Sunday, December 14, 2008

ರುದ್ರಪಟ್ಟಣ-ಸಂಗೀತ ಗ್ರಾಮ-ಸಪ್ತಸ್ವರ ಧ್ಯಾನ ಮಂದಿರ




ರುದ್ರಪಟ್ಟಣ ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನಲ್ಲಿ ಇದೆ. ಸಂಗೀತ ಗ್ರಾಮವೆಮ್ಧೆ ವಿಶ್ವ ಪ್ರಸಿದ್ದಿ ಗಳಿಸಿರುವ ರುದ್ರಪಟ್ಟಣ ಗ್ರಾಮದಿಂದ ೨೫ಕ್ಕೂ ಹೆಚ್ಚು ಶಾಸ್ತ್ರಿಯ ಸಂಗೀತ ಗಾರರು 'ಕರ್ನಾಟಕ ಶಾಸ್ತ್ರಿಯ ಸಂಗೀತ ಪರಂಪರೆ'ಗೆ ಸೇರ್ಪಡೆಯಾಗಿದ್ದಾರೆ.ಈ ಪೈಕಿ ಕ್ಯಾತ ಸಂಗೀತ ಕಲಾನಿಡಿ ಆರ್. ಕೆ . ಪದ್ಮನಾಭ ಸಂಗೀತ ಪರಂಪರೆ ಉಳಿಸುವ ನಿಟ್ಟಿನಲ್ಲಿ ಹತ್ತು ಹಲವು ಕಾಯಕದಲ್ಲಿ ತೊಡಗಿ ಕೊಳ್ಳುವ ಮುಲುಕ ಪ್ರಸ್ತುತವಾಗಿದ್ದಾರೆ. ಕಳೆದ ೭-೮ ವರ್ಷಗಳಿಂದ ಗ್ರಾಮದಲ್ಲಿ ಅವರು ೧೦ದಿನ್ಗಲ ಸಂಗೀತ ಗೋಷ್ಠಿಯನ್ನು ನ್ವೆಸುವ ಮೂಲಕ ದೇಶದ ಮುಲೆಮುಲೆಯಲ್ಲಿರುವ ಸಂಗೀತಗಾರರನ್ನು ಒಂದೆಡೆ ಸೇರಿಸುತ್ತಾರೆ ಮತ್ತು ಅ ಮೂಲಕ ಗ್ರಾಮದ ಮೂಲ ಸಂಸ್ಕೃತಿ ಉಳಿಸುವ ಬೆಳೆಸುವ ಕಾಯಕ ಮಾಡುತ್ತಿದ್ದಾರೆ. ಈ ನಿಟ್ಟಿನಲ್ಲಿ ಅವರು ಗ್ರಾಮದಲ್ಲಿ ಸರಿಸುಮಾರು ೬೦-೭೦ಲಕ್ಶ ವೆಚ್ಚದಲ್ಲಿ ' ಸ ರೀ ಗ ಮ ಪ ದ ನಿ 'ಸಪ್ತಸ್ವರದ ಅಡಿದೆವತೆಗಳನ್ನು ಪ್ರತಿಷ್ಟಪಿಸಿಸಿ ವಿಶ್ವದಲ್ಲೇ ವಿಶಿಷ್ಟ ಮತ್ತು ಪ್ರಥಮ ಎನ್ನಬಹುದಾದ ತಮ್ಬುರಿಯಾಕಾರದ 'ಸಪ್ತ ಸ್ವರ ದೇವತಾ' ಮಂದಿರವನ್ನು ನಿರ್ಮಿಸಿದ್ದಾರೆ.




ಇವರ ಹತ್ತು ಹಲವು ಶಿಷ್ಯರು ಅಭಿಮಾನಿಗಳು ಈ ದಿಸೆಯಲ್ಲಿ ಸಹಾಯ ಹಸ್ತ ನೀಡಿದ್ದಾರೆ . ಈಗ ಇದು ಪ್ರಮುಖ ಯಾತ್ರ ಸ್ಥಳವಾಗಿದೆ, ಸಂಗೀತಾಸಕ್ತರಿಗೆ ಆಕರ್ಷಣೀಯ ಕೇಂದ್ರವಾಗಿದೆ.











ಮಾಧ್ಯಮದ ಅಂಗಡಿಗಳು ಮತ್ತು ಪತ್ರಕರ್ತರು!

ಕಾಸ್ಟ್ ಕಟಿಂಗ್ ಮತ್ತು ನಿಶ್ಚಿತ ಆದಾಯದ ಕೊರತೆಯಿಂದ ಮಾಧ್ಯಮ ಸಂಸ್ಥೆಗಳು ಪತ್ರಕರ್ತರನ್ನು ಪರ್ಫಾರ್ಮೆನ್ಸ್ ವೀಕ್ ಎಂಬ ಕಾರಣ ನೀಡಿ ತೆಗೆಯುವ ಪ್ರಕ್ರಿಯೆ ಈಗ ನಡೆಯುತ್ತ...