Sunday, February 21, 2010

ರೈತರ ಹಿತಕ್ಕೆ ಕೃಷಿ ಬಜೆಟ್ ಯಾಕಿಲ್ಲ??



2008ರ ರಾಷ್ಟ್ರೀಯ ಅಂಕಿ-ಅಂಶಗಳ ಪ್ರಕಾರ ಆತ್ಮಹತ್ಯೆ ಮಾಡಿಕೊಂಡ ರೈತರ ಸಂಖ್ಯೆ 16,196. 1997 ರಿಂದ 2008ರ ವರೆಗೆ ಇದೇ ಅಂಕಿ-ಅಂಶದ ಪ್ರಕಾರ ಸಾವಿಗೆ ಶರಣಾದ ರೈತ ರಸಂಖ್ಯೆ1,99,132. ಹಾಗೆಯೇ ವಿಶ್ವಸಂಸ್ಥೆಯ ಅಧ್ಯಯನವೊಂದ ರ ಪ್ರಕಾರ 1991 ಮತ್ತು 2001ರ ನಡುವೆ ಕೃಷಿಯಿಂದ ವಿಮುಖರಾ ದರೈತರ ಸಂಖ್ಯೆ 8ಮಿಲಿಯನ್, ಅದೇ ಪ್ರಕಾರ ದಿನವೊಂದಕ್ಕೆ 200ದಂತೆ 10ವರ್ಷಕ್ಕೆ ಕೃಷಿಯಿಂದ ವಿಮುಖರಾ ದರೈತರ ಸಂಖ್ಯೆ 2008ಕ್ಕೆ 34ಸಾವಿರ ಮಿಲಿಯನ್! ಇಂತಹದ್ದೊಂದು ಆಘಾತಕಾರಿ ಅಂಕಿ-ಅಂಶದ ಮಾಹಿತಿಯನ್ನು ಎಸ್ ಎಂ ಎಸ್ ಮೂಲಕ ನೀಡಿದ್ದು ಪೊಟ್ಯಾಟೋ ಕ್ಲಬ್ ನ ಯೋಗಾರಮೇಶ್. ಹೌದು ಇಂತಹದ್ದೊಂದು ಬೆಳವಣಿಗೆ ಮನುಕುಲಕ್ಕೆ ಅತ್ಯಂತ ಆಘಾತ ಕಾರಿಯಾದುದು. ನಿನ್ನೆ ಗದುಗಿನಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ರೈತ ಸಂಘದ ಮುಖಂಡ ಕೋಡಿ ಹಳ್ಳಿ ಚಂದ್ರಶೇಖರ್ ಕೇಂದ್ರ ಸರ್ಕಾರ ಸೇರಿಂದತೆ ದೇಶದ ಎಲ್ಲ ರಾಜ್ಯಗಳಲ್ಲೂ ಕೃಷಿ ವಲಯಕ್ಕೆ ಆದ್ಯತ ಕೊಡುವ ಪ್ರತ್ಯೇಕ ಕೃಷಿ ಬಜೆಟ್ ಮಂಡನೆಯಾಗಬೇಕು ಎಂದು ಪ್ರತಿಪಾದಿಸಿದ್ದಾರೆ. ಹೌದು ಇದು ಎಲ್ಲರೂ ಒಪ್ಪಬೇಕಾದ ಮಾತೆ ಸರಿ.ಹೇಳಿಕೇಳಿ ನಮ್ಮ ದೇಶ ಹಳ್ಳಿಗಳ ದೇಶ, ಶೇ.75ರಷ್ಟು ಮಂದಿ ಕೃಷಿಯನ್ನೇ ನಂಬಿ ಬದುಕು ಸವೆಸುತ್ತಿದ್ದಾರೆ, ಇದು ದೇಶದ ಆರ್ಥಿಕ ಬೆನ್ನೆಲುಬು ಹೌದು. ಆದರೆ ಇದಕ್ಕೆ ಪೂರಕವಾ ದ ವಾತಾವರಣ ನಿರ್ಮಿಸುವಲ್ಲಿ ಪ್ರೋತ್ಸಾಹಿಸುವಲ್ಲಿ ಮಾತ್ರ ಸರ್ಕಾರಗಳು ಹಿಂದೆ ಬಿದ್ದಿವೆ.ದೇಶದಲ್ಲಿ ಆಹಾರ ಸ್ವಾವಲಂಬನೆಗೆ ಮತ್ತು ಆರ್ಥಿಕತೆಗೆ ಬೆನ್ನೆಲುಬಾಗಿರುವ ಕೃಷಿಗೆ ಯಾಕೆ ವಿಶೇಷ ಬಜೆಟ್ ಮಂಡಿಸುತ್ತಿಲ್ಲ? ಈ ದೇಶದ ಬಹುತೇಕ ರಾಜಕಾರಣ ನಿಂತಿರುವುದೇ ರೈತರ ಅಸ್ತ್ವಿತ್ವದ ಮೇಲೆ, ಆದರೆ ಅಧಿಕಾರಕ್ಕೆ ಏರಿದ ಮೇಲೆ ಅವರು ರೈತರ ಕೊರಳನ್ನು ಕುಯ್ಯುವ ಕೆಲಸವನ್ನು ಸರಾಗವಾಗಿ ಮಾಡುತ್ತಿದ್ದಾರೆ. ರೈತರ ಬದುಕನ್ನು ವಿದೇಶಿ ಕಂಪನೆಗಳಿಗೆ ಅಡವಿಡುತ್ತಾರೆ. ಅಭಿವೃದ್ದಿಯ ಹೆಸರಿನಲ್ಲಿ ರೈತರ ಹಿತವನ್ನು ಸಾರಾಸಗಟಾಗಿ ಬಲಿಕೊಡುತ್ತಾರೆ , ಯಾಕೆ ಹೀಗೆ?
ಇಷ್ಟೆಲ್ಲಾ ಪೀಠಿಕೆ ಯಾಕೆ ಅಂತೀರಾ? ರಾಜ್ಯದಲ್ಲಿಯೂ ಸಹಾ ಜಾಗತೀಕರಣ ನೀತಿಯ ದೆಸೆಯಿಂದಾಗಿ ಅಭಿವೃದ್ದಿಯ ಹಪಾಹಪಿಗೆ ಬಿದ್ದು ಕಳೆದ 18ವರ್ಷಗಳಿಂದಲೂ ರೈತ ರಶೋಷಣೆ ನಿರಂತರವಾಗಿ ನಡೆಯುತ್ತಲೇ ಬಂದಿದೆ. ಎಸ್ ಇ ಜೆಡ್ ಹೆಸರಿನಲ್ಲಿ ರೈತರ ಜಮೀನುಗಳನ್ನು ವಶಕ್ಕೆ ತೆಗೆದುಕೊಳ್ಳುತ್ತಿರುವ ಸರ್ಕಾರ ರೈತರನ್ನು ಬಿಕಾರಿಗಳನ್ನಾಗಿ ಮಾಡುತ್ತಿದ್ದೆ. ಕಳೆ ದ18ವರ್ಷಗಳಲ್ಲಿ ಕೃಷಿ ಭೂಮಿಯ ಪ್ರಮಾಣ ತೀವ್ರ ಗತಿಯಲ್ಲಿ ಕಡಿಮೆಯಾಗುತ್ತಿದೆ. 2002 ಹಾಗೂ 2005ರಲ್ಲಿ ಎಸ್ ಇ ಜೆಡ್ ಕುರಿತಂತೆ ಸರ್ಕಾರ ಪ್ರಕಟಿಸಿದ ಹೊಸ ನೀತಿಗಳನ್ವಯ ಆರಂಭದಲ್ಲಿ ರಾಷ್ಟ್ರಾಧ್ಯಂತ 146 ವಿಶೇಷ ಆರ್ಥಿಕವಲಯಗಳ ಪ್ರಸ್ತಾಪವಿತ್ತು ಆದರ ೆಅದು ಹೊಸನೀತಿ ಜಾರಿಯಾದ ಮೇಲೆ 500ಕ್ಕೂ ಹೆಚ್ಚು ಪ್ರಸ್ತಾವಗಳ ುಬಂದಿವೆ ಮತ್ತು 220ಪ್ರಸ್ತಾವಗಳನ್ನು ಈಗಾಗಲೇ ಅನುಮೋದಿಸಲಾಗಿದೆ. ಇಂತಹ ವಲಯಗಳ ಮೂಲಕ ದೇಶದ 17.44ಲಕ್ಷ ಮಿಲಿಯನ್ ಜನರಿಗೆ ಉದ್ಯೋಗ ಕಲ್ಪಿಸುವ ಇರಾದೆಯನ್ನು ಕೇಂದ್ರಸರ್ಕಾರ ವ್ಯಕ್ತಪಡಿಸಿದೆ. ಆರಂಭದಲ್ಲಿ 1,25,163 ಸಾವಿರ ಹೆಕ್ಟೇರು ಭೂಮಿ ವಶಕ್ಕೆ ತೆಗೆದುಕೊಳ್ಳುವ ಇದ್ದರೆ, ಈಗ ಅದು ಅದರ ಹತ್ತು ಪಟ್ಟು ಹೆಚ್ಚು ಭೂಮಿಯನ್ನ ಬೇಡುತ್ತಿದೆ. ಪರಿಣಾ ಮ ರಾಜ್ಯದ ಬಳ್ಳಾರಿ, ರಾಯಚೂರು, ಬೆಳಗಾಂ, ಮೈಸೂರು, ಮಂಗಳೂರು, ದಾವಣಗೆರೆ, ಬೆಂಗಳೂರು ಮತ್ತಿತರೆಡೆಗಳಲ್ಲಿ ರೈತರು ಗುಳೆ ಹೋಗುವಂತಹ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಬೂಮಿಯಲ್ಲಿ ಗೇದು ಬದುಕು ಸವೆಸುತ್ತಿದ್ದವನು ಬಲವಂತವಾಗಿ ಒಕ್ಕಲೆಬ್ಬಿಸಿಕೊಂಡು ಗ್ರಾಮಗಳನ್ನು ತೊರೆದ ುಹೋಗುವಂತಹ ಪರಿಸ್ಥಿತಿ ದಿನೇದಿನೇ ಹೆಚ್ಚಾಗುತ್ತಿದೆ. ಇದಕ್ಕೆ ಕಣ್ಣ ಮುಂದಿ ನಜ್ವಲಂತ ುದಾಹರಣೆ ದೇವನಹಳ್ಳಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಜಮೀನು ಕಳೆದುಕೊಂಡ ರೈತರದ್ದು, ಹಾಗೆಯೇ ನೈಸ್ ಕಾರಿಡಾರ್ ರಸ್ತೆ ಯೋಜನೆ, ಬಳ್ಳಾರಿವಿದ್ಯುತ್ ಸ್ಥಾವರಕ್ಕೆ ಜಮೀನು ಕಳೆದುಕೊಂಡವರ ಬದುಕು ಮೂರಾಬಟ್ಟೆಯಾಗಿದೆ. ರಾಜಕಾರಣದಲ್ಲಿ ಒಂದು ಬಂಡೆಗಲ್ಲಿನಂತಿರು ವಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ರೈತ ರಭೂಮಿಯನ್ನು ಕಸಿದುಕೊಳ್ಳುವ ಸರ್ಕಾರದ ನೀತಿಯ ವಿರುದ್ದ ಸಿಡಿದೆದ್ದಿದ್ದಾರೆ. ರೈತರ ಸಮಾವೇಶಗಳನ್ನು ನಡೆಸುತ್ತಿದ್ದಾರೆ, ಈ ಕುರಿತು ಸಂಸತ್ತಿನಲ್ಲಿಯೂ ಪ್ರಸ್ತಾಪಿಸುವ ಮಾತನಾಡಿದ್ದಾರೆ. ಅಧಿಕಾರದಲ್ಲಿದ್ದಾಗ ತಾವೇ ಅಂತಹ ತಪ್ಪುಗಳನ್ನು ಮಾಡಿದ್ದರೂ ವಿರೋಧಪಕ್ಷೆದಲ್ಲಿದ್ದಾಗ ಮಾತ್ರ ಅವರು ರೈತರ ಪರ ಹೋರಾಟಕ್ಕಿಳಿದಿರುವುದು ಪ್ರಶಂಸಿಸಬೇಕಾ ದವಿಚಾರವೇ ಸರಿ. ಆದರೆ ಕಾಂಗ್ರೆಸ್ ಆಗಲಿ ಇತರೆ ಸಂಘಟನೆಗಳಾಗಲಿ ಇಂತಹದ್ದೊಂದು ಪ್ರಯತ್ನಕ್ಕೆ ಇಳಿಯುತ್ತಿಲ್ಲ. ಬದಲಾಗಿ ಆಡಳಿತ ಬಿಜೆಪಿ ಸರ್ಕಾರ ಕಳೆದು ಒಂದು ವಾರದಿಂದ ರಾಜ್ಯದ ಜನರ ಹಿತಾಸಕ್ತಿಗೆ ವಿರುದ್ದವಾದ ನಿರ್ಣಯಗಳನ್ನು ತೆಗೆದುಕೊಳ್ಳುತ್ತಿದೆ. 3-4 ಜಿಲ್ಲೆಗಳಲ್ಲಿ ಮೈನಿಂಗ್ ಮಾಫಿಯಾಗೆ ಅನುಮತಿ ನೀಡಿದೆ, ನೈಸ್ ಕಾರಿಡಾರ್ ಯೋಜನೆ ಕುರಿತು ಸ್ಪಷ್ಟವಾದ ನಿಲುವಿಗೆ ಬಾರದೆ ರೈತರ ಹಿತಾಸಕ್ತಿಗೆ ವಿರುದ್ದ ನಿಲುವು ತಳೆಯುತ್ತಿದೆ. ಈಗಾಗಲೇ ನೈಸ್ ಯೋಜನೆಯಿಂ ದ ಸಾವಿರಾರು ಎಕರೆ ಭೂಮಿಯನ್ನು ಕಳೆದುಕೊಂಡಿರು ವರೈತರು ನೋವನ್ನನುಭವಿಸುತ್ತಿದ್ದಾರೆ. ಇದೇ ರೀತಿ ವಿಮಾ ನನಿಲ್ದಾಣಗಳಿಗೆ, ದೊಡ್ಡ ಕಂಪನಿಗ ಳಘಟಕಗಳಿಗೆ, ನೀರಾವರಿ ಯೋಜನೆಗಳಿಗೆ, ವಿದ್ಯುತ್ ಘಟಕಗಳಿಗೆ, ಸಾಪ್ಟ್ ವೇರ್ ಕಂಪನಿಗಳಿಗೆ, ಮೈನಿಂಗ್ ಮಾಫಿಯಾಕ್ಕೆ ರೈತರ ಜಮೀನುಗಳು ಬಲಿಯಾಗುತ್ತಿವೆ ಜೊತೆಗೆ ರೈತ ರಬದುಕುಗಳೂ ಕೂಡ!

ಇದೇ ಫೆಬ್ರುವರಿ 25ರಿಂದ ರಾಜ್ಯ ಸರ್ಕಾರದ ಉಭಯ ಮಂಡಲಗಳ ಅಧಿವೇಶ ಜರುಗಲಿದೆ. ಈ ಸಂಧರ್ಭದಲ್ಲಿ ವಿರೋಧ ಪಕ್ಷಗಳು ರಾಜ್ಯದ ಜನ ರಹಿತವನ್ನು ಎಷ್ಟರ ಮಟ್ಟಿಗೆ ಕಾಯುತ್ತಾರೆ ? ಅಥವ ಜನರ ಹಿತಾಸಕ್ತಿ ಕಡೆಗಣಿಸಿ ಸಮ ಯವ್ಯರ್ಥಮಾಡುತ್ತಾರಾ? ಎಂಬುದನ್ನು ಕಾದು ನೋಡಬೇಕಾಗಿದೆ. ರಾಜ್ಯ ಸರ್ಕಾರ ಗೋಹತ್ಯೆ ನಿಷೆದ ವಿಧೆಯಕವನ್ನು ಜಾರಿಗೆ ತರುವ ಮಾತಾಡುತ್ತಿದೆ, ಇಲ್ಲಿ ಒಂದು ಪ್ರಶ್ನೆಯಿದೆ. ಇವತ್ತು ದೇಶದಲ್ಲಿಯೇ ಅತೀ ಹೆಚ್ಚು ಗೋತಳಿಗಳನ್ನು ಹೊಂದಿದ ರಾಜ್ಯ ನಮ್ಮದು. ಗೋವು ದೇವರ ಸಮಾನ, ಹಿಂದೂ ಸಂಸ್ಕೃತಿಯಲ್ಲಿ ಗೋವಿಗೆ ಉನ್ನತ ಸ್ಥಾನವಿದೆ ಎಂದೆಲ್ಲ ಹೇಳಲಾಗುತ್ತಿದೆ ಮತ್ತು ಆ ಕಾರಣಕ್ಕಾಗಿಯೇ ಬಿಜೆಪಿ ಚಡ್ಡಿ ಧೋರಣೆ ಪ್ರದರ್ಶಿಸುತ್ತಾ ಹಿಂದೆ ಮುಂದೆ ನೋಡದೆ ವಿಧೇಯಕ ಮಂಡನೆಗೆ ಮುಂದಾಗಿದೆ. ಇವತ್ತು ಅತೀ ಹೆಚ್ಚಿನ ಸಂಖ್ಯೆ ಯಲ್ಲಿ ಜಾಗತಿಕವಾಗಿ ಗೋಮಾಂಸ ಭಕ್ಷಕರಿದ್ದಾರೆ, ಭಾರತದಲ್ಲಿಯೂ ಸಹಾ ಮುಸಲ್ಮಾನರು ಮತ್ತು ಕೆಲವು ದಲಿತರು ಗೋಮಾಂಸವನ್ನು ಆಹಾರ ಕ್ರಮವಾಗಿ ರೂಢಿಸಿಕೊಂಡಿದ್ದಾರೆ. ಇದಕ್ಕೆ ಸ್ಥಳೀಯವಾಗಿ ಎರಡು ಕಾರಣಗಳನ್ನು ನೀಡಲಾಗುತ್ತದೆ, ಅಗ್ಗದ ದರದಲ್ಲಿ ಗೋಮಾಂಸದ ಲಭ್ಯತೆ ಮತ್ತು ಇತರೆ ಮಾಂಸಗಳಿಗಿಂತ ಗೋಮಾಂಸ ಹೆಚ್ಚು ಪುಷ್ಠಿದಾಯಕ ಮತ್ತು ಕೆಲವು ರೋಗಗಳಿಗೆ ಸಿದ್ದೌಷಧ ಎನ್ನಲಾಗುತ್ತದೆ. ಇಂತಹ ವಾದಗಳು ಏನೇ ಇರಲಿ ನನ್ನ ಪ್ರಕಾರ ಹೇಳುವುದಾದರೆ ಇವತ್ತು ಹಸು ಸಾಕಾಣಿಕೆಗೆ ಪೂರಕವಾದ ವಾತಾವರಣ ಎಲ್ಲಿದೆ.? 70ರ ದಶಕದಲ್ಲಿ ಹಸುಗಳ ಸಾಗಾಣಿಕೆಗೆಂದೆ ಮೀಸಲಾಗಿದ್ದ ಅಮೃತ ಮಹಲ್ ಗಳು ಅಸ್ತಿತ್ವ ಇವತ್ತು ಎಲ್ಲಿವೆ?. ಪ್ರತೀ ಗ್ರಾಮಗಳಲ್ಲಿದ್ದ ಗೋಮಾಳ ಜಾಗದ ಕಥೆಗಳೇನಾಗಿದೆ.? ಎಸ್ ಇ ಜೆಡ್ ಹೆಸರಿನಲ್ಲಿ ರೈತರನ್ನು ಒಕ್ಕಲೆಬ್ಬಿಸುತ್ತಿರುವಾಗ ಹಸುಗಳನ್ನಾದರೂ ಏನು ಮಾಡಬೇಕು.? ಆಧುನೀಕರಣದ ಭರಾಟೆಯಲ್ಲಿ ಕೃಷಿ ಕ್ಷೇತ್ರಕ್ಕೆ ಯಂತ್ರೋಪಕರಣಗಳ ಆಗಮನವಾಗಿದೆ,ಟ್ರ್ಯಾಕ್ಟರುಗಳು ಮನೆಗೊಂದರಂತೆ ಬಂದಿವೆ ಹೀಗಾದಾಗ ಗೋವುಗಳನ್ನು ಸಾಕುವುದಾದರೂ ಹೇಗೆ? ಹಾಲು ಕರೆಯುವ ಜಾನುವಾರುಗಳು ಓಕೆ ಹಾಲು ಕರೆಯದ ಹೋರಿಗಳನ್ನೇನು ಮಾಡಬೇಕು? ಉಪಯೋಗಕ್ಕೆ ಬರುವ ಹಸುಗಳ ಸಾಕಾಣಿಕೆಯೇ ಹೆಚ್ಚು ಶ್ರಮದಾಯಕ ಹಾಗಿರುವಾಗ ಉಪಯೋಗಕ್ಕೆ ಬಾರದ ಗೋವುಗಳನ್ನು ಏನು ಮಾಡಬೇಕು? ಅದಕ್ಕೆ ಸಂಪನ್ಮೂಲ ಎಲ್ಲಿದೆ? ಅದನ್ನು ಎಲ್ಲರಿಂದಲೂ ಭರಿಸಲು ಸಾಧ್ಯವೇ? ಹಾಗಂತ ಅವುಗಳನ್ನು ಕಡಿದು ತಿನ್ನಿ ಎಂದು ಹೇಳಲಾಗದು, ಆದರೆ ಗೋಮಾಂಸ ಭಕ್ಷಣೆ ಸಾಂಪ್ರದಾಯಿಕ ಆಹಾರವಾಗಿರುವ ಒಂದು ವರ್ಗದ ಜನರು ಏನು ಮಾಡಬೇಕು? ಹಸು ಸಾಕಾಣಿಕೆಯ ಪಿಂಜರಾಪೋಲುಗಳಿಗೆ ಪ್ರತೀ ಊರಿನಲ್ಲೂ ಸೌಲಭ್ಯ ಒದಗಿಸಲು ಸಾಧ್ಯವೇ ? ಹೀಗೆ ಪ್ರಶ್ನೆಗಳು ಇವೆ ಸರ್ಕಾರವೇ ಇದಕ್ಕೆ ಉತ್ತರಿಸಬೇಕು.ಇಲ್ಲಿ ಸ್ಥಳಾಭಾವದಿಂದ ಚರ್ಚೆ ಅಪೂರ್ಣ, ನಿಮ್ಮ ಮೌಲ್ಯಯುತ ಅನಿಸಿಕೆ ಹೇಳಲು ನೀವು ಸ್ವತಂತ್ರರು..

ಮಾಧ್ಯಮದ ಅಂಗಡಿಗಳು ಮತ್ತು ಪತ್ರಕರ್ತರು!

ಕಾಸ್ಟ್ ಕಟಿಂಗ್ ಮತ್ತು ನಿಶ್ಚಿತ ಆದಾಯದ ಕೊರತೆಯಿಂದ ಮಾಧ್ಯಮ ಸಂಸ್ಥೆಗಳು ಪತ್ರಕರ್ತರನ್ನು ಪರ್ಫಾರ್ಮೆನ್ಸ್ ವೀಕ್ ಎಂಬ ಕಾರಣ ನೀಡಿ ತೆಗೆಯುವ ಪ್ರಕ್ರಿಯೆ ಈಗ ನಡೆಯುತ್ತ...