Sunday, April 3, 2011

ದೇಶಪ್ರೇಮವೆಂದರೆ ಕ್ರಿಕೆಟ್ ಆಟವೇ?



       ಅದು 1700ನೇ ಇಸ್ವಿ..ಮೊಘಲರು ಮತ್ತು ಪೋರ್ಚುಗೀಸರೂ ಬಂದು ಹೋದ ನಂತರ ಭಾರತಕ್ಕೆ ಬಂದ ಬ್ರಿಟೀಷರು ತಮ್ಮ ವ್ಯಾಪಾರ-ವಹಿವಾಟಿನ ಜೊತೆ ವಿದೇಶಿ ಆಟ ಕ್ರಿಕೇಟ್ ಅನ್ನು ಸಹಾ ಭಾರತಕ್ಕೆ ತಂದಿದ್ದರು. ಹಂತಹಂತವಾಗಿ ಬಂದು ತಳವೂರಿದ ಕೆಂಪುಮೂತಿಯ ಆಂಗ್ಲರು ಕ್ರಿಕೆಟ್ ಅನ್ನು ಸಹಾ ಭಾರತೀಯರಿಗೆ ಪರಿಚಯಿಸಿದರು. ಹೀಗೆ ನಮ್ಮ ನೆಲಕ್ಕೆ ಕ್ರಿಕೆಟ್ ತಂದ ಆಂಗ್ಲರು ಒಮ್ಮೆಯೂ ವಿಶ್ವ ಚಾಂಪಿಯನ್ ಆಗಲಿಲ್ಲ..ಆದರೆ ಭಾರತ 2ನೇ ಭಾರಿಗೆ ತನ್ನ ಚಕ್ರಾಧಿಪತ್ಯವನ್ನು ಸ್ಥಾಪಿಸಿದೆ. ಹೀಗೆ ನಮ್ಮ ದೇಶದ ಸಾಂಪ್ರದಾಯಿಕ ಆಟವೂ ಅಲ್ಲದ ಕ್ರಿಕೆಟ್ ನಲ್ಲಿ ಭಾರತ ಮೆರೆದದ್ದು ಹೇಗೆ? ಅದು ಕ್ರಿಕೆಟ್ ನಲ್ಲಿ ಸಾಗಿ ಬಂದ ಹಾದಿ ಏನು? ದೇಶದ ಕ್ರಿಕೆಟ್ ಆಟಕ್ಕೂ ದೇಶಭಕ್ತಿಗೂ ಏನು ಸಂಬಂಧ? ಸಾಂಪ್ರದಾಯಿಕ ಕ್ರೀಡೆಗಳು ಯಾಕೆ ದೇಶಪ್ರೇಮದ ಸಂಕೇತವಾಗಿ ಉಳಿದಿಲ್ಲ? ಬದಲಾದ ಮನಸ್ಥಿತಿಯಲ್ಲಿ ಕ್ರಿಕೆಟ್ ನ ಪ್ರಾಮುಖ್ಯತೆ ಏನು ಎಂಬ ಪ್ರಶ್ನೆಗಳು ಈ ಸಂಧರ್ಭದಲ್ಲಿ ಸಹಜವಾಗಿ ಬಂದು ನಿಲ್ಲುತ್ತಿವೆ. ಈ ಪ್ರಶ್ನೆಗಳಿಗೆ ಉತ್ತರ ಕಂಡು ಕೊಳ್ಳುವ ನಿಟ್ಟಿನಲ್ಲಿ ಸಾಗುವ ಮುನ್ನ ದೇಸೀ ಕ್ರಿಕೆಟ್ ನ ಒಂದು ಸಣ್ಣ ಅವಲೋಕನ ಮಾಡೋಣ.

           ಯುಗಾದಿಯ ಮುನ್ನಾ ದಿನ ಧೋನಿ ಪಡೆ ನಿರೀಕ್ಷಿತ ರೀತಿಯಲ್ಲಿ ಗೆಲುವು ದಾಖಲಿಸುವ ಮೂಲಕ ಕೋಟ್ಯಾಂತರ ಕ್ರಿಕೆಟ್ ಪ್ರೇಮಿಗಳಲ್ಲಿ ಪುಳಕ ಮೂಡಿಸಿದೆ. ಕ್ರಿಕೆಟ್ ಜಗತ್ತಿಗೆ ಅದ್ವಿತೀಯನಾಗಿ ಹೆಜ್ಜೆ ಗುರುತನ್ನು ಎರಡನೇ ಭಾರಿಗೆ ದಾಖಲಿಸಿದೆ. ಇವತ್ತು ಕ್ರಿಕೇಟ್ ಜಗತ್ತಿನ ಅತ್ಯಂತ ಶ್ರೀಮಂತ ಆಟ, ಜಾಗತಿಕವಾಗಿ ಕ್ರಿಕೆಟ್ ಆಟಕ್ಕೆ ಮಿಲಿಯನ್ ಲೆಕ್ಕದಲ್ಲಿ ಹಣದ ಹೊಳೆ ಹರಿಯುತ್ತದೆ. ಇಂತಿಪ್ಪ ಕ್ರಿಕೆಟ್ ಭಾರತದಲ್ಲಿ ಆರಂಭಗೊಂಡಿದ್ದು 1700ರಲ್ಲೇ ಆದರೂ ಮೊದಲ ಕ್ರಿಕೆಟ್ ಮ್ಯಾಚ್ ನಡೆದದ್ದು ಮಾತ್ರ 1721ರಲ್ಲಿ. 1848ರಲ್ಲಿ ಪಾರ್ಸಿ ಸಮುದಾಯದವರು ಬಾಂಬೆಯಲ್ಲಿ ಓರಿಯಂಟಲ್ ಕ್ರಿಕೆಟ್ ಕ್ಲಬ್ ಸ್ಥಾಪಿಸಿ ಕ್ರಿಕೆಟ್ ಆಟದ ಪ್ರೋತ್ಸಾಹಕ್ಕೆ ಮುನ್ನುಡಿ ಬರೆದರು. ಕಾಲಾನುಕ್ರಮದಲ್ಲಿ 1877ರ ಸುಮಾರಿಗೆ ಯೂರೋಪಿಯನ್ನರು ಭಾರತದಲ್ಲಿದ್ದ ಪಾರ್ಸಿಗಳನ್ನ (ಆಗಿನ್ನೂ ಅಖಂಡ ಭಾರತದ ಕಲ್ಪನೆ ಇರಲಿಲ್ಲ ಹಾಗಾಗಿ ಭಾರತೀಯ ಪದದ ಬಳಕೆ ಸರಿ ಕಾಣಲಾರದೇನೋ). ಮುಂದೆ 1912ರ ಹೊತ್ತಿಗೆ ಬಾಂಬೆಯ ಪಾರ್ಸಿಗಳು, ಮುಸ್ಲಿಂರು, ಹಿಂದೂಗಳು ಮತ್ತು ಸಿಖ್ಖರು ಪ್ರತ್ಯೇಕ ತಂಡಗಳನ್ನು ಮಾಡಿಕೊಂಡು ಯೂರೋಪಿಯನ್ನರ ಜೊತೆ ಕ್ರಿಕೆಟ್ ಆಡಲು ಆರಂಬಿಸಿದರು. 19ನೇ ಶತಮಾನದಲ್ಲಿ ಅನೇಕ ಭಾರತೀಯ ಪ್ರತಿಭಾವಂತ ಕ್ರಿಕೆಟಿಗರು ಇಂಗ್ಲೀಷ್ ಕ್ರಿಕೆಟ್ ಟೀಂ ನಲ್ಲಿ ಆಡಲಾರಂಭಿಸಿದರು, ಇವರಲ್ಲಿ ಪ್ರಮುಖರು ರಣಜಿತ್ ಸಿಂಹಜೀ ಮತ್ತು ಕೆ ಎಸ್ ದುಲೀಪ್ ಸಿಂಹಜೀ. ಇವರ ಆಟದ ಸೊಗಸು ಮತ್ತು ಸಾಧನೆಯೇ ಮುಂದೆ 'ರಣಜಿ ಟ್ರೋಫಿ' ಹಾಗೂ ದುಲೀಪ್ ಟ್ರೋಫಿ ಎಂಬ ಸರಣಿ ಟೆಸ್ಟ್ ಮ್ಯಾಚುಗಳ ಉಗಮಕ್ಕೆ ನಾಂದಿ ಹಾಡಿತು. ಇಂದಿಗೂ ರಣಜಿ ಟ್ರೋಫಿ ಮತ್ತು ದುಲೀಪ್ ಟ್ರೋಪಿಗಾಗಿ ಕ್ರಿಕೆಟ್ ತಂಡಗಳು ಸೆಣೆಸುವುದನ್ನು ಕಾಣಬಹುದು. 1911ರಲ್ಲಿ ಭಾರತದಿಂದ ಅಧಿಕೃತವಾಗಿ ಇಂಗ್ಲೆಂಡಿಗೆ ಹೋದ ಕ್ರಿಕೆಟ್ ತಂಡಕ್ಕೆ ಇಂಗ್ಲೀಷ್ ಕ್ರಿಕೆಟ್ ಟೀಮ್ ಜೊತೆ ಆಡುವ ಸದವಕಾಶ ಸಿಗದೇ ನಿರಾಶೆ ಅನುಭವಿಸ ಬೇಕಾಯಿತು  ಮತ್ತು ಇಂಗ್ಲೀಷ್ ಕೌಂಟಿ ಜೊತೆ ಆಟವಾಡಿ ಅಷ್ಟಕ್ಕೆ ತೃಪ್ತಿ ಪಟ್ಟುಕೊಳ್ಳಬೇಕಾಯಿತು. ನಂತರ 1926ರಲ್ಲಿ ಇಂಪೀರಿಯಲ್ ಕ್ರಿಕೆಟ್ ಕೌನ್ಸಿಲ್ ನಿಂದ ಆಹ್ವಾನಿತಗೊಂಡ ಭಾರತ ಕ್ರಿಕೆಟ್ ತಂಡ   ಸಿ ಕೆ ನಾಯ್ಡು ನಾಯಕತ್ವದಲ್ಲಿ ಮೊದಲ ಟೆಸ್ಟ್ ಪಂದ್ಯಗಳನ್ನು ಆಡಲು ಆರಂಭಿಸಿತು. ಆದರೆ ಗೆಲುವು ಬಿಸಿಲ್ಗುದುರೆಯಾಗಿ ಪರಿಣಮಿಸಿತ್ತು. 3ದಿನಗಳು ನಡೆಯುತ್ತಿದ್ದ ಮ್ಯಾಚುಗಳಲ್ಲಿ ರನ್ ಗಳಿಸಲು ಹರಸಾಹಸ ಮಾಡಬೇಕಾಗುತ್ತಿತ್ತ್ಗು.ಸ್ವಾತಂತ್ರ್ಯ ನಂತರ 1948ರಲ್ಲಿ ಅಧಿಕೃತವಾಗಿ ಆಸ್ಟ್ರೇಲಿಯ ವಿರುದ್ದ ಸರಣಿಯಲ್ಲೂ ಭಾರತ 4-0ಸಾಧನೆ ಮಾಡಿತ್ತು. 
            ಆದರೆ ಭಾರತದ ಪಾಲಿಗೆ ಸಂತಸದ ದಿನಗಳು ಬರಲೇ ಇಲ್ಲ ಅಂತಲ್ಲ, 1952ರಲ್ಲಿ ಮದ್ರಾಸ್ ನಲ್ಲಿ ಕ್ರಿಕೆಟ್ ತವರೂರಿನ ಇಂಗ್ಲೆಂಡ್ ತಂಡದ ವಿರುದ್ದ ಅಭೂತ ಪೂರ್ವ ಜಯವನ್ನು ಟೆಸ್ಟ್ ನಲ್ಲಿ ಮೊದಲ ಭಾರಿಗೆ ದಾಖಲಿಸಲಾಯಿತು. ನಂತರ ಗೆಲುವಿನ ಸಾಧನೆ ಮುಂದುವರೆಸಿದ ತಂಡ ಪಾಕೀಸ್ತಾನ, ನ್ಯೂಜಿಲೆಂಡ್ ಗಳ ವಿರುದ್ದವೂ ವಿಜಯ ಕಹಳೆಯನ್ನು ಮೊಳಗಿಸಿದ್ದು ಈಗ ಇತಿಹಾಸ. 1971ರಲ್ಲಿ ಆರಂಭಗೊಂಡ ಒಂದು ದಿನದ ಸೀಮಿತ ಓವರ್ ನ ಕ್ರಿಕೆಟ್ ಪಂದ್ಯಗಳು ಆರಂಭಗೊಂಡವು, 1975ರಲ್ಲಿ ಮೊದಲ ವಿಶ್ವಕಪ್ ಪಂದ್ಯ ನಡೆದಾಗ ಭಾರತ ಅಲ್ಲಿಯೂ ಇಂಗ್ಲೆಂಡನ್ನು ಎದುರಿಸಿತ್ತು. ಮುಂದೆ 1983ರಲ್ಲಿ ಪ್ರುಡೆನ್ಸಿಯಲ್ ವಿಶ್ವಕಪ್ ಅನ್ನು ಕಪಿಲ್ ದೇವ್ ನೇತೃತ್ವದಲ್ಲಿ ಭಾರತ ತನ್ನದಾಗಿಸಿಕೊಂಡು ಐತಿಹಾಸಿಕ ದಾಖಲೆ ನಿರ್ಮಿಸಿತು. ಈಗ 28ವರ್ಷಗಳ ನಂತರ ಕಪ್ತಾನ ಮಹೇಂದ್ರ ಸಿಂಗ್ ದೋನಿ ನಾಯಕತ್ವದಲ್ಲಿ ಪುನಹ ಕಪ್ ಪಡೆಯುವ ಮೂಲಕ ಕ್ರಿಕೆಟ್ ಜಗತ್ತಿನಲ್ಲಿ ದಿಗ್ವಿಜಯ ದಾಖಲಿಸಿದೆ. 
             ಭಾರತದ ರಾಷ್ಟ್ರೀಯ ಕ್ರೀಡೆ ಹಾಕಿ, ಆದರೆ ದೇಶದಲ್ಲಿ ಅತೀ ಹೆಚ್ಚು ಜನಪ್ರಿಯವಾಗಿರುವುದು ಕ್ರಿಕೆಟ್ ಅದಕ್ಕೆ ಕಾರಣ ಕ್ರಿಕೆಟ್ ನ ಜನಪ್ರಿಯತೆ. ಇವತ್ತು ಕ್ರಿಕೆಟ್ ಒಂದು ಅಂತರ ರಾಷ್ಟ್ರೀಯ ಕ್ರೀಡೆ, ಅದು ಸೋಮಾರಿಗಳ ಆಟ, 12ಜನ ಮೂರ್ಖರು ಆಡುವ ಆಟ ಎಂದೆಲ್ಲ ಜರಿದರೂ ಕ್ರಿಕೆಟ್ ನ ಪ್ರಾಶಸ್ತ್ಯ ಕಳೆದುಕೊಂಡಿಲ್ಲ. ಕ್ರಿಕೆಟ್ ಗೆ ಮಿಲಿಯನ್ ಡಾಲರ್ ವ್ಯವಹಾರ ಕುದುರಿಸುವ ಛಾತಿಯಿದೆ ಹಾಗಂತಲೇ ಅದು ಜಗತ್ತಿನ ಬಹುತೇಕ ಮನೆಗಳ ಅಂಗಳಕ್ಕೆ ಕ್ರಿಕೆಟ್ ಅನ್ನು ಜಾಹೀರಾತಿನ ಮೂಲಕ ತಲುಪಿಸುತ್ತಿದೆ. ಬಹುಶ ಕ್ರಿಡೆಗಳಲ್ಲಿ ಬೇರೆ ದೇಶಗಳೊಂದಿಗೆ ಭಾವನಾತ್ಮಕವಾಗಿ ಬೆಸೆದುಕೊಳ್ಳಲು ಕ್ರಿಕೆಟ್ ಮೂಲಕ ಸಾಧ್ಯವಾಗಿರುವುದರಿಂದ ಮತ್ತು ದೇಶದ ವಿರೋಧಿ ರಾಷ್ಟ್ರಗಳೆಂದೆ ಪರಿಗಣಿಸಲ್ಪಡುತ್ತಿದ್ದ ಇಂಗ್ಲೆಂಡ್, ಪಾಕೀಸ್ತಾನ ದಂತಹ ದೇಶಗಳ ಕ್ರಿಕೆಟ್ ತಂಡವನ್ನು ಸದೆ ಬಡಿಯುವ ಮೂಲಕ ಆತ್ಮತೃಪ್ತಿ ಹೊಂದುವ ಭಾರತ ದೇಶದ ಪ್ರಜೆಗಳು ಕ್ರಿಕೆಟ್ ಅನ್ನು ದೇಶಪ್ರೇಮದ ದ್ಯೋತಕವೆಂದೆ ಭಾವಿಸಬಹುದಲ್ಲವೇ? ಅದು ಅನ್ಯದೇಶದಿಂದ ಬಂದ ಆಟವಾದರೂ ಈಗ ಅದಕ್ಕೆ ದೇಶದಲ್ಲಿ 6ಶತಮಾನದ ಇತಿಹಾಸವಿರುವುದರಿಂದ ಮತ್ತು ಅದರ ಮೇಲೆ ಹಿಡಿತ ಸಾಧಿಸಿರುವುದರಿಂದ ಕೊಂಚಮಟ್ಟಿಗೆ ದೇಶಪ್ರೇಮದ ಭಾಗವಾಗಿ ಕ್ರಿಕೆಟ್ ಅಂದುಕೊಳ್ಳಬಹುದು. ನಮಗೆ ನೋವು ಕೊಟ್ಟವರು ಮತ್ತು ಕೊಡುತ್ತಿರುವವರ(ಇಂಗ್ಲೆಂಡ್ ಮತ್ತು ಪಾಕೀಸ್ತಾನ್)ವಿರುದ್ದ ಸರಿ ಸಾಟಿ ಅಂದುಕೊಳ್ಳಲು ಕ್ರಿಕೆಟ್ ಒಂದು ಅಸ್ತ್ರವಷ್ಟೆ. ಹಾಗಾಗಿಯೇ ಇವತ್ತು ದೇಶದ ಪ್ರತಿ ಮನೆ ಮನೆಗಳಲ್ಲಿಯೂ  ಕ್ರಿಕೆಟ್ ಆಡಲು, ನೋಡಲು ಹವಣಿಸುವ ಮಂದಿಯಿದ್ದಾರೆ. ಬಹುಶ: ಅಲ್ಲಿ ಸಿಗುವ ಜನಪ್ರಿಯತೆ, ದುಡ್ಡು, ಪ್ರಚಾರ, ಘನತೆ-ಗೌರವ ಕ್ರಿಕೆಟ್ ಸೆಳೆತಕ್ಕೆ ಕಾರಣ ಎಂದು ಕೆಲವರು ಹೇಳುತ್ತಾರಾದರೂ ಆಂತರಿಕವಾಗಿ, ಸ್ವಾಭಿಮಾನದ ಪ್ರತೀಕವಾಗಿ ದೇಶಪ್ರೇಮದ ಕಿಚ್ಚು ಬಡಿದೆಬ್ಬಿಸುವುದು ಮಾತ್ರ ಕ್ರಿಕೆಟ್ ಎಂಬುದು ಸತ್ಯವೇ ಆಗಿದೆ. ಸಾಂಪ್ರದಾಯಿಕ ಕ್ರೀಡೆಗಳಿಗೆ ಜಾಗತಿಕವಾಗಿ ಸೆಳೆಯುವ ಗುಣ ವಿಲ್ಲದಿರುವುದು, ಆರ್ಥಿಕ ಸಹಾಯದ ಪ್ರೋತ್ಸಾಹ ದೊರಕದಿರುವುದು, ಸರ್ಕಾರ ಮತ್ತು ವ್ಯಾವಹಾರಿಕ ವಲಯದ ಉದಾಸೀನ ಧೋರಣೆ ಕಾರಣವಾಗಬಹುದು. ಈ ನಡುವೆ ಜಾಗತಿಕವಾಗಿ ಎಲ್ಲೆಡೆಯೂ ಕ್ರಿಕೆಟ್ ಗೆ ಸ್ತಾನ ವಿರುವುದೇ ಅದನ್ನು ದೇಶಪ್ರೇಮದ ಭಾಗವಾಗಿಯೂ ಕಾಣಲು ಸಾಧ್ಯವಾಗಿದೆ.

ಮಾಧ್ಯಮದ ಅಂಗಡಿಗಳು ಮತ್ತು ಪತ್ರಕರ್ತರು!

ಕಾಸ್ಟ್ ಕಟಿಂಗ್ ಮತ್ತು ನಿಶ್ಚಿತ ಆದಾಯದ ಕೊರತೆಯಿಂದ ಮಾಧ್ಯಮ ಸಂಸ್ಥೆಗಳು ಪತ್ರಕರ್ತರನ್ನು ಪರ್ಫಾರ್ಮೆನ್ಸ್ ವೀಕ್ ಎಂಬ ಕಾರಣ ನೀಡಿ ತೆಗೆಯುವ ಪ್ರಕ್ರಿಯೆ ಈಗ ನಡೆಯುತ್ತ...