Sunday, December 6, 2009

ಹಿಂಬಾಗಿಲು ಪ್ರವೇಶದ ಗಂಜಿ ಕೇಂದ್ರಗಳು ಬೇಕಾ??

ಇಂತಹದ್ದೊಂದು ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಆಗಾಗ್ಯೆ ಕೇಳಿಬರುತ್ತಿದೆ. ಸರಿಸುಮಾರು 500ಕೋಟಿಗು ಹೆಚ್ಚು ವಾರ್ಷಿಕ ನಿರ್ವಹಣಾ ವೆಚ್ಚ ಹೊಂದಿರುವ 'ಮೇಲ್ಮನೆ' ಎಂಬ ರಾಜಕಾರಣಿಗಳ ಗಂಜಿಕೇಂದ್ರದಿಂದ ಏನು ಪ್ರಯೋಜನವಾಗಿದೆ? ಅವರು ಮೇಲ್ಮನೆಯಲ್ಲಿ ನೀಡುವ ಸಲಹೆ,ಸೂಚನೆಗಳಿಗೆ ಯಾವ ಕಿಮ್ಮತ್ತು ಲಭಿಸಿದೆ, ವಿಶೇಷ ಸಂಧರ್ಭದಲ್ಲಿ ನೀಡುವ ವರದಿಗಳ ಕಥೆ ಏನಾಗಿದೆ? ರಾಜಕೀಯದ ಲವಲೇಶವೂ ಇಲ್ಲದೇ ವ್ಯವಸ್ಥೆಯ ವಿವಿಧ ಸ್ಥರಗಳಿಂದ ಆಯ್ಕೆಯಾಗುವ 'ಮಹಾಮಹಿಮ'ರು ಮೇಲ್ಮನೆಗೆ ಬಂದು ಸಾಧಿಸಿರುವುದಾದರೂ ಏನು? ಈ ಮೇಲ್ಮನೆಯಿಂದ ಯಾರಿಗೆ ಪ್ರಯೋಜನವಾಗಿದೆ? ಎಂಬುದು ಚರ್ಚಾರ್ಹ ವಿಚಾರ. ಈಗ ಸ್ಥಳೀಯ ಸಂಸ್ಥೆಗಳ ಚುನಾವಣೆ ಬಂದಿದೆ. ಈ ಸಂಧರ್ಭ ಇಂತಹದ್ದೊಂದು ಚರ್ಚೆ ಹೆಚ್ಚು ಪ್ರಸ್ತುತವೆನಿಸಿಸುತ್ತದೆ.
ಮೊದಲಿಗೆ 'ವಿಧಾನ ಪರಿಷತ್' ಎಂದರೇನು? ಎಂದರೇನು? ಎಂಬುದನ್ನು ನೋಡೋಣ. ಪ್ರಜಾಪ್ರಭುತ್ವದ ರಾಜಕೀಯ ವ್ಯವಸ್ಥೆಯಲ್ಲಿ ಕೇಂದ್ರದಲ್ಲಿ ರಾಜ್ಯಸಭೆ ಇರುವಂತೆ ರಾಜ್ಯಗಳಲ್ಲಿ ವಿಧಾನಸಭೆಗೆ ಗಳಿಗೆ ದೇಶದ ಆರು ರಾಜ್ಯಗಳಲ್ಲಿ ಮಾತ್ರ ವಿಧಾನ ಸಭೆ ಅಸ್ತಿತ್ವದಲ್ಲಿದೆ. ರಾಜ್ಯದ ವಿಧಾನ ಸಭೆಗಳಲ್ಲಿ ಹೆಚ್ಚು ಅಂದರೆ ೫೦೦ ಮತ್ತು ಕಡಿಮೆ ಎಂದರೆ ೬೦ ಶಾಸಕ ಸ್ಥಾನಗಳಿರಬಹುದು. ಅತೀ ಕಡಿಮೆ ಶಾಸಕ ಸ್ಥಾನಗಳನ್ನು ಹೊಂದಿರುವ ರಾಜ್ಯಗಳು ಮೂರು ಪಾಂಡಿಚೆರಿ, ಮಿಜೋರಾಂ, ಅರುಣಾಚಲ ಪ್ರದೇಶ. ಈ ರಾಜ್ಯಗಳ ಶಾಸಕ ಸ್ಥಾನಗಳು ಕೇವಲ ೩೦ ಆಗಿದೆ!. ಸಧ್ಯ ದೇಶದ 28ರಾಜ್ಯಗಳ ಪೈಕಿ ಕರ್ನಾಟಕವೂ ಸೇರಿದಂತೆ ಆಂದ್ರಪ್ರದೇಶ, ಬಿಹಾರ, ಜಮ್ಮು ಮತ್ತು ಕಾಶ್ಮೀರ, ಮಹಾರಾಷ್ಟ್ರ ಹಾಗೂ ಉತ್ತರ ಪ್ರದೇಶಗಳಲ್ಲಿ ಮಾತ್ರ ವಿದಾನ ಪರಿಷತ್ ಗಳು ಅಸ್ತಿತ್ವದಲ್ಲಿವೆ. ಇಂತಹ ವ್ಯವಸ್ಥೆಯನ್ನು ಇರಿಸಿಕೊಳ್ಳುವುದು ಇಲ್ಲವೇ ತೆಗೆಯುವುದು ಆಯಾ ರಾಜ್ಯಗಳ ಶಾಸಕಾಂಗದ ನಿರ್ದಾರಕ್ಕೆ ಒಳಪಟ್ಟಿರುತ್ತದೆ.
ವಿಧಾನ ಸಭೆಯ ಒಟ್ಟು ಸದಸ್ಯರ ೧/೩ ರಷ್ಟು ಸಂಖ್ಯೆಯಲ್ಲಿ ಮೇಲ್ಮನೆಗೆ ಸದಸ್ಯರು ಇರುತ್ತಾರೆ. ಆ ಲೆಕ್ಕಾಚಾರಕ್ಕೆ ಬಂದರೆ ರಾಜ್ಯದಲ್ಲಿರುವ ೨೨೪ ಶಾಸಕರಿಗೆ ಮೇಲ್ಮನೆಯಲ್ಲಿ 75ಮಂದಿ ಸದಸ್ಯರಿರಬೇಕು. ಆದರೆ ಕೇವಲ 72ಮಂದಿ ಸದಸ್ಯರಿದ್ದಾರೆ. ಈ ಪೈಕಿ 23ಮಂದಿ ವಿಧಾನ ಸಭಾ ಸದಸ್ಯರಿಂದ ಚುನಾಯಿತರಾದರೆ, 7ಮಂದಿ ಪಧವಿಧರ ಕ್ಷೇತ್ರ, 7ಮಂದಿ ಶಿಕ್ಷಕರ ಕ್ಷೇತ್ರದಿಂದ, 24ಮಂದಿ ಸ್ಥಳೀಯ ಸಂಸ್ಥೆ ಪ್ರತಿನಿಧಿಗಳಿಂದ ಆಯ್ಕೆಯಾಗುತ್ತಾರೆ. ಉಳಿದಂತೆ 11ಮಂದಿಯನ್ನು ಸಾರ್ವಜನಿಕ ವಲಯದ ವಿವಿಧ ಕ್ಷೇತ್ರದಲ್ಲಿ ಹೆಸರು ಮಾಡಿದ ಗಣ್ಯರನ್ನು ನಾಮಕರಣ ಮಾಡಲಾಗುತ್ತದೆ. ಇವರ ಅಧಿಕಾರಾವಧಿ ನಿರಂತರ 6ವರ್ಷ. ಅದೇ ವಿಧಾನ ಸಭಾ ಸದಸ್ಯರಿಗೆ ಕೇವಲ 5ವರ್ಷ. ತುರ್ತು ಪರಿಸ್ಥಿತಿಯಲ್ಲಿ ಮಾತ್ರ ಮುಖ್ಯ ಮಂತ್ರಿ , ರಾಜ್ಯಪಾಲರಿಗೆ ಮನವಿ ಮಾಡಿದರೆ 6ತಿಂಗಳು ಮುಂದುವರೆಯಬಹುದು. ಹಾಗೂ 5ವರ್ಷಗಳಿಗೆ ಮುನ್ನವೇ ರಾಜಕೀಯ ಅತಂತ್ರ ಸ್ಥಿತಿ ಉಂಟಾದರೆ ವಿಧಾನ ಸಭೆ ವಿಸರ್ಜಿಸಲ್ಪಡುತ್ತದೆ. ಆದರೆ ಇಂತಹ ಯಾವುದೇ ಗೋಜಲುಗಳು ವಿಧಾನ ಪರಿಷತ್ ಸದಸ್ಯರಿಗಿಲ್ಲ. ಅವರ ಅವಧಿ 6ವರ್ಷ ಅಭಾದಿತ. ಇಂತಹ ಸದಸ್ಯರುಗಳು ಸರ್ಕಾರದ ಹಣಕಾಸು ಮಂಡನೆ ವಿಚಾರ ಚರ್ಚಿಸಬಹುದು, ತಿದ್ದುಪಡಿ ಸೂಚಿಸಬಹುದು, ಅನುಮೋದಿಸಬಹುದು.ಅದೂ ಕೇವಲ 14ದಿನಗಳ ಅವಧಿಯೊಳಗೆ ವಿನಹ ಯಾವುದೇ ಶಾಸನಾತ್ಮಕ ನಿರ್ಣಯವನ್ನು ಕೈಗೊಳ್ಳುವಂತಿಲ್ಲ. ಇಲ್ಲಿಗೆ ಆಯ್ಕೆಯಾಗುವ ಪ್ರತೀ ಸದಸ್ಯನಿಗೂ ತಲಾ 50ಲಕ್ಷರೂಪಾಯಿಗಳ ಅಭಿವೃದ್ದಿ ಅನುದಾನವನ್ನು ವಾರ್ಷಿಕವಾಗಿ ಕೊಡಲಾಗುತ್ತದೆ. ಅಂದರೆ 6ವರ್ಷಕ್ಕೆ 3ಕೋಟಿ ಅಭಿವೃದ್ದಿ ಅನುದಾನವನ್ನು ವಿವೇಚನಾ ಕೋಟದಲ್ಲಿ ಬಳಸಬಹುದು. ಆಡಳಿತ ನಡೆಸುವ ಸರ್ಕಾರಗಳು ಮಾತ್ರ ಇದಕ್ಕೆ ತದ್ವಿರುದ್ದ. ಈ ಸದಸ್ಯರ ಸಧ್ಯದ ಗೌರವ ಧನ 22500ರೂ.ಗಳಿದ್ದರೆ ಮುಂದಿನ ಜನವರಿವೇಳೆಗೆ ಇದು 44ಸಾವಿರ ರೂಪಾಯಿಗಳಾಗಲಿದೆ. ಮತ್ತು ಓಡಾಟದ ಖರ್ಚಿಗೆ ತಿಂಗಳಿಗೆ 25ಸಾವಿರ, ಸಭಾ ಭತ್ಯೆ ಇತ್ಯಾದಿ ಇದ್ದೇ ಇರುತ್ತೆ. ಇಂತಹದ್ದೊಂದು ವ್ಯವಸ್ಥೆಗೆ ಆಂದ್ರಪ್ರದೇಶದಲ್ಲಿ ಭಾರೀ ವಿರೋಧ ವ್ಯಕ್ತವಾಗಿ ರದ್ದಾಗಿತ್ತು. ಆದರೆ 2007ರಲ್ಲಿ ಇದು ಅಲ್ಲಿ ಮತ್ತೆ ಅಸ್ಥಿತ್ವಕ್ಕೆ ಬಂದಿದೆ.
ಈಗ ಅಸಲು ವಿಷಯಕ್ಕೆ ಬರೋಣ,ಇಂತಹ ವಿಧಾನ ಪರಿಷತ್ ಗಳಿಗೆ ಆಯ್ಕೆಯಾಗುವವರು ಎಂತಹವರು ? ಯಾರ ಹಿತಾಸಕ್ತಿಗಾಗಿ ಇವರೆಲ್ಲ ಮೇಲ್ಮನೆಗೆ ಬರುತ್ತಾರೆ? ಅಲ್ಲಿ ಅವರು ಕಡಿಯೋದೇನು? ಜನ ಸಾಮಾನ್ಯರಿಗೆ ಇವರಿಂದ ಏನು ಉಪಯೋಗ? ಎಂಬ ಪ್ರಶ್ನಯಿದೆ. ವಿಧಾನ ಪರಿಷತ್ ಅನ್ನೊದು ವಿಧಾನ ಸಭೆಗೆ ಒಂದು ಸಲಹಾ ಸಮಿತಿ ಇದ್ದಂತೆ, ಇನ್ನೊಂದು ಅರ್ಥದಲ್ಲಿ ಜನಮಾನಸದಲ್ಲಿ ಸ್ಥಾನ ಕಳೆದುಕೊಂಡ ರಾಜಕಾರಣಿಗಳನ್ನು ಓಲೈಸುವ ಇಲ್ಲವೇ ರಾಜಕಾರಣಿಗಳು ತಮ್ಮ ಹಿಂಬಾಲಕನಿಗೆ ಅಧಿಕಾರಾವಕಾಶ ಮಾಡಿಕೊಡುವ ಹಿಂಬಾಗಿಲು ಪ್ರವೇಶದ ಒಂದು 'ಗಂಜಿಕೇಂದ್ರ'. ಇಂತಹ ಗಂಜಿಕೇಂದ್ರಗಳಿಗೆ ವಿಧಾನಸಭೆ-ಲೋಕಸಬೆ ಚುನಾವಣೆಗಳಲ್ಲಿ ಪಕ್ಷದ ಏಜೆಂಟನಾಗಿ ಜೀತ ಮಾಡಿಕೊಂಡು ಬದುಕುವ ಇಲ್ಲವೇ ಪಾರ್ಟಿಗೆ ದಂಡಿಯಾಗಿ ದುಡ್ಡು ಸುರಿಯುವ ವ್ಯಕ್ತಿಗಳನ್ನು ಚುನಾವಣೆಗೆ ತರಲಾಗುತ್ತದೆ. ಮತ್ತು ನೇರ ಚುನಾವಣೆಯಲ್ಲಿ ಸೋತು ಸುಣ್ಣವಾದವನನ್ನು ಜಾತಿಯ ದೃಷ್ಟಿಯಿಂದ ಓಲೈಸಿ ಮೇಲ್ಮನೆ ಚುನಾವಣೆಗೆ ತರಲಾಗುತ್ತದೆ. ಇಲ್ಲಿಯೂ ರಾಜಕೀಯ ಹಿತಾಸಕ್ತಿಯಿಂದ ವಿವಿಧ ರಾಜಕೀಯ ಪಕ್ಷಗಳ ಒಳ ಒಪ್ಪಂದಗಳ ಮೂಲಕ ತಮ್ಮ ಬೇಳೆ ಬೇಯಿಸಿ ಕೊಳ್ಳುತ್ತವೆ. ದುಡ್ಡು ಸುರಿದು ಸದಸ್ಯನಾದವನು ತನ್ನ ಬಂಡವಾಳ ಶಾಹಿ ಸಾಮ್ರಾಜ್ಯದ ರಕ್ಷಣೆಗೆ ಅಧಿಕಾರವನ್ನು ದುರುಪಯೋಗ ಪಡಿಸಿಕೊಂಡರೆ ಮುಖಂಡರುಗಳ ಹಿತಾಸಕ್ತಿಯಿಂದ ಆಯ್ಕೆಯಾದವನು ಸ್ವತಂತ್ರ ವಿವೇಚನೆ ಇಲ್ಲದೇ ಆಯಾ ಪಕ್ಷದ ಮುಖಂಡರ ಇಲ್ಲವೇ ಪಕ್ಷದ ನೆರಳಿನಲ್ಲಿ ಜೀತದಾಳಿನಂತೆ ಆದೇಶ ಪಾಲಿಸುತ್ತಾನೆ. ಇಂತಹ ಸದಸ್ಯರುಗಳಿಂದ ಯಾವ ಜನೋಪಯೋಗಿ ಕೆಲಸಗಳು ನಡೆಯುಲು ಸಾಧ್ಯ ?ಅಷ್ಟಕ್ಕೂ ತಮಗೆ ಕೊಟ್ಟ ಅಭಿವೃದ್ದಿ ಅನುದಾನ, ಅವಕಾಶಗಳನ್ನು ರಾಜ್ಯದ ಎಷ್ಟು ಮಂದಿ ವಿಧಾನ ಪರಿಷತ್ ಸದಸ್ಯರು ಸಮರ್ಪಕವಾಗಿ ಜನಸೇವೆ ಗೆ ಬಳಸುತ್ತಾರೆ. ವಿಧಾನ ಪರಿಷತ್ ಸದಸ್ಯರುಗಳೆಂದರೆ ಕೊಟ್ಟಿಗೆಯಲ್ಲಿ ಕಟ್ಟಿದ ಗೊಡ್ಡು ಹಸುಗಳು!. ಇಂತಹ ಗೊಡ್ಡು ದನಗಳಿಂದ ಯಾವ ಪ್ರಯೋಜನವೂ ಆಗಲಾರದು. ಈಗ ನಡೆಯುತ್ತಿರುವ ಮೇಲ್ಮನೆ ಚುನಾವಣೆಗಳಲ್ಲಿ ನೇರ ಹಣಾಹಣಿ ಇರುವೆಡೆ ಸ್ಥಳೀಯ ಸಂಸ್ಥೆ ಪ್ರತಿನಿಧಿಗಳಿಗೆ ೧೦೦೦ ದಿಂದ ೫೦೦೦ ರೂಗಳವರೆಗೆ ನೀಡಿ ಪ್ರತೀ ಪ್ರತೀ ಮತಗಳನ್ನು ಖರಿದಿಸಲಾಗುತ್ತಿದೆಯೆಂಬ ಸುದ್ದಿ ಇದೆ. ಹೀಗೆ ದುಡ್ಡು ಚೆಲ್ಲಿ ಆಯ್ಕೆಯಾಗುವವರಿಂದ ನಾವು ನಿರೀಕ್ಷಿಸುವುದಾದರೂ ಏನನ್ನು? ನೀವೇ ಹೇಳಿ? ಇಂತಹದ್ದೊಂದು ವ್ಯವಸ್ಥೆಗೆ ಕೋಟಿರೂ. ಗಳ ವೆಚ್ಚವನ್ನು ಯಾಕಾದರೂ ಮಾಡಬೇಕು? ಅದಕ್ಕೆ ಹೇಳಿದ್ದು ಹಿಂಬಾಗಿಲು ಪ್ರವೇಶದ ಗಂಜಿಕೇಂದ್ರ ಬೇಕಾ??

ಮಾಧ್ಯಮದ ಅಂಗಡಿಗಳು ಮತ್ತು ಪತ್ರಕರ್ತರು!

ಕಾಸ್ಟ್ ಕಟಿಂಗ್ ಮತ್ತು ನಿಶ್ಚಿತ ಆದಾಯದ ಕೊರತೆಯಿಂದ ಮಾಧ್ಯಮ ಸಂಸ್ಥೆಗಳು ಪತ್ರಕರ್ತರನ್ನು ಪರ್ಫಾರ್ಮೆನ್ಸ್ ವೀಕ್ ಎಂಬ ಕಾರಣ ನೀಡಿ ತೆಗೆಯುವ ಪ್ರಕ್ರಿಯೆ ಈಗ ನಡೆಯುತ್ತ...