಿದ್ದು ಬೆಚ್ಚಿ ಬೀಳಿಸುವ ಸಂಗತಿ. ಅದೊಂದು ದಿನ ನನ್ನ   ಆಪ್ತ ಮಿತ್ರರಾಗಿರುವ ಶಿಕ್ಷಾಣಾದಿಕಾರಿಯೊಬ್ಬರು ಹೀಗೆ ಹೇಳಿದ್ದರು, ನೋಡಿ ನಮ್ಮ ಶಾಲೆಗಳಲ್ಲಿ ಅಕ್ಷರ ದಾಸೋಹ ಯೋಜನೆ ಬರಲಾಗಿ ಎಷ್ಟೋ ಮಕ್ಕಳು ದೌರ್ಜನ್ಯಕ್ಕೊಳಗಾಗುವುದರಿಂದ ಪಾರಾಗಿದ್ದಾರೆ! 

       ತಂದೆ ತಾಯಿಯನ್ನು ಬಿಟ್ಟರೆ ಮಕ್ಕಳು ಸುರಕ್ಷಿತ ಎಂಬ ಭಾವನೆಯಿದ್ದುದು ಶಾಲೆಗಳಲ್ಲಿ ಅದೂ ಶಿಕ್ಷಕರುಗಳ ಮೇಲುಸ್ತುವಾರಿಯಲ್ಲಿ. ಈಗ ಅಂತಹ ನಂಬಿಕೆಗಳೇ ಮಣ್ಣಾಗುತ್ತಿವೆ, ಕಾಮವೇ ಪ್ರಧಾನವಾಗಿ ನೈತಿಕತೆಯ ಅಧ:ಪತನವಾಗುತ್ತಿರುವುದನ್ನು ಕಾಣ ಬಹುದು. ಶಿಕ್ಷಕ/ಉಪನ್ಯಾಸಕ/ಅದ್ಯಾಪಕ/ಪ್ರಾದ್ಯಾಪಕ ರಿಗೆ ನೀತಿ ನಿಯಮಗಳನ್ನು ರೂಪಿಸ ಬೇಕಿದೆ. ಎಲ್ಲಕ್ಕಿಂತ ಹೆಚ್ಚಾಗಿ ವೃತ್ತಿಯ ಘನತೆಯನ್ನರಿತು ಅವರೇ ಸಮಾಜ ತಮ್ಮನ್ನು ಗಮನಿಸುತ್ತಿದೆ, ನಾವು ಮಾದರಿ ವ್ಯಕ್ತಿತ್ವಗಳು ಆಗ ಬೇಕು ಎಂಬುದನ್ನು ಮನಗಾಣ ಬೇಕಿದೆ.ಯಾವಾಗ ಪೂರ್ವ ಪ್ರಾಥಮಿಕ ಶಾಲೆಗಳಲ್ಲಿ ಮಕ್ಕಳ ಮೇಲೆ ದೌರ್ಜನ್ಯದ ಪ್ರಕರಣಗಳು ಹೆಚ್ಚಾದವೋ ಆಗ ಎಚ್ಚೆತ್ತುಕೊಂಡ ಸರ್ಕಾರ ಶಾಲಾ-ಕಾಲೇಜುಗಳಿಗೆ ಪೋಲೀಸ್ ನೀತಿ ನಿಯಮಗಳನ್ನು ರೂಪಿಸಿ ನವೆಂಬರ್ 11, 2014ರಿಂದಲೇ ಜಾರಿಗೆ ಬರುವಂತೆ ಆದೇಶಿಸಿದೆ. ಸಧ್ಯಕ್ಕೆ ಖಾಸಗಿ ಶಾಲೆಗಳಲ್ಲಿ ನಡೆದ ದೌರ್ಜನ್ಯಗಳು ಮಾತ್ರ ಬೆಳಕಿಗೆ ಬಂದಿವೆ ಸರ್ಕಾರಿ ಶಾಲೆಗಳಲ್ಲಿ ಇಂತಹ ಪ್ರಕರಣಗಳು ಜರುಗುತ್ತಿರುವ ಕುರಿತು ಸರ್ಕಾರ ಎಚ್ಚರಿಕೆ ವಹಿಸ ಬೇಕಿದೆ. ಶಿಕ್ಷಕರು ಮಾನವೀಯ ಮತ್ತು ನೈತಿಕ ಮೌಲ್ಯಗಳನ್ನು ಹೊರತು ಪಡಿಸಿದಂತಹ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುತ್ತಿರುವ ಕುರಿತು ಕಟ್ಟೆಚ್ಚರ ವಹಿಸುವ ಸಲುವಾಗಿ ಪ್ರತೀ ತರಗತಿಯ ಕೋಣೆಗಳಲ್ಲಿ ಸಿಸಿಟೀವಿಗಳನ್ನು ಅಳವಡಿಸಲು ಸೂಚಿಸಲಾಗಿದೆ, ಪ್ರತೀ ಶಿಕ್ಷಕರ ವೈಯುಕ್ತಿಕ ಮಾಹಿತಿ, ಕೌಟುಂಬಿಕ ಹಿನ್ನೆಲೆಯ ಮಾಹಿತಿಯನ್ನು ಸ್ಥಳೀಯ ಠಾಣೆಗಳಿಗೆ ಒಪ್ಪಿಸಲು ಸೂಚಿಸಲಾಗಿದೆ. ದೇವರುಗಳ ಸ್ಥಾನದಲ್ಲಿರುವ ಶಿಕ್ಷಕರುಗಳು ಇವತ್ತು ಸಾರ್ವತ್ರಿಕ ಕಟಕಟೆಯಲ್ಲಿ ನಿಲ್ಲುವಂತಾಗಿರುವುದು ವ್ಯವಸ್ಥೆಯ ದುರಂತ. ವ್ಯವಸ್ಥೆಯಲ್ಲಿ ಎಲ್ಲಾ ಶಿಕ್ಷಕರುಗಳಿಗೂ ಈ ಮಾತು ಅನ್ವಯಿಸುವುದಿಲ್ಲ   ಆದರೆ ನೂರು ಮಂದಿಯ ಪೈಕಿ ಒಬ್ಬ  ಇಂಥ ಹೀನಸುಳಿಯ ಶಿಕ್ಷಕರಿದ್ದರೂ ಅದು ಸಮಸ್ತ ಶಿಕ್ಷಕ ಸಮುದಾಯಕ್ಕೆ ಕೇಡು ಅಲ್ಲವೇ? ಅಂತಹ ಹೀನಸುಳಿಗಳ ನಿವಾರಣೆಗೆ ಅನ್ವಯಿಸುವ ಕಾನೂನು ಒಳ್ಳೆಯ ಶಿಕ್ಷಕರನ್ನು ಬಲಿ ತೆಗೆದುಕೊಳ್ಳುತ್ತದಲ್ಲವೇ? 

ಮಾಧ್ಯಮದ ಅಂಗಡಿಗಳು ಮತ್ತು ಪತ್ರಕರ್ತರು!

ಕಾಸ್ಟ್ ಕಟಿಂಗ್ ಮತ್ತು ನಿಶ್ಚಿತ ಆದಾಯದ ಕೊರತೆಯಿಂದ ಮಾಧ್ಯಮ ಸಂಸ್ಥೆಗಳು ಪತ್ರಕರ್ತರನ್ನು ಪರ್ಫಾರ್ಮೆನ್ಸ್ ವೀಕ್ ಎಂಬ ಕಾರಣ ನೀಡಿ ತೆಗೆಯುವ ಪ್ರಕ್ರಿಯೆ ಈಗ ನಡೆಯುತ್ತ...