Wednesday, January 25, 2012

ಗಣತಂತ್ರ ಸಾಧನೆಯೇನು?ಸಾಗಿದ್ದೆಲ್ಲಿಗೆ?

(ಡಾ|| ಬಿ ಆರ್ ಅಂಬೇಡ್ಕರ, ನೆಹರೂ ಮತ್ತು ಸರ್ದಾರ್ ವಲ್ಲಭಾ ಬಾಯಿ ಪಟೇಲ್)
ಇದು 62ನೇ ಗಣರಾಜ್ಯೋತ್ಸವ ದಿನ, ಭಾರತ ದೇಶ ಜಗತ್ತಿನಲ್ಲಿಯೇ ಅತೀ ದೊಡ್ಡ ಪ್ರಜಾಪ್ರಭುತ್ವವನ್ನು ಹೊಂದಿದೆ ದೇಶವಾಗಿದೆ. ಈ ದೇಶದ ರೀತಿ ರಿವಾಜುಗಳನ್ನು ಪ್ರತಿನಿಧಿಸುವ ಸಂವಿಧಾನವು ಪ್ರಜಾಪ್ರಭುತ್ವ ವ್ಯವಸ್ಥೆಗೆ ಅರ್ಪಣೆಯಾದ ಮಹತ್ವದ ದಿನವೂ ಹೌದು. ದೇಶದ ಮಹಾನ್ ಮಾನವತಾ ವಾದಿ ಡಾ ಅಂಬೇಡ್ಕರ್ ಮತ್ತು ತಂಡದ ಪರಿಶ್ರಮದಿಂದ ರೂಪಿಸಿದ ಸಂವಿಧಾನ ಜಾರಿಗೆ ಬಂದ ದಿನವಾದ್ದರಿಂದ ಇದನ್ನು 'ಸಂವಿಧಾನ ದಿನಾಚರಣೆ' ಎಂದು ಸಹಾ ಆಚರಿಸಲಾಗುತ್ತದೆ. ಮಹತ್ವದ 'ಜಾತ್ಯಾತೀತತೆ'ಯ ತಿರುಳನ್ನು ಹೊಂದಿರುವ ಭಾರತದ ಸಂವಿಧಾನ ಜಾಗತಿಕವಾಗಿಯೂ ಗಮನ ಸೆಳೆದಿದ್ದು ಇದೇ ಆಶಯಗಳನ್ನು ಜಗತ್ತಿನ 98ಕ್ಕೂ ಹೆಚ್ಚು ರಾಷ್ಟ್ರಗಳು ಅನುಸರಿಸಿವೆ ಎಂಬುದು ಹೆಮ್ಮೆ ಪಡಬೇಕಾದ ವಿಚಾರ. ದೇಶಕ್ಕೆ ಸ್ವಾತಂತ್ರ್ಯ ದೊರೆತ ನಂತರ ಸ್ವಾಯತ್ತತೆ ಹಾಗೂ ಆಡಳಿತಾತ್ಮಕ, ಅಭಿವೃದ್ದಿ ಪರ ಸಾಧನೆಗೆ ಮಹತ್ವದ ಅಡಿಗಲ್ಲು ಹಾಕಿದ ದಿನ ಕೂಡಾ ಗಣರಾಜ್ಯೋತ್ಸವ ದಿನವಾಗಿದೆ. ಆದರೆ ನಾವೆಷ್ಟರ ಮಟ್ಟಿಗೆ ಈ ದಿನದ ಆಶಯಗಳನ್ನು ಸಾದಿಸಿದ್ದೇವೆ, ಎಲ್ಲಿ ಎಡವಿದ್ದೇವೆ ಎಂದು ನೋಡಿಕೊಳ್ಳಬೇಕಾದ ದಿನವೂ ಹೌದು!

ಒಂದು ರಾಷ್ಟ್ರ ಅಭಿವೃದ್ದಿಯಾಗ ಬೇಕಾದರೆ ಒಂದು 'ಮಿತಿ'ಯ ವ್ಯವಸ್ತೆ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಭಾರತ ದೇಶದ ಪ್ರಧಾನಿ ಜವಾಹರಲಾಲ್ ನೆಹರು, ರಾಜೇಂದ್ರ ಪ್ರಸಾದ್, ಡಾ|| ಬಿಆರ್ ಅಂಬೇಡ್ಕರ್ ಮತ್ತು  'ಉಕ್ಕಿನ ಮನುಷ್ಯ'ಎಂದೇ ಖ್ಯಾತರಾಗಿರುವ ಸರ್ದಾರ್ ವಲ್ಲಭಭಾಯಿ ಪಟೇಲರು ಅಚ್ಚುಕಟ್ಟಾಗಿ ರೂಪಿಸಿದ ಪ್ರಾಂತೀಯ ವ್ಯವಸ್ಥೆಯು ಸ್ಥಾನಿಕವಾಗಿ ರಾಜ್ಯಗಳು ಒಕ್ಕೂಟ ವ್ಯವಸ್ಥೆಗೆ ಸೇರ್ಪಡೆಗೊಂಡ ದಿನವೂ ಹೌದು. ರಾಜ ಮಹಾರಾಜರ ಆಳ್ವಿಕೆಗೆ ಒಳಪಟ್ಟಿದ್ದ ಪ್ರದೇಶಗಳು/ಸಂಸ್ಥಾನಗಳನ್ನು ಒಗ್ಗೂಡಿಸಿ ದೇಶದ ಒಕ್ಕೂಟ ವ್ಯವಸ್ಥೆಗೆ ಸೇರ್ಪಡೆ ಮಾಡುವ ಮೂಲಕ ಐತಿಹಾಸಿಕ ಕ್ಷಣ ತಂದುಕೊಟ್ಟ ದಿನವಾಗಿಯೂ ಗಣರಾಜ್ಯೋತ್ಸವವನ್ನು ನೆನಪಿನಲ್ಲಿಟ್ಟು ಕೊಳ್ಳಬೇಕಾಗಿದೆ. ಈ ದಿಸೆಯಲ್ಲಿ ಅನೇಕ ಮಹನೀಯರು ಪ್ರಾತ:ಸ್ಮರಣೀಯವಾಗುತ್ತಾರೆ. 
    
ನಮ್ಮ ದೇಶದ ಗಣತಂತ್ರ ವ್ಯವಸ್ಥೆ ಸರ್ವ ಸಮಾನತೆಯ ದ್ಯೇಯೋದ್ದೇಶವನ್ನು ಹೊಂದಿದೆ. ಇಲ್ಲಿ ವೈವಿದ್ಯಮಯ ಸಂಸ್ಕೃತಿ,ಧಾರ್ಮಿಕ ಆಚರಣೆ ಹಾಗೂ ಮತಪಂಥಗಳ ವೈವಿದ್ಯತೆಯಲ್ಲಿ ಏಕತೆಯನ್ನು ಸಾರುವ ಮಹತ್ವದ ಅಂಶವೇ ದೇಶದ ಕೀರ್ತಿಯನ್ನು ಜಾಗತಿಕ ಮಟ್ಟದಲ್ಲಿ ಪಸರಿಸುವಂತೆ ಮಾಡಿದೆ. ಅಮೇರಿಕಾದ ಚಿಕಾಗೊದಲ್ಲಿ ನಡೆದ ಸರ್ವಧರ್ಮ ಸಮ್ಮೇಳನದಲ್ಲಿ ದೇಶದ ಹಿರಿಮೆಯನ್ನು ಎತ್ತಿ ಹಿಡಿದ ಸ್ವಾಮಿ ವಿವೇಕಾನಂದರಂತಹ ಶ್ರೇಷ್ಠ ದಾರ್ಶನಿಕರನ್ನು ಈ ದೇಶ ಕೊಡುಗೆಯಾಗಿ ನೀಡಿದೆ. ಅಹಿಂಸೆಯ ಮೂಲಕ ಸ್ವಾತಂತ್ರ್ಯ ಪಡೆಯುವ ಮೂಲಕ ಜಗತ್ತಿಗೆ ಮಾದರಿಯಾದ ಮಹಾತ್ಮ ಗಾಂಧಿ, ಸಮಾನತೆಯನ್ನು ಎತ್ತಿ ಹಿಡಿಯುವ ಮೊತ್ತ ಮೊದಲ ಸಂವಿಧಾನವನ್ನು ಕೊಟ್ಟ ಅಂಬೇಡ್ಕರ್ ಹೀಗೆ ಸಾವಿರಾರು ಶ್ರೇಷ್ಠರು ಆಗಿ ಹೋಗಿದ್ದಾರೆ, ಅವರ ವಿಚಾರದ ಕಾವು ಮಾತ್ರ ಎಲ್ಲೆಡೆ ಕಿಚ್ಚು ಹಚ್ಚಿದೆ. ಪ್ರಸಕ್ತ ಸಂಧರ್ಭದಲ್ಲಿ ದೇಶದ ಏಕತೆಗೆ ಭಂಗ ತರುವ ಕೃತ್ಯಗಳು ಜರುಗುತ್ತಿವೆ. ರಾಷ್ಟ್ರೀಯತೆಯ ಮನೋಭಾವದ ಕೊರತೆ ಇದಕ್ಕೆ ಕಾರಣವಾಗಿರಬಹುದು. ಇಂತಹ ಕ್ರಿಯೆಗಳು ಸಂವಿಧಾನದ ಆಶಯಗಳಿಗೆ ಧಕ್ಕೆ ಉಂಟು ಮಾಡುವುದಲ್ಲದೇ ಆಂತರಿಕ ವ್ಯವಸ್ಥೆಗೂ ಪೆಟ್ಟು ನೀಡುತ್ತಿದೆ. ಶಿಕ್ಷಣ,ಆರೋಗ್ಯ ಮತ್ತು ರಾಜಕೀಯ ಜಾಗತೀಕರಣದ ಈ ದಿನಗಳಲ್ಲಿ ವಾಣಿಜ್ಯೀಕರಣ ಗೊಂಡಿವೆ. ಇದರಿಂದ ಭ್ರಷ್ಟಾಚಾರ ಹೆಚ್ಚಿದ್ದು ಜನಸಾಮಾನ್ಯರ ಬದುಕು ದುರ್ಬರವಾಗಿದೆ, ಕಾರ್ಪೊರೇಟ್  ಶಕ್ತಿಗಳು ವಿಜೃಂಭಿಸುತ್ತಿರುವುದು ಸಂವಿಧಾನ ವಿರೋಧಿ ಪ್ರಕ್ರಿಯೆಗಳು ಜಾಗೃತಾವಸ್ಥೆಯಲ್ಲಿವೆ ಸಮಾನತೆಯ ಅಂಶಗಳು ಕಡೆಗಣನೆಯಾಗಿವೆ. ಜನರ ಹಿತಕ್ಕಿಂತ ಆಳುವವರ ಹಿತಾಸಕ್ತಿಗಳು ಹೆಚ್ಚಿನ ಆದ್ಯತೆ ಪಡೆಯಲಾರಂಭಿಸಿವೆ. ಚುನಾವಣೆಗಳು ಭ್ರಷ್ಟ ವ್ಯವಸ್ಥೆಯ ಕೂಪಗಳಾಗಿವೆ. ಹಾಗಾಗಿ ಆಯ್ಕೆಯಾಗುವ ಜನಪ್ರತಿನಿಧಿಗಳಿಂದ ಾರೋಗ್ಯಕರವಾದ ಆಡಳಿತಗಳನ್ನು ನಿರೀಕ್ಷಿಸಲು ಸಾಧ್ಯವಾಗುತ್ತಿಲ್ಲ. ದೇಶದ ಸಂಸತ್ ವ್ಯವಸ್ಥೆ, ವಿಧಾನಸಭೆ ಹಾಗೂ ವಿಧಾನ ಪರಿಷತ್ ಗಳಿಗೆ ಆಯ್ಕೆಯಾಗುವ ಮಂದಿ ಭ್ರಷ್ಟಾಚಾರದಲ್ಲಿ ಸಿಲುಕಿ ಜೈಲು ಪಾಲಾಗುತ್ತಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಮತದಾರರಿಗೆ ವಿಶ್ವಸನೀಯವಾಗಿ ನಡೆದುಕೊಳ್ಳಬೇಕಾದವರೇ ಅನೈತಿಕ ರಾಜಕೀಯ ಹೊಂದಾಣಿಕೆಗಳನ್ನು ಮಾಡಿಕೊಳ್ಳುವ ಮೂಲಕ ಮತದಾರರಿಗೆ ವಂಚನೆ ಮಾಡುತ್ತಿದ್ದಾರೆ. ಅಧಿಕಾರ ಶಾಹಿ ರಾಜಕೀಯದ ತೆಕ್ಕೆಯಲ್ಲಿ ಸಿಲುಕಿ ಹಣದಾಸೆಗೆ ಬಿದ್ದು ಜನರನ್ನು ಶೋಷಿಸುವ ವ್ಯವಸ್ಥೆಯಾಗಿ ಪರಿವರ್ತನೆಗೊಂಡಿವೆ. ಇಂತಹ ಸಂಧಿಗ್ಧ ಸನ್ನಿವೇಶದಲ್ಲೂ ದೇಶದ ಹಿತಕ್ಕೆ ಇಂದಿಗೂ ವಿಶ್ವಾಸಾರ್ಹೆತೆಯನ್ನು ಕಾಯ್ದುಕೊಂಡು ಕಾನೂನು ಕಾಯುವ ಕೆಲಸವನ್ನು ನ್ಯಾಯಾಂಗ ವ್ಯವಸ್ಥೆ ಉಳಿಸಿಕೊಂಡಿದೆ. ಹೀಗಿರುವಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯ ಕಾವಲು ನಾಯಿಯಾಗಿ ಪ್ರಭಲ ಲೋಕಪಾಲ ಮಸೂದೆಯ ಜಾರಿಗೆ ಪ್ರಯತ್ನಗಳು ನಡೆಯುತ್ತಿವೆ. ಆದರೆ ಅದಕ್ಕೂ ರಾಜಕೀಯ ಪ್ರೇರಿತ ಬಣ್ಣ ಬಂದಿರುವುದು ಮತ್ತು ಸರ್ವ ಸಮ್ಮತವಲ್ಲದ ನಿಲುವುಗಳು ವ್ಯಕ್ತವಾಗುತ್ತಿರುವುದರಿಂದ ಲೋಕಪಾಲ ಮಸೂದೆಯ ಆಸೆ ಕ್ಷೀಣಿಸುವ ಸಾಧ್ಯತೆ ಇದೆ. ದೇಶದ ಯುವ ಜನತೆ ಹಾಗೂ ಜನಸಾಮಾನ್ಯರೂ ಈ ದಿಸೆಯಲ್ಲಿ ಎಚ್ಚೆತ್ತು ಕೊಳ್ಳಬೇಕಾದ ಅಗತ್ಯತೆ ಇದೆ. ಆಧುನೀಕರಣದ ಈ ದಿನಗಳಲ್ಲಿ ಕೇವಲ ದುಡಿಮೆ-ಬದುಕು ಮಾತ್ರ ಮುಖ್ಯ ಅಲ್ಲ, ರಾಜಕೀಯ ಪ್ರಜ್ಞೆಯೂ ಬೇಕು, ಆಗ ಮಾತ್ರ ಈ ಪ್ರಜಾಪ್ರಬುತ್ವ ವ್ಯವಸ್ಥೆಗೆ ಒಂದು ಅರ್ಥ ಸಿಗಲು ಸಾಧ್ಯ. 

ರಾಜಕೀಯ ಪಕ್ಷಗಳು ಅಧಿಕಾರ ಹಿಡಿಯುವ ಆಸೆಗೆ ಬಿದ್ದು ಜನರನ್ನು ಮರುಳು ಮಾಡುವ ಅಗ್ಗದ ಆಮಿಷಗಳನ್ನು ಒಡ್ಡದೇ ಜವಾಬ್ದಾರಿಯುತವಾಗಿ ನಡೆದುಕೊಳ್ಳುವ ಮೂಲಕ ಜನಹಿತ ಕಾಯಬೇಕಿದೆ ಆ ಮೂಲಕ ಪ್ರಜಾತಂತ್ರಕ್ಕೆ ಗೌರವ ಸಲ್ಲಿಸಬೇಕಿದೆ. ಇವೆಲ್ಲ ಸರಿಯಾಗಬೇಕಾದರೆ ಕಳಂಕ ರಹಿತ ಚುನಾವಣೆಯೊಂದೇ ಮಾರ್ಗ, ಅದು ಸಾಕಾರವಾಗಬೇಕಾದರೆ ನಮ್ಮ ಜನ ಪ್ರಜ್ಞಾವಂತರಾಗಬೇಕಲ್ಲವೇ?

ಮಾಧ್ಯಮದ ಅಂಗಡಿಗಳು ಮತ್ತು ಪತ್ರಕರ್ತರು!

ಕಾಸ್ಟ್ ಕಟಿಂಗ್ ಮತ್ತು ನಿಶ್ಚಿತ ಆದಾಯದ ಕೊರತೆಯಿಂದ ಮಾಧ್ಯಮ ಸಂಸ್ಥೆಗಳು ಪತ್ರಕರ್ತರನ್ನು ಪರ್ಫಾರ್ಮೆನ್ಸ್ ವೀಕ್ ಎಂಬ ಕಾರಣ ನೀಡಿ ತೆಗೆಯುವ ಪ್ರಕ್ರಿಯೆ ಈಗ ನಡೆಯುತ್ತ...