Sunday, June 27, 2010

ಲೋಕಾಯುಕ್ತರ ಪರಮಾಧಿಕಾರ ಜಿಜ್ಞಾಸೆ ಏಕೆ?

"ಎಲ್ಲಿದೆ ರೀ ಭ್ರಷ್ಟಾಚಾರ? ಹಿಂದಿನ ಸರ್ಕಾರಗಳು ಲೋಕಾಯುಕ್ತರ ಪರಮಾಧಿಕಾರಕ್ಕೆ ತಡೆಗೋಡೆ ಹಾಕಿಕೊಂಡು ಬಂದಿವೆ ವಿನಹ, ನಮ್ಮ ಸರ್ಕಾರದಿಂದ ತೊಂದರೆ ಆಗಿಲ್ಲ " ಎಂದು ಪ್ರತಿಕ್ರಿಯೆ ನೀಡಿದ್ದು ರಾಜ್ಯ ಸಚಿವ ಸಂಪುಟದ ಹಿರಿಯ ಸದಸ್ಯ ರಾಮಚಂದ್ರಗೌಡ..! ಆ ಮೂಲಕ ತನ್ನ ಸರ್ಕಾರ ದ ನೈತಿಕ ಅಧ:ಪತನವನ್ನು ಈ ಮಂತ್ರಿ ವ್ಯಕ್ತಪಡಿಸಿದ್ದಾರೆ. ಇವತ್ತು ಭ್ರಷ್ಟಾಚಾರ ಎಷ್ಟು ಬೃಹತ್ತಾಗಿ ಬೆಳೆದಿದೆ ಎಂದರೆ ಅದನ್ನು ಮಟ್ಟ ಹಾಕಲು ಅಸಾಧ್ಯವೇನೋ ಎಂಬಷ್ಟರ ಮಟ್ಟಿಗೆ ಇದೆ.ಭ್ರಷ್ಟಾಚಾರ ಈ ದೇಶದ ಆಢಳಿತ ವ್ಯವಸ್ಥೆಯೊಟ್ಟಿಗೆ ಕರ್ಣನ ಕವಚ ಕುಂಡಲದಂತೆ ಬೆಳೆದು ಬಂದಿದೆ. ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನ್ಯಾಯಾಂಗ-ಕಾರ್ಯಾಂಗ-ಶಾಸಕಾಂಗ ಗಳು ಜನರ ಸೇವೆಗಾಗಿಯೇ ಇವೆ. ಇವುಗಳ ಕಾವಲು ನಾಯಿಯಾಗಿ ಪತ್ರಿಕಾ ರಂಗ ಇದ್ದರೂ ಸರ್ಕಾರಿ ವ್ಯವಸ್ಥೆಯ ಕಾವಲು ನಾಯಿಯಾಗಿ ಲೋಕಾಯುಕ್ತ ವ್ಯವಸ್ಥೆ ಇದೆ. ಇದು ಸರ್ಕಾರಿ ವ್ಯವಸ್ಥೆಯ ಅಧೀನದಲ್ಲಿರುವುದರಿಂದ ಹಲ್ಲಿಲ್ಲದ ನಾಯಿಯ ಸ್ಥಿತಿಯಲ್ಲಿರುವುದು ದುರದೃಷ್ಟಕರ ಸಂಗತಿಯಾಗಿದೆ. ಲೋಕಾಯುಕ್ತರಿಗೆ ಪರಮಾಧಿಕಾರ ಏಕೆ? ಕೊಟ್ಟರೆ ಏನಾಗುತ್ತೆ? ಕೊಡದಿದ್ದರೆ ಏನಾಗಬಹುದು? ಇದರ ಹಿಂದಿನ ಶಕ್ತಿಗಳು ಯಾವುವು? ಅವುಗಳ ಹಿತಾಸಕ್ತಿ ಏನು? ಅಷ್ಟಕ್ಕು ಪರಮಾಧಿಕಾರ ಇಲ್ಲದ ಲೋಕಾಯುಕ್ತ ನಮಗೆ ಬೇಕೆ/ಬೇಡವೇ ? ಇಂದಿನ ಗೋಂದಲಕ್ಕೆ ಬಿಜೆಪಿ ಸರ್ಕಾರ ಮಾತ್ರ ಕಾರಣವೇ? ಎಂಬೆಲ್ಲಾ ಪ್ರಶ್ನೆಗಳು ಕಾಡುತ್ತವೆ? ಈ ಪ್ರಶ್ನೆಗಳಿಗೆ ಉತ್ತರ ಕಂಡು ಕೊಳ್ಳು ವ ಮೊದಲು ಕೆಲವು ಸಂಗತಿಗಳನ್ನು ಗಮನಿಸೋಣ.
ಲೋಕಾಯುಕ್ತ ಎಂದರೆ ಸರ್ಕಾರ ವ್ಯವಸ್ಥೆಯ ಭ್ರಷ್ಟಾಚಾರವನ್ನು ನಿಯಂತ್ರಿಸುವ ಅಧಿಕಾರವುಳ್ಳವನು ಎಂದರ್ಥ. ಸ್ಕಾಂಡಿನೇವಿಯಾ ದೇಶದಲ್ಲಿ ಈ ವ್ಯವಸ್ಥೆಗೆ Ombudsmen ಎನ್ನಲಾಗುತ್ತೆ, ಅದೇ ರೀತಿ ನ್ಯೂಜಿಲ್ಯಾಂಡಿನಲ್ಲಿ Parlimentary Commissioner ಎಂದು ಕರೆಯಲಾಗುತ್ತದೆ. ನಮ್ಮ ದೇಶದಲ್ಲಿ ಈವ್ಯವಸ್ಥೆ ಜಾರಿಗೆ ಬರುವ ಮುನ್ನ ಭ್ರಷ್ಟಾಚಾ ರ ಕುರಿತ ಸಾರ್ವಜನಿಕ ಅಹವಾಲುಗಳನ್ನು ಸ್ವೀಕರಿಸಲು ಒಂದು ಸರ್ಕಾರಿ ವ್ಯವಸ್ಥೆಯ ಸೃಷ್ಟಿಗಾಗಿ ಚಿಂತನೆ ನಡೆದಿತ್ತು. ಇದಕ್ಕೆ ಪೂರಕವಾಗಿ ವರದಿಯೊಂದನ್ನು ನೀಡಲು ಭಾರತದ ಮಾಜಿ ಪ್ರಧಾನಿ ಮೊರಾರ್ಜಿ ದೇಸಾಯಿಯವರ ನೇತೃತ್ವದಲ್ಲಿ ಆಡಳಿತ ಸುಧಾರಣಾ ಆಯೋಗವನ್ನು ರಚಿಸಲಾಯಿತು. ಆಗ ಮೊರಾರ್ಜಿ ದೇಸಾಯಿಯವರು ನ್ಯೂಜಿಲ್ಯಾಂಡ್-ಸ್ಕಾಂಡಿನೇವಿಯ ದೇಶಗಳ ಮಾದರಿಯಲ್ಲಿಯೇ ಭಾರತದಲ್ಲೂ 'ಲೋಕಪಾಲ' ಮತ್ತು 'ಲೋಕಾಯುಕ್ತ' ವ್ಯವಸ್ಥೆ ಮತ್ತು ಹುದ್ದೆ ಯಸೃಷ್ಟಿಗೆ ಮಧ್ಯಂತರ ವರದಿ ನೀಡಿ ಶಿಫಾರಸ್ಸು ಮಾಡಿತು. ಅದರ ಫಲವಾಗಿ ದೇಶದ ವಿವಿಧ ರಾಜ್ಯಗಳಲ್ಲಿ ಭ್ರಷ್ಟಾಚಾರ ನಿಯಂತ್ರಣಕ್ಕೆ ಲೋಕಾಯುಕ್ತ ವ್ಯವಸ್ಥೆ ಜಾರಿಗೆ ಬಂತು. ನ್ಯಾಯಾಂಗ ವ್ಯವಸ್ಥೆಯಲ್ಲಿ ಉತ್ತಮ ಹಿನ್ನೆಲೆಯುಳ್ಳ ನಿವೃತ್ತ ನ್ಯಾಯಾಧೀಶರು ಸದರಿ ಲೋಕಾಯುಕ್ತ ಹುದ್ದೆಗೆ ಆಯ್ಕೆಯಾಗುತ್ತಾರೆ ಹಾಗಾಗಿ ಆ ವ್ಯವಸ್ಥೆಯ ಬಗೆಗೆ ಜನರಿಗೆ ಇನ್ನೂ ವಿಶ್ವಾಸ ಉಳಿದಿದೆ. ಸದರಿ ಲೋಕಾಯುಕ್ತರು ಭ್ರಷ್ಟ ಅಧಿಕಾರಿಗ ಳ ಆಸ್ತಿ-ಪಾಸ್ತಿಯ ಮೇಲೆ ಖಚಿತ ಮಾಹಿತಿಯ ಮೇರೆಗೆ ಧಾಳಿ ನಡೆಸಬಹುದು, ಆದರೆ ಅದು ಅನಿರೀಕ್ಷಿತ ಧಾಳಿಯಾಗಿರಬೇಕು ಆದರೆ ಹಾಗೆ ಧಾಳಿಗೊಳಗಾ ದಭ್ರಷ್ಟರ ವಿರುದ್ದ ಕ್ರಮಕ್ಕೆ ಶಿಫಾರಸ್ಸು ಮಾಡಬಹುದೇ ವಿನಹ ಶಿಕ್ಷಿಸುವ ಅಧಿಕಾರವಿಲ್ಲ. ಅದೇ ರೀತಿ ಲಂಚಕೋರ ಅಧಿಕಾರಿ/ನೌಕರರ ವಿರುದ್ದವು ಕ್ರಮಕ್ಕೆ ಶಿಫಾರಸ್ಸು ಮಾಡಬಹುದು ಆದರೆ ನೇರವಾಗಿ ಶಿಕ್ಷೆ ವಿಧಿಸಿ ಆದೇಶ ನೀಡಲು ಅವಕಾಶವಿಲ್ಲ. ಮೊರಾರ್ಜಿ ದೇಸಾಯಿಯವರು ಸಲ್ಲಿಸಿದ ವರದಿಯಲ್ಲಿ ಈ ಬಗ್ಗೆ ಏನು ಹೇಳಲಾಗಿತ್ತು ಎಂಬ ವಿವರ ಸಧ್ಯಕ್ಕೆ ಲಭ್ಯವಿಲ್ಲ. ಈ ವ್ಯವಸ್ಥೆ ಜಾರಿಗೆ ಬಂದು 5ದಶಕಗಳೇ ಸಂದಿವೆ ಆದರೆ ವಾಸ್ತವ ಜಗತ್ತಿಗೆ ಇದರ ಪರಿಚಯವಾಗುತ್ತಿರುವುದು ಒಂದೂವರೆ ದಶಕಗಳಿಂದೀಚೆಗೆ.ರಾಜ್ಯದ ಮುಖ್ಯಮಂತ್ರಿಯಾಗಿದ್ದ ರಾಮಕೃಷ್ಣ ಹೆಗಡೆಯವರ ಕಾಲದಲ್ಲಿಯೇ ಲೋಕಾಯುಕ್ತ ವ್ಯವಸ್ಥೆಗೆ ಒಂದು ರೂಪು ಸಿಕ್ಕಿತಾದರೂ ಅವರ ವೈಯುಕ್ತಿಕ ರಾಜಕೀಯ ಹಿತಾಸಕ್ತಿಯಿಂದ ಸರ್ಕಾರದ ಉನ್ನತ ಸ್ಥಾನಗಳಾದ ಮುಖ್ಯ ಕಾರ್ಯದರ್ಶಿ/ಮುಖ್ಯಮಂತ್ರಿ ಮತ್ತು ಇತರೆ ಹುದ್ದೆಗಳ ಮೇಲೆ ಲೋಕಾಯುಕ್ತದ ಅಧಿಕಾರ ಹೊರತಾಗಿರುವಂತೆ ನೋಡಿಕೊಳ್ಳಲಾಯಿತು. ನಂತರದ ವರ್ಷಗಳಲ್ಲಿ ಲೋಕಾಯುಕ್ತದ ಅಸ್ತಿತ್ವದ ಬಗ್ಗೆ ಜನರಿಗೆ ತಿಳಿದಿರಲಿಲ್ಲ. ಎಸ್ ಎಂ ಕೃಷ್ಣ ಮುಖ್ಯಮಂತ್ರಿಯಾಗಿದ್ದಾಗ ಹಾರನಹಳ್ಳಿ ರಾಮಸ್ವಾಮಿ ನೇತೃತ್ವದ ಆಡಳಿತ ಸುಧಾರಣಾ ಆಯೋಗ ನೀಡಿದ ವರದಿಯ ಹಿನ್ನೆಲೆಯಲ್ಲಿ ರಾಜ್ಯ ಲೋಕಾಯುಕ್ತಕ್ಕೆ ಮರುಜೀವ ಬಂತು. ಸುಪ್ರಿಂಕೋರ್ಟಿನ ನಿವೃತ್ತ ಮುಖ್ಯ ನ್ಯಾಯಾಧೀಶ ವೆಂಕಟಾಚಲ ರಾಜ್ಯ ಲೋಕಾಯುಕ್ತ ಹುದ್ದೆ ಅಲಂಕರಿಸಿದರು. ತಮ್ಮ ಇತಿಮಿತಿಗಳನ್ನು ಮೀರಿಯೂ ಅವರದೇ ಆದ ಕಾರ್ಯ ಶೈಲಿಯ ಮೂಲಕ ಭ್ರಷ್ಟರಿಗೆ ಸಿಂಹ ಸ್ವಪ್ನರಾದರು ಜನರಿಗೆ ನ್ಯಾಯದ ಆಶಾಕಿರಣ ಸಿಗುವಂತೆ ಮಾಡಿದರು. ಅವರ ನಂತರ ಬಂದ ನಿಟ್ಟೆ ಸಂತೋಷ್ ಹೆಗ್ಡೆ ತಮ್ಮದೇ ಕಾರ್ಯಶೈಲಿಯ ಮೂಲಕ ಕಾನೂನು ಮಿತಿಯರಿತು ಭ್ರಷ್ಟಾಚಾರದ ಬುಡಕ್ಕೆ ಕೈ ಹಾಕಿದರು, ಪರಿಣಾಮ ತಾವೇ ರಾಜೀನಾಮೆ ನೀಡುವ ಪರಿಸ್ಥಿತಿ ಸೃಷ್ಟಿಯಾಗಿದೆ. ಜನಬೆಂಬಲಕ್ಕಾಗಿ ತನ್ನ ಪ್ರಣಾಳಿಕೆಯಲ್ಲಿ ಲೋಕಾಯುಕ್ತರಿಗೆ ಪರಮಾಧಿಕಾರ ನೀಡಲಾಗುತ್ತದೆ ಎಂದು ಬಿಜೆಪಿ ತುತ್ತೂರಿ ಊದಿತ್ತು.. ಆದರೆ ಈಗ ಆಗಿದ್ದೇನು? ಬಹುಶ: ರಾಜ್ಯದ ಇತಿಹಾಸದಲ್ಲಿ ಹಿಂದಿನ ಅರಸು ಸರ್ಕಾರದ ಭ್ರಷ್ಟಾಚಾರವನ್ನು ಮೀರಿಸುವಂತೆ ಇವತ್ತು ಸರ್ಕಾರದ ಆಡಳಿತ ಇದೆ. ಗಣಿ ಮಾಫಿಯಾ, ವರ್ಗಾವಣೆ ದಂಧೆ, ಭೂಸ್ವಾಧೀನ ಅಕ್ರಮ, ನೆರೆ ಸಂತ್ರಸ್ತ ಪರಿಹಾರ ದಲ್ಲಿ ಅಕ್ರಮ, ಸುಧಾರಿಸದ ಆಡಳಿತ ಬಿಜೆಪಿ ಸರ್ಕಾರವನ್ನು ಹಿಂಡಿ ಹಿಪ್ಪೆ ಮಾಡಿದೆ. ಪರಿಸ್ಥಿತಿ ಹೀಗಿರುವಾಗ ನೈತಿಕತೆ ಇಲ್ಲದ ಸರ್ಕಾರಕ್ಕೆ ಲೋಕಾಯುಕ್ತರಿಗೆ ಪರಮಾಧಿಕಾರ ಕೊಡುವ ಯೋಗ್ಯತೆ ಇದೆಯೇ? ಲೋಕಾಯುಕ್ತರ ರಾಜೀನಾಮೆ ಕುರಿತು ಪ್ರತಿಕ್ರಿಯಿಸಲು ಮುಖವಿಲ್ಲದ ಒಬ್ಬ ಮುಖ್ಯಮಂತ್ರಿಯನ್ನ, ಪರಿಸ್ಥಿತಿ ಗಂಬೀರತೆ ಅರಿಯದೆ ಮನಸ್ಸಿಗೆ ಬಂದಂತೆ ಮಾತನಾಡುವ ಮೂರ್ಖ ಸಚಿವರುಗಳನ್ನು ಹೊಂದಿದ ಸರ್ಕಾರದಿಂದ ಲೋಕಾಯುಕ್ತ ಪರಮಾಧಿಕಾರ ನಿರೀಕ್ಷಿಸಲು ಸಾಧ್ಯವೇ?
ಭ್ರಷ್ಟ ವ್ಯವಸ್ಥೆಯಿಂದ ನೊಂ ದಜನರಿಗೆ ಹುಲ್ಲು ಕಡ್ಡಿ ಯ ಆಸರೆಯಂತಿರುವ ಲೋಕಾಯುಕ್ತರು ನಿಷ್ಪಕ್ಷಪಾತವಾಗಿ ಕಾರ್ಯ ನಿರ್ವಹಿಸಿ ತಮ್ಮ ಅಧಿಕಾರದ ಮಿತಿಯಲ್ಲೆ ಭ್ರಷ್ಟ ವ್ಯವಸ್ಥೆಯ ಬುಡವನ್ನು ಅಲುಗಿಸಬಲ್ಲರು ಎಂಬುದು ಸಾಬೀತಾಗಿದೆ. ಹಾಗಾಗಿ ಶಾಶಕಾಂಗ-ಕಾರ್ಯಾಂಗದ ಲ್ಲಿರುವ ಭ್ರಷ್ಟ ಜನರಿಗೆ ಲೋಕಾಯುಕ್ತ ವ್ಯವಸ್ಥೆ ಪರಮಾಧಿಕಾರ ದೊರಕದಂತೆ ತೆರೆಯ ಹಿಂದೆ ಸಂಚು ನಡೆಸಿವೆ.ಲೋಕಾಯುಕ್ತರ ನಿರ್ಭಿತ ಕಾರ್ಯದಿಂದ ನಡುಗಿರುವ ರಾಜಕಾರಣಿಗಳು-ಅಧಿಕಾರಿಗಳು ಲೋಕಾಯುಕ್ತರಿಗೆ ನೀಡುವ ಪರಮಾಧಿಕಾರದಿಂದ ತಮಗೆ ಅಂತ್ಯ ಎಂಬುದು ನಿಚ್ಚಳವಾಗಿ ಗೋಚರಿಸಿದೆ ಇದು ಇವತ್ತು ಲೋಕಾಯುಕ್ತರು ರಾಜೀನಾಮೆ ನೀಡುವಂತೆ ಮಾಡುವಲ್ಲಿ ಸಫಲವಾಗಿದೆ. ಒಂದಂತೂ ಸತ್ಯ ಒಳ್ಳೆಯ ಕೆಲಸಕ್ಕೆ ಯಾವ ದೊಣ್ಣೆ ನಾಯಕನ ಅಪ್ಪಣೆಯೂ ಬೇಕಿಲ್ಲ. ಜನ ವಿಶ್ವಾಸ ಇರಿಸಿಕೊಂಡಿರುವ ಲೋಕಾಯುಕ್ತರಿಗೆ ಪರಮಾಧಿಕಾರ ನೀಡುವಂತೆ ಜನತೆ ಬೀದಿಗಿಳಿಯಬೇಕಾಗಿದೆ, ಸಾರ್ವಜನಿಕವಾಗಿ ನಡೆಯುವ ಚಳುವಳಿಗಳಿಂದ ಕ್ರಾಂತಿ ಖಂಡಿತ ಸಾಧ್ಯ ಜನ ಮನಸ್ಸು ಮಾಡ ಬೇಕಷ್ಟೆ. ಒಂದು ಒಳ್ಳೆಯ ವ್ಯವಸ್ಥೆ ಮಾತ್ರ ಆರೋಗ್ಯವಂತ ಸಮಾಜವನ್ನು ನೀಡಬಲ್ಲದು. ಈ ಸಂಧರ್ಭ ಒಂದು ಮಾತು ನೆನಪಿಗೆ ಬರುತ್ತಿದೆ. ದುಷ್ಟ ಜನರ ದುಷ್ಟತನಕ್ಕಿಂತ ಸಜ್ಜನರ ಮೌನ ಅತ್ಯಂತ ಅಪಾಯಕಾರಿ ಹೌದೋ ಅಲ್ವೋ?

Wednesday, June 23, 2010

ಬಿಂದಾಸ್ ತಾರೆ ಸಂಜನಾ ಜೊತೆ ಕೆಲ ಹೊತ್ತು!


ಸಂಜನಾ ಅಲಿಯಾಸ್ ಸಂಜನಾ ಗಾಂಧಿ ಅಲಿಯಾಸ್ ಅರ್ಚನಾ ಗಲ್ ರಾಣಿ... ! ಅಬ್ಬಬ್ಬಾ ಇದೇನಿದು ಹೆಸರು ಇಷ್ಟುದ್ದ ಇದೆ ಅಂತ ಹುಬ್ಬೇರಿಸದಿರಿ. ಅದೇ ರೀ ನಮ್ಮ ಕನ್ನಡ ಚಿತ್ರರಂಗದ ಸೆಕ್ಸಿ ಇಮೇಜಿನ ನಾಯಕಿ ಸಂಜನಾ ಹೆಸರು. ಸಂಜನಾ ಮೂಲ ಹೆಸರು ಅರ್ಚನಾ ಗಲ್ ರಾಣಿ, ಕನ್ನಡ ಸಿನಿಮಾಕ್ಕೆ ಬಂದಾಗ ಆಗಲೆ ಮುಂಗಾರು ಮಳೆಯ ನಾಯಕಿ ಪೂಜಾಗಾಂದಿ ಇದ್ದರು ಆಕೆಯ ಮೂಲ ಹೆಸರು ಸಂಜನಾ ಗಾಂಧಿ, ಹಾಗಾಗಿ ಗಂಡ-ಹೆಂಡತಿ ಸಿನಿಮಾದ ಸಂಜನಾ ಗಾಂಧಿ , ಸಂಜನಾ ಆಗಿ ತಮ್ಮ ಹೆಸರನ್ನು ಬದಲಾಯಿಸಬೇಕು. ಈಗಲೂ ಬಹುತೇಕರಿಗೆ ಸಂಜನಾ ಎಂದರೆ ಅರ್ಥವಾಗುವುದಿಲ್ಲ. ಅದೇ ಗಂಡ-ಹೆಂಡತಿ ಚಿತ್ರದ ಸಂಜನಾ ಅಂದರೆ ಮಾತ್ರ ಬೇಗ ಪ್ಲಾಶ್ ಆಗಿ ಬಿಡುತ್ತೆ. ಸಂಜನಾ ಹುಟ್ಟಿದ್ದು ಬೆಂಗಳೂರಿನಲ್ಲಿ ಅಕ್ಟೋಬರ್ 9ನೇ 1989ರಂದು. ತಂದೆ ಬ್ಯುಸಿನೆಸ್ ಮನ್, ತಾಯಿ ಚನ್ನೈ ಮೂಲದವರು. ತಂದೆ ಮಾತ್ರ ಉತ್ತರ ಭಾರತದ ಸಿಂಧಿ ಮನೆತನದವರು. ಬೆಂಗಳೂರಿನಲ್ಲೇ ಹುಟ್ಟಿ ಬೆಳೆದರೂ ಈಕೆಯ ಮೂಲ ಮಾತ್ರ ಮುಂಬೈ. ಹೈ-ಫೈ ಸೊಸೈಟಿಯಲ್ಲೇ ಬೆಳೆದ ಹುಡುಗಿ ಸಂಜನಾ, ಪಿಯುಸಿ ಓದುವ ವೇಳೆಗಾಗಲೇ ಮಾಡೆಲಿಂಗ್ ಸಂಜನಾರನ್ನು ಕೈ ಬೀಸಿ ಕರೆಯಿತು. ಈ ನಡುವೆ 2006ರಲ್ಲಿ ತಮಿಳಿನ "ಒರು ಕಾದಲ್ ಸೇವಿಯರ್" ಮೂಲಕ ಚಿತ್ರ ಜಗತ್ತಿಗೆ ಅಡಿಯಿರಿಸಿದ ಸಂಜನಾ ಗಮನ ಸೆಳೆದಳು. ಆ ಹೊತ್ತಿಗೆ ಬಾಲಿವುಡ್ ನ "ಮರ್ಡರ್" ಚಿತ್ರದಲ್ಲಿ ತನ್ನ ಮಾದಕ ಮೈ ಮಾಟ ಪ್ರದರ್ಶಿಸಿ ಚಿತ್ರ ರಸಿಕರನ್ನು ಬೆಚ್ಚಿ ಬೀಳಿಸಿದ್ದ ಮಲ್ಲಿಕಾಶೆರಾವತ್ ಸುದ್ದಿಯಲ್ಲಿರುವಾಗಲೇ ಕನ್ನಡದಲ್ಲಿ ಸದರಿ ಚಿತ್ರದ ರೀಮೇಕ್ ಮಾಡಲು ನಿರ್ದೇಶಕ ರವಿ ಶ್ರೀವತ್ಸ ಸಿದ್ದತೆ ನಡೆಸಿದ್ದ. ಹಿಂದಿಯ ಮರ್ಡರ್ ಕನ್ನಡದಲ್ಲಿ "ಗಂಡ-ಹೆಂಡತಿ" ಯಾಗಿ ಹಸಿಬಿಸಿ ಚಿತ್ರವಾಯಿತು. ಆ ಚಿತ್ರದಲ್ಲಿ ನಾಯಕಿಯಾಗಿ ಸಂಜನಾ ನಾಯಕಿಯಾಗಿ ನಟಿಸಿದ್ದರು. 18ಹರೆಯದ ಬಾಲೆ ಸಂಜನಾಎಂತಹವರು ಹುಬ್ಬೇರಿಸುವಂತೆ ಸದರಿ ಚಿತ್ರದಲ್ಲಿ ಮಾದಕ ಮೈಮಾಟ ಪ್ರದರ್ಶಿಸಿ ಪಡ್ಡೆಗಳ ಕನಸಿನ ಕಣ್ಮಣಿಯಾದರು. 2008ರಲ್ಲಿ ತೆಲುಗಿನ ಖ್ಯಾತ ನಿರ್ದೇಶಕ ಪೂರಿ ಜಗನ್ನಾಥ್ ಕಣ್ಣಿಗೆ ಬಿದ್ದ ಈ ಬಾಲೆ ತೆಲುಗು ಚಿತ್ರ "ಬುಜ್ಜಿಗಾಡು" ಚಿತ್ರದ ನಾಯಕಿಯಾಗಿ ಆಯ್ಕೆಯಾದಳು. ತೆಲುಗಿನಲ್ಲಿ ನಟಿಸಿದ ಮೊದಲ ಚಿತ್ರದಲ್ಲೇ ಯುವ ಹೃದಯಗಳನ್ನು ಸೂರೆ ಮಾಡಿದ ಈ ಬೆಡಗಿ ನಂತರ ಕನ್ನಡದ ಆಟೊಗ್ರಾಫ್ ಪ್ಲೀಸ್, 2007-08ರಲ್ಲಿ ರಕ್ಷಕ, ದರ್ಶನ್ ಜೊತೆ ಅರ್ಜುನ್,ತೆಲುಗಿನಲ್ಲಿ ಸತ್ಯಮೇವ ಜಯತೇ, ಸಮರ್ಥುಡು, ಪೋಲೀಸ್ ಪೋಲೀಸ್ ನಲ್ಲಿ ನಟಿಸಿದ್ದಾರೆ. ಆದರೆ ಕನ್ನಡದಲ್ಲಿ ಹೇಳಿಕೊಳ್ಳುವಂತಹ ಅವಕಾಶಗಳು ಸಿಗದಿದ್ದರು 2010ರಲ್ಲಿ ಸಾಲು ಸಾಲಾಗಿ 4ಚಿತ್ರಗಳಲ್ಲಿ ಸಂಜನಾ ಅವಕಾಶ ಪಡೆದಿದ್ದಾಳೆ. ಸುದೀಪ್ ಸಂಬಂಧಿಕ ನಾಯಕನಾಗಿರುವ "ಈ ಸಂಜೆ", "ಶ್ಲೋಕ", ಶಿವರಾಜ್ ಕುಮಾರ್ ಜೊತೆ ಮೈಲಾರಿ ಮತ್ತು ಹೆಸರಿಡದ ಚಿತ್ರವೊಂದರಲ್ಲಿ ನೆನಪಿರಲಿ ಪ್ರೇಮ್ ಜೊತೆ ನಾಯಕಿಯಾಗಿ ನಟಿಸುತ್ತಿದ್ದಾರೆ. ಮಲೆಯಾಳಂ ನಲ್ಲೂ ಅವಕಾಶಗಳು ಅರಸಿ ಬಂದಿದ್ದು "ಕ್ಯಾಸನೋವ" ಎಂಬ ಚಿತ್ರದಲ್ಲಿ ಅವಕಾಶ ಗಿಟ್ಟಿಸಿದ್ದಾರೆ.ಕನ್ನಡ ಸೇರಿದಂತೆ ಸುಮಾರು 7ಭಾಷೆಗಳಲ್ಲಿ ಮಾತನಾಡುವ ಸಂಜನಾ ರ ಮೂಲ ಮಾತೃಭಾಷೆ ಸಿಂಧಿ-ಮಾರವಾಡಿ. ಸಧ್ಯ ದೂರ ಶಿಕ್ಷಣ ಪದ್ದತಿಯಲ್ಲಿ ಬಿಬಿಎಂ ವ್ಯಾಸಂಗ ಮಾಡುತ್ತಿರುವ ಸಂಜನಾ ಬ್ಯೂಟಿಪುಲ್ ಅಂಡ್ ಬೋಲ್ಡ್ ನಡವಳಿಕೆಯವರು. ಆದರೆ ಪತ್ರಕರ್ತರೊಂದಿಗೆ ಮಾತಿಗೆ ಸಿಲುಕುವುದು ಕಡಿಮೆ. "ಗಂಡ ಹೆಂಡತಿ" ಸಿನಿಮಾದ ಬಿಂದಾಸ್ ನಟನೆಯ ನಂತರ ಪತ್ರಕರ್ತರಿಂದ ಎದುರಾಗುತ್ತಿದ್ದ ಪ್ರಶ್ನೆಗಳಿಂದ ತಪ್ಪಿಸಿಕೊಳ್ಳುವ ಸಲುವಾಗಿ ಮಾಧ್ಯಮಗಳಿಂದ ದೂರವಿದ್ದುದೇ ಹೆಚ್ಚು . ಮಾಡೆಲಿಂಗ್ ಜೊತೆಗೆ ಫಿಲ್ಮಿ ಡ್ಯಾನ್ಸ್ ನಲ್ಲೂ ಸೈ ಎನಿಸಿರುವ ಸಂಜನಾ ವಿದೇಶದಲ್ಲಿ ಅತಿ ಹೆಚ್ಚು ಶೋಗಳನ್ನು ನೀಡಿದ್ದಾರಂತೆ ಹಾಗಾಗಿಯೇ ಕನ್ನಡದ ಜನಪ್ರಿಯ ಕಿರುತೆರೆ ಝೀ ಕನ್ನಡದಲ್ಲಿ ಎರಡನೇ ಬಾರಿಗೆ "ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ " ರಿಯಾಲಿಟಿ ಶೋ ನಲ್ಲಿ ತೀರ್ಪುಗಾರರಾಗಿ ಪಾಲ್ಗೊಳ್ಳುತ್ತಿದ್ದಾರೆ
ಕಿರುತೆರೆಯಲ್ಲಿ ಗುಣಾತ್ಮಕವಾದ ಮನರಂಜನಾ ಕಾರ್ಯಕ್ರಮಗಳನ್ನು ರೂಪಿಸುತ್ತಿರುವ ಚಾನೆಲ್ ಗಳ ಸಾಲಿನಲ್ಲಿ ಅಗ್ರಪಂಕ್ತಿಯಲ್ಲಿ ಬರುವುದು ಝೀ ಕನ್ನಡ. ಹೊಸತನ ಮತ್ತು ಅದ್ದೂರಿತನ ಝೀ ಕನ್ನಡದ ಮಟ್ಟಿಗೆ ಇತರೆ ಚಾನಲ್ ಗಳಿಗಿಂತ ಹೆಚ್ಚಾಗಿಯೇ ಇದೆ. ಅದರಲ್ಲೂ ರಿಯಾಲಿಟಿ ಶೋಗಳ ಬಗ್ಗೆ ಹೇಳುವುದಾದರೆ ಹಿಂದಿಯಲ್ಲಿ ಝೀ ಟಿವಿ ಹುಟ್ಟುಹಾಕಿರುವ ಡ್ಯಾನ್ಸ್-ಹಾಡುಗಳ ಹೊಸ ಕಾರ್ಯಕ್ರಮಗಳ ಅಲೆಯನ್ನೇ ಕನ್ನಡದಲ್ಲೂ ತಂದಿದೆ. ಅದರ ಫಲವೇ "ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್" ಇಂತಹ ಸನ್ನಿವೇಶದಲ್ಲಿ ಸಂಜನಾ ರನ್ನು ಮಾತನಾಡಿಸುವ ಅವಕಾಶ ಒದಗಿದ್ದು ಹೀಗೆ.
ಸಂಜನಾ ಅವರನ್ನು ಮಾತಾಡಿಸ್ತೀರಾ? ಅತ್ತಲಿಂದ ಮಿತ್ರ ಮಧುಸೂಧನ್ ಕೇಳಿದರು.. ಹೌದಾ ಎಲ್ಲಿದಾರೆ? ಯಾವಾಗ ಮಾತಾಡಿಸ್ ಬಹುದು?ಅಂದೆ ಈಗ್ಲೇ ಭೇಟಿಯಾಗಿ ಮಾತಾಡಿಸಬಹುದು, ಫೋನ್ ಮಾಡಿ ಅಂತ ನಂಬರ್ ಕೊಟ್ಟು ಡಿಸ್ ಕನೆಕ್ಟ್ ಮಾಡಿದರು. ಸಂಜನಾ ಗಂಡ-ಹೆಂಡತಿಯಲ್ಲಿ ಬಿಂದಾಸ್ ಆಗಿ ನಟಿಸಿ ಹೆಸರು ಮಾಡಿದ್ದು ಮತ್ತು ಝೀ ಕನ್ನಡದ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ನಲ್ಲಿ ಜಡ್ಜ್ ಆಗಿರೋದು ಗೊತ್ತಿತ್ತೆ ವಿನಹ ಅವರನ್ನ ಅತ್ಯಂತ ಕಡಿಮೆ ಅವಧಿಯಲ್ಲಿ ಮಾಹಿತಿ ಕಲೆಹಾಕಿ ಮಾತನಾಡಿಸೋದು ಹೇಗಪ್ಪ ಅಂತ ಯೋಚಿಸುತ್ತಲೇ ಹೇಗಾದ್ರೂ ಇರ್ಲಿ ಅಂತ ಸಂಜನಾ ಗೆ ಮೊಬೈಲು ಮೆಸೇಜ್ ಕಳುಹಿಸಿದೆ, ಕೆಲ ಹೊತ್ತಿನ ನಂತರ ಓಕೆ ಕಾಲ್ ಮಾಡಿ ಅಂತ ರಿಪ್ಲೈ..ಬಂತು. ನಾನು ಮಾತಿಗೆ ಅಣಿಯಾದೆ.
*ಝೀ ಕನ್ನಡದ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ರಿಯಾಲಿಟಿ ಶೋ ಹೇಗನ್ನಿಸುತ್ತೆ?
-ನೀವ್ ನೋಡಿದಿರಾ ? Ok Ok It's a great Experience, Kannada Industryಲಿ ಈಂತಹ ಶೋ ನಡಿಬೇಕಿತ್ತು, ಇಲ್ಲಿವರೆಗೂ ನಡೆದಿರಲಿಲ್ಲ. ಡ್ಯಾನ್ಸ್ ನಲ್ಲಿ different different style ಇದೆ. ಇಲ್ಲಿ plotform ಗೆ ಇಂಥ ಶೋ ಅವಶ್ಯಕತೆ ಇತ್ತು ಇಮ್ರಾನ್ ಜೊತೆ ತೀರ್ಪುಗಾರಳಾಗಿ ಕಾರ್ಯ ನಿರ್ವಹಿಸುತ್ತಿದ್ದೀನಿ. here enjoyment level is very high. ಎಷ್ಟು hectic ಆಗಿರುತ್ತೆ ಅಂದ್ರೆ ಬೆಳಗ್ಗೆ 9ಗಂಟೆಯಿಂದ ರಾತ್ರಿಕಳೆದು ಮತ್ತೆ ಬೆಳಗ್ಗೆ 3ಗಂಟೆವರೆಗೂ ಶೋಟಿಂಗ್ ಇರುತ್ತೆ. ಅದರಲ್ಲು pressure ನಮಗೆ ಗೊತ್ತೇ ಆಗಲ್ಲ.
**ಚಿಕ್ಕಮಕ್ಕಳ ರಿಯಾಲಿಟಿ ಶೋ ಮಾಡ್ತಿದ್ರಿ ಇಲ್ಲಿ ದೊಡ್ಡವರು ಹೇಗನ್ನಿಸುತ್ತೆ?
_ ಇಲ್ಲಿ ಚಿಕ್ಕ ಮಕ್ಕಳು ಯಾರೂ ಇಲ್ಲ, ಎಲ್ಲಾ ದೊಡ್ಡವರೆ. ಅದ್ರಲ್ಲೂ ನನಗಿಂತ ತುಂಬಾ ದೊಡ್ಡವರಿದ್ದಾರೆ. ಎಲ್ಲರೂ ಡೆಡಿಕೇಶನ್ ನಿಂದ ಮಾಡ್ತಿದಾರೆ. ಹಿಂದಿನ ಶೋ ನಲ್ಲಿ ಚಿಕ್ಕ ಚಿಕ್ಕ ಮಕ್ಕಳು ಮಾಡ್ತಿದ್ದರು. ಅದಕ್ಕೆ ಹೋಲಿಕೆ ಮಾಡಿದ್ರೆ ಇದು 5ಟೈಮ್ಸ್ bigger show. Killer performance ಇರುತ್ತೆ ಇಲ್ಲಿ. ನಾನು ಅಮೇರಿಕಾ, ಇಂಗ್ಲೆಂಡ್ ಹೀಗೆ ಬೇರೆ ದೇಶಗಳಿಗೆಲ್ಲಾ ತೆಲುಗು Industry ಮೂಲಕ ಹೋಗಿ I have done a lot of stage performances ಮತ್ತು ನೋಡಿದೀನಿ ಹಾಗಾಗಿ ನನಗೆ ಇಲ್ಲಿ ಜಡ್ಜ್ ಮಾಡೋದು ಏನು ಅನಿಸ್ತಿಲ್ಲ.Stage ಮೇಲೆ ಹೇಗೆ perform ಮಾಡಬೇಕು ಒಬ್ಬ ಒಳ್ಳೆ ಡ್ಯಾನ್ಸ್ perform er ನಲ್ಲಿ ಎಂಥ qualities ಇರ್ಬೇಕು ಅನ್ನೋದು ನನಗೆ ಗೊತ್ತಿದೆ. I love dancing, because when we are performing live dancing ಏನು ತಪ್ಪಾದರೂ ತಕ್ಷಣ ಗೊತ್ತಾಗುತ್ತೆ. ಹಾಗಾಗಿ ನನಗೆ stage ಬಗ್ಗೆ ಒಂದು ಟೋಟಲ್ ಐಡಿಯಾ ಇದೆ. ಇಲ್ಲಿ ದೊಡ್ಡವರು ಚಿಕ್ಕವರು ಅಂತ ತೀರ್ಪು ಕೊಡೋಕಾಗಲ್ಲ mainly ಬಂದು ನಾನು ಆಕ್ಟರ್ ಇರೋದ್ರಿಂದ ಡ್ಯಾನ್ಸ್ ಮಾಡೋವರ facial expression and body language ಹೇಗಿರುತ್ತೆ ಅಂತ ನೋಡ್ತೀನಿ. ಬಾಕಿ ದನ್ನು ಕೋರಿಯಾಗ್ರಾಫರ್ ಇಮ್ರಾನ್ ಸಾರ್ ನೋಡ್ತಾರೆ. I am there to watch especially body language.
ಮತ್ತೆ ಇನ್ನೊಂದು ಅಂದ್ರೆ ಮಕ್ಕಳ ಶೋ ನಲ್ಲಿ very small competition ಇರುತ್ತೆ ಅಲ್ಲಿ ಹೊಸತನವನ್ನು ನಿರೀಕ್ಷೆ ಮಾಡೋಕೆ ಸಾಧ್ಯವಾಗಲ್ಲ, ಮಕ್ಕಳು ರಜಾ ಇರೋವಾಗ ಮುದ್ದು ಮುದ್ದಾಗಿ ಡ್ಯಾನ್ಸ್ ಮಾಡಿ ಸ್ವಲ್ಪ popular ಆಗಿ ಹೋಗೋಣ ಅಂತ ಬಂದಿರ್ತಾರೆ ಆದ್ರೆ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ programme ನಲ್ಲಿ ಹಾಗಾಗೋಲ್ಲ because ಇಲ್ಲಿ ತುಂಬಾ ಎಕ್ಸ್ಪೆರಿಮೆಂಟ್ ಮಾಡಿರ್ತಾರೆ, guys are very sereous ಒಬ್ರಿಗಿಂತ ಒಬ್ರು ಜೋರಾಗಿರ್ತಾರೆ, ಕಿಲ್ಲರ್ ಪರ್ಫರ್ಪಾಮೆನ್ಸ್ ಬರುತ್ತೆ Really It's a bigger show. ವೀಕ್ಷಕರಿಗೆ ಒಳ್ಳೆ entertainment ಕೊಡುತ್ತೆ.
***ಝೀ ಕನ್ನಡದ ಪ್ಲಾಟ್ ಫಾರ್ಮ ನೃತ್ಯ ಪಟುಗಳಿಗೆ ಎಂತಹ ಅವಕಾಶ ತಂದು ಕೊಡಬಹುದು?
-ಹಾಗೇನಿಲ್ಲ, ತುಂಬಾ ಪ್ರೊಫೆಷನಲ್ ಆಗಿ ತಗೊಂಡು ಚೆನ್ನಾಗಿ ಮಾಡೋವ್ರಿಗೆ ಖಂಡಿತ ಸಿನಿಮಾದಲ್ಲಿ ಅವಕಾಶ ಸಿಗಬಹುದು. ಆದ್ರೆ ನೆರವಾಗಿ ಇಲ್ಲಿಂದ ಸಿನಿಮಾಗೆ ಹೋಗೋಕಾಗಲ್ಲ. ಅದು ಅವರವರ ಪ್ರತಿಭೆಯನ್ನ ಆದರಿಸಿರುತ್ತೆ, ಅಂತಹ ಪ್ರತಿಭೆಯನ್ನು ಬೆಳಕಿಗೆ ತರೋ ಕೆಲಸವನ್ನು ಝೀ ಕನ್ನಡ ಮಾಡ್ತಿದೆ. ಖಂಡಿತವಾಗಿ ಆ ಮೂಲಕ ಸಿನಿಮಾದವರನ್ನು ಈ ಪ್ರತಿಭೆಗಳು ಸೆಳೆಯೋಕೆ ಝೀ ಕನ್ನಡ ಪ್ಲಾಟ್ ಫಾರ್ಮ ಸಹಾಯ ಮಾಡ್ತಿದೆ.
****ಸಿನಿಮಾಗೆ ಪ್ರವೇಶ ಆಗಿದ್ದು ಹೇಗೆ?ಅವಕಾಶಗಳು ಹೇಗಿವೆ?
-Actually ನಾನು ತಮಾಷೆಗೆ ಅಂತ ಮಾಡೆಲಿಂಗ್ ನಲ್ಲಿ ಮಾಡ್ತಿದ್ದೆ, ಆದ್ರೆ ಒಂದ್ಸಲ ಅಕಸ್ಮಿಕವಾಗಿ ಸಿನಿಮಾದಲ್ಲಿ ಮಾಡುವ ಅವಕಾಶ ಅರಸಿ ಬಂತು. ಮೊದಲಿಗೆ ತಮಿಳು ಸಿನಿಮಾದಲ್ಲಿ ಮಾಡಿದೆ ಆಮೇಲೆ ಕನ್ನಡ-ತೆಲುಗು ಆಯ್ತು. ನಾವು ಬಂದು ಉತ್ತರ ಭಾರತದ ಸಿಂಧಿ ಫ್ಯಾಮಿಲಿಯವರು. ನಮ್ ತಂದೆ ಬ್ಯುಸಿನೆಸ್ ಮನ್. ಮನೇಲಿ ಸಿನಿಮಾ ರಂಗಕ್ಕೆ ಬರೋದು ಇಷ್ಟ ಇರ್ಲಿಲ್ಲ ಮೊದಲಿಗೆ. ಆದ್ರೆ ಈಗ ಹಾಗೇನಿಲ್ಲ ಮನೇಲಿ parents support ಮಾಡ್ತಾರೆ. ಈಗಾಗಲೆ ಕನ್ನಡದಲ್ಲಿ ನಾಲ್ಕು ಸಿನಿಮಾ ಮಾಡ್ತಿದ್ದೀನಿ, ಶಿವಣ್ಣ ಜೊತೆ ಮೈಲಾರಿ ಮಾಡ್ತಿದಿನಿ, ಅದರ ಹಾಡು ಶೂಟಿಂಗ್ ಆಯ್ತು. ಈ ಸಂಜೆ ಅಂತ ಸಿನಿಮಾ ಮುಗಿದಿದೆ, ನೆನಪಿರಲಿ ಪ್ರೇಮ್ ಜೊತೆ ಹೊಸ ಸಿನಿಮಾದಲ್ಲಿ ಮಾಡೋಕೆ ಸೈನ್ ಮಾಡಿದೀನಿ. ಹೊಸ ನಾಯಕನ ಜೊತೆ "ಶ್ಲೋಕ" ಮಾಡಿದೀನಿ ಸುಮಾರು 70ಪರ್ಸೆಂಟ್ ಶೂಟಿಂಗ್ ಮುಗಿದಿದೆ.ಮಲೆಯಾಳಂ ನಲ್ಲೂ ಅವಕಾಶ ಇದೆ. ಮತ್ತೆ ಸಿಗ್ತೀನಿ ಶೂಟಿಂಗ್ ಇದೆ ಎಂದು ಒಂದೇ ಉಸುರಿಗೆ ಮಾತು ಮುಗಿಸಿದರು ಸಂಜನಾ.
ಈ ಸಂದರ್ಶನ ಲೇಖನವನ್ನು ಯಥಾವತ್ತಾಗಿ ಪ್ರಕಟಿಸಿದ thatskannada.com ನ ಸಂಪಾದಕರಾದ ಶ್ಯಾಮಸುಂದರ್ ರಿಗೆ ಕೃತಜ್ಞತೆಗಳು ನೀವೂ ಆ ಲೇಖನವನ್ನು ಈ ಲಿಂಕಿನಲ್ಲಿ ಕ್ಲಿಕ್ಕಿಸಿ ಓದಬಹುದು http://thatskannada.oneindia.in/movies/interview/2010/06/24-ganda-hendathi-sanjana-interview.html

Sunday, June 20, 2010

ವಿಶ್ವವಿದ್ಯಾಲಯಗಳ ಕರ್ಮಕಾಂಡ ಎಲ್ಲಿಗೆ ಬಂತು?

ಸೇವಾ ವಲಯದಲ್ಲಿರುವ ಶಿಕ್ಷಣ ಕ್ಷೇತ್ರ ಸುಧಾರಿಸಲಾಗದಷ್ಟು ಹದಗೆಟ್ಟಿದೆ, ಶಿಕ್ಷಣ ವ್ಯಾಪಾರೀಕರಣವಾಗಿ ಮಾರ್ಪಟ್ಟಿದೆ, ಭ್ರಷ್ಟಾಚಾರ ತಾಂಡವವಾಡುತ್ತಿದೆ ಎಂದರು ಒಬ್ಬ ಸೂಕ್ಷ್ಮ ಮನಸ್ಥಿತಿಯ ಮಾಜಿ ಶಾಸಕರು. ಹೌದು ಅವರ ಮಾತಿನಲ್ಲಿ ಸತ್ಯವಿದೆ ಅನಿಸಿತು. ಇವತ್ತು ನಮ್ಮ ಆಶಯಗಳನ್ನು ಸಾಕಾರ ಮಾಡುವ ನಿಟ್ಟಿನಲ್ಲಿ, ನಾಗರೀಕತೆಯ ಹೆಜ್ಜೆ ಗುರುತು ಮೂಡಿಸುವ ದಿಸೆಯಲ್ಲಿ ಅತ್ಯಂತ ಮಹತ್ವದ ಹೊಣೆಗಾರಿಕೆ ಹೊತ್ತಿರುವುದು ಶಿಕ್ಷಣ ಕ್ಷೇತ್ರವೇ ಆಗಿದೆ. ಇವೇ ಕೆಟ್ಟು ಕೆರ ಹಿಡಿದರೆ ಏನು ಮಾಡಬೇಕು? ನಮ್ಮ ಶಿಕ್ಷಣ ವ್ಯವಸ್ಥೆಯಲ್ಲೇ ನಂಬಿಕೆ ಕಳೆದು ಕೊಂಡರೆ ಆತ್ಮ ವಿಶ್ವಾಸವನ್ನು ಹುಡುಕುವುದೆಲ್ಲಿ? ಬದುಕಿನ ಹಾದಿಯನ್ನು ನಿರೂಪಿಸುವ ಸಂಸ್ಥೆಗಳೇ ಅಡ್ಡಹಾದಿ ಹಿಡಿದರೆ ಹೇಗೆ? ಅದರ ನಿರ್ವಾಹಕರು ದಿಕ್ಕು ತಪ್ಪಿದರೆ ಎಚ್ಚರಿಸುವವರಾರು? ಇಂತಹದ್ದೊಂದು ಸ್ಥಿತಿಗೆ ಕಾರಣಗಳೇನು? ಪರಿಸ್ಥಿತಿ ಸುಧಾರಣೆ ಹೇಗೆ ಸಾಧ್ಯವಾಗಬಹುದು? ಎಂಬೆಲ್ಲಾ ಪ್ರಶ್ನೆಗಳು ಹುಟ್ಟುವುದು ಸಹಜ.
ಮೊನ್ನೆ ಮೊನ್ನೆ ಮೈಸೂರು ವಿವಿ ಯ ಮಾಜಿ ಕುಲಪತಿ ಜೆ ಶಶಿಧರ ಪ್ರಸಾದ್ ವಿರುದ್ದ ಭ್ರಷ್ಟಾಚಾರ-ಸ್ವಜನ ಪಕ್ಷಪಾತ, ಅಕ್ರಮ ನೇಮಕಾತಿ ಕುರಿತು ಕೇಸು ದಾಖಲಾಗಿದೆ. ಈಗ್ಯೆ 10ವರ್ಷಗಳಿಂದ ವಿವಿ ಹಗರಣಗಳು ಒಂದಿಲ್ಲೊಂದು ರೀತಿಯಲ್ಲಿ ಬಯಲಿಗೆ ಬರುತ್ತಿದ್ದವಾದರೂ ಕ್ರಿಮಿನಲ್ ಕೇಸು ದಾಖಲಾಗುವ ಮಟ್ಟಿಗೆ ಹೋಗಿರಲಿಲ್ಲ. ಈ ವಿಚಾರದಲ್ಲಿ ರಾಜ್ಯಪಾಲರ ದಿಟ್ಟಕ್ರಮ ಮೆಚ್ಚುವಂತಹುದು. ಸರಕಾರಗಳ ಅಂಕೆಗೆ ಸಿಲುಕದೇ ಅಟಾನಮಸ್ ಬಾಡಿ ಎಂಬ ಹಣೆಪಟ್ಟಿಯೊಂದಿಗೆ ಕಾರ್ಯ ನಿರ್ವಹಿಸುವ ವಿವಿಗಳು ವಿವಾದಕ್ಕೆ ಸಿಲುಕುತ್ತಿರುವುದು ಇದೇ ಮೊದಲೇನಲ್ಲ ಬಿಡಿ. ನೋಡಿ ನಮ್ಮ ರಾಜ್ಯದಲ್ಲಿ ಉನ್ನತ ಶಿಕ್ಷಣನೀಡುವ ದಿಸೆಯಲ್ಲಿ ಸುಮಾರು 21 ಅಧಿಕೃತ ವಿವಿಗಳು ಕಾರ್ಯನಿರ್ವಹಿಸುತ್ತವೆ. 8ಕ್ಕೂ ಹೆಚ್ಚು ಖಾಸಗಿ ವಾರ್ಸಿಟಿಗಳಿವೆ. ಈ ಪೈಕಿ ವಿಜಾಪುರದಲ್ಲಿ ಸ್ಥಾಪನೆಗೊಂಡ ಮಹಿಳಾ ವಿವಿ ಯಲ್ಲಿ ಅರ್ಹತೆಯಿಲ್ಲದವರನ್ನು ನೇಮಕ ಮಾಡಿಕೊಳ್ಳಲಾಗಿದೆ, ಹಲವು ಬಾಬ್ತುಗಳಿಗೆ ಸಿಕಾಪಟ್ಟೆ ಖರ್ಚು ತೋರಿಸಲಾಗಿದೆ ಎಂಬ ಆರೋಪವಿದೆ. ದಾವಣಗೆರೆ ವಿವಿಯಲ್ಲಿ ಅರ್ಹತೆಯಿಲ್ಲದವರನ್ನು ಕುಲಪತಿಗಳನ್ನಾಗಿ ಮಾಡಲಾಗಿದೆ,ಅಕ್ರಮ ನೇಮಕಾತಿ ಹಗರಣ, ಮೈಸೂರು ವಿವಿಯಲ್ಲಿ ಸ್ವಜನ ಪಕ್ಷಪಾತ, ಅಕ್ರಮ ನೇಮಕಾತಿ, ದುಂದುವೆಚ್ಚ, 400ಕ್ಕೂ ಅಧಿಕ ನಕಲಿ ಪದವಿ ಸರ್ಟಿಫಿಕೇಟ್ ಪತ್ತೆ, ಶಿವಮೊಗ್ಗ ವಿವಿಯಲ್ಲಿ ಪರೀಕ್ಷಾ ಅಕ್ರಮ , ನಕಲಿ ಅಂಕಪಟ್ಟಿ ಹಂಪೆ ಕನ್ನಡ ವಿವಿಯಲ್ಲಿ ಕೋಟಿ ಅನುದಾನ ಕೊಟ್ಟರು ಪ್ರಯೋಜನವಿಲ್ಲದ ಕಾರ್ಯ, ತುಮಕೂರು ವಿವಿ ಯಲ್ಲಿ ಪದವಿ ಪ್ರವೇಶ ಕುರಿತ ಗೋಂದಲ, ಬೆಂಗಳೂರು ವಿವಿಯಲ್ಲಿ ಜಾತಿ ರಾಜಕೀಯ, ಸ್ವಜನ ಪಕ್ಷಪಾತ, ಪರೀಕ್ಷಾ ಅಕ್ರಮ, ನೇಮಕಾತಿ ಹಗರಣ, ಸೆಕ್ಸು ಹೀಗೆ ಪಟ್ಟಿ ಮಾಡುತ್ತಾ ಹೋದರೆ ಅದರದ್ದೇ ಒಂದು ಚರಿತ್ರೆಯಾದೀತು.
ರಾಜ್ಯದ 21ವಿವಿಗಳ ಪೈಕಿ 15ಕ್ಕೂ ಹೆಚ್ಚು ಮಂದಿ ಲಿಂಗಾಯಿತ ವರ್ಗದ ಜನರ ಉಪಕುಲಪತಿಗಳಾಗಿದ್ದರೆ, 2ರಲ್ಲಿ ಪ.ಜಾ, 1ರಲ್ಲಿ ಒಕ್ಕಲಿಗ ಮತ್ತಿತರ ಜಾತಿಗಳವರು ಸ್ಥಾನ ಪಡೆದಿದ್ದಾರೆ ಅಂದರೆ ಉಪ ಕುಲಪತಿಯ ಸ್ಥಾನಕ್ಕೂ ಜಾತಿ ಲಾಬಿ ಎಷ್ಟರ ಮಟ್ಟಿಗೆ ಕೆಲಸ ಮಾಡುತ್ತದೆ ಎಂಬುದನ್ನು ಅರಿಯಬಹುದು. ಪ್ರಸಕ್ತ ದಿನಗಳಲ್ಲಿ ಸರ್ಕಾರಿ ವಿವಿಗಳಲ್ಲಿ ಇರುವ ವಿಷಯವಾರು ಕೇಂದ್ರಗಳಿಗೆ ವರ್ಷಕ್ಕೊಬ್ಬರು ಜಾತಿಯಾಧರಿಸಿ ಮುಖ್ಯಸ್ಥರ ಸ್ಥಾನವನ್ನು ಅಲಂಕರಿಸುತ್ತಾರೆ. ಇದೇ ಮಾನದಂಡವನ್ನು ವಿದ್ಯಾರ್ಥಿಗಳಿಗೂ ಅನ್ವಯಿಸಿ ಜಾತಿವಾರು ಅಂಕ, Rank , ಚಿನ್ನದ ಪದಕಗಳನ್ನು ನೀಡಲಾಗುತ್ತದೆ, ಇಲ್ಲಿ ಪ್ರತಿಭೆಗೆ ಮನ್ನಣೆಯಿಲ್ಲ! ಪ್ರೊಫೆಸರನಿಗೆ, ಅದ್ಯಾಪಕನಿಗೆ ಓಲೈಸುವ ವಿದ್ಯಾರ್ಥಿಗಳಿಗೆ ಮಾತ್ರವೇ ಪ್ರಾಶಸ್ತ್ಯ. ಎಂಫಿಲ್, ಪಿಎಚ್ ಡಿ ಮಾಡಲು ಬರುವ ವಿದ್ಯಾರ್ಥಿಗಳ ಗೋಳಂತೂ ಹೇಳ ತೀರದು, ಸದರಿ ಪದವಿಗಳನ್ನು ಪಡೆಯುವ ವೇಳೆಗೆ ಹೆಣ ಹೋಗುತ್ತದೆ. ವಿದ್ಯಾರ್ಥಿನಿಯಾಗಿದ್ದರಂತೂ ತನು-ಮನ-ಧನ ಎಲ್ಲವನ್ನು ಅರ್ಪಿಸ ಬೇಕಾದ ಸನ್ನಿವೇಶಗಳೂ ಹಲವರಿಗೆ ಎದುರಾಗಿವೆ. ಇಷ್ಟೆಲ್ಲ ಹೈರಾಣಗಳಿಗೆ ಸಿಲುಕಿ ಸುಧಾರಿಸಿ ಕೊಳ್ಳಲಾಗದವರು ಪದವಿಯನ್ನೇ ಮರೆತ ಸಂಧರ್ಭಗಳೂ ಇವೆ. ಎಸ್ ಸಿ /ಎಸ್ಟಿ ವಿದ್ಯಾರ್ಥಿಗಳಿಗೆ ಪ್ರತಿ ವಿವಿಗಳು ಕಡ್ಡಾಯವಾಗಿ ವರ್ಷದಲ್ಲಿ ಒಬ್ಬರಿಗೆ ಪಿಎಚ್ಡಿ ಮಾರ್ಗದರ್ಶನ ನೀಡುವ ಆದೇಶವಿದೆ ಹಾಗಾಗಿ ಅದೊಂದು ಅವಕಾಶ ಬಿಟ್ಟರೆ ಸದರಿ ಜಾತಿಯವರಿಗೆ ಪಿ ಎಚ್ ಡಿ ಪದವಿಗೆ ಅವಕಾಶ ಲಭಿಸುವುದು ಕಡಿಮೆ. ಇತ್ತೀಚೆಗೆ ಬೆಂಗಳೂರು ವಿವಿಗೆ ಸರ್ಕಾರ ಇಬ್ಬರು ಪ.ಜಾತಿಯ ರಿಜಿಸ್ಟ್ರಾರ್ ಗಳನ್ನು ನೇಮಿಸಿತು ಆದರೆ ವಿವಿಯ ಆಡಳಿತ ಅವರಿಗೆ ಅವಕಾಶವನ್ನೇ ನೀಡಲಿಲ್ಲ. ಮುಂದೆ ಇದು ನ್ಯಾಯಾಲಯದ ಮೆಟ್ಟಿಲು ಹತ್ತಿದಾಗ ಸದರಿ ಹುದ್ದೆಗಳನ್ನೇ ವಿವಿ ರದ್ದು ಮಾಡಿತು. ಇನ್ನೂ ರಾಜ್ಯದಲ್ಲಿರು ವ 8ಕ್ಕೂ ಹೆಚ್ಚಿನ ಖಾಸಗಿ ವಿವಿಗಳು ಬಹುತೇಕ ರಾಜ್ಯದ ಪ್ರಬಲ ರಾಜಕಾರಣಿಗಳ ಅಂಕೆಯಲ್ಲಿವೆ. ಅಲ್ಲಿ ಶಿಕ್ಷಣವನ್ನು ವ್ಯವಸ್ಥಿತವಾಗಿ ಮಾರಾಟಕ್ಕಿಡಲಾಗಿದೆ, ಮಂಗಳೂರಿನ ಯಾನೆ ಪೋಯಿ ಎಂಬ ವಿವಿ ಕಳೆದ ಎರಡು ವರ್ಷಗಳಿಂದ ಸರ್ಕಾರ ಪ್ರವೇಶ ಪರೀಕ್ಷೆಯ ಮೂಲಕ ಪ್ರತಿಭಾವಂತರನ್ನು ವೃತ್ತಿ ಶಿಕ್ಷಣ ಪ್ರವೇಶಕ್ಕೆ ಆಯ್ಕೆ ಮಾಡಿದ್ದರೂ ಅವರಿಗೆ ಪ್ರವೇಶ ನಿರಾಕರಿಸಲಾಗಿದೆ ಈ ಬಗ್ಗೆ ಸರ್ಕಾರ ಯಾವುದೇ ಕ್ರಮ ಜರುಗಿಸಿಲ್ಲ. ಖಾಸಗಿ ವಿವಿಗಳು ಭಾರೀ ಮೊತ್ತದ ಹ ಣ ಪಡೆದು ಎಂಫಿಲ್, ಹಾಗೂ ಪಿಎಚ್ ಡಿ ಪದವಿ ಪ್ರಧಾನ ಮಾಡುವ ಕಾರ್ಖಾನೆಗಳಾಗಿ ಮಾರ್ಪಟ್ಟಿವೆ. ವೃತ್ತಿ ಶಿಕ್ಷಣ ಪ್ರವೇಶದ ಸಂಧರ್ಭದಲ್ಲ ಸರ್ಕಾರವನ್ನೇ ಹೇಳಿದಂತೆ ಕೇಳಿಸುವ ಮಟ್ಟಿಗೆ ಖಾಸಗಿ ವಿವಿಗಳ ಲಾಬಿ ಬೆಳೆದು ನಿಂತಿದೆ. ಆದರೆ ಕೇಳುವವರು ಯಾರು? ನ್ಯಾಯವನ್ನು ಹುಡುಕುವುದೆಲ್ಲಿ?
ಜ್ಞಾನ ಆಯೋಗದ ಶಿಫಾರಸ್ಸಿನಂತೆ ಉನ್ನತ ಶಿಕ್ಷಣ ದಗುಣಮಟ್ಟ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಸರ್ಕಾರ ಹಣದ ಹೊಳೆಯನ್ನೆ ಹರಿಸುತ್ತಿದೆ. 2020ರ ವೇಳೆಗೆ ಭಾರತವನ್ನು ಸೂಪರ್ ಪವರ್ ಮಾಡು ವನಿಟ್ಟಿನಲ್ಲಿ ಮೂಲಭೂತ ಸೌಕರ್ಯಗಳನ್ನು ವಿವಿಗಳಿಗೆ ನೀಡಲಾಗುತ್ತಿದ. ಐ ಎ ಎಸ್ ಅಧಿಕಾರಿಗ ಳರೇಂಜಿಗೆ ಪದವಿ ಕಾಲೇಜುಗಳ ಅದ್ಯಾಪಕರ ವೇತನವನ್ನ ಏರಿಸಲಾಗಿದೆ. ಸುಸಜ್ಜಿತ ಕಟ್ಟಡಗಳಿಗೆ ಅನುದಾ ನನೀಡಲಾಗುತ್ತಿದೆ. ಸ್ಪರ್ಧಾತ್ಮಕ ಜಗತ್ತಿನಲ್ಲಿ ವಿದ್ಯಾರ್ಥಿಗಳ ಹಿತ ಕಾಯುವ ದೃಷ್ಟಿಯಿಂದ ಪದವಿ ಕಾಲೇಜು ವಿದ್ಯಾರ್ಥಿಗಳಿಗೆ ವ್ಯಕ್ತಿ ವಿಕಸನದ ಮಾದರಿಯಲ್ಲ ವಿವಿ ಧರೀತಿಯ ಶಿಕ್ಷಣ ನೀಡಲು ಯುಜಿಸಿ ಅನುದಾನ ನೀಡಲಾಗುತ್ತಿದೆ. ಇವತ್ತು ಎಷ್ಟು ಕಾಲೇಜುಗಳಲ್ಲಿ ಇವುಗಳ ಬಳಕೆಯಾಗುತ್ತಿದೆ ಕೇಳುವವರಾರು?ಈ ಬಗ್ಗೆ ಎಷ್ಟು ಜನರಿಗೆ, ವಿದ್ಯಾರ್ಥಿಗಳಿಗೆ ತಿಳುವಳಿಕೆ ಇದೆ? ಈ ರೀತಿ ಶಿಕ್ಷಣ ವ್ಯವಸ್ಥೆಯೇ ಹದಗೆಟ್ಟರೆ ಭವಿಷ್ಯದ ಭಾರತ ದಕಲ್ಪನೆ ಏನು? ನೀವೇ ಹೇಳಿ?

Sunday, June 13, 2010

ಸರ್ಕಾರಿ ಶಿಕ್ಷಣಕ್ಕೆ ಪೋಷಕರ ಅಸಡ್ಡೆ ಯಾಕೆ?

ಸರ್ಕಾರಿ ಶಾಲೆಗೆ ಮಕ್ಕಳನ್ನು ಕರೆತರೋಕೆ ಎಷ್ಟು ಯೋಜನೆಗಳಿವೆ? ಎದುರಿಗಿದ್ದ ಅಧಿಕಾರಿಯನ್ನು ಪ್ರಶ್ನಿಸಿದೆ. ಸರಿ ಸುಮಾರು 62 ಯೋಜನೆಗಳು ಇದೆ ಅಂದ್ರು ಶಿಕ್ಷಣ ಇಲಾಖೆಯ ನನ್ನ ಅಧಿಕಾರಿ ಮಿತ್ರರು. ಹೌದಲ್ವಾ?... ಹಾಗಾದ್ರೆ ಕಳೆದ ಸಾಲಿನಲ್ಲಿ ರಾಜ್ಯದಾಧ್ಯಂತ 523 ಸರ್ಕಾರಿ ಶಾಲೆಗಳು ಮುಚ್ಚಿದ್ದು ಯಾಕೆ? ಎಂಬ ಪ್ರಶ್ನೆಗೆ ಸರ್ಕಾರಿ ನಿಯಮದ ಕಡೆಗೆ ಕೈ ತೋರಿಸಿದ್ರು ಅದೇ ಅಧಿಕಾರಿ ಮಿತ್ರ. ಇವತ್ತು ಭಾರತ ಸರ್ಕಾರ ಮತ್ತು ರಾಜ್ಯ ಸರ್ಕಾರ ಗಳು ಶಿಕ್ಷಣ/ಶಿಕ್ಷಣ ಕ್ಷೇತ್ರದ ಸುಧಾರಣೆಗೆ ಕೋಟಿಗಟ್ಟಲೆ ಹಣ ವೆಚ್ಚ ಮಾಡುತ್ತಿದೆ, ಸಾಲದು ಎಂಬಂತೆ ವಿಶ್ವ ಭ್ಯಾಂಕ್ ನೆರವಿನ ಯೋಜನೆಗಳನ್ನು ಜಾರಿಗೆ ತಂದಿದೆ ಆದರೂ ಯಾಕೆ ಸರ್ಕಾರಿ ಶಾಲೆಗಳಿಗೆ ಮಕ್ಕಳು ಬರುತ್ತಿಲ್ಲ? ಪ್ರತಿ ವರ್ಷ ಸರ್ಕಾರಿ ಶಾಲೆಗಳಿಗೆ ಎಲ್ಲ ಮೂಲಭೂತ ಸೌಕರ್ಯಗಳಿದ್ದರೂ, ಉತ್ತಮ ದರ್ಜೆಯ ಶಿಕ್ಷಕರಿದ್ದರೂ, ಸವಲತ್ತುಗಳು ಇದ್ದರೂ ಸಹಾ ಸರ್ಕಾರಿ ಶಾಲೆ ಯಾಕೆ ಇವತ್ತು ಪೋಷಕರ ಮತ್ತು ಮಕ್ಕಳ ಆಕರ್ಷಣೆಗೆ ಕಾರಣವಾಗಿಲ್ಲ? ಖಾಸಗಿ ಶಾಲೆಗಳು/ಕಾಲೇಜುಗಳು ಯಾಕೆ ಸೆಳೆತಕ್ಕೆ ಕಾರಣವಾಗಿವೆ? ಪೋಷಕರ/ಮಕ್ಕಳ ಧೋರಣೆ ಏನು? ಎಂಬ ಪ್ರಶ್ನೆ ಇವತ್ತು ಎಲ್ಲರನ್ನೂ ಕಾಡುತ್ತಿದೆ. ಈ ಪ್ರಶ್ನೆಗಳಿಗೆ ಉತ್ತರ ಕಂಡು ಕೊಳ್ಳುವ ಮೊದಲು ಕೆಲವು ವಿಚಾರಗಳನ್ನು ಗಮನಿಸೋಣ.
ಕೇಂದ್ರ ಸರ್ಕಾರ ಈ ಸಾಲಿನಲ್ಲಿ ಶಿಕ್ಷಣಕ್ಕಾಗಿ ಬಜೆಟ್ ಮಂಡನೆ ವೇಳೆ 45,267.40 ಮಿಲಿಯನ್ ಹಣವನ್ನು ಕಾದಿರಿಸಿದೆ.ಭಾರತದ ಸಾಕ್ಸರತಾ ಪ್ರಮಾಣ ಶೇ.66% ಈ ಪೈಕಿ ಪುರುಷರ ಸಾಕ್ಷರತೆ ಶೇ.76.9%, ಮಹಿಳೆಯರ ಪ್ರಮಾಣ ಶೇ.54.5%. ಭಾರತದಲ್ಲಿ ಶೇ.15ರಷ್ಟು ಮಂದಿ ಮಾತ್ರ ಪ್ರೌಢಶಿಕ್ಷಣದ ವರೆಗೆ ಶಿಕ್ಷಣ ಪಡೆಯುತ್ತಾರೆ. ಭಾರತದಲ್ಲಿ ಸರ್ಕಾರಿ ಪ್ರಾಯೋಜಿತ ಶಾಲೆಗಳು ಶೇ.80ರಷ್ಟಿದೆ. ಖಾಸಗಿ ವಲಯದ ಶಿಕ್ಷಣ ಸಂಸ್ಥೆಗಳು ಶೇ.27ರಷ್ಟಿದೆ. ಖಾಸಗಿ ವಲಯದ ಶಿಕ್ಷಣ ಸಂಸ್ಥೆಗಳಿಗೆ ಹೂಡಿಕೆಯಾಗುವ ವೆಚ್ಚ 2008ರಲ್ಲಿ 40ಬಿಲಿಯನ್ ಡಾಲರ್, ಅದೇ 2012ವ ವೇಳೆಗೆ ಇದು 68ಬಿಲಿಯನ್ ಡಾಲರ್ ಆಗುವ ಸಾಧ್ಯತೆ ಇದೆ. ದೇಶದಲ್ಲಿ ವಾರ್ಷಿಕವಾಗಿ ಎಲಿಮೆಂಟರಿ ಶಿಕ್ಷಣಕ್ಕೆ ಶೇ.65.6%ಮಂದಿ ಸೇರ್ಪಡೆಯಾದರೆ ಪ್ರೌಢಶಿಕ್ಷಣಕ್ಕೆ ಶೇ.9.5, ತಾಂತ್ರಿಕ ಶಿಕ್ಷಣಕ್ಕೆ ಶೇ.10.7% ಇತರೆ ಶಿಕ್ಷಣಕ್ಕೆ ಕೇವಲ 1.49ರಷ್ಟು ಮಂದಿ ಮಾತ್ರ ಸೇರ್ಪಡೆಯಾಗುತ್ತಿದ್ದಾರೆ ಎಂದು ಸರ್ಕಾರದ ಅಧಿಕೃತ ಸರ್ವೆ ಹೇಳುತ್ತದೆ. ಬಾರತದಲ್ಲಿ 1522 ಇಂಜಿನಿಯರಿಂಗ್ ಕಾಲೇಜುಗಳಿಗೆ ಪ್ರತಿ ವರ್ಷ 582,000ಮಂದಿ ಪ್ರವೇಶ ಪಡೆಯುತ್ತಿದ್ದರೆ 1244 ಪಾಲಿಟೆಕ್ನಿಕ್ ಗಳಿಗೆ 265,000 ಮಂದಿ ದಾಖಲಾಗುತ್ತಿದ್ದಾರೆ ಇಲ್ಲಿ ಮೂಲ ಭೂತ ಸೌಕರ್ಯಗಳ ಕೊರತೆ ಮತ್ತು ಉಪನ್ಯಾಸಕರ ಕೊರತೆ ಇದೆ! ಆದಾಗ್ಯೂ ಪ್ರವೇಶ ಮಾತ್ರ ನಿರಾತಂಕವಾಗಿದೆ. ಇಲ್ಲಿ ಯಾವ ಸರ್ಕಾರಿ ನೀತಿಗಳು ಪಾಲನೆಯಾಗುತ್ತಿಲ್ಲ. ಪೋಷಕರ ಹುಚ್ಚಿಗೆ ಇದು ಒಂದು ಜ್ವಲಂತ ನಿದರ್ಶನ!
ಸರ್ವಶಿಕ್ಷಣ ಅಭಿಯಾನ ಜಾರಿಗೆ ಬಂದ ಮೇಲೆ ರಾಷ್ಟ್ರಾಧ್ಯಂತ ಸರ್ಕಾರಿ ಶಾಲೆಗಳು ಉತ್ತಮ ಮೂಲ ಸೌಕರ್ಯಗಳನ್ನೇನೊ ಪಡೆದಿವೆ ಆದರೆ ಶಿಕ್ಷಣ/ಶಿಕ್ಷಕರ ಗುಣಮಟ್ಟ ಕಾಯ್ದು ಕೊಳ್ಳುವಲ್ಲಿ ಮಾತ್ರ ವಿಫಲವಾಗಿದೆ ಇದು ಸರ್ಕಾರಿ ಶಾಲೆಗಳ ಹಿನ್ನೆಡೆಗೆ ಪ್ರಮುಖ ಕಾರಣ ಎನ್ನಬಹುದು.ಇಲ್ಲಿ ಶಿಕ್ಷಕರನ್ನು ಮಾತ್ರ ದೋಷಿಸುವಂತಿಲ್ಲ ಈ ವ್ಯವಸ್ಥೆಯ ಮನಸ್ಥಿತಿಯೂ ಕಾರಣ! ಕಳೆದ ವಾರ ನನ್ನ ಮಿತ್ರರೊಬ್ಬರು ಹೇಳುತ್ತಿದ್ದರು ಅಬ್ಬಾ ನಾನಂತೂ ನನ್ನ ಮಗಳನ್ನು ಮಂಗಳೂರಿನ ಖಾಸಗಿ ಕಾಲೇಜಿಗೆ ಸೇರಿಸಿ ಬಚಾವಾದೆ, ಯಾಕೆಂದ್ರೆ ನನ್ನ ಮಿತ್ರನೊಬ್ಬ ನೀವೆಲ್ಲ ನಿಮ್ಮ ಮಕ್ಕಳನ್ನು ಮಂಗಳೂರು-ಬೆಂಗಳೂರಿನ ಖಾಸಗಿ ಶಾಲೆಗೆ ಸೇರಿಸಿ ಪರವಾಗಿಲ್ಲ ನಾನು ಮಾತ್ರ ಸರ್ಕಾರಿ ಶಾಲೆಯಲ್ಲೇ ಓದಿಸುತ್ತೇನೆ ಅಂದ, ಈಗ ನೋಡಿದ್ರೆ ಅವನ ಮಗ ಡ್ರಗ್ ಅಡಿಕ್ಟ್ , ಸಣ್ಣಪುಟ್ಟ ಬಡಿದಾಟ,ಕಳ್ಳತನ ಮಾಡಿ ಜೈಲಿಗೂ ಹೋಗಿದ್ದನಂತೆ ಶಿಕ್ಷಣ ಅರ್ಧಕ್ಕೆ ನಿಂತಿದೆ, ಈಗ ನೋಡಿದ್ರೆ ನನ್ನ ಮಿತ್ರ ಹಪಹಪಿಸುತ್ತಾನೆ ಅದಕ್ಕೆ ಏನಾದ್ರೂ ಆಗ್ಲಿ ನಮ್ ಮಕ್ಕಳನ್ನ ಒಳ್ಳೆ ಸ್ಕೂಲಿಗೆ ಸೇರಿಸಬೇಕು ಅಂದ್ರು. ಅಂದ್ರೆ ಅವರ ಮಾತಿನ ಅರ್ಥ ಏನು? ಸರ್ಕಾರಿ ಶಾಲೆಲಿ ಕಲಿಯೋ ಮಕ್ಕಳೆಲ್ಲ ಹಾಳಾಗ್ತಾರೆ ಅಂತಾನಾ? ಇವತ್ತಿನ ವ್ಯವಸ್ಥೇಲಿ ಬದುಕ ಬೇಕು ಅಂದ್ರೆ ಇಂಗ್ಲೀಶ್ ಬೇಕು ಅದಕ್ಕೆ ನೂರಾರು ಮೈಲು ದೂರದ ಮಂಗಳೂರಿನ ವಸತಿ ಶಾಲೆಗೆ ವರ್ಷಕ್ಕೆ 40ಸಾವಿರ ಕೊಟ್ಟು ನನ್ನ ಮಗೂನಾ ಎಲ್ ಕೆ ಜಿ ಸೇರಿಸಿದೀನಿ ಅಂತ ಹೆಮ್ಮೆಯಿಂದ ಬೀಗಿದ ಮತ್ತೊಬ್ಬ ಹಳ್ಳಿಗಾಡಿನ ಮಿತ್ರ. ಇದೆಲ್ಲಾ ಏನು ಸ್ವಾಮಿ ಮನುಷ್ಯರ ಸಂಬಂಧಗಳಿಗೆ ಭಾವನೆಗಳಿಗೆ ಪ್ರೀತಿ ವಾತ್ಸಲ್ಯಕ್ಕೆ ಧಕ್ಕೆ ಬಂದರೂ ಪರವಾಗಿಲ್ಲ ಈತನ ಮಗ ಎಲ್ ಕೆ ಜಿಗೆ ಇಂಗ್ಲೀಷ್ ಭೋಧಿಸುವ ಖಾಸಗಿ ಶಾಲೆಗೆ ಸೇರಬೇಕು ಅಂದರೆ ಜಾಗತೀಕರಣದ ಗಾಳಿ ಎಷ್ಟರ ಮಟ್ಟಿಗೆ ಬೀಸಿದೆ ಎಂದು ಅರ್ಥ ಮಾಡಿಕೊಳ್ಳಿ.
ಇರಲಿ ಈಗ ವಿಚಾರಕ್ಕೆ ಬರೋಣ ಶಿಕ್ಷಣ ಕ್ಷೇತ್ರವನ್ನು ಒಂದು ಸೇವಾ ವಲಯ ಎಂದೇ ಅರ್ಥೈಸಲಾಗುತ್ತದೆ. ದೇಶದಲ್ಲಿ ಇದುವರೆಗೂ ಒಂದು ಸಮರ್ಪಕ ಶಿಕ್ಷಣ ನೀತಿಯನ್ನು ಅನುಷ್ಠಾನಕ್ಕೆ ತರಲು ಸರ್ಕಾರಕ್ಕೆ ಸಾಧ್ಯವಾಗಿಲ್ಲ,ಏಕರೂಪದ ಶಿಕ್ಷಣ ನೀತಿ ಇಲ್ಲಿಲ್ಲ ಹಾಗಾಗಿ ಪ್ರಾದೇಶಿಕವಾಗಿ ಕಲಿತವನಿಗೆ ಜಾಗತಿಕ ವ್ಯವಸ್ಥೆಯಲ್ಲಿ ಕಿಲುಬು ಕಾಸಿನ ಕಿಮ್ಮತ್ತು ಸಿಗುತ್ತಿಲ್ಲ. ಇಲ್ಲಿನ ಶಿಕ್ಷಣ ಸ್ವಾವಲಂಬಿ ಬದುಕಿಗೆ ಪೂರಕವಾಗಿಲ್ಲ ಅದು ದುರಂತದ ಸಂಗತಿ. ಅಬ್ದುಲ್ ಕಂಡ ಕಂಡ ಸೂಪರ್ ಪವರ್ ಭಾರತದ ಕನಸನ್ನು ನನಸು ಮಾಡುವ ನಿಟ್ಟಿನಲ್ಲಿ ಜ್ಞಾನ ಆಯೋಗವನ್ನು ಸ್ಥಾಪಿಸಿ ಅದರ ಶಿಫಾರಸ್ಸಿನಂತೆ ಶಿಕ್ಷಣ ಕ್ಷೇತ್ರದ ಸುಧಾರಣೆಗೆ ಈಗಷ್ಟೆ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಈ ನಿಟ್ಟಿನಲ್ಲಿ ಸಧ್ಯದ ಸರ್ಕಾರಿ ಶಿಕ್ಷಣ ವ್ಯವಸ್ಥೆ ಸುದಾರಿಸುವ ಹಾದಿಯಲ್ಲಿದೆ, ಫಲವಾಗಿ ಪ್ರಾಥಮಿಕ,ಪ್ರೌಢ ಮತ್ತು ವೃತ್ತಿ ಶಿಕ್ಷಣಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಶಿಕ್ಷಕರಿಗೆ ಸಂಬಳ-ಸವಲತ್ತುಗಳನ್ನು ನೀಡಲಾಗಿದೆ. ಅದರ ಜೊತೆ ಜೊತೆಗೆ ಮಕ್ಕಳನ್ನು ಶಾಲೆಗಳಿಗೆ ಸೆಳೆಯುವ ಮಹತ್ವದ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಆದರೂ ಸರ್ಕಾರಿ ಶಾಲೆಗಳು ಪ್ರತೀ ವರ್ಷ ಮುಚ್ಚಲ್ಪಡುತ್ತಿವೆ ಕಾರಣವೇನು? ನೀವು ಗಮನಿಸಿರ ಬಹುದು ಸರ್ಕಾರಿ ಶಿಕ್ಷಕರಾಗಿ ಆಯ್ಕೆಯಾಗುವವರು ಉತ್ತಮ ದರ್ಜೆಗಳಲ್ಲಿ ತೇರ್ಗಡೆಯಾದವರಾಗಿರುತ್ತಾರೆ.ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಲು ಅವರಿಗೆ ಬಿಡುವಿಲ್ಲದಂತೆ ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ, ಉಚಿತ ಪಠ್ಯ ವಿತರಣೆ, ಉಚಿತ ಬೈಸಿಕಲ್, ಉಚಿತ ಊಟ, ಹೆಣ್ಣು ಮಕ್ಕಳಿಗೆ ವಾರ್ಷಿಕ ದಾಖಲಾತಿ ಶುಲ್ಕದಿಂದಲೂ ವಿನಾಯಿತಿ, ವರ್ಷಕ್ಕೊಮ್ಮೆ ಉಚಿತ ಪ್ರವಾಸ, ಕ್ರೀಡೆ-ಸಾಂಸ್ಕೃತಿಕ ಚಟುವಟಿಕೆಗಳಿಗೆ ಪ್ರೋತ್ಸಾಹ, ಸುಸಜ್ಜಿತ ಕಟ್ಟಡ, ಕುಡಿಯುವ ನೀರು, ಶೌಚಾಲಯ, ಕಂಪ್ಯೂಟರು ಶಿಕ್ಷಣ, ವೃತ್ತಿ ಕೌಶಲ್ಯ ಶಿಕ್ಷಣ, ರಿಮೋಟ್ ವಿಲೇಜ್ ಗಳಿಂದ ಬರುವ ಮಕ್ಕಳಿಗೆ ಉಚಿತ ಪ್ರಯಾಣ ವೆಚ್ಚ ಇಷ್ಟೆಲ್ಲ ಇದ್ದರೂ ಪೋಷಕರು ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ಸೇರಿಸಲು ಹಿಂಜರಿಯುವುದೇಕೆ? ಅದು ಹೋಗಲಿ ಎಂದರೆ ಇವತ್ತು ಎಷ್ಟು ಜನ ಶಿಕ್ಷಕರ ಮಕ್ಕಳು ಸರ್ಕಾರಿ ಶಾಲೆಗಳಲ್ಲಿ ಓದುತ್ತಿದ್ದಾರೆ? ನನ್ನೂರಿನ ಉದಾಹರಣೆಯನ್ನೇ ಹೇಳುವುದಾದರೆ ಇಲ್ಲಿರುವ 1500 ಶಿಕ್ಷಕರು/ಉಪನ್ಯಾಸಕರು/ಶಿಕ್ಷಣ ಇಲಾಖೆಯ ಅಧಿಕಾರಿಗಳ ಪೈಕಿ ಸರಿ ಸುಮಾರು 600 ರಷ್ಟು ಮಂದಿ ಜಿಲ್ಲಾ ಕೇಂದ್ರ ಸ್ಥಾನದಲ್ಲಿ ನೆಲೆಸಿ ಪ್ರತಿ ನಿತ್ಯ ಇಲ್ಲಿಗೆ ಪ್ರಯಾಣ ಮಾಡುತ್ತಾರೆ, ಕಾರಣವಿಷ್ಟೆ ಅವರ ಮಕ್ಕಳ ಭವಿಷ್ಯ ಮುಖ್ಯವಂತೆ! ಜಿಲ್ಲಾ ಕೆಂದ್ರದಲ್ಲಿ ಉತ್ತಮ ಖಾಸಗಿ ಶಾಲೆಗಳಿವೆ ಇಲ್ಲಿ ಸರ್ಕಾರಿ ಶಾಲೆ ನೆಚ್ಚಿಕೊಂಡರೆ ಮಕ್ಕಳ ಭವಿಷ್ಯ ಅಷ್ಟಕ್ಕಷ್ಟೇ ಅನ್ನುತ್ತಾರೆ. ಅಂದರೆ ಅವರು ಕರ್ತವ್ಯ ನಿರ್ವಹಿಸುವ ಶಾಲೆ/ಕಾಲೇಜುಗಳಲ್ಲಿ ಅವರ ಭೋಧನೆಯ ಮೇಲೆಯೇ ಅವರಿಗೆ ನಂಬಿಕೆ ಇದ್ದಂತಿಲ್ಲ. ಹಾಗಾದರೆ ಇವರೆಲ್ಲಾ ಯಾವ ಪುರುಷರ್ಥಾಕ್ಕೆ ಸರ್ಕಾರಿ ಸೇವೆಗೆ ಸೇರುತ್ತಾರೆ ? ಶಾಲೆ/ಕಾಲೇಜುಗಳಲ್ಲಿ ಅಲ್ಲಿನ ಮಕ್ಕಳಿಗೆ ಇವರ ಬೋಧನೆ ಯಾವ ಮಟ್ಟದಲ್ಲಿರುತ್ತದೆ ? ಎಂಬ ಪ್ರಶ್ನೆ ಸಹಜವಾಗುತ್ತದೆ. ಸರ್ಕಾರದ ಡಿ ಐ ಎಸ್ ಇ ಸಮೀಕ್ಷೆಯ ಪ್ರಕಾರ ಖಾಸಗಿ ಶಾಲೆಗಳಲ್ಲಿ ಶೇ.54.9ರಷ್ಟು ಮಂದಿ ನಿಗದಿತ ತರಬೇತಿ ಹೊಂದಿಲ್ಲದ ಶಿಕ್ಷಕರೆನಿಸಿಕೊಂಡವರು ಪಾಠ ಮಾಡುತ್ತಾರೆ! ಸದರಿ ಶಾಲೆಗಳಲ್ಲಿ ಅನಿಯಮಿತ ಡೊನೇಷನ್, ಶುಲ್ಕದ ಜೊತೆಗೆ ಮನೆಪಾಠಕ್ಕೆ ಇಂತಿಷ್ಟು ಅಂತ ವಸೂಲಿ ಮಾಡಲಾಗುತ್ತದೆ. ಯಾಂತ್ರಿಕವಾಗಿ ಮಕ್ಕಳಿಗೆ ಬಲವಂತದ ಶಿಕ್ಷಣ ನೀಡಲಾಗುತ್ತದೆ, ಇದರಿಂದ ಇಂತಹ ವಿದ್ಯಾರ್ಥಿ ಉತ್ತಮ ಅಂಕಗಳನ್ನು ಗಳಿಸಬಹುದೇ ವಿನಹ ಆತನ ಭೌದ್ದಿಕ ಮಟ್ಟ ಖಂಡಿತಾ ಬೆಳೆಯಲಾರದು. ಮುಂದೆ ಆತ ಸಮಾಜ ಕಂಟಕನಾಗುವ ಮತ್ತು ಸಾಮಾಜಿಕ ಸಂಬಂಧಗಳ ಶೂಲೆಗೂ ಕಾರಣನಾಗಬಹುದು, ಆದರೂ ಈ ಪೋಷಕರಿಗೆ ಖಾಸಗಿ ಶಾಲೆಗಳೇ ಬೇಕು ಅಂದರೆ ಏನರ್ಥ?
ಈ ನಿಟ್ಟಿನಲ್ಲಿ ಸರ್ಕಾರಿ ಶಾಲೆಗಳು ಸುಧಾರಿಸಬೇಕಾದರೆ ಖಾಸಗಿ ಶಾಲೆಗಳಿಂದ ಪೋಷಕರ ಮನಸ್ಸನ್ನು ಸೆಳೆಯಬೇಕಾದರೆ ನಮ್ಮ ಸರ್ಕಾರಿ ಶಾಲೆ/ಕಾಲೇಜುಗಳಲ್ಲಿ ಕಾರ್ಯ ನಿರ್ವಹಿಸುವ ಶಿಕ್ಷಕರು ಗಳನ್ನು (ಕ್ಷಮಿಸಿ ಎಲ್ಲರನ್ನೂ ಅಲ್ಲ) ಹದ್ದುಬಸ್ತಿನಲ್ಲಿಡ ಬೇಕಾಗಿದೆ ಅವರಿಂದ ಪ್ರಾಮಾಣಿಕ ಸೇವೆಯನ್ನು ಪಡೆಯುವಲ್ಲಿ ಸರ್ಕಾರ ಗಮನ ಹರಿಸಬೇಕಿದೆ. ಕುಡಿದು ಶಾಲೆಗೆ ಬರುವ, ರಾಜಕೀಯ ಮಾಡುವ, ಕಾಮುಕ ವರ್ತನೆ ತೋರುವ, ಅಸಹಜ ಪ್ರವೃತ್ತಿ, ಸೋಮಾರಿತನ, ಅಶಿಸ್ತು ಇವುಗಳನ್ನು ಹೊಂದಿದ ಶಿಕ್ಷಕರಿಗೆ ಎಚ್ಚರಿಕೆ ನೀಡಿ ಸೇವೆಯಿಂದ ಮುಕ್ತ ಮಾಡುವ ಅಧಿಕಾರವನ್ನು ಸರ್ಕಾರ ಅಧಿಕಾರಿಗಳಿಗೆ ನೀಡಿದರೆ ಸರ್ಕಾರಿ ಶಾಲೆಯ ಆಕರ್ಷಣೆ ಉಳಿಯಬಹುದೇನೋ. ಅಗತ್ಯ ಬಿದ್ದರೆ ಇಂತಹ ಕಾರ್ಯಕ್ಕೆ ಒಂಬುಡ್ಸ್ ಮನ್ ಗಳನ್ನು ರಚಿಸಿ ದಲ್ಲಿ ಖಾಸಗಿ ಮತ್ತು ಸರ್ಕಾರಿ ಶಾಲೆಯ ಮೇಲೆ ನಿಯಂತ್ರಣ ಸಾಧಿಸಬಹುದು. ಇನ್ನೊಂದು ಮಾತು ಸಾಕಷ್ಟು ಸವಲತ್ತುಗಳನ್ನು/ಯೋಜನೆಗಳನ್ನು ಸರ್ಕಾರಿ ಶಾಲೆಗಳಿಗೆ ನೀಡುತ್ತಿದ್ದರೂ ಅನಿಯಮಿತವಾಗಿ ಖಾಸಗಿ ಆಂಗ್ಲ ಮಾಧ್ಯಮ ಶಾಲೆಗಳಿಗೆ ಅನುಮತಿ ನೀಡುತ್ತಿದೆ. ಹೀಗಾದರೆ ಶಿಕ್ಷಣ ವ್ಯವಸ್ಥೆ ಒಂದಲ್ಲ ಒಂದು ದಿನ ಸಂಪೂರ್ಣ ಖಾಸಗೀಕರಣ ಗೊಳ್ಳುವುದರಲ್ಲಿ ಅನುಮಾನವೇ ಇಲ್ಲ. ಆಗ ಉಳ್ಳವರಿಗೆ ಮಾತ್ರ ಶಿಕ್ಷಣ ಎಂಬಂತಾದರೆ ಗತಿಯೇನು?

Friday, June 11, 2010

OFFICIALS ON FOREIGN TOUR WHEN FARMERS IN DISTRESS!


Spl. Report ARKALGUD JAYAKUMAR
Arakalagud, Jun 11: Agricultural activities have picked up in the state following the advancement of South West Monsoons, fake seeds have been unearthed, farmers are distressed over distribution of fake fertilizers, but officials including Secretary and Commissioner of the State Agricultural Department are making merry on a China tour …!This was how AT Ramaswamy, former legislator who rose to fame as the President of the Joint House Committee on Illegal Land Encroachment, expressed his anguish over the Department of Agriculture at a press meet here on June11, Friday.Strongly criticizing the Agricultural Department officials for going on a study tour to China when they ought to be in the headquarters at this crucial juncture and oversee the present situation, he questioned the government sharply saying "How come the government permitted this tour? Isn’t the government interested in protecting the interests of farmers?"Stating that Muniappa, Secretary of the Department of Agriculture, Mudabi Commissioner and other departmental officials were on a China tour from May 30 to June 14, he questioned if this was the time to go on a tour.As monsoons are likely to be good this year, the department needs to gear up for the situation by supplying good quality seeds, fertilizers and other agricultural implements to the farmers, Ramaswamy said adding already thousands of tonnes of fake fertilizers have been found to be distributed to tobacco growers in the state.The fertilizer problem has also cropped up in several places, while fake seeds have been unearthed in Bellary and other places; he said adding it has also been found that seeds are being sold at higher prices fearlessly. "To note that the department heads are on a foreign tour in such a situation is nothing but unfortunate," he commented.
While it is well known that the Karnataka State Seed Corporation was a sinking ship, the officials went on a foreign tour after producing accounts to prove that the corporation had earned a profit of Rs 84 lakhs, he further alleged. This is nothing but an act of hitting at the bellies of farmers, Ramaswamy said and pointed out that it was owing to such reasons that agricultural yield was reducing in the state and nation every year.
Ramaswamy produced documents to prove how widespread irregularities prevailed in the supply of fertilizers, seeds, pesticides and other implements to farmers and alleged that the Department of Agriculture too had a role to play in providing false certification to seeds and in fixing their prices.He said the government was only shedding crocodile tears for the farmers and demanded a thorough probe into the irregularities and punishment to the guilty.
http://www.mangaloreheadlines.com/show-contents.php?id=6457

Sunday, June 6, 2010

ಜಾಗತಿಕ ಬಂಡವಾಳ; ಮುಂದೇನು ಕಾದಿದೆ ಗೊತ್ತಾ?



ಕಳೆದ ವಾರ ಹಾಸನದ ಬಳಿಯಿರುವ ಕಾರ್ಖಾನೆಯೊಂದರಿಂದ ತ್ಯಾಜ್ಯ ವಸ್ತು ಮತ್ತು ರಾಸಾಯನಿಕ, ಕೆರೆ ಹಾಗೂ ಜಮೀನಿಗೆ ಸೇರಿದ ಪರಿಣಾಮ ಬೆಳೆ ಸಂಪೂರ್ಣ ಹಾಳಾಗಿತ್ತು. ಅಧಿಕಾರಿಗಳ ಮಧ್ಯಸ್ಥಿಕೆಯಿಂದ ಬೆಳೆ ನಷ್ಟವಾಗಿದ್ದಕ್ಕೆ ನಷ್ಟ ಹೊಂದಿದ ರೈತರಿಗೆ ತಲಾ 20ಸಾವಿರ ರೂಪಾಯಿಗಳ ಪರಿಹಾರ ವಿತರಣೆಗೆ ತೀರ್ಮಾನಕ್ಕೆ ಬರಲಾಯಿತು! ಮತ್ತೆ ಮುಂದಿನ ಸಾರಿಯೂ ಹೀಗೆ ಆದರೆ ಮತ್ತೆ ಪರಿಹಾರ ಕೊಡಬೇಕೆನ್ನುವ ಕರಾರಿಗೂ ಬರಲಾಯಿತು. ಇಂತಹದ್ದೊಂದು ಅವಿವೇಕದ ವಿಚಾರ ಕೇಳಿ ಬೇಸರವಾಯ್ತು. ಅಲ್ಲ ಸ್ವಾಮಿ ಕೈಗಾರಿಕೆಗಳ ತ್ಯಾಜ್ಯ ರಾಸಾಯನಿಕಗಳು ಭೂಮಿಯಲ್ಲಿ ನೀರಿನಲ್ಲಿ ಬೆರೆತರೆ ಶಾಶ್ವತವಾಗಿ ಮಣ್ಣಿನ ಫಲವತ್ತತೆಯನ್ನೇ ಹಾಳು ಮಾಡಿಬಿಡುತ್ತದೆ, ಇದು ಪರಿಹಾರದಿಂದ ಬಗೆ ಹರಿಯುವ ಸಮಸ್ಯೆಯೇ? ಅಂತರ್ಜಲವನ್ನು ಹಾಳುಗೆಡವುವ ತ್ಯಾಜ್ಯ ಜನ-ಜಾನುವಾರುಗಳ ಮೇಲೆ ಎಂತಹ ಪರಿಣಾಮ ಬೀರಿತು?ಮುಂದಿನ ತಲೆಮಾರಿನ ಮೇಲೆ ಇಂತಹವುಗಳಿಂದ ಆಗುವ ಪರಿಣಾಮಗಳೇನು? ಇದನ್ನು ಪ್ರಶ್ನಿಸುವವರ ಮೇಲೆ ಆಗುತ್ತಿರುವ ದೌರ್ಜನ್ಯಗಳೇನು? ಪ್ರಜ್ಞಾವಂತರನ್ನ ಹತ್ತಿಕ್ಕಿದರೆ ಮುಂದಿನ ದಿನಗಳಲ್ಲಿ ಎದುರಾಗುವ ಭೀಕರೆತೆಯನ್ನು ತೊಡೆಯುವುದಾದರೂ ಹೇಗೆ? ಎಂಬ ಪ್ರಶ್ನೆಗಳು ಧುತ್ತನೆ ಎದುರಾಗುತ್ತವೆ.ಇವು ನಾಲ್ಕು ಕಾಸಿನ ಪರಿಹಾರದಿಂದ ಬಗೆಹರಿಯುವಂತಹುದ್ದೆ? ಸರ್ಕಾರಕ್ಕೆ ರೈತರ ಹಿತಾಸಕ್ತಿ ಕುರಿತು ಯಾವ ಕಾಳಜಿ ಪ್ರದರ್ಶಿಸುತ್ತಿದೆ? ಅಷ್ಟಕ್ಕೂ ಇಂತಹ ಸಮಸ್ಯೆಗಳು ಎದುರಾದಾಗ ಪರಿಸರ ಇಲಾಖೆ-ಭೂವಿಜ್ಞಾನ-ಪೋಲೀಸ್-ಕಂದಾಯ ಇಲಾಖೆ ಅಧಿಕಾರಿಗಳು ಎಷ್ಟರ ಮಟ್ಟಿಗೆ ಕಾರ್ಯ ನಿರ್ವಹಿಸುತ್ತಿದ್ದಾರೆ? ಯಾರ ಹೇಸಿಗೆಯನ್ನು ತಿಂದು ಬದುಕುತ್ತಿದ್ದಾರೆ ಎಂದು ಪ್ರಶ್ನೆ ಮಾಡುವುದು ಅನಿವಾರ್ಯವಾಗುತ್ತದೆ. ಇದು ಹಾಸನದ ಕಥೆ ಮಾತ್ರವಲ್ಲ ಆರ್ಥಿಕ ವಲಯಗಳನ್ನು ಹೊಂದಿದ ರಾಜ್ಯದ ಎಲ್ಲಾ ಜಿಲ್ಲೆಗಳ ಕಥೆಯೂ ಆಗಿರುವುದು ದುರಂತದ ಸಂಗತಿ.
ಕೈಗಾರಿಕೆಗಳು ಬೆಳೆದಂತೆಲ್ಲಾ ರಾಜ್ಯದ ಮೂಲೆ ಮೂಲೆಗಳಲ್ಲೂ ಆರ್ಥಿಕ ವಲಯಗಳು ಸ್ಥಾಪನೆಯಾಗುತ್ತಿವೆ. ಸದರಿ ವಲಯದ ಆಸುಪಾಸಿನಲ್ಲಿ ಬರುವ ಪರಿಸರದ ಮೇಲೆ ಪ್ರತಿ ನಿತ್ಯ ಅತ್ಯಾಚಾರ ನಡೆಯುತ್ತಲೆ ಇದೆ. ಬಂಡವಾಳಶಾಹಿಗಳು ರೈತರನ್ನು, ಹೋರಾಟದ ಧ್ವನಿಗಳನ್ನು ರಾಜಕಾರಣಿಗಳು ಮತ್ತು ಆದಿಕಾರಸ್ಥರ ಮೂಲಕ ವ್ಯವಸ್ಥಿತವಾಗಿ ಮಟ್ಟಹಾಕಲಾರಂಬಿಸಿದ್ದಾರೆ ಪರಿಣಾಮ ಪ್ರಾಕೃತಿಕ ಅತ್ಯಾಚಾರವನ್ನು ಸಹಿಸಿಕೊಂಡು ಸಿಕ್ಕಷ್ಟು ಹಣದಲ್ಲಿ ತೃಪ್ತಿ ಪಡಬೇಕಾದ ಅನಿವಾರ್ಯತೆ ರೈತನಿಗೆ ಎದುರಾಗಿದೆ. ಈಗ ಯೋಚಿಸಬೇಕಾದ ಸಂಧರ್ಭ ಬಂದಿದೆ, ಮೊನ್ನೆ ಯಷ್ಟೇ ಬೆಂಗಳೂರಿನಲ್ಲಿ ರಾಜ್ಯ ಸರ್ಕಾರ ಯಶಸ್ವಿಯಾಗಿ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶವನ್ನು ಯಶಸ್ವಿಯಾಗಿ ನಡೆಸಿದೆ. ನಿರೀಕ್ಷಿತ ಪ್ರಮಾಣಕ್ಕಿಂತ ಹೆಚ್ಚಿನ ಪ್ರಮಾಣದ ಬಂಡವಾಳ ಈ ಭಾರಿ ರಾಜ್ಯಕ್ಕೆ ಹರಿದು ಬಂದಿದೆ. ಒಂದು ರೀತಿಯಲ್ಲಿ ಉದ್ಯಮಗಳು ಬಂದಿರುವುದರಿಂದ ಉದ್ಯೋಗದ ಪ್ರಮಾಣ ಹೆಚ್ಚುತ್ತದೆ, ಊರುಗಳು ಅಭಿವೃದ್ದಿಯಾಗುತ್ತವೆ, ಮೂಲ ಭೂತ ಸೌಕರ್ಯ ಅಭಿವೃದ್ದಿಯಾಗುತ್ತೆ , ಆರ್ಥಿಕ ಸ್ಥಿತಿಗತಿ ಉತ್ತಮ ಗೊಳ್ಳುತ್ತದೆ ಎಂದು ಸರ್ಕಾರ ಹೇಳುತ್ತಿದೆ. ಆದರೆ ನಿಜಕ್ಕೂ ಬೃಹತ್ ಪ್ರಮಾಣದ ಬಂಡವಾಳ ಹೂಡಿಕೆಯಿಂದ ರೈತರಿಗೆ, ಜನಸಾಮಾನ್ಯರಿಗೆ ಎದುರಾಗುವ ಸಮಸ್ಯೆಗಳು ಒಂದೇ ಎರಡೆ?
ಇರಲಿ ಅದಕ್ಕೂ ಮುನ್ನ ಮೊನ್ನೆ ನಡೆದ ಬಂಡವಾಳ ಹೂಡಿಕೆದಾರರ ಸಮಾವೇಶದ ಮುಖ್ಯಾಂಶಗಳನ್ನು ನೋಡೋಣ.ಸಮಾವೇಶದ 2ದಿನಗಳಲ್ಲಿ ಹರಿದು ಬಂದ ಬಂಡವಾಳದ ಒಟ್ಟು ಪ್ರಮಾಣ 4ಲಕ್ಷ ಕೋಟಿ, ಉದ್ಯಮ ಸ್ಥಾಪನೆಗೆ ಸರ್ಕಾರದ ಜತೆ ಒಡಂಬಡಿಕೆ ಮಾಡಿಕೊಂಡ ಕಂಪನಿಗಳ ಸಂಖ್ಯೆ 360, ರಾಜ್ಯದಲ್ಲಿ ಬಂಡವಾಳ ಹೂಡಿಕೆ ಕಂಡ ಒಟ್ಟು ವಲಯಗಳು 12, ಈ ಎಲ್ಲ ಯೋಜನೆಗಳು ಜಾರಿಗೆ ಬಂದರೆ ರಾಜ್ಯದಲ್ಲಿ ಸೃಷ್ಟಿಯಾಗುವ ೊಟ್ಟು ಉದ್ಯೋಗಾವಕಾಶ 8.50ಲಕ್ಷ,ಒಪ್ಪಂದ ಆಗಿರುವ ಉದ್ಯಮಗಳು ಅಸ್ತಿತ್ವಕ್ಕೆ ಬೇಕಾದ ಅವಧಿ 3-5ವರ್ಷ, ಒಂದೇ ಕಂಪನಿ ಹೂಡಿದ ಅತೀ ಹೆಚ್ಚು ಬಂಡವಾಳದ ಮೊತ್ತ 36ಸಾವಿರ ಕೋಟಿ.ವಿವಿಧ ಕ್ಷೇತ್ರಗಳಲ್ಲಿ ಆಗಲಿರುವ ಹೂಡಿಕೆ ಹೀಗಿದೆ. ಆಟೋಮೊಬೈಲ್-113ಕೋಟಿ, ಸಿಮೆಂಟ್-36991ಕೋಟಿ, ಇಂಜಿನಿಯರಿಂಗ್-320ಕೋಟಿ, ಆಹಾರ ಸಂಸ್ಕರಣೆ-1121ಕೋಟಿ,ಆಸ್ಪತ್ರೆ-1249ಕೋಟಿ, ಹೋಟೆಲ್ ಉದ್ಯಮ-1441ಕೋಟಿ, ಮೂಲ ಸೌಕರ್ಯ-1282ಕೋಟಿ, ಉಕ್ಕು-2,21,344ಕೋಟಿ. ಈ ಪೈಕಿ ಉಕ್ಕು ಉದ್ಯಮಕ್ಕೆ ಮೊದಲ ಪ್ರಾಶಸ್ತ್ಯ! ಅಲ್ಲಿಗೆ ಬಳ್ಳಾರಿ ಜನರ ಬದುಕು ಮುಗಿದಂತೆ!ಇವತ್ತು ಏನು 12ವಲಯಗಳ ಜತೆ ಒಪ್ಪಂದವಾಗಿದೆ, ಇವುಗಳಿಗೆ ಜಮೀನು ಕೊಡುವಾಗ ಸರ್ಕಾರ ಕೃಷಿ ಭೂಮಿ ಹೊರತು ಪಡಿಸಿ ಜಾಗ ನೀಡುವ ಮಾತಾಡಿದೆ ಇದು ನಿಜಕ್ಕೂ ನಂಬುವ ಮಾತಾ? ಉದ್ಯೋಗ ಸೃಷ್ಟಿ ಎನ್ನುತ್ತಾರೆ ಯಾರಿಗೆ ಸ್ವಾಮಿ ಸ್ಥಳೀಯರಿಗೆ ಉದ್ಯೋಗ ಸಿಕ್ಕುತ್ತೆ, ಇವತ್ತು ರಾಜ್ಯದಾಧ್ಯಂತ ಸ್ಥಾಪಿತವಾಗಿರುವ ುದ್ಯಮಗಳಲ್ಲಿ ಬಹುಪಾಲು ಮುಖ್ಯ ಸ್ಥಾನಗಳಲ್ಲಿ ಕೆಲಸ ನಿರ್ವಹಿಸುತ್ತಿರುವವರು ಉತ್ತರ ಭಾರತೀಯರು ಮತ್ತು ಆಸುಪಾಸಿನ ರಾಜ್ಯಗಳವರು, ಖಾಸಗಿ ವಲಯಗಳಲ್ಲಿ ಕನ್ನಡಿಗರು ಅಲ್ಪಸಂಖ್ಯಾತರಾಗಿದ್ದಾರೆ. ಕಾರ್ಮಿಕ ವೃತ್ತಿಗೂ ಬಿಹಾರಿಗಳು, ಒರಿಸ್ಸಾದವರು,ಬಂಗಾಳಿಗಳನ್ನು ಕರೆತರಲಾಗುತ್ತಿದೆ. ಒಂದು ಕಡೆ ರೈತರ ಪರ ಮಾತಾನಾಡುವ ಸರ್ಕಾರ ಬಿಟಿ ತಳಿಗೆ ಅವಕಾಶ ನೀಡುವ ಹಲವು ಒಡಂಬಡಿಕೆಗಳಿಗೆ ಸಹಿಹಾಕಿದೆ. ಇತ್ತು ಉದ್ಯಮಗಳಿಗೆ ಒತ್ತು ನೀಡಿದ ಪರಿಣಾಮ ಮುಂದಿನ ದಿನಗಳಲ್ಲಿ ಆಹಾರದ ಸಮಸ್ಯೆ ಎದುರಾಗುವುದು ಖಚಿತ,ಅತ್ತ ಕೃಷಿ ಜಮೀನೆ ಇಲ್ಲ, ಇತ್ತ ಕೂಲಿ ಕೆಲಸವೂ ಇಲ್ಲ ಎಂದರೆ ರೈತ ಬದುಕುವುದು ಹೇಗೆ?
1994ರಲ್ಲಿ ಆರ್ಥಿಕ ಉದಾರೀಕರಣ ನೀತಿ ಜಾರಿಗೆ ಬಂದಾಗಿನಿಂದ ಮೊದಲ ಮತ್ತು ಎರಡನೇ ಹಂತದಲ್ಲಿ ಬಂಡವಾಳ ಶಾಹಿಗಳಿಗಾಗಿ ರೈತರು ಕೃಷಿ ಜಮೀನುಗಳನ್ನು ವಶಪಡಿಸಿ ಕೊಳ್ಳಲಾಗಿದೆ. ಇಂತಹ ಜಮೀನುಗಳನ್ನು ಕಂಪನಿಗಳ ಹೆಸರಿನಲ್ಲಿ ಪಡೆಯುವ ಮದ್ಯವರ್ತಿಗಳು 1ಕ್ಕೆ 10ಪಟ್ಟು ಬೆಲೆಗೆ ಅಕ್ರಮವಾಗಿ ಮಾರಿ ಕೊಳ್ಳುತ್ತಿವೆ. ಮೈಸೂರು-ಬೆಂಗಳೂರು ಕಾರಿಡಾರ್ ರಸ್ತೆಯಲ್ಲಿ ಅಶೋಕ್ ಖೇಣಿ ಇಂತಹದ್ದೊಂದು ಕೇಡಿತನ ಮಾಡಿದ್ದಾನೆಂಬ ಆರೋಪ ಜಗಜ್ಜಾಹೀರಾಗಿದೆ. ಇವರ ಜೊತೆಗೆ ರಾಜ್ಯ ಸಂಪುಟದಲ್ಲಿ ಮಂತ್ರಿಯಾಗಿದ್ದ ಕೃಷ್ಣಯ್ಯ ಶೆಟ್ಟಿಯ ಮೇಲೂ ಇಂತಹುದೇ ಗುರುತರವಾದ ಆಪಾದನೆಯಿದೆ. ಹಲವೆಡೆ ಭೂಸ್ವಾಧೀನ ವಿರೋಧಿಸಿ ರೈತರು ಪ್ರತಿಭಟನೆ ಮಾಡುತ್ತಿದ್ದಾರೆ, ಭೂಮಿ ನೀಡಿದವರಿಗೆ ಸರಿಯಾಗಿ ದುಡ್ಡು ಸಿಗುತ್ತಿಲ್ಲ, ರೈತ ಹೊಲ ಮನೆ ಮಾರಿಕೊಂಡು ಗುಳೆ ಹೋಗಬೇಕಾದ ಪರಿಸ್ಥಿತಿ ಎದುರಾಗಿದೆ. ನಗರ ಪ್ರದೇಶದ ಬದುಕು ತುಟ್ಟಿಯಾಗಿದೆ, ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸುವುದು ದುಸ್ತರವಾಗಿದೆ. ಈ ನಡುವೆ ಕೂಲಿ ಕಾರ್ಮಿಕರು ಕೂಡ ರಾಜ್ಯಕ್ಕೆ ಹೊರ ರಾಜ್ಯಗಳಿಂದ ಆಮದಾಗುತ್ತಿದ್ದಾರೆ, ನಮ್ಮವರಿಗೆ ಕೂಲಿ ಕೆಲಸವು ಗತಿ ಇಲ್ಲದಂತಾಗಿದೆ. ಕೈಗಾರಿಕೆಗಳು ಬೆಳೆದಂತೆ ನಗರೀಕರಣವೂ ಬೆಳೆಯುತ್ತಿದೆ, ಮೂಲ ಸೌಕರ್ಯಗಳ ಅವಶ್ಯಕತೆ ಹೆಚ್ಚಿದ್ದು ಅವುಗಳ ಸಮರ್ಪಕ ಪೂರೈಕೆ ಸಾಧ್ಯವಾಗುತ್ತಿಲ್ಲ, ಅರಣ್ಯದೊಳಗಣ ರಸ್ತೆಯ ಪರಿಣಾಮ ಪ್ರಾಣಿ ಸಂಕುಲಕ್ಕೆ ಅಪಾಯ ಎದುರಾಗಿದೆ ಜನ-ಜಾನುವಾರು ಕುಡಿಯುವ ನೀರು ಕಲುಷಿತವಾಗಿದೆ ಇಲ್ಲವೆ ಲಭ್ಯತೆ ಕಡಿಮೆಯಾಗುತ್ತಿದೆ. ಬದುಕಿನ ಮಟ್ಟ ಏರುತ್ತಿದೆ,ಕೊಳ್ಳುಬಾಕ ಸಂಸ್ಕೃತಿ ಜನಸಾಮಾನ್ಯರ ಬದುಕನ್ನು ಹದಗೆಡಿಸಿದೆ. ದೇಶೀಯ ತಂತ್ರಜ್ಞಾನ, ಸಾಂಪ್ರದಾಯಿಕ ಕೃಷಿ, ಸಾಮಾಜಿಕ ಸಂಬಂಧಗಳು ನೆಲೆ ಕಳೆದುಕೊಳ್ಳುತ್ತಿವೆ.ಈಗ ಇರುವ ಉದ್ಯಮಗಳಿಗೆ ಜಮೀನು ನೀಡುವುದು ದುಸ್ತರವಾಗಿದೆ, ವಿದ್ಯುತ್-ರಸ್ತೆ-ನೀರುಗಳಂತಹ ವ್ಯವಸ್ತೆಯನ್ನೆ ಸುಧಾರಿಸಲು ಸಾಧ್ಯವಾಗಿಲ್ಲ, ಮುಂದಿನ ದಿನಗಳಲ್ಲಿ ಸೌಕರ್ಯದ ಹೆಸರಿನಲ್ಲಿ ಪ್ರತಿಯೊಂದು ಸಾರ್ವಜನಿಕ ವ್ಯವಸ್ಥೆಯೂ ಖಾಸಗೀರಕರಣ ಗೊಳ್ಳಲಿದೆ, ಜನಸಾಮಾನ್ಯರ ಮೇಲಿನ ತೆರಿಗೆ ಹೊರೆ ಅಧಿಕವಾಗಲಿದೆ, ಅನ್ಯ ಭಾಷಿಕರ ಹಾವಲಿ ಜಾಸ್ತಿಯಾಗಲಿದೆ, ನಮ್ಮ ಸಂಸ್ಕೃತಿಗೆ, ಭಾಷೆಗೆ, ನಮ್ಮ ವಿಚಾರಗಳಿಗೆ ಧಕ್ಕೆ ಒದಗಲಿದೆ. ಹೀಗಿರುವಾಗ ಈ ಬೃಹತ್ ಪ್ರಮಾಣದ ಹೂಡಿಕೆ ನಮಗೆ ಬೇಕಿತ್ತಾ?

ಮಾಧ್ಯಮದ ಅಂಗಡಿಗಳು ಮತ್ತು ಪತ್ರಕರ್ತರು!

ಕಾಸ್ಟ್ ಕಟಿಂಗ್ ಮತ್ತು ನಿಶ್ಚಿತ ಆದಾಯದ ಕೊರತೆಯಿಂದ ಮಾಧ್ಯಮ ಸಂಸ್ಥೆಗಳು ಪತ್ರಕರ್ತರನ್ನು ಪರ್ಫಾರ್ಮೆನ್ಸ್ ವೀಕ್ ಎಂಬ ಕಾರಣ ನೀಡಿ ತೆಗೆಯುವ ಪ್ರಕ್ರಿಯೆ ಈಗ ನಡೆಯುತ್ತ...