Sunday, June 24, 2012

ಕನ್ನಡ ಅನ್ನದ ಭಾಷೆಯಾಗದಿದ್ದರೆ... ಹೀಗೆ!


ರಾಜ್ಯದಲ್ಲಿ ಕನ್ನಡ ಶಾಲೆಗಳನ್ನು ಮುಚ್ಚುತ್ತಿರುವ ಸಂಧರ್ಭದಲ್ಲೇ,ಸರ್ಕಾರಿ ಶಾಲೆಗಳಲ್ಲಿ ಆಂಗ್ಲಮಾಧ್ಯಮ ಆರಂಭಿಸಬಾರದೆಂದು ಕನ್ನಡ ಸಾಹಿತ್ಯ ಪರಿಷತ್ತು ನಿರ್ಣಯ ಕೈಗೊಂಡಿದೆ. ಈ ನಡುವೆ ಪರ-ವಿರೋಧದ ಚಟುವಟಿಕೆಗಳು ಚಾಲ್ತಿಗೆ ಬಂದಿವೆ.ಆದರೆ ಬದಲಾದ ಕಾಲಘಟ್ಟದಲ್ಲಿ ಆಂಗ್ಲ ಮಾಧ್ಯಮ ಎಷ್ಟು ಪ್ರಸ್ತುತ ಮತ್ತು ಅಪ್ರಸ್ತುತ ಇದರಿಂದ ಯಾರಿಗೆ ಅನುಕೂಲ ಮತ್ತು ಅನಾನುಕೂಲ ? ಈ ನಡುವೆ ಕನ್ನಡ ಅನ್ನದ ಭಾಷೆಯಾಗಲು ಇರುವ ಅಡ್ಡಿ ಏನು ಎಂಬುದರ ವಿಸ್ತೃತ ಚರ್ಚೆ ಆಗಬೇಕಿದೆ. ಈ ಹಿನ್ನೆಲೆಯಲ್ಲಿ ಪರವೂ ಅಲ್ಲದ ವಿರೋಧವೂ ಅಲ್ಲದ ವಸ್ತು ನಿಷ್ಠವಾದ ವಿಚಾರದ ಅವಲೋಕನದ ಅಗತ್ಯತೆ ಇದೆ.
ಪ್ರಾಥಮಿಕ ಶಾಲಾ ಹಂತದಲ್ಲಿ ಆಂಗ್ಲ ಭಾಷಾ ಕಲಿಕೆಗೆ ಒತ್ತು ನೀಡಿದ ಸರ್ಕಾರ ಇದೀಗ ಆಂಗ್ಲ ಮಾಧ್ಯಮ ಆರಂಭಿಸುವ ಉತ್ಸಾಹದಲ್ಲಿದೆ. ರಾಜ್ಯದಲ್ಲಿ ಕಳೆದ 3-4ವರ್ಷಗಳಲ್ಲಿ 10000ಕ್ಕೂ ಹೆಚ್ಚು ಕನ್ನಡ ಶಾಲೆಗಳು ಕಣ್ಮುಚ್ಚಿವೆ ಈ ಕುರಿತು ಸಾಹಿತಿಗಳು ಮತ್ತು ಚಿಂತಕರು ಆಂಧೋಲನವನ್ನೇ ಆರಂಬಿಸಿದ್ದಾರೆ ಹೀಗಿರುವಾಗ ಆಂಗ್ಲ ಮಾಧ್ಯಮ ಶಾಲೆಗಳನ್ನು ಆರಂಬಿಸಿದರೆ ಕನ್ನಡ ಶಾಲೆಗಳ ಕತ್ತು ಹಿಸುಕಿದಂತಾಗುತ್ತದೆ ಅಲ್ಲವೇ, ಕನ್ನಡ ಭಾಷೆಗೆ ಆಧ್ಯತೆ ಕೊಡಬೇಕಾದ ಸರ್ಕಾರವೇ ಮುಂದಾಗಿ ಕನ್ನಡ ಶಾಲೆಗಳನ್ನು ಕೊಲ್ಲುವ ಕೆಲಸ ಯಾಕೆ ಮಾಡುತ್ತಿದೆ? ಎಂಬ ಪ್ರಶ್ನೆ ಉದ್ಭವಿಸುವುದು ಸಹಜ. ಕನ್ನಡ ಅತ್ಯಂತ ಪ್ರಾಚೀನ ಭಾಷೆ ಅದಕ್ಕೆ ತನ್ನದೇ ಆದ ವೈಶಿಷ್ಟ್ಯವಿದೆ ಮೊಗೆದಷ್ಟು ಉಕ್ಕುವ ಉತ್ಸಾಹವೂ ಇದೆ, ಆದರೆ ಕಾಲ ಬದಲಾದಂತೆ ಜನರ ಮನಸ್ಥಿತಿಗಳು ಮತ್ತು ಆಧ್ಯತೆಗಳು ಬದಲಾಗುತ್ತಿವೆ. ಬದಲಾದ ಸಂಸ್ಕೃತಿ ಮತ್ತು ಆರ್ಥಿಕತೆ, ಬದುಕಿನ ಸ್ಥಿರತೆಗಾಗಿ ಕನ್ನಡದ ಆಯ್ಕೆಯ ಬದಲಿಗೆ ಇಂಗ್ಲೀಷ್ ಮಾಧ್ಯಮದೆಡೆಗೆ ಆಕರ್ಷಿಸುವಂತೆ ಮಾಡಿದೆ. ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ಸಿಕ್ಕಿದೆ, ಅನುಷ್ಠಾನದ ಹಂತದಲ್ಲಿದೆ, ಅದಕ್ಕಾಗಿ ಸಮ್ಮೇಳನಗಳು ಮತ್ತು ನಿರ್ಣಯಗಳು , ಕನ್ನಡ ಹಬ್ಬಗಳು, ಚಳುವಳಿಗಳು ನಡೆಯುತ್ತಿವೆ ಆದರೆ ಬದುಕನ್ನು ಕಟ್ಟಿಕೊಡುವ ಭಾಷೆಯನ್ನಾಗಿ ಕನ್ನಡವನ್ನು ರೂಪಿಸುವಲ್ಲಿ ಅಡ್ಡಿ ಉಂಟಾಗಿದೆ. ಅದಕ್ಕೆ ಸ್ಥಳಿಯ ಕಾರಣಗಳು ಇಲ್ಲವಾದರೂ ಜಾಗತಿಕ ಮಟ್ಟದ ನಿರ್ಣಯಗಳು ಅನಿವಾರ್ಯವೆನಿಸುವ ಅಭಿವೃದ್ದಿ ಪ್ರಕ್ರಿಯೆಗಳು ಕನ್ನಡದ ಬದುಕು ಕಟ್ಟಲು ನಮ್ಮ ನೆಲದಲ್ಲಿಯೇ ತಡೆವೊಡ್ಡಿರುವುದು ವಿಷಾಧನೀಯಕರ ಸಂಗತಿ. 
ಇಡೀ ಜಗತ್ತಿನಲ್ಲಿ ಅತೀ ಹೆಚ್ಚು ಮಾತನಾಡಲ್ಪಡುವ 40ಭಾಷೆಗಳ ಪೈಕಿ ಕನ್ನಡಕ್ಕೂ ಒಂದು ಸ್ಥಾನವಿದೆ ಎಂಬುದನ್ನು ಮರೆಯುವಂತಿಲ್ಲ, ಜಗತ್ತಿನಾಧ್ಯಂತ 38ಮಿಲಿಯನ್ ಮಂದಿ ಕನ್ನಡ ಭಾಷಿಕರಿದ್ದಾರೆಂಬುದು ಅಷ್ಟೆ ಸಂತಸದಾಯಕವಾದ ವಿಚಾರ. 5ನೇ ಶತಮಾನದಲ್ಲಿ ಕನ್ನಡ ಭಾಷೆಯ ಬೆಳವಣಿಗೆಯನ್ನು ಕಾಣಬಹುದು, ಇವತ್ತು ರಾಜ್ಯದಲ್ಲಿ ಪ್ರತೀ 20ಕಿ.ಮಿಗೆ ಕನ್ನಡದ ಭಾಷೆಯ ವೈವಿದ್ಯವನ್ನು ಕಾಣಬಹುದು ರಾಜ್ಯಾದಾಧ್ಯಂತ 22ಕ್ಕೂ ಹೆಚ್ಚು ರೀತಿಯ ವಿಭಿನ್ನ ಶೈಲಿಯ ಕನ್ನಡ ಭಾಷೆ ಮಾತನಾಡುವುದನ್ನು ಕಾಣಬಹುದು. ಭಾವನೆಗಳ ಹಂಚಿಕೆಗೆ ಮತ್ತು ಚಿಂತನಾಕ್ರಮಕ್ಕೆ ಸಾಥ್ ನೀಡುವ ಕನ್ನಡದ ಕೃತಿಗಳು ರಾಷ್ಟ್ರೀಯ ಹಾಗೂ ಅಂತರ ರಾಷ್ಟ್ರೀಯ ಮಟ್ಟದಲ್ಲೂ ತನ್ನ ಛಾಪನ್ನು ಮೂಡಿಸಿವೆ. ಸಾಹಿತ್ಯ, ಸಿನಿಮಾ, ಕಾರ್ಪೋರೇಟ್ ಕ್ಷೇತ್ರ ಹಾಗೂ ರಾಜಕೀಯ, ಸಾಪ್ಟ್ ವೇರ್ ಉದ್ಯಮ ಎಲ್ಲೆಡೆಯೂ ಕನ್ನಡಿಗರ ಕೀರ್ತಿ ಪತಾಕೆ ಇದೆ ಆದರೆ ಅದು ವ್ಯಕ್ತಿಗತವಾಗಿ ಅವರು ಕನ್ನಡಿಗರು ಎಂಬಷ್ಟಕ್ಕೆ ಮಾತ್ರ ಸೀಮಿತವಾಗಿದೆ. ಪರಿಮಿತ ವಲಯವನ್ನು ಮೀರಿ ಜಾಗತಿಕ ಸ್ಥಾನ ಗಳಿಸಿಕೊಳ್ಳುವಲ್ಲಿ ಸ್ಥಾನಿಕ ಭಾಷೆ ಕನ್ನಡಕ್ಕೆ ಸಾಧ್ಯವಾಗಿಲ್ಲ ಬಹುಶ ಈ ಕಾರಣಕ್ಕೆ ಅನೇಕ ಮಂದಿ ಆಂಗ್ಲ ಮಾಧ್ಯಮದೆಡೆಗೆ ತಮ್ಮ ಒಲವು ತೋರಿಸಲಾರಂಬಿಸಿದ್ದಾರೆ. 
ಒಂದೆಡೆ ಖಾಸಗಿ ಲಾಬಿ ಸರ್ಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಆರಂಭಿಸುವುದಕ್ಕೆ ಅಡ್ಡಿಯಾಗಿದ್ದರೆ ಮತ್ತೊಂದೆಡೆ ದೇಶದಲ್ಲಿ ಜಾರಿಯಲ್ಲಿರುವ ಆರ್ಥಿಕ ಉದಾರೀಕರಣ ನೀತಿ ನಮ್ಮ ಮೂಲ ಸಂಸ್ಕೃತಿಗೆ ಧಕ್ಕೆ ಉಂಟು ಮಾಡುತ್ತಿರುವುದಲ್ಲದೇ ಭಾಷೆಯ ಬೆಳವಣಿಗೆಯ ಮೇಲೂ ಅಡ್ಡ ಪರಿಣಾಮ ಬೀರಿದೆ, ಹಾಗಾಗಿ ಕನ್ನಡ ಭಾಷಿಕರಿಗೆ ಅಲ್ಲಿ ಅವಕಾಶಗಳು ಕಡಿಮೆಯಾಗಿವೆ. ಈ ಆಧುನಿಕ ಜಗತ್ತಿನಲ್ಲಿ ಬದುಕಲು ಹಣದ ಹಿಂದೆ ಓಡಬೇಕಾದ ಅನಿವಾರ್ಯ ಸ್ಥಿತಿ ಸೃಷ್ಠಿಯಾಗಿರುವುದು ಕನ್ನಡದ ತೀವ್ರೆತೆಯನ್ನು ಕಡಿಮೆ ಮಾಡಿದೆ ಎನ್ನಲಡ್ಡಿಯಿಲ್ಲ ಅಲ್ಲವೇ. ಒಬ್ಬ ಕೂಲಿ ಕಾರ್ಮಿಕನ ಮಗನೂ ಸಹಾ ಕೂಡಿಟ್ಟ ಜೋಳಿಗೆಯನ್ನು ಮಕ್ಕಳ ಗುಣಾತ್ಮಕ ಶಿಕ್ಷಣಕ್ಕೆ ಹಾಗೂ ಆಂಗ್ಲ ಮಾಧ್ಯಮ ಶಾಲೆಗಳಿಗೆ ಸೇರಿಸಲು ವೆಚ್ಚ ಮಾಡುತ್ತಾನೆಂದರೆ ಆತನ ಮನಸ್ಥಿತಿ ಹೇಗಿದೆ? ತನ್ನ ತಲೆಮಾರಿಗೆ ಶ್ರಮದ ದುಸ್ಥಿತಿಯ ಜೀವನ ಸಾಕು ತನ್ನ ಮಕ್ಕಳಾದರೂ ಉನ್ನತ ಸ್ಥಾನಗಳನ್ನು ಗಳಿಸಲಿ ದುಡಿದು ಬದುಕಲಿ ಎಂಬ ಅಪೇಕ್ಷೆ ಹೊಂದುವುದು ಅದಕ್ಕೆ ಕಾರಣವಿರಬಹುದು. ಸರ್ಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಶಾಲೆಗಳನ್ನು ಆರಂಭಿಸಿದಾಗ ಶ್ರಮಿಕ ವರ್ಗಕ್ಕೆ, ಕಾರ್ಮಿಕ ವರ್ಗಕ್ಕೆ ಅವಕಾಶ ಕಲ್ಪಿಸಿಕೊಟ್ಟಂತಾಗುತ್ತದೆ. ಅಂದರೆ ಕನ್ನಡದಲ್ಲಿ ಶಿಕ್ಷಣದ ಗುಣಮಟ್ಟವಿಲ್ಲವೆ ಎಂಬ ಪ್ರಶ್ನೆ ಏಳಬಹುದು? ಕನ್ನಡದ ಗುಣಾತ್ಮಕತೆ ಇದ್ದರೂ ಅದು ಅನ್ನದ ಭಾಷೆ ಆಗಬೇಕಲ್ಲವೇ ? ಅದು ಅನ್ನದ ಭಾಷೆಯಾಗ ಬೇಕಾದರೆ ಪೂರಕ ವಾತಾವರಣ ಬೇಕಲ್ಲವೇ ಅದೇ ಇಲ್ಲದ ಮೇಲೆ ಯಾವ ಗುಣಾತ್ಮಕ ಶಿಕ್ಷಣ ನೀಡಿದರೂ ಪ್ರಯೋಜನವೇನು? ಇಂಗ್ಲೀಷ್ ಜಾಗತಿಕ ಭಾಷೆ, ಅದರ ವಿಸ್ತೃತತೆ ಜಾಗತಿಕವಾಗಿ ಎಲ್ಲಾ ಆಯಾಮಗಳನ್ನು ಮೀರಿ ಸಾಗಿದೆ ಹೀಗಿರುವಾಗ ಅದನ್ನು ಅನಿವಾರ್ಯವೆನ್ನುವಂತೆ ಅಪ್ಪಿಕೊಂಡರು ಕನ್ನಡತನಕ್ಕೆ ಧಕ್ಕೆಯಾಗದಂತೆ ವೈಯುಕ್ತಿಕ ನೆಲೆಗಟ್ಟಿನಲ್ಲಿ ಕಾಪಾಡಿಕೊಂಡಲ್ಲಿ ಸೂಕ್ತ ವಾಗಬಹುದೇನೋ.
ಈ ಲೇಖನವನ್ನು ಸಂಯುಕ್ತ ಕರ್ನಾಟಕ ದಿನಪತ್ರಿಕೆಯಲ್ಲಿ ಪತ್ರಕರ್ತ ಮಿತ್ರರಾದ ಪ್ರಿಯ ಚಾಮರಾಜಸವಡಿ ಯವರು ಪ್ರಕಟಿಸಿದ್ದಾರೆ ಅದನ್ನು ಈ ಲಿಂಕ್ ನಲ್ಲಿ ನೋಡಬಹುದು ಅವರಿಗೆ ಧನ್ಯವಾದಗಳು
http://www.rediffmail.com/cgi-bin/red.cgi?red=http%3A%2F%2Fepaper%2Esamyukthakarnataka%2Ecom%2F44198%2FSamyuktha%2DKarnataka%2Fjune%2D26%2D2012%2DHU%23page%2F13%2F1&isImage=0&BlockImage=0&rediffng=0

ಮಾಧ್ಯಮದ ಅಂಗಡಿಗಳು ಮತ್ತು ಪತ್ರಕರ್ತರು!

ಕಾಸ್ಟ್ ಕಟಿಂಗ್ ಮತ್ತು ನಿಶ್ಚಿತ ಆದಾಯದ ಕೊರತೆಯಿಂದ ಮಾಧ್ಯಮ ಸಂಸ್ಥೆಗಳು ಪತ್ರಕರ್ತರನ್ನು ಪರ್ಫಾರ್ಮೆನ್ಸ್ ವೀಕ್ ಎಂಬ ಕಾರಣ ನೀಡಿ ತೆಗೆಯುವ ಪ್ರಕ್ರಿಯೆ ಈಗ ನಡೆಯುತ್ತ...