Sunday, July 4, 2010

ಯುವ ಮನಸ್ಸು ಹೇಗಿದೆ ಗೊತ್ತಾ???



"ಎಲ್ಲಿಯೂ ಸಲ್ಲದ ಕಟ್ಟಕಡೆಯ ವಿದ್ಯಾರ್ಥಿ ಅಂತಿಮವಾಗಿ ಐಟಿಐ ಗೆ ಬರುತ್ತಾನೆ, ಅವನಿ/ಳಿಗೆ ಪರಿಶ್ರಮದ ಮೂಲಕ ಬದುಕಿನ ಹಾದಿ ತೋರಿಸೋಕೆ ಭಾರೀ ಪ್ರಯತ್ನವನ್ನೇ ಮಾಡ್ಬೇಕು ಸಾರ್" ಅಂದ್ರು ಮಿತ್ರ ಗುರುರಾಜ್. ಸಾರ್ ನಂದು ಬಿಇ ನಲ್ಲಿ ಇಲೆಕ್ಟ್ರಿಕಲ್ ಹೈ ಫಸ್ಟ್ ಕ್ಲಾಸ್ ಪಾಸಾಗಿದ್ದೀನಿ, ಈ ಬೆಂಗಳೂರಿಗೆ ಬಂದು ಪಿಜಿ ಲಿ ಉಳ್ಕೊಂಡು 6ತಿಂಗಳಿಂದ ಕೆಲ್ಸ ಹುಡುಕ್ತಿದೀನಿ , ಯಾವ ಕಂಪನಿಗೆ ಅರ್ಜಿ ಹಾಕಿದ್ರೂ ಎಕ್ಸ್ ಪೀರಿಯನ್ಸ್ ಕೇಳ್ತಾರೆ ಇಲ್ಲಾಂದ್ರೆ ಬಾಂಡ್ ಕೇಳ್ತಾರೆ ಓವರ್ ಟೈಮ್ ಡ್ಯೂಟಿ ಮಾಡ್ಬೇಕಂತೆ ಏನ್ಮಾಡ್ಬೇಕೋ ಗೊತ್ತಾಗ್ತಿಲ್ಲ ಅಂದದ್ದು ಪರಿಚಿತರ ಹುಡುಗಿ ಲಾವಣ್ಯ. ಇನ್ನೊಬ್ಬ ಚಿಗುರು ಮೀಸೆಯ ಹುಡುಗ ಮಂಜುನಾಥ ತಲೆಕೆಡಿಸಿಕೊಂಡು ಕುಂತಿದ್ದ, ಆತ ಈಗಷ್ಟೇ ವಾಣಿಜ್ಯ ಪದವಿಗೆ ಸೇರಿದ್ದ ಬುದ್ದಿವಂತ ಹುಡುಗ, ಅವನ ರಿಲೇಟೀವ್ಸ್ ಯಾರೋ ಸಿಎ ಮಾಡಿದ್ದಾರಂತೆ ಈಗ ಇವ್ನು ಸಿಎ ಮಾಡ್ತಾನಂತೆ ಹಾಗಾಗಿ ಆ ಕಡೆ ಕಾನ್ಸೆಂಟ್ರೇಶನ್ ಮಾಡ್ಬೇಕೋ ಪದವಿ ಕಡೆಗೆ ಗಮನ ನೀಡಬೇಕೋ ಅಂತ ತಿಳೀಯದೇ ತಲೆಕೆಡಿಸಿಕೊಂಡಿದ್ದ. ಈಗ್ಯೆ ತಿಂಗಳ ಹಿಂದೆ ಪದವಿ ಅರ್ಧಂಬರ್ದ ಮುಗಿಸಿ ಸಿಎ ಮಾಡ್ತೀನಿ ಅಂತ ಹೋಗಿ ನಾಲ್ಕಂಕಿ ಸಂಬಳ ಕೈಗೆ ಬರುತ್ತಿದ್ದಂತೆ ಪದವಿಗೆ ಗುಡ್ ಬೈ ಹೇಳಿ ಅತ್ತ ಸಿಎ ಅನ್ನು ಮುಗಿಸದೇ ಅಲ್ಲಿ ಇಲ್ಲಿ ಲೆಕ್ಕ ಬರೆಯವ ಚಾಕರಿ ಮಾಡುತ್ತಿರುವ ಯುವತಿಯನ್ನ ಆಕೆಯ ತಾಯಿ ಕರೆತಂದು ಬೇಸರಿಸಿಕೊಂಡಿದ್ದರು. ಮಗ ಡಾಕ್ಟರ್ ಆಗಬೇಕು, ಇಂಜಿನಿಯರೇ ಆಗಬೇಕು ಅಂತ ಕನಸು ಕಂಡ ತಂದೆ/ತಾಯಿ ಗಳಿಸಿದ ಅಷ್ಟೂ ಸಂಪತ್ತನ್ನು ದುಡ್ಡಾಗಿ ಪರಿವರ್ತಿಸಿಕೊಂಡು ಮಕ್ಕಳ ಮೇಲೆ ಹೂಡಿ ಅವನು/ಅವಳು ಕೇಳಿದ್ದನ್ನ ಕೊಡಿಸಿ ಅವನ ಆಸಕ್ತಿ ಏನೆಂಬುದನ್ನು ಅರಿಯದೇ ಕಡೆಗೆ ಪರಿತಾಪ ಪಡುವ ಮಂದಿಯೂ ಇವತ್ತು ಕಾಣ ಸಿಗುತ್ತಾರೆ. ಇವತ್ತು ಬಹುತೇಕ ಮಂದಿ ಪೋಷಕರಿಗೆ/ವಿದ್ಯಾರ್ಥಿಗಳಿಗೆ ತಾವು ಸಾಗಬೇಕಾದ ಗುರಿಯ ನಿಖರತೆಯಾಗಲೀ ಅಂದಾಜಾಗಲಿ ಇರುವುದೇ ಇಲ್ಲ. ಹಾಗಾಗಿ ಗೋಂದಲದ ಸ್ತಿತಿಯಲ್ಲಿ ವಿದ್ಯಾರ್ಥಿಗಳು ಹಾಗೂ ಪೋಷಕರು ಸಿಲುಕುವುದನ್ನು ಕಾಣಬಹುದು. ಅಷ್ಟಕ್ಕೂ ವಿದ್ಯಾರ್ಥಿಗಳಿಗೆ/ಪೋಷಕರಿಗೆ/ಶಿಕ್ಷಕರಿಗೆ ಇರಬೇಕಾದ ಗುರಿಗಳೇನು? ಬದ್ದತೆ ಹೇಗಿರಬೇಕು? ಗುರಿಯ ನಿರ್ದಿಷ್ಟತೆ, ಅದನ್ನು ತಲುಪುವ ಬಗೆ, ಅದಕ್ಕಾಗಿ ಅನುಸರಿಸುವ ರೀತಿ-ರಿವಾಜುಗಳು ಏನು ಎಂಬುದನ್ನು ಅರಿಯಬೇಕಾದ ಅಗತ್ಯವಿದೆ.
ಪ್ರಸಕ್ತ ಸಮಾಜದಲ್ಲಿ ನಮಗೆ ಬದುಕಿನ ಶಿಕ್ಷಣ ಅತ್ಯಂತ ಅಗತ್ಯವಾಗಿ ದಕ್ಕಬೇಕಿದೆ. ಆದರೆ ಹಾಲಿ ನಮ್ಮ ಶಿಕ್ಷಣ ಕ್ರಮದಲ್ಲಿ ಬದುಕು ರೂಪಿಸುವ ಶಿಕ್ಷಣಕ್ಕಿಂತ ಬೇರೆಯದೇ ಧಾಟಿಯ ಶಿಕ್ಷಣವಿದೆ. ಇಂತಹ ಶಿಕ್ಷಣ ವ್ಯವಸ್ಥೆಯೇ ನಿರುದ್ಯೋಗ, ಬಡತನ ಇತ್ಯಾದಿ ಸಮಸ್ಯೆಗಳಿಗೆ ಕಾರಣವಾಗಿದೆ.

ಮಾಧ್ಯಮದ ಅಂಗಡಿಗಳು ಮತ್ತು ಪತ್ರಕರ್ತರು!

ಕಾಸ್ಟ್ ಕಟಿಂಗ್ ಮತ್ತು ನಿಶ್ಚಿತ ಆದಾಯದ ಕೊರತೆಯಿಂದ ಮಾಧ್ಯಮ ಸಂಸ್ಥೆಗಳು ಪತ್ರಕರ್ತರನ್ನು ಪರ್ಫಾರ್ಮೆನ್ಸ್ ವೀಕ್ ಎಂಬ ಕಾರಣ ನೀಡಿ ತೆಗೆಯುವ ಪ್ರಕ್ರಿಯೆ ಈಗ ನಡೆಯುತ್ತ...