Sunday, April 4, 2010

ಸಾನಿಯಾ-ಮಲ್ಲಿಕ್ ಬೆಸುಗೆಗೆ ಅಡ್ಡಿ ಯಾಕೆ?

ಅತಿಯಾದ ಧರ್ಮಾಂಧತೆ ಸಂಬಂಧಗಳನ್ನಷ್ಟೇ ಹಾಳು ಮಾಡುವುದಿಲ್ಲ, ಬೆಸುಗೆಯನ್ನೂ ಕಿತ್ತು ಹಾಕಿ ಬಿಡುತ್ತದೆ, ದ್ವೇಷವನ್ನು ಹಲವಾರು ವರ್ಷಗಳ ಕಾಲ ಕಾಯ್ದು ಬಿಡುತ್ತದೆ, ಇನ್ನು ಸರಿಹೋಗುವುದಿಲ್ಲವೇನೋ ಎಂಬಷ್ಟರ ಮಟ್ಟಿಗೆ ತಲುಪಿ ಕೊಳ್ಳುತ್ತದೆ. ಹೌದು ಇಂತಹದ್ದೊಂದು ಕ್ರಿಯೆ ಸೃಷ್ಟಿಸುವ ದೊಡ್ಡ ಕಂದರ ಮುಂದಿನ ತಲೆಮಾರಿಗೂ ಮಾಸದ ನೆನಪನ್ನು ಉಳಿಸುತ್ತದೆ. ಸಧ್ಯ ಇಂತಹ ಸಂಧರ್ಭ ಒದಗಿ ಬಂದಿರೋದು ಭಾರತದ ಖ್ಯಾತ ಟೆನ್ನಿಸ್ ತಾರೆ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ಮಲ್ಲಿಕ್ ಮದುವೆ ಸುದ್ದಿ ಹೊರ ಬಿದ್ದಾಗ. ಹೌದಲ್ಲ ಇವರಿಬ್ಬರ ಮದುವೆಗೆ ಮೂರನೆಯವರ ಅಡ್ಡಿ ಯಾಕೆ ? ವರ ಪಾಕೀಸ್ತಾನದವನು, ವಧು ಭಾರತದವಳು ಎಂಬ ಕಾರಣಕ್ಕೆ ಅಡ್ಡಿ ವ್ಯಕ್ತಪಡಿಸಬಹುದೆ? ಅವರಿಬ್ಬರೂ ಮದುವೆಯಾದರೆ ಹೇಗೆ ನಡೆದು ಕೊಳ್ಳಬೇಕು ಎಂಬುದನ್ನು ನಿರ್ಧರಿಸುವುದಾದರೂ ಯಾರು? ಮದುವೆ ಅವರ ವೈಯುಕ್ತಿಕ ವಿಚಾರ ಇದರಲ್ಲಿ ಮೂರನೆಯವರು ಯಾಕೆ ತಲೆ ತೂರಿಸಬೇಕು? ಇವರ ಮದುವೆಗೆ ರಾಷ್ಟ್ರೀಯ ಹಿತಾಸಕ್ತಿ ಯಾಕೆ ಅಡ್ಡ ಬರಬೇಕು? ಅಷ್ಟಕ್ಕೂ ಯಾವುದೇ ಸ್ವತಂತ್ರ ನಿರ್ಧಾರ ತೆಗೆದು ಕೊಳ್ಳಲು ಅವರಿಗೆ ಹಕ್ಕಿಲ್ಲವೇ ?ಎಂಬಿತ್ಯಾದಿ ಪ್ರಶ್ನೆಗಳು ಈಗ ಚಾಲ್ತಿಯಲ್ಲಿವೆ. ಕಳೆದ ಎರಡು ಮೂರು ದಿನಗಳಿಂದ ಈ ಪರಿಸ್ಥಿತಿ ಉದ್ಭವಿಸಲು ಕಾರಣವಾಗಿರೋದು ಮತ್ತೆ ಅದೇ ಧರ್ಮಾಂಧತೆ!
ಹೌದು ಭಾರತ ಮತ್ತು ಪಾಕಿಸ್ಥಾನಗಳು 1947ರಲ್ಲಿ ಪ್ರತ್ಯೇಕ ಗೊಂಡ ಮೇಲೆ ಸೌಹಾರ್ಧ ಸಂಬಂಧಕ್ಕಿಂತ ಕಾಲು ಕೆರೆದು ಜಗಳ ಮಾಡಿಕೊಂಡದ್ದೆ ಹೆಚ್ಚು. ದೇಶ ವಿಭಜನೆಯಾದ ಮೇಲೆ ಅಲ್ಲಿ ನೆಲೆಸಿದ್ದ ಹಿಂದೂಗಳನ್ನು ಪಾಕಿಗಳು, ಇಲ್ಲಿ ನೆಲೆಸಿದ್ದ ಮುಸಲ್ಮಾನರನ್ನು ಹಿಂದೂಗಳು ಹೊಡೆದಟ್ಟಿದ್ದು ಈಗ ಇತಿಹಾಸ. ಈಗಲೂ ಎರಡೂ ದೇಶಗಳ ಪ್ರಮುಖ ನಾಯಕರ ಮೂಲ ವಾಸಸ್ಥಾನಗಳು ಇರುವುದು ಪಾಕಿಸ್ತಾನ ಹಾಗೂ ಭಾರತದಲ್ಲಿ. ಖ್ಯಾತ ಪತ್ರಕರ್ತ ಕುಲದೀಪ್ ನಯ್ಯರ್, ರಾಷ್ಟ್ರೀಯ ಮುಖಂಡ ಎಲ್ ಕೆ ಅಡ್ವಾಣಿ ಇತ್ಯಾದಿಗಳ ಮೂಲ ನೆಲೆ ಇಂದಿಗೂ ಪಾಕಿಸ್ತಾನದಲ್ಲಿದೆ, ಹಾಗೆಯೇ ಮಾಜಿ ಅಧ್ಯಕ್ಷ ಜನರಲ್ ಪರ್ವೆಜ್ ಮುಷರಫ್ ಮತ್ತಿತರರ ಮೂಲ ವಾಸಸ್ಥಾನ ಇಂದಿಗೂ ಭಾರತವೇ ಆಗಿದೆ. ಆದಾಗ್ಯೂ ಜಿಹಾದ್ ಮನಸ್ತತ್ವದ ಪಾಕೀಗಳ ಹೀನ ಕೃತ್ಯಗಳಿಂದಾಗಿ ಭಾರತ ಪದೇ ಪದೇ ಮುಜುಗುರಕ್ಕೆ ಮತ್ತು ಆತಂಕಕ್ಕೆ ಒಳಗಾಗುತ್ತಿದೆ, ಇಲ್ಲಿನ ಶಾಂತಿಗೆ ಭಂಗ ಬರುತ್ತಿದೆ.
ಇತ್ತೀಚೆಗಷ್ಟೆ ಭಾರತದಲ್ಲೇ ಹುಟ್ಟಿ ಬೆಳೆದು, ಇಲ್ಲೇ ವಾಸಿಸಿ, ಹೆಸರು ಮಾಡಿ, ಇಲ್ಲಿಯ ನೆಲದ ಅನ್ನವನ್ನು ಉಂಡು ಭಾರತದಲ್ಲಿ ತನಗೆ ಹಿಂಸೆಯಾಗುತ್ತಿದೆ ಎಂದು ಆರೋಪಿಸಿ ಎದ್ದು ಹೋದವರು ಎಂ ಎಫ್ ಹುಸೇನ್. ಕೆಲ ತಿಂಗಳುಗಳ ಹಿಂದೆ ಐಪಿಎಲ್ ಕ್ರಿಕೆಟ್ ತಂಡದ ಆಯ್ಕೆ ಸಂಧರ್ಭದಲ್ಲಿ ಪಾಕಿ ಆಟಗಾರರನ್ನು ಆಯ್ಕೆ ಮಾಡಿಕೊಳ್ಳಲಿಲ್ಲ ಎಂಬ ಕಾರಣಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದವನು ಖ್ಯಾತ ನಟ ಶಾರೂಖ್ ಖಾನ್. ಆಟಗಾರರು ಬೇಕಿದ್ದುದು ಆತನ ತಂಡಕ್ಕೆ ಆತನೇ ಸ್ವತ: ಪಾಕಿಗಳನ್ನು ಆಯ್ಕೆ ಮಾಡಿಕೊಂಡಿರಲಿಲ್ಲ! ಹಿಂದೆ ವಿ ಪಿ ಸಿಂಗ್ ದೇಶದ ಪ್ರಧಾನ ಮಂತ್ರಿಯಾಗಿದ್ದಾಗ ಗೃಹ ಸಚಿವನಾಗಿದ್ದು ಮಪ್ತಿ ಸಯಿದ್. ಆತನ ಮಗಳನ್ನು ಉಗ್ರರು ಅಪಹಿಸಿದಂತೆ ನಾಟಕವಾಡಿ ಜೈಲಿನಲ್ಲಿದ್ದ ಪಾಕಿ ಉಗ್ರರನ್ನು ಬಿಡುಗಡೆಗೊಳಿಸಿದ್ದು ಈಗ ಇತಿಹಾಸ. ಬೆಂಗಳೂರಿನಲ್ಲಿ ನಡೆದ ಸರಣಿ ಬಾಂಬ್ ದುಷ್ಕೃತ್ಯದ ಹಿಂದಿನ ಹೆಜ್ಜೆಗಳು ತಲುಪಿದ್ದು ಪಾಕೀಸ್ತಾನಕ್ಕೆ! ಮುಂಬೈನಲ್ಲಿ ನಡೆದ ತಾಜ್ ಹೋಟೆಲ್ ದಾಳಿಯ ರೂವಾರಿಯೂ ಪಾಕಿಸ್ತಾನವೇ ಆಗಿದೆ ಹೀಗಿರುವಾಗ ಮತೀಯ ದೇಶವೊಂದರ ಸಂಬಂಧವನ್ನು ಒಪ್ಪಿಕೊಳ್ಳಲು ಯಾರಿಂದಲೂ ಸಾಧ್ಯವಾಗಲಾರದು. ಹಾಗಂತ ವೈಯುಕ್ತಿಕ ನೆಲೆಗಟ್ಟಿನಲ್ಲಿ ನಡೆಯುವ ಸಂಬಂಧಗಳನ್ನು ಅಡ್ಡಿ ಪಡಿಸುವಂತೆಯೂ ಇಲ್ಲ. ಯಾಕೆಂದರೆ ಬಾಹ್ಯವಾಗಿ/ಪರೋಕ್ಷವಾಗಿ ನಡೆಯುವ ಕುಕೃತ್ಯಗಳಿಗೂ ವೈಯುಕ್ತಿಕ ನೆಲೆಗಟ್ಟಿನಲ್ಲಿ ನಡೆಯುವ ಸದುದ್ದೇಶದ ಕ್ರಿಯೆಗಳಿಗೂ ಅಜಗಜಾಂತರ ವ್ಯತ್ಯಾಸವಿದೆಯಲ್ಲವೇ?
ಇಲ್ಲಿ ಸಾನಿಯಾ ಮಿರ್ಜಾ , ಪಾಕಿಸ್ತಾನದ ಮಾಜಿ ಕ್ರಿಕೆಟ್ ಕಪ್ತಾನ ಶೋಯೆಬ್ ಮಲ್ಲಿಕ್ ನನ್ನು ಮುದುವೆಯಾಗುತ್ತಾರೆ ಎಂಬ ವಿಚಾರಕ್ಕಿಂತಲೂ ಅವರಿಬ್ಬರ ಮದುವೆ ವಿಚಾರ ಬಂದಾಗ ದರಿದ್ರ ಪಾಕೀ ಮುಸ್ಲ್ಮಾನರು ನಡೆದುಕೊಳ್ಳುತ್ತಿರುವ ರೀತಿ ರೊಚ್ಚಿಗೇಳಿಸುತ್ತದೆ. ಅವರಿಬ್ಬರ ಮದುವೆ ವಿಚಾರ ಬಹಿರಂಗವಾಗುತ್ತಿದ್ದಂತೆ ಸಾನಿಯಾ ಇನ್ನು ಮೇಲೆ ಪಾಕಿಸ್ತಾನದ ಪರವಾಗಿ ಆಡಬೇಕು ಎಂದು ಕಟಪ್ಪಣೆ ಹೊರಡಿಸುವ ಹುಂಬತನಕ್ಕೆ ಏನು ಮಾಡಬೇಕು ಹೇಳಿ? ಇದಕ್ಕೂ ಮುನ್ನ ಕೆಲ ವರ್ಷಗಳ ಹಿಂದೆ ಸಾನಿಯಾ ಮುಸಲ್ಮಾನಳಾಗಿರುವುದರಿಂದ ಟೆನ್ನಿಸ್ ಆಡುವಾಗ ತುಂಡುಗೆ ಧರಿಸಬಾರದು ಎಂದು ಮುಸ್ಲಿಂ ಮೌಲ್ವಿಗಳು ಫತ್ವಾ ಹೊರಡಿಸಿದ್ದರು. ಆದರೆ ಸಾನಿಯಾ ಅದಕ್ಕೆಲ್ಲಾ ಕ್ಯಾರೇ ಎಂದಿರಲಿಲ್ಲ. 23ರ ಹರೆಯದ ಮೂಗುತಿ ಸುಂದರಿ ಸಾನಿಯಾ ಮಿರ್ಜಾ ಮುಂಬೈನ ಕ್ರೀಡಾ ಪತ್ರಕರ್ತ ಇಮ್ರಾನ್ ಮಿರ್ಜಾನ ಪುತ್ರಿ. ಹುಟ್ಟಿದ್ದು ಬೆಳೆದಿದ್ದು ಆಂದ್ರಪ್ರದೇಶದ ಹೈದರಾಬಾದ್ ನಲ್ಲಿಯೇ. ತನ್ನ 6ನೇ ವಯಸ್ಸಿನಲ್ಲಿಯೇ ಟೆನ್ನಿಸ್ ಆಡಲಾರಂಭಿಸಿದ ಸಾನಿಯಾ ಟೆನ್ನಿಸ್ ನಲ್ಲಿ ಸಾಧನೆ ಗೈಯ್ಯವ ಮೂಲಕ ವೃತ್ತಿ ಜೀವನಕ್ಕೆ ಹೆಜ್ಜೆ ಇರಿಸಿದ್ದು 2003ರಲ್ಲಿ. ಈಕೆ ಹೈದರಾಬಾದ್ನಲ್ಲಿನ ಸೇಂಟ್ ಮ್ಯಾರಿಸ್ ಕಾಲೇಜಿನ ಪಧವೀಧರೆಯೂ ಹೌದು. ಟೆನ್ನಿಸ್ ಅಗ್ರ ಪಟ್ಟಿಯಲ್ಲಿ ಸಾನಿಯಾ 27ರಲ್ಲಿ ಸ್ಥಾನ ಪಡೆದಿದ್ದಾರೆ. ತಮಿಳುನಾಡಿನ ಎಂ ಜಿ ಆರ್ ಎಜುಕೇಶನಲ್ಲ ಅಂಡ್ ರೀಸರ್ಚ್ ಇನ್ಸ್ಟಿಟ್ಯೂಟ್ ವಿವಿ ಸಾನಿಯಾಗೆ ಡಿಲಿಟ್ ಪದವಿ ನೀಡಿ ಗೌರವಿಸಿದೆ. ದೇಶದ ಲಕ್ಷಾಂತರ ಮಂದಿಯ ಕಣ್ಮಣಿಯಾಗಿಯೂ ಸಾನಿಯಾ ಮಿರ್ಜಾ ಹೆಸರಾಗಿದ್ದಾರೆ. ಒಟ್ಟಾರೆ ಆಕೆ ದೇಶದ ಮಾದರಿ ಕ್ರೀಡಾಪಟು ಆಗಿದ್ದಾರೆ. ಮುಂದಿನ ಕಾಮನ್ ವೆಲ್ತ್ ಮತ್ತು ಏಸಿಯನ್ ಗೇಮ್ಸ್ ನಲ್ಲಿ ಸಾನಿಯಾ ಭಾರತವನ್ನು ಪ್ರತಿನಿಧಿಸಲಿದ್ದಾರೆ. ಇಂತಹ ಸನ್ನಿವೇಶದಲ್ಲಿ ಅವರು ಒಬ್ಬ ಪಾಕಿಯನ್ನು ಮದುವೆಯಾಗುತ್ತಿದ್ದಾರೆ ಎಂಬ ಕಾರಣಕ್ಕೆ ಪಾಕೀಗಳು ಸಾನಿಯಾ ಭಾರತದ ಪರ ಆಡದಂತೆ ನಿರ್ಬಂದಿಸುವುದು ಸರಿಯೇ??? ಸಾನಿಯಾ, ಶೋಯೆಬ್ ಮಲ್ಲಿಕ್ ನನ್ನು ಮದುವೆಯಾಗುತ್ತಿದ್ದಾರೆ ಎಂದಾಗ ಭಾರತದಲ್ಲಿ ಅದಕ್ಕೆ ಯಾವುದೇ ರೀತಿಯ ವಿರೋಧಾಭಾಸದ ಘಟನೆಗಳು ನಡೆಯಲಿಲ್ಲ, ಆದರೆ ಪಾಕೀಗಳೇಕೆ ಹೀಗೆ ವರ್ತಿಸುತ್ತಾರೆ? ಶೋಯೆಬ್ ಮಲ್ಲಿಕ್ ಪಾಕೀಸ್ತಾನದ ಮಾದರಿ ವ್ಯಕ್ತಿಯೇ ಇರಬಹುದು ಹಾಗೆಂದ ಮಾತ್ರಕ್ಕೆ ಆತನ ಪರ ವಕಾಲತ್ತು ವಹಿಸುವ ಅಲ್ಲಿನ ಪ್ರಮುಖರು ಫತ್ವಾ ಮಾದರಿಯ ಹೇಳಿಕೆಗಳನ್ನು ನೀಡುವ ಮೂಲಕ ಭಾರತೀಯರನ್ನು ರೊಚ್ಚಿಗೇಳಿಸುವುದೆಕೆ? ಹೀಗಾದಾಗ ವ್ಯತಿರಿಕ್ತ ಘಟನೆಗಳು ನಡೆಯಲು ಆಸ್ಪದ ಮಾಡಿದಂತಾಗುವುದಿಲ್ಲವೇ? ಸಾನಿಯಾ-ಶೋಯೆಬ್ ಪರಸ್ಪರರನ್ನು ಕಳೆದ 6-7ತಿಂಗಳಿನಿಂದ ಪ್ರೀತಿಸಿದವರು, ಈಗ ಇದೇ ಏಪ್ರಿಲ್ ತಿಂಗಳಿನಲ್ಲಿ ನಿಕಾ ಮಾಡಿಕೊಳ್ಳಲು ನಿರ್ಧರಿಸಿದ್ದಾರೆ ಮತ್ತು ದುಬೈನಲ್ಲಿ ನೆಲೆಸಲು ನಿರ್ದರಿಸಿದ್ದಾರೆ, ಮದುವೆಯ ನಂತರವೂ ಸಾನಿಯಾ ಭಾರತದ ಪರವಾಗಿ ಮಾತ್ರವೇ ಆಡುವಳು ಎಂದು ಅವರ ತಂದೆ ಇಮ್ರಾನ್ ಮಿರ್ಜಾ ಹೇಳಿದ್ದಾರೆ ಹೀಗಿರುವಾಗ ಆಕೆಯ ಮದುವೆಗೆ ಮುಸ್ಲಿಂ ಮೌಲ್ವಿಗಳ ಫತ್ವಾಗಳು, ಕೆಲ ಹಿಂದೂ ಗಳ ಕೋಡಂಗಿತನದ ವರ್ತನೆಗಳು ಅಡ್ಡಿಯಾಗದಿರಲಿ ಎಂದು ಆಶಿಸ ಬಹುದಲ್ಲವೇ?

ಮಾಧ್ಯಮದ ಅಂಗಡಿಗಳು ಮತ್ತು ಪತ್ರಕರ್ತರು!

ಕಾಸ್ಟ್ ಕಟಿಂಗ್ ಮತ್ತು ನಿಶ್ಚಿತ ಆದಾಯದ ಕೊರತೆಯಿಂದ ಮಾಧ್ಯಮ ಸಂಸ್ಥೆಗಳು ಪತ್ರಕರ್ತರನ್ನು ಪರ್ಫಾರ್ಮೆನ್ಸ್ ವೀಕ್ ಎಂಬ ಕಾರಣ ನೀಡಿ ತೆಗೆಯುವ ಪ್ರಕ್ರಿಯೆ ಈಗ ನಡೆಯುತ್ತ...