Sunday, December 27, 2009

'ಮುಸ್ಲಿಂ' ಮನೋಧರ್ಮ ಬದಲಾಗ ಬೇಕಲ್ಲವೇ?

ಜಾಗತಿಕವಾಗಿ ಮುಸ್ಲಿಂರ ಸ್ಥಿತಿ-ಗತಿ ಹೇಗಿದೆ ಎಂಬುದನ್ನು ತಿಳಿಯಲು ಇದೊಂದು ಕಾರ್ಟೂನು ಸಾಕು. ಯಾಕೆ ಹೀಗೆ? ಜಗತ್ತಿನ ಜನಸಂಖ್ಯೆಯ ಒಂದನೇ 5ಭಾಗದಷ್ಟಿರುವ ಮುಸ್ಲಿಂರು ಸಾಮಾಜಿಕವಾಗಿ, ರಾಜಕೀಯವಾಗಿ,ಆರ್ಥಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿಯಲು ಕಾರಣವೇನು? ಅವರದೇ ಅಧಿಪಥ್ಯವಿರುವ ರಾಷ್ಟ್ರಗಳಲ್ಲಿ, ರಾಜ್ಯಗಳಲ್ಲಿಯೂ ಅವರ ಮನಸ್ಥಿತಿ, ಸ್ಥಾನಮಾನಗಳಲ್ಲಿ ಕೊಂಚವೂ ಬದಲಾವಣೆ ಬಂದಿಲ್ಲವೆಂಬುದು ದುರಂತದ ಸಂಗತಿ. ಮುಸ್ಲಿಂ ಎಂದರೆ 'ಅಪಾಯದ ಗಂಟೆ' ಎಂದು ಭಾವಿಸಲಾಗಿರುವುದರಿಂದ ಜಾಗೃತಾವಸ್ಥೆ ಜಗತ್ತಿನೆಲ್ಲಡೆಯೂ ಇದೆ. ಹೀಗೇಕಾಗುತ್ತಿದೆ? ಅವರು ಯಾಕೆ ಜಗತ್ತಿನ ಇತರೆ ಧರ್ಮೀಯರಿಗಿಂತ ಭಿನ್ನವಾಗಿ ಕಾಣಲಾರಂಭಿಸಿದ್ದಾರೆ ಎಂಬ ಪ್ರಶ್ನೆ ಸದಾ ಇದ್ದೇ ಇರುತ್ತೆ. ಅದಕ್ಕೆ ಪೂರಕವಾಗಿ ಇತರೆ ಧರ್ಮೀಯರು ಅವರವರ ಭಾವಕ್ಕನುಗುಣವಾಗಿ ಮುಸ್ಲಿಂರನ್ನು ಅರ್ಥೈಸಲಾರಂಬಿಸಿದ್ದಾರೆ, ಇಂತಹ ಬೆಳವಣಿಗೆ ಪರಿಸ್ಥಿತಿಯನ್ನು ಮತ್ತಷ್ಟು ಆತಂಕದೆಡೆಗೆ ಜಗತ್ತಿನಾಧ್ಯಂತ ಸೆಳೆಯುತ್ತಲೇ ಇದೆ, ಮತ್ತು ಅದರ ಪರಿಣಾಮಗಳು ಗೋಚರವಾಗುತ್ತಲೇ ಇವೆ. ಇದಕ್ಕೆ ಪರಿಹಾರವೇನು? ಎಂಬ ಪ್ರಶ್ನೆಗೆ ಆರೋಗ್ಯಕರ ಉತ್ತರ ಹುಡುಕುವ ಗೋಜಿಗೆ ಯಾರೂ ಹೋಗಿಲ್ಲ. ಆದ್ದರಿಂದ ಮೊಹರಂ ಕಡೆದಿನ ದ ಸಂಧರ್ಭದಲ್ಲಿ ಸಣ್ಣ ಪ್ರಮಾಣದಲ್ಲಿ ಈ ಚರ್ಚೆಯನ್ನು ತಂದಿದ್ದೇನೆ.
ಮುಸ್ಲಿಂ ಎಂದರೆ 'ದೇವರಿಗೆ ಅರ್ಪಿತವಾದವರು' ಎಂದು ಅರ್ಥೈಸಲಾಗಿದೆ. ಮುಸ್ಲಿಂ ಪದದ ಜೊತೆಯಲ್ಲೇ ಥಳುಕು ಹಾಕಿಕೊಂಡಿರುವುದು 'ಜಿಹಾದ್' ಪದ . ಜಿಹಾದ್ ಎಂದರೆ ಹೋರಾಟ. ಧರ್ಮರಕ್ಷಣೆಗೆ ಹೋರಾಟದಲ್ಲಿ ನಿರತನಾದವನು ಮುಜಾಹಿದ್ದೀನ್ ಎಂಬ ಅರ್ಥವಿದೆ. ಜಾಗತಿಕ ಜನಸಂಖ್ಯೆಯಲ್ಲಿ ಶೇ.೨೩ ರಷ್ಟು ಅಂದರೆ ೧.5ಬಿಲಿಯನ್ ಮುಸ್ಲಿಂರಿದ್ದಾರೆ, ಕ್ರೈಸ್ತರ ನಂತರದ ಸ್ಥಾನ ಮುಸ್ಲಿಂ ಜನಸಂಖ್ಯೆಗಿದೆ. ಸುಮಾರು 50ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ಮುಸ್ಲಿಂ ಪಾರುಪತ್ಯವಿದೆ, ಇಂಡೋನೇಷಿಯಾದಲ್ಲಿ ಪ್ರಪಂಚದೆಲ್ಲೆಡೆಗಿಂತ ಹೆಚ್ಚು ಮುಸಲ್ಮಾನರಿದ್ದಾರೆ, ಏಷ್ಯಾ ಖಂಡದಲ್ಲೇ ಶೇ.೬೩ ರಷ್ಟು ಮುಸ್ಲಿಂ ರಿದ್ದು 50ಕ್ಕೂ ಹೆಚ್ಚು ವಿಧದ ಭಾಷೆ ಬಳಸುತ್ತಾರೆ. ಹಿಂದೂಗಳಲ್ಲಿರುವಂತೆ ಇಲ್ಲಿಯೂ 2000ಕ್ಕೂ ಹೆಚ್ಚು ಪ್ರಮುಖ ಜಾತಿ, ಉಪಜಾತಿ ಧಾರ್ಮಿಕ ಪದ್ದತಿಗಳಿವೆ. 7ನೇ ಶತಮಾನದ ಸುಮಾರಿಗೆ ಅರೇಬಿಯಾದಿಂದ ವ್ಯಾಪಾರದ ಸಲುವಾಗಿ ಬಂದು ಬೀಡುಬಿಟ್ಟ ಮುಸಲ್ಮಾನರು ಮೊದಲ ಪ್ರಾರ್ಥನಾ ಮಂದಿರ ಕಟ್ಟಿದ್ದು ಕೇರಳದ ಕೂಡುಂಗಲೂರು ಎಂಬ ಸ್ಥಳದಲ್ಲಿ. ಸಧ್ಯ ಭಾರತದ ಒಟ್ಟು ಜನಸಂಖ್ಯೆಯಲ್ಲಿ ೧/೬ ರಷ್ಟಿರುವ ಇವರು ಕಳೆದ ಜುಲೈ 2009ರ ಅಂಕಿ-ಅಂಶಗಳ ಪ್ರಕಾರ ೧೬೦.9ಮಿಲಿಯನ್ ಇದ್ದಾರೆ, ಇದೇ ಜನಸಂಖ್ಯೆ 2001ರಅಂತ್ಯಕ್ಕೆ 138ಮಿಲಿಯನ್ ಇತ್ತು. ಈ ಕಾರಣಗಳಿಂದಾಗಿ ಅತಿಹೆಚ್ಚು ಮುಸ್ಲಿಂ ಜನಸಂಖ್ಯೆ ಹೊಂದಿದ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತದ್ದು 3ನೇ ಸ್ಥಾನ. ಮೊದಲ ಹಾಗು ನಂತರದ ಸ್ಥಾನಗಳಲ್ಲಿ ಕ್ರಮವಾಗಿ ಇಂಡೋನೇಷಿಯಾ ಮತ್ತು ಪಾಕೀಸ್ಥಾನಗಳಿವೆ. ದೇಶದ 2ರಾಜ್ಯಗಳಾದ ಜಮ್ಮು ಮತ್ತು ಕಾಶ್ಮೀರ, ಲಕ್ಷ್ಯದ್ವೀಪಗಳಲ್ಲಿ ಇವರ ಸಂಖ್ಯೆ ಹೆಚ್ಚಿದೆ, ಸಾಕ್ಷರತೆ ಪ್ರಮಾಣ ಶೇ.೭೫.೫ ರಷ್ಟಿದೆ.
ಇಂತಹ ಮುಸಲ್ಮಾನರು ಪ್ರಸಕ್ತ ಸಂಧರ್ಭದಲ್ಲಿ ಹೇಗೆ ಗುರುತಿಸಲ್ಪಡುತ್ತಿದ್ದಾರೆ, ಗೊತ್ತಾ? ಉಗ್ರಗಾಮಿ, ಭಯೋತ್ಪಾದಕ, ಮುಜಾಹಿದ್ದೀನ್ ಎಂದೇ ಗುರುತಿಸಲಾಗುತ್ತಿದೆ. ಅಖಂಡ ಭಾರತದ ಭಾಗವಾಗಿರುವ ಭಾರತೀಯ ಮುಸಲ್ಮಾನರೂ ಅದರಲ್ಲೂ ಜನಪ್ರಿಯತೆ ಪಡೆದ ವ್ಯಕ್ತಿಗಳನ್ನೆ ಮುಸ್ಲಿಂ ಎಂಬ ಕಾರಣಕ್ಕಾಗಿ ಅನುಮಾನದಿಂದ ನೋಡಲಾಗುತ್ತಿದೆ. ಬಾಲಿವುಡ್ ಬಾದಷಹ ಶಾರೂಖ್ ಖಾನ್ ನನ್ನು ಅಮೇರಿಕಾದಲ್ಲಿ ತೀವ್ರ ತಪಾಸಣೆಗೆ ಒಳಪಡಿಸಿದರೆ, ತನ್ನ ಚಿತ್ರವೊಂದರ ಪ್ರಚಾರದ ಸಲುವಾಗಿ ವೇಷ ಮರೆಸಿಕೊಂಡು ಹೋಟೆಲ್ ನಲ್ಲಿ ಉಳಿದುಕೊಂಡಿದ್ದ ಎಂಬ ಕಾರಣಕ್ಕಾಗಿ ನಟ ಅಮೀರ್ ಖಾನ್ ನ ಮೇಲೆ ದೂರು ದಾಖಲಿಸಲಾಗುತ್ತದೆ. ದೇಶದ ಗುಪ್ತಚರ ಸಂಸ್ಥೆ 'ರಾ' ನಲ್ಲಿ ಮುಸ್ಲಿಂರೇ ಇಲ್ಲ!, ಒಟ್ಟಾರೆ ಸರ್ಕಾರಿ ನೌಕರರು ಕೇವಲ ಶೇ.೬.೪ ಮಾತ್ರ. ಮುಸಲ್ಮಾನರ ಸ್ಥಿತಿಗತಿ ಕುರಿತ ಕೇಂದ್ರಕ್ಕೆ ವರದಿ ನೀಡಿರುವ ರಾಜೀಂದರ್ ಸಾಚಾರ್ ವರದಿಯನುಸಾರ ಮುಸ್ಲಿಂರು ತಮ್ಮ ಜನಸಂಖ್ಯೆ ಪ್ರಮಾಣವನ್ನು ಮೀರಿ 'ಪ್ರಾತಿನಿದ್ಯ' ಪಡೆದ ಜಾಗವೆಂದರೆ ಅದು ಜೈಲುಗಳು! 8ರಾಜ್ಯಗಳಲ್ಲಿ ಸರಾಸರಿ ಶೇ.೧೪.೮೨ ರಷ್ಟಿರುವ ಮುಸ್ಲಿಂರಲ್ಲಿ ಶೇ.೨೩.4ರಷ್ಟು ಜನ ಜೈಲುಬಂಧಿಗಳು!
ಈಗ ವಿಚಾರಕ್ಕೆ ಬರೋಣ ದೇಶದ ಮುಸಲ್ಮಾನರ ಪರಿಸ್ಥಿತಿ ಯಾಕೆ ಹೀಗೆ? ಇವರಲ್ಲಿ ಪೂರ್ಣ ಪ್ರಮಾಣದ ಶಿಕ್ಷಣ ಪಡೆಯುವವರು ವಿರಳ, ಕಲಿತವರು ಕೊಲ್ಲಿ ರಾಷ್ಟ್ರಗಳ ಕಡೆ ಮುಖ ಮಾಡುತ್ತಾರೆ. ಅತಿಯಾದ ಧಾರ್ಮಿಕ ಆಚಾರಗಳನ್ನು ಪಾಲಿಸುತ್ತಾರೆ. ಧರ್ಮದ ಬಗೆಗಿನ ಕುರುಡು ಪ್ರೀತಿ ವ್ಯವಸ್ಥೆಯಿಂದ ಇವರನ್ನು ವಿಮುಖರನ್ನಾಗಿ ಮಾಡುತ್ತಿದೆ. ನಮ್ಮ ವ್ಯವಸ್ಥೆಯಲ್ಲಿ ಕೆಳ-ಮದ್ಯಮ-ಮೇಲ್ವರ್ಗ ಎಂದು ವಿಂಗಡಿಸಲು ಸಾಧ್ಯವಿದ್ದರೆ, ಮುಸಲ್ಮಾನರಲ್ಲಿ ಇದಕ್ಕೆ ತದ್ವಿರುದ್ದ ಬಹುತೇಕವಾಗಿ ಕೆಳ-ಮೇಲ್ವರ್ಗಗಳನ್ನಷ್ಟೇ ಕಾಣಲು ಸಾಧ್ಯ. ಶ್ರೀಮಂತ ಮುಸಲ್ಮಾನರಿಗೆ ಬಡ ಮುಸಲ್ಮಾನರ ಕಾಳಜಿ ಬೇಕಿಲ್ಲ, ರಾಜಕೀಯ ಅಧಿಕಾರ ಹಿಡಿದವನು ಅಧಿಕಾರ ದಕ್ಕಿಸಿಕೊಳ್ಳುವವರೆಗೆ ಮಾತ್ರ ಮುಸ್ಲಿಮರ ಹೆಸರು ಹೇಳುತ್ತಾನೆಯೇ ವಿನಹ ನಂತರ ಕಾಳಜಿ ಮರೆತು ಬಿಡುತ್ತಾನೆ. ಬದುಕಿಗೆ ನಿರ್ದಿಷ್ಟ ಹಾದಿ ಗೋಚರಿಸದಿದ್ದಾಗ ಬಹುತೇಕ ಮಂದಿ ದಗಾ-ವಂಚನೆಯನ್ನೆ ಮುಖ್ಯ ಕಸುಬಾಗಿಸಿ ಕೊಳ್ಳುತ್ತಾರೆ ಉಗ್ರವಾದದೆಡೆಗೆ ವಾಲುತ್ತಾರೆ ಹೊಟ್ಟೆ ಪಾಡಿಗಾಗಿ! ಅದರಲ್ಲೂ ಧಾರ್ಮಿಕ ಹೋರಾಟದ ಹೆಸರಿನಡೆ ನಡೆಯುವ ಕೃತ್ಯವಂತೂ ಘನಘೋರವಾದುದು. ಇವತ್ತು ದೇಶದ ಮುಸಲ್ಮಾನರಿಗೆ ಅಲ್ಪಸಂಖ್ಯಾತರೆಂಬ ಹಣೆಪಟ್ಟಿಯಡಿ ರಕ್ಷಣೆ ನೀಡಲಾಗಿದೆ, ಅವರ ಅಭಿವೃದ್ದಿಗಾಗಿ ಹತ್ತು ಹಲವು ನಿಗಮ/ಮಂಡಳಿಗಳಿವೆ, ಉದ್ಯೋಗ ಮೀಸಲಾತಿ ನೀಡಲಾಗಿದೆ. ಆದರೆ ಯಾವುದು ಸದ್ಭಳಕೆಯಾದಂತಿಲ್ಲ. ಏಕೆಂದರೆ ಮುಸಲ್ಮಾನರ ಹೆಸರು ಹೇಳಿ ಬರುವ ಅದೇ ಜನಾಂಗದ ಮುಖಂಡರು ಸ್ವಾರ್ಥ ಹಿತಾಸಕ್ತಿಗಾಗಿ ಅಲ್ಲಿ ಪ್ರತಿಷ್ಠಾಪಿತರಾಗುತ್ತಿದ್ದಾರೆ. ವಕ್ಫ್ ಮಂಡಳಿಗಳು ಶ್ರೀಮಂತ ಮುಸಲ್ಮಾನರ ಆಶ್ರಯ ತಾಣಗಳಾಗಿವೆ. ವಿಧಾನ ಪರಿಷತ್-ರಾಜ್ಯಸಭೆಗೆ ಆಯ್ಕೆಯಾಗುವ ಮುಸ್ಲಿಂ ಮುಖಂಡರು ಮುಸ್ಲಿಮರ ಸ್ಥಿತಿಗತಿ ಕುರಿತು ಬಾಯಿ ಬಿಡಲು ತಯಾರಿಲ್ಲ. ಇನ್ನು ದೇಶದ ವಿವಿಧ ರಾಜಕೀಯ ಪಕ್ಷಗಳಿಂದ ನೇರವಾಗಿ ಸಂಸತ್/ವಿಧಾನ ಸಭೆಗಳಿಗೆ ಆಯ್ಕೆಯಾಗುವ ಮುಸ್ಲಿಂ ಮುಖಂಡರು ಕೂತು ಉಣ್ಣಲಷ್ಟೇ ಲಾಯಕ್ಕು! ಇವರಿಗೆ ಸಮಾಜದ ಹಿತಾಸಕ್ತಿ ಬೇಕಿಲ್ಲ ಎಂಬ ಆರೋಪ ದೇಶ ಸ್ವತಂತ್ರವಾದಂದಿನಿಂದಲೂ ಇದೆ. ಇನ್ನು ನಮ್ಮ ರಾಜಕೀಯ ಪಕ್ಷಗಳೋ ಮುಸಲ್ಮಾನರನ್ನು ಓಲೈಸಲು ನಿಲ್ಲುತ್ತವೆ, ದೇಶದ ಕಾನೂನು ಎಲ್ಲರಿಗೂ ಒಂದೇ ಆದರೂ ಇವರಿಗೆ ಕೆಲವು ವಿಚಾರಗಳಲ್ಲಿ ರಿಯಾಯ್ತಿ ಇದೆ. ಷರಿಯತ್ ಕಾನೂನು ಆಂತರಿಕವಾಗಿ ಜಾಗೃತವಾಗಿದೆ. ಮದರಸಗಳು ಧಾರ್ಮಿಕ ಚಟುವಟಿಕೆಯ ಕೇಂದ್ರಗಳಾಗಿವೆ. ಅವರಿಗಾಗಿಯೇ ಪ್ರತ್ಯೇಕ ಶಾಲೆ-ಕಾಲೇಜು ಮತ್ತು ವಿಶ್ವವಿದ್ಯಾಲಯಗಳು ಸ್ಥಾಪನೆಯಾಗಿವೆ. ಇಂತಹ ಕ್ರಿಯೆಗಳಿಂದ ಸಂವಿಧಾನದ ಸೆಕ್ಯುಲರಿಸಂ ಪದಕ್ಕೆ ಸೂಕ್ತ ಅರ್ಥ ಸಿಗದಂತಾಗಿದೆ.
ಸೂಕ್ತ ಶಿಕ್ಷಣ ಸಿಗದ ಯಾವುದೇ ವ್ಯಕ್ತಿ ಅನಾರೋಗ್ಯಕರ ವಾತಾವರಣಕ್ಕೆ ಕಾರಣನಾಗುತ್ತಾನೆಂಬ ಮಾತಿದ್ದರು, ಬಾರತೀಯ ಮುಸಲ್ಮಾನರಲ್ಲಿ ಓದಿದವರೇ(ಎಲ್ಲರೂ ಅಲ್ಲ ಶೇ.೬ ರಷ್ಟು ಮಂದಿ ಮಾತ್ರ) ಹೆಚ್ಚಿನ ಸಂಖ್ಯೆಯಲ್ಲಿ ಉಗ್ರಗಾಮಿ ಧೋರಣೆ ತಾಳುತ್ತಿರುವುದು ದೇಶದ ಆಂತರಿಕ ಭದ್ರತೆಗೆ ಸವಾಲೊಡ್ಡುವಂತಿದೆ. ದೇಶದಲ್ಲಿ ನೆಲೆಸಿರುವ ಮುಸಲ್ಮಾನರೆಲ್ಲರೂ ಅರಬ್ಬಿ ಮೂಲದವರಲ್ಲ, ಇಲ್ಲಿನವರೇ ಆಗಿದ್ದರೂ ಸಹಾ ಭಾಹ್ಯ ಶಕ್ತಿಗಳ ಕುತಂತ್ರದಿಂದಾಗಿ ಅವರ ಮನಸ್ಸು ವಿಚಲಿತವಾಗುವಂತೆ ಮತ್ತು ದೇಶದಲ್ಲಿ ಅವರಿಗೆ ಅಭದ್ರತೆಯ ಭಯವನ್ನು ಉಂಟು ಮಾಡಿದೆ. ಇದಕ್ಕೆ ಪೂರ್ಣವಾಗಿ ಮುಸಲ್ಮಾನರೇ ಕಾರಣರಲ್ಲ ಮುಸ್ಲಿಂಮೇತರ ಸಂಘಟನೆಗಳ ಕೋಮುಭಾವನೆಯೂ ಕಾರಣವಾಗಿದೆ.
ದೇಶದ ಮುಸಲ್ಮಾನರಿಗೆ ಸಾಮಾಜಿಕವಾಗಿ, ರಾಜಕೀಯವಾಗಿ ಮತ್ತು ಆರ್ಥಿಕವಾಗಿ ಅತ್ಯಂತ ಪರಿಣಾಮಕಾರಿಯಾದ ಅಭಿವೃದ್ದಿ ಯೋಜನೆಗಳನ್ನು ಜಾರಿಗೆ ತರಬೇಕಾಗಿದೆ. ರಾಜಕೀಯವಾಗಿ ದಲಿತರಿಗೆ ನೀಡಿದಂತೆ ಮುಸ್ಲಿಂರಿಗೆ ಮೀಸಲಾತಿ ನೀಡಬೇಕಾಗಿದೆ. ಸಾಚಾರ್ ವರದಿಯನ್ವಯ ಅಲ್ಪಸಂಖ್ಯಾತರನ್ನು ಅದರಲ್ಲೂ ಮುಸ್ಲಿಂರನ್ನು ಪೂರ್ವಾಗ್ರಹದಿಂದ ನೋಡುವುದನ್ನು ಇನ್ನಾದರೂ ಬಿಡಬೇಕಾಗಿದೆ. ಹಾಗೆಯೇ ಶಿಕ್ಷಣ,ಆರೋಗ್ಯ, ನೌಕರಿ ಎಲ್ಲದರಲ್ಲೂ ಮುಸ್ಲಿಮರಿಗೆ ಪಾಲು ಸಿಗುವಂತೆ ನೋಡಿಕೊಳ್ಳಬೇಕು ಅದು ರಾಜಕೀಯ ಇಚ್ಚಾಶಕ್ತಿಯುಳ್ಳ ಸರ್ಕಾರದಿಂದ ಮಾತ್ರ ಸಾಧ್ಯ. ಅಂತೆಯೇ ಮುಸ್ಲಿಂ (ಕೆಲವು ಮಂದಿ) ರ ಮನಸ್ಥಿತಿ ಬದಲಾಗ ಬೇಕಿದೆ. ವ್ಯವಸ್ಥೆಯ ಆರೋಗ್ಯಕ್ಕೆ ಪೂರಕವಾಗುವಂತಹ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲಿ, ಸಮಾಜದ ಒಟ್ಟು ಮುಖ್ಯವಾಹಿನಿಯಲ್ಲಿ ಬೆರೆಯುವಂತಾಗಲಿ, ಹೊಂದಾಣಿಕೆ ಮನೋಧರ್ಮ ಬೆಳೆಯಬೇಕು ಅದಕ್ಕೆ ಮುಸ್ಲಿಂಮೇತರ ಸಂಘಟನೆಗಳು ಕೈಜೋಡಿಸಬೇಕು. ಹಾಗಾದಲ್ಲಿ ಮಾತ್ರ ಸಮುಷ್ಠಿ ಭಾರತದ ಪ್ರಜ್ಞೆ ಮೂಡಿತಲ್ಲವೇ?

Sunday, December 20, 2009

ಎಟಿಆರ್ ವರದಿ ಜಾರಿಗೂ ಬದ್ದತೆ ಇರಬೇಕಲ್ಲವೇ?



ಅದು ಎಸ್ ಎಂ ಕೃಷ್ಣ ಮುಖ್ಯಮಂತ್ರಿ ಯಾಗಿದ್ದ ದಿನಗಳು, ಒಮ್ಮೆ ವಿಧಾನಸಭೆಯಲ್ಲಿ ಅರಕಲಗೂಡು ಶಾಸಕ ಎ ಟಿ ರಾಮಸ್ವಾಮಿ ನ್ಯಾಯಾಂಗ ಇಲಾಖೆಯಲ್ಲಿ ನಡೆದಿದ್ದ ಕಂಪ್ಯೂಟರ್ ಖರೀದಿ ಹಗರಣ ಹಾಗೂ ನ್ಯಾಯಾಧೀಶರುಗಳು ನಿವೇಶನಗಳನ್ನು ಹೊಂದುವ ಕುರಿತು ನೇರಾನೇರವಾಗಿ ಆರೋಪಿಸಿ ಚರ್ಚೆಗೆ ಮತ್ತು ಕ್ರಮಕ್ಕೆ ಪಟ್ಟು ಹಿಡಿದು ಕುಳಿತು ಬಿಟ್ಟಿದ್ದರು. ಕಾನೂನು ಎಲ್ಲರಿಗೂ ಒಂದೇ ಹಾಗಿರುವಾಗ ನ್ಯಾಯಾಂಗ ಇಲಾಖೆಯ ಲೋಪದೋಷಗಳು ಮತ್ತು ನ್ಯಾಯಾಧೀಶರು ಮಾಡುವ ಲೆಕ್ಕಪತ್ರಗಳು ಪರಿಶೀಲನೆಗೊಳಪಡಬೇಕು ಎಂಬುದು ಅವರ ಸ್ಪಷ್ಠ ನಿಲುವಾಗಿತ್ತು. ಹಾಗೆಯೆ ಮುಂದೆ ಅವರು ಅಕ್ರಮ ಭೂ ಒತ್ತುವರಿ ಪತ್ತೆ ಜಂಟಿ ಸದನ ಸಮಿತಿಯ ಅಧ್ಯಕ್ಷರಾದಾಗ ಸದನಕ್ಕ ಸಲ್ಲಿಸಿದ ಎರಡನೇ ವರದಿಯಲ್ಲಿ ಸುಪ್ರೀಂ ಕೋರ್ಟ್ ಮತ್ತ ಉಚ್ಚನ್ಯಾಯಾಲಯದ ನ್ಯಾಯಾಧೀಶರುಗಳು ಅಕ್ರಮವಾಗಿ ಹೇಗೆ ನಿವೇಶನಗಳನ್ನು ಪಡೆದಿದ್ದಾರೆ, ಎಷ್ಟು ಪ್ರಮಾಣದಲ್ಲಿ ಸರ್ಕಾರಿ ಭೂಮಿ ಒತ್ತುವರಿ ಮಾಡಿದ್ದಾರೆ ಎಂಬುದನ್ನು ಸವಿಸ್ತಾರವಾಗಿ ವಿವರಿಸಿದ್ದರಾದರು ಅದನ್ನು ಚರ್ಚೆಗೆ ತರುವ ಇಲ್ಲವೇ ಕ್ರಮ ಜರುಗಿಸುವ ಇಚ್ಚಾಶಕ್ತಿ ಸರ್ಕಾರಕ್ಕಾಗಲೀ, ವಿಧಾನ ಪರಿಷತ್ ಸದಸ್ಯರು,ವಿಧಾನ ಸಭಾ ಸದಸ್ಯರಿಗಿರಲಿಲ್ಲದಿದ್ದುದು ಪ್ರಜಾಪ್ರಭುತ್ವ ವ್ಯವಸ್ಥೆಯ ದುರಂತ. ಈ ವಿಚಾರವನ್ನು ಇಲ್ಲಿ ಪ್ರಸ್ಥಾಪಿಸುತ್ತಿರುವುದಕ್ಕ ಕಾರಣವಿದೆ. ಸಧ್ಯ ರಾಜ್ಯ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶ ತಮಿಳು ನಾಡು ಮೂಲದ ಪಿ ಡಿ ದಿನಕರನ್ ಸರ್ಕಾರಿ ಜಮೀನನ್ನ ಅಕ್ರಮವಾಗಿ ಒತ್ತುವರಿ ಮಾಡಿದ್ದಾರೆ ಎಂದು ಆರೋಪಿಸಿ ಎರಡೂ ರಾಜ್ಯಗಳ ಬಾರ್ ಕೌನ್ಸಿಲ್ ಸದಸ್ಯರು, ಕೆಲವು ನ್ಯಾಯಾಧೀಶರುಗಳು, ಸಂಸದರು, ಮಾಜಿ ಕೇಂದ್ರ ಸಚಿವರುಗಳು ಒಮ್ಮತದ ಉಗ್ರ ಪ್ರತಿಭಟನೆಯನ್ನು ನಡೆಸುತ್ತಿದ್ದಾರೆ. ನ್ಯಾಯಾಂಗ ಕಲಾಪಕ್ಕೂ ಅಡ್ಡಿ ಪಡಿಸುತ್ತಿದ್ದಾರೆ, ಪ್ರತಿಭಟನೆಯ ಸಂಧರ್ಭದಲ್ಲಿ ಕಾನೂನಿಗೆ ಅಪಚಾರವಾಗುವಂತೆ ವಕೀಲರುಗಳು ನಡೆದುಕೊಳ್ಳುತ್ತಿದ್ದಾರೆ. ಕೋರ್ಟು ಕಲಾಪಗಳನ್ನು ಬಹಿಷ್ಕರಿಸುತ್ತಿದ್ದಾರೆ, ಇದರಿಂ ದ ಕಕ್ಷಿದಾರರುಗಳು ಸಹಾ ತೊಂದರೆ ಅನುಭವಿಸುವಂತಾಗಿದೆ. ಇದೆಲ್ಲಾ ನಡೆದಿರುವುದು ರಾಜ್ಯದ ಮುಖ್ಯ ನ್ಯಾಯಾಧೀಶ ಪಿ ಡಿ ದಿನಕರನ್ ರ ಮೇಲಿರುವ ಆಪಾದನೆಗಳ ಹಿನ್ನೆಲೆಯಲ್ಲಿ ಅವರನ್ನು ಸುಪ್ರಿಂಕೋರ್ಟು ನ್ಯಾಯಾಧೀಶರಾಗಿ ಆಯ್ಕೆ ಸಮಿತಿಯು ಪರಿಗಣಿಸಬಾರದ ಎಂಬ ಕಾರಣಕ್ಕಾಗಿ!
ವಿಚಾರಕ್ಕೆ ಬರುವ ಮುನ್ನ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶ ಪಿ ಡಿ ದಿನಕರನ್ ಬಗ್ಗೆ ಒಂದು ಸಣ್ಣ ಅವಲೋಕನ ಮಾಡೋಣ. 59ರ ವಯೋಮಾನದ ಪೌಲ್ ಡೇನಿಯಲ್ ದಿನಕರನ್ ತಮಿಳು ನಾಡಿನ ಅಗರಿಯಾನ್ ವರ್ಗಕ್ಕೆ ಸೇರಿದ ದಲಿತ ಕ್ರೈಸ್ತರು. ನಾರ್ಥ ಅರ್ಕೋಟ್ ಜಿಲ್ಲೆಯ ಅರಕ್ಕೋಣಮ್ ನಲ್ಲಿ ಬಾಲ್ಯದ ಓದು, ಮಡ್ರಾಸ್ ಕ್ರೈಸ್ತ ಕಾಲೇಜಿನಲ್ಲಿ ಕೆಮಿಸ್ಟ್ರಿ, ನಂತರ ರಾಜಕೀಯ ಶಾಸ್ತ್ರ ಮತ್ತು ಸಾರ್ವಜನಿಕ ಆಡಳಿತದಲ್ಲಿ ಸ್ನಾತಕ ಪದವಿ ಪಡೆದರು. ಮುಂದೆ ಮದ್ರಾಸ್ ಲಾ ಕಾಲೇಜಿನಲ್ಲಿ ಕಾನೂನು ಪದವಿ ಪಡೆದು ಮದ್ರಾಸ್ ಉಚ್ಚ ನ್ಯಾಯಾಲಯದಲ್ಲೇ ವಕೀಲ ವೃತ್ತಿ ಆರಂಭಿಸಿದರು. ರಾಜ್ಯ ಮತ್ತು ಕೇಂದ್ರಾಢಳಿತ ಟ್ರಿಬ್ಯೂನಲ್ ಸಮಿತಿಗಳಿಗೆ ಸಲಹೆಗಾರರಾದರು, ಪಾಂಡಿಚೆರಿ ವಿವಿಗೆ ಕಾನೂನು ಸೇವೆ ನೀಡಿದ್ದರು, ಹೀಗ ಆರಂಭಗೊಂಡ ವೃತ್ತಿ ಜೀವನದ ಉತ್ತುಂಗಕ್ಕೇರಿ ಹಲವು ಉನ್ನತ ಹುದ್ದೇಗಳನ್ನು ಅಲಂಕರಿಸಿದರು. ಸುಪ್ರಿಂ ಕೋರ್ಟು ೨೮ ಆಗಸ್ಟ್ ೨೦೦೯ ರಂದು ಇವರನ್ನು ಸುಪ್ರೀಂ ಕೋರ್ಟು ನ್ಯಾಯಾಧೀಶರನ್ನಾಗಿ ಘೋಷಿಸಿತು.
ಆಗ ಸ್ಪೋಟಗೊಂಡದ್ದೇ ದಿನಕರನ್ ಬಗೆಗಿನ ಅಸಹನೆ ಅರಕ್ಕೋಣಂ ನಲ್ಲಿ ಅವರು ಸರ್ಕಾರಿ ಭೂ ಒತ್ತುವರಿ ಮಾಡಿದ್ದಾರೆ ಹಾಗಾಗಿ ಅವರ ಹೆಸರನ್ನು ಸುಪ್ರಿಂ ಕೋರ್ಟು ನ್ಯಾಯಾಧೀಶರ ಹುದ್ದೆಗ ಅಂತಿಮಗೊಳಿಸಬಾರದು ಎಂದು ಸೆಪ್ಟಂಬರ್ 20ರಂದು ತಮಿಳುನಾಡು ಬಾರ್ ಕೌನ್ಸಿಲ್ ುಪರಾಷ್ಟ್ರಪತಿಗಳ ಬಳಿ ದೂರು ದಾಖಲಿಸಿತು. ಹಿರಿಯ ವಕೀಲ ಮಾಜಿ ಕೇಂದ್ರ ಸಚಿವ ರಾಂ ಜೇಠ್ ಮಲಾನಿ ಕೂಡ ಇದಕ್ಕೆ ಧ್ವನಿ ಗೂಡಿಸಿದರು. ತಮಿಳುನಾಡಿನಲ್ಲಿ ಭಾರಿ ಪ್ರತಿಭಟನೆ ವ್ಯಕ್ತವಾಯಿತು, ಅದು ರಾಜ್ಯಕ್ಕೂ ವ್ಯಾಪಿಸುತ್ತಿದ್ದಂತೆ ತನಿಖೆಗಾಗಿ ಪ್ರತ್ಯೇಕ ಸಮಿತಿ ರಚನೆಯಾಯ್ತು, ಮತ್ತು ವೇಲ್ಲೋರ್ ಜಿಲ್ಲೆ ಯ ಡಿಸಿ ಯವರಿಗೆ ವರದಿ ನೀಡುವಂತೆ ಕೋರಲಾಯಿತು. ಆ ವರದಿಯಲ್ಲೇನಿದೆ ಎಂಬ ವಿಚಾರ ಇನ್ನೂ ಬಾಹ್ಯ ಜಗತ್ತಿಗೆ ತಿಳಿಯುವ ಮುನ್ನವೇ ಅಕ್ರಮವಾಗಿ ಒತ್ತುವರಿ ಮಾಡಿದೆಯೆನ್ನಲಾದ ಭೂಮಿಗೆ ಹಾಕಲಾಗಿದ್ದ ಬೇಲಿಯನ್ನು ಅಲ್ಲಿ ನಸ್ಥಳೀಯರು ತೆರವು ಗೊಳಿಸಿದರು. ಆಯ್ಕೆ ಸಮಿತಿ ದಿನಕರನ್ ಹೆಸರನ್ನು ಕೈಬಿಟ್ಟಿದೆ, ಆದರೆ ದಿನಕರನ್ ಮೌನ ಮುರಿದು ನಾನು ಏನೂ ತಪ್ಪು ಮಾಡಿಲ್ಲನ ನನ್ನನ್ನು ಈ ಬಗ್ಗೆ ಯಾರೂ ಏನೂ ಕೇಳಿಲ್ಲ, ಆಧಾರ ರಹಿತ ಆರೋಪಗಳನ್ನು ನಿಜವೆಂದು ಏಕೆ ಭಾವಿಸಬೇಕು ಎಂದು ಪ್ರಶ್ನಿಸಿದ್ದಾರೆ. ಈ ನಡುವೆ ಉಚ್ಚ ನ್ಯಾಯಾಲಯ ದನ್ಯಾಯಾಧೀಸ ಶೈಲೆಂದ್ರಕುಮಾರ್, ಮು.ನ್ಯಾ. ದಿನಕರನ್ ಕಲಾಪಗಳಲ್ಲಿ ಪಾಲ್ಗೊಳ್ಳದಿದ್ದರು ಆಡಳಿತಾತ್ಮಕ ಕಲಾಪಗಳಲ್ಲಿ ಪಾಲ್ಗೊಳ್ಳುತ್ತಿರುವುದನ್ನು ಬಹಿರಂಗವಾಗಿ ಪ್ರಶ್ನಿಸಿದ್ದಾರೆ. ಸಧ್ಯ ನ್ಯಾಯಮೂರ್ತಿ ದಿನಕರನ್ ಬಗ್ಗೆ ಎಲ್ಲರು ಸೆಟೆದು ಕೊಂಡು ನಿಂತಿರುವಾಗಲೇ ಕಾಂಗ್ರೆಸ್ ಸಂಸದರಾದ ಪ್ರವೀಣ್ ರಾಷ್ಟ್ರಪಾಲ್ , ಜೆ ಡಿ ಸೀಲಂ ಮತ್ತಿತರು 'ದಲಿತ' ಎಂಬ ಹಿನ್ನೆಲೆ ಇಟ್ಟುಕೊಂಡು ದಿನಕರನ್ ಬೆಂಬಲಕ್ಕೆ ನಿಂತಿದ್ದಾರೆ. ಸದರಿ ವಿಚಾರ ರಾಜ್ಯ ಸಭೆಯಲ್ಲಿ ಪ್ರಸ್ತಾಪವಾದರೆ ಅದನ್ನು ವಿರೋಧಿಸಲು ಸಜ್ಜಾಗಿದ್ದಾರೆ. ಈ ಎಲ್ಲ ಬೆಳವಣಿಗೆಗಳು ನ್ಯಾಯಾಂಗ ವ್ಯವಸ್ಥೆಯ ಬಗೆ ಸಾರ್ವಜನಿಕವಾಗಿ ಎಂತಹ ಅಭಿಪ್ರಾಯವನ್ನು ಮೂಡಿಸುತ್ತವೆ. ದಲಿತ ಎನ್ನುವ ಕಾರಣಕ್ಕೆ ಒಂದು ವಿಚಾರವನ್ನು ಬೆಂಬಲಿಸುವುದು ತಪ್ಪು ಹಾಗೇಯೇ ಮು.ನ್ಯಾ.ಮೂರ್ತಿ ಒಬ್ಬರ ಬಗ್ಗೆ ಸ್ಪಷ್ಟ ವರದಿ ಕೈ ಸೇರುವ ಮುನ್ನವೇ ಅವರ ವಿರುದ್ದ ಕಾನೂನು ವಿರೋಧಿ ಚಟುವಟಿಕೆಗಳು ನಡೆಯುವುದು ಘೋರ ತಪ್ಪಾಗುತ್ತದೆ. ಮತ್ತೊಂದು ಪ್ರಮುಖ ಅಂಶವೆಂದರೆ ನ್ಯಾಯಾಧೀಶರುಗಳ ಆಸ್ತಿ ಘೋಷಣೆಯಾಗಬೇಕು ಯಾರೂ ಕಾನೂನಿಗೆ ಅತೀತರಲ್ಲ ಎನ್ನುವ ನ್ಯಾಯಮೂರ್ತಿ ಶೈಲೆಂದ್ರ ಕುಮಾರ್ ಪ್ರಶಂಸನಾರ್ಹರು. ತಪ್ಪು ಮಾಡಿದವರು ಯಾರೇ ಆಗಲಿ ಅದು ಚರ್ಚೆಗ ೆಬರಬೇಕು ಮತ್ತು ಕಳಂಕರಹಿತವಾಗಿ ನ್ಯಾಯಾಂಗ ವ್ಯವಸ್ಥೆ ಮುನ್ನೆಡೆಯಬೇಕು ಎಂಬುದರಲ್ಲ ಿಎರಡೂ ಮಾತಿಲ್ಲ.
ಈಗ ವಿಚಾರಕ್ಕೆ ಬರುತ್ತೇನೆ, ಉಚ್ಚ ನ್ಯಾಯಾಲಯದ ನ್ಯಾಯಾಧೀಶರು ಅಧಿನ ನ್ಯಾಯಾಲಯಗಳಿಗೆ ಸುಮಾರು ೧೬.50ಕೋಟ ಿವೆಚ್ಚದಲ್ಲಿ ಕಂಪ್ಯೂಟರುಗಳನ್ನು ಖರಿದಿಸಿದಾಗ ಅದನ್ನು ವಿರೋದಿಸಿದ್ದು ಶಾಸಕ ಎ ಟ ರಾಮಸ್ವಾಮಿ, ನ್ಯಾಯಾಧೀಶರುಗಳಿಗೆ ಹಣಕಾಸು ಸ್ವಾಯತ್ತತೆ ಕೊಡಬಾರದು, ಹಾಗೇನಾದರೂ ಕೊಟ್ಟಿದ್ದೇ ಆದಲ್ಲಿ ಅದು ಸಾರ್ವಜನಿಕ ಪರಿಶೀಲನೆಗೆ ಒಳಪಡಬೇಕು ಎಂದು ಅವರು ಚರ್ಚೆ ಮಂಡಿಸಿದಾಗ ಎಲ್ಲರ ಕ್ರೂರ ದೃಷ್ಟಿ ಅವರೆಡೆಗೆ ಬಿತ್ತೆ ವಿನಹ ಸರ್ಕಾರ ಹೋಗಲಿ ಸಹ ಸದಸ್ಯರೂ ಸಹ ಅವರನ್ನು ಬೆಂಬಲಿಸಲಿಲ್ಲ. ಅದೇ ರಾಮಸ್ವಾಮಿ ಮುಂದೆ ಜಂಟಿ ಸದನ ಸಮಿತಿ ಸದಸ್ಯರಾದಾಗ 76ಮಂದಿ ಉ ಚ್ಚ ನ್ಯಾಯಾಲಯದ ನ್ಯಾಯಾಧೀಶರುಗಳು ಮತ್ತು 8ಮಂದಿ ಸುಪ್ರಿಂ ಕೋರ್ಟು ನ್ಯಾಯಾಧೀಶರುಗಳು ಅಕ್ರಮವಾಗಿ ಸರ್ಕಾರಿ ನಿವೇಶನಗಳನ್ನು ಕರ್ನಾಟಕ ನ್ಯಾಯಾಂಗ ಇಲಾಖ ೆನೌಕರರ ಗೃಹ ನಿರ್ಮಾಣ ಸಹಕಾ ರಸಂಘ ದ ಮೂಲಕ ಪಡೆದಿದ್ದನ್ನು ಪತ್ತೆ ಹಚ್ಚಿ ಕ್ರಮಕ್ಕೆ ವರದಿ ಶಿಫಾರಸ್ಸು ಮಾಡಿದರು. ಅದು ಸದನದಲ್ಲಿ ಮಂಡನೆಯೂ ಆಗಿದೆ. ರಾಜ್ಯದಲ್ಲಿ ಹೆಸರು ಮಾಡಿದ ಅನೇಕ ನ್ಯಾಯಾಧೀಶರುಗಳ ಹೆಸರು ಸಹಾ ಆ ಪಟ್ಟಿಯಲ್ಲಿದೆ. ಆದರೆ ಕ್ರಮ ಜರುಗಿಸುವ ಎದೆಗಾರಿಕೆಯನ್ನು ಯಾರೂ ಈವರೆಗೆ ಮಾಡಿಲ್ಲ. ಎ ಟಿ ಆರ್ ಈ ಬಗ್ಗೆ ಪದೇ ಪದೇ ಪ್ರಸ್ತಾಪಿಸುತ್ತಿದ್ದಾರಾದರೂ ಆಢಳಿತಶಾಹಿ ವ್ಯವಸ್ಥೆ ಇರಲಿ ಕೆಲವು ಪತ್ರಕರ್ತರು ಸದರಿ ವಿಷಯವನ್ನು ಬರೆಯಲು ಹಿಂದೆ ಮುಂದೆ ನೋಡುತ್ತಿದ್ದಾರೆಂಬುದು ಏಕೋ ತಿಳಿಯುತ್ತಿಲ್ಲ. ಪ್ರಜಾಪ್ರಭುತ್ವದ 3ಅಂಗಗಳ ಪೈಕಿ ಕಾರ್ಯಾಂಗ ಮತ್ತು ಶಾಸಕಾಂಗ ಮಾತ್ರ ಸಾರ್ವಜನಿಕ ವಾಗಿ ಪರಿಶೀಲನೆಗೆ ಒಳಪಡುವುದಾದರೆ ನ್ಯಾಯಾಂಗ ವ್ಯವಸ್ಥೆಯು ಸಹಾ ಸಾರ್ವಜನಿ ಕವಾಗಿ ಪರಿಶೀಲನೆಗೆ ದಕ್ಕಬೇಕು. ಉಚ್ಚ ನ್ಯಾಯಾಲಯಗಳ ನ್ಯಾಯಾಧೀಶರುಗಳಿಗೆ ಸಂವಿಧಾನಾತ್ಮಕವಾಗಿ ರಕ್ಷಣೆ ನೀಡಲಾಗಿದೆ ಹಾಗಾಗಿ ಅವರು ಸಾರ್ವಜನಿಕ ಸೇವಕರಲ್ಲ. ಆದ್ದರಿಂದಲೇ ಅವರು ಯಾವುದೇ ಸಂಘ ಸಂಸ್ಥೆಗಳ ಸದಸ್ಯರಾಗುವಂತಿಲ್ಲ ಎಂದು ಕೆ ಎಸ್ ಭಕ್ತವತ್ಸಲಂ ಮತ್ತು ಎಂ ಎಫ್ ಸಾಲ್ಡಾನಾ ನೇತೃತ್ವದ ವಿಭಾಗೀಯ ಪೀಠ ಐಎಲ್ಆರ್ ೧೯೯೫(೧)ಕ.ರಾ.೩೧,39ರಲ್ಲಿ ಸ್ಪಷ್ಟ ತೀರ್ಪು ನೀಡಿದೆ. ಈ ತೀರ್ಪಿನನ್ವಯ ಎಟಿ ರಾಮಸ್ವಾಮಿ ವರದಿಯಲ್ಲಿ ಉಲ್ಲೇಖಿಸಲಾಗಿರು ವ 76ಮಂದಿ ಉಚ್ಚ ನ್ಯಾಯಾಲಯದ ನ್ಯಾಯಾಧೀಶರು, 8ಮಂದಿ ಸುಪ್ರಿಂ ಕೋರ್ಟ ನ್ಯಾಯಾಧೀಶರುಗಳ ವಿರುದ್ದ ಕ್ರಮವಾಗಬೇಕಿದೆ. ದಿನಕರನ್ ರ ವಿರುದ್ದ ಧ್ವನಿ ಎತ್ತುತ್ತಿರು ವ ಬಾರ್ ಕೌನ್ಸಿಲ್ ಸದಸ್ಯರು ಮತ್ತು ಇತರೆ ನ್ಯಾಯಾಧೀಶರು ಎ ಟಿ ರಾಮಸ್ವಾಮಿ ವರದಿಯಲ್ಲಿ ತಿಳಿಸಿರುವ 84ಮಂದಿ ನ್ಯಾಯಾಧೀಶರ ವಿರುದ್ದ ಕ್ರಮ ಜರುಗಿಸಲು ಬದ್ದತೆಯ ಹೋರಾಟ ಪ್ರದರ್ಶಿಸ ಬೇಕಿದೆ. ಒಂದು ಕಣ್ಣಿಗೆ ಸುಣ್ಣ ಮತ್ತೊಂದು ಕಣ್ಣಿಗೆ ಬೆಣ್ಣೆ ಬೇಡಾ ಅಲ್ಲವೇ?? ಯಾಕೆಂದರೆ ಪ್ರಜಾಪ್ರಭುತ್ವದಲ್ಲ ಎಲ್ಲರಿಗೂ ನಿರ್ಭಿತವಾದ ನ್ಯಾಯ ವಿತರಣೆಯಾಗ ಬೇಕಲ್ಲವೇ? ನ್ಯಾಯಾಧೀಶರು,ವಕೀಲರು,ನ್ಯಾಯಾಂಗ ವ್ಯವಸ್ಥೆ ಪ್ರಜಾಪ್ರಭುತ್ವದಲ್ಲಿ ರೋಲ್ ಮಾಡೆಲ್ ಆಗಬೇಕಲ್ಲವೇ?

Sunday, December 13, 2009

ನೂರು ಜನ್ಮಕೂ ಮರೆಯಲಾದಿತೆ?

ನಮ್ಮಲ್ಲೊಂದು ಗಾದೆ ಮಾತಿದೆ 'ಅಡಿಕೆಗೆ ಹೋದ ಮಾನ,ಆನೆ ಕೊಟ್ಟರೆ ಬಂದೀತೆ'? ಹೌದು ಇಂತಹದ್ದೊಂದು ಪ್ರಶ್ನೆ ಉದ್ಭವವಾಗಿದ್ದು ಮೊನ್ನೆ ಮೊನ್ನೆಯಷ್ಟೆ ಸುದ್ದಿಗೆ ಗ್ರಾಸವಾಗಿದ್ದ ಅಂದ್ರಿತಾ ರೇ-ನಾಗತ್ತಿಹಳ್ಳಿ ಪ್ರಕರಣ. ಇದನ್ನು ಬರೆಯಬೇಕೋ ಬೇಡವೋ ಎಂಬ ಜಿಜ್ಞಾಸೆಗೆ ನಡುವೆ ಇದನ್ನು ಚರ್ಚೆಗೆ ತಂದಿದ್ದೇನೆ. ಇದು ಯಾಕೆ ಚರ್ಚೆಗೆ ಬರಬೇಕು? ಹಾನಿ ಯಾರಿಗೆ? ಸಮಾಜದ ಮೇಲೆ ಇದು ಎಂತಹ ಪರಿಣಾಮ ಬಿರುತ್ತದೆ? ಅಷ್ಟಕ್ಕೂ ಇಂತಹ ಪ್ರಕರಣಗಳು ಯಾಕಾದರೂ ಜರುಗುತ್ತವೆ ಎಂಬುದು ಮೂಲ ಪ್ರಶ್ನೆ.

ಹೇಳಿ ಕೇಳಿ ನಾಗತ್ತಿಹಳ್ಳಿ ಚಂದ್ರಶೇಖರ್ ಸೂಕ್ಷ್ಮ ಗ್ರಹಿಕೆಯ ಸಂವೇದನಾಶೀಲ ಮನಸ್ಥಿತಿಯ ಪ್ರಬುದ್ದ ಸಾಹಿತಿ ಮತ್ತು ನಿರ್ದೇಶಕರು. ಭಾವನಾತ್ಮಕವಾದ ಸಂಬಂಧಗಳನ್ನು ಅತ್ಯುತ್ತಮವಾಗಿ ಸೆಲ್ಯೂಲಾಯ್ಡ್ ಮಾಧ್ಯಮದಲ್ಲಿ ಬಿಂಬಿಸಬಲ್ಲ ಛಾತಿಯ ಮನುಷ್ಯ. ಇವರು ನಿರ್ದೇಶಿಸಿದ ಸಾಧಾರಣ ಕಥೆಯ 'ಉಂಡೂ ಹೋದ ಕೊಂಡು ಹೋದ' ಸಿನಿಮಾದ ಯಶಸ್ಸು ಅಮೇರಿಕಾ ಅಮೇರಿಕಾ, ನನ್ನ ಪ್ರೀತಿಯ ಹುಡುಗಿ, ಅಮೃತಧಾರೆ, ಮಾತಾಡ್ ಮಾತಾಡ್ ಮಲ್ಲಿಗೆ, ಭಾ ನಲ್ಲೆ ಮಧುಚಂದ್ರಕೆ, ಹೂಮಳೆ ಇತ್ತೀಚೆಗಿನ ಒಲವೇಜೀವನ ಲೆಕ್ಕಾಚಾರದಂತಹ ಸೂಪರ್ ಚಿತ್ರಗಳನ್ನು ತೆರೆಗೆ ನೀಡಿದ್ದಾರೆ. ಕಾಡಿನ ಬೆಂಕಿ ಚತ್ರದ ಮೂಲಕ ಸಿನಿ ಬದುಕು ಆರಂಬಿಸಿದರು. ಸಂಗೀತವೇ ಪ್ರಧಾನವಾಗಿದ್ದ ಹೊಸ ಮುಖಗಳನ್ನ ಹೊಂದಿದ 'ಪ್ಯಾರಿಸ್ ಪ್ರಣಯ" ವಿದೇಶದಲ್ಲಿ ಚಿತ್ರೀಕರಣ ಗೊಂಡ ಚಿತ್ರವಾಗಿದ್ದು ವಿಭಿನ್ನ ಅನುಭವ ನೀಡಿತ್ತು. 100ಕ್ಕ ಹೆಚ್ಚು ಹಾಡುಗಳನ್ನು ರಚಿಸಿರು ವ ನಾಗತ್ತಿಹಳ್ಳಿ ಉತ್ತಮ ಗೀತ ರಚನೆಕಾರರು ಹೌದು. ಇದುವರೆಗೂ 15ಕನ್ನ ಡಸಿನಿಮಾಗಳನ್ನ ನಿರ್ದೇಶಿಸಿರು ವನಾಗತ್ತಿಹಳ್ಳಿ 10ಕಿರುತೆರೆ ಧಾರಾವಾಹಿಗಳನ್ನು ನಿರ್ದೇಶಿಸಿ ಹೆಸರು ಮಾಡಿದ್ದಾರೆ. ಅಂತರರಾಷ್ಟ್ರೀಯ ಕ್ಯಾನೆ ಸಿನಿಮಾ ಫೆಸ್ಟಿವಲ್ ನಲ್ಲಿಯೂ ಪ್ರಂಶಶೆಗೆ ಪಾತ್ರರಾಗಿದ್ದಾರೆ. ಮೈಸೂರು ವಿವಿ ಯಲ್ಲಿ ಕನ್ನಡ ಸಾಹಿತ್ಯದಲ್ಲಿ ಎಂಎ ಮುಗಿಸಿದ ನಾಗತ್ತಿಹಳ್ಳಿ 8ಚಿನ್ನದ ಪದಕ ಮತ್ತು 2ನಗದು ಬಹುಮಾನ ಪಡೆ ದ ಪ್ರತಿಭಾವಂತ. ಬೆಂಗಳೂರು ವಿವಿ ಯಲ್ಲಿ ಪ್ರಾಧ್ಯಾಪಕ ವೃತ್ತಿಯಲ್ಲಿದ್ದ ನಾಗತ್ತಿಹಳ್ಳಿ, ಸಾಪ್ಟ್ ವೇರ್ ಇಂಜಿನಯರ್ ಶೋಭಾರನ್ನು ಅಂತರ್ ಜಾತೀಯ ವಿವಾಹವಾಗಿದ್ದಾರೆ. ಸಿಹಿ ಮತ್ತು ಕನಸು ಎಂಬ ಇಬ್ಬರು ಮಕ್ಕಳು ಇವರಿಗುಂಟು. ಸಧ್ಯ ಅವರು ಅಮೇರಿಕಾದಲ್ಲ ನೆಲೆಸಿದ್ದಾರೆ! ಸಿನಿಮಾವನ್ನು ವೃತ್ತಿ ಬದುಕಾಗಿಸಿಕೊಂಡ ನಾಗತ್ತಿಹಳ್ಳಿ ಮಾತ್ರ ಇಲ್ಲಿಯೇ ಇದ್ದಾರೆ.
ಇನ್ನು ಅಂದ್ರಿತಾ ರೇ ವಿಷಯಕ್ಕೆ ಬರೋಣ. ಈಕ ಮೂಲತಹ ಬಂಗಾಳಿ, ಹುಟ್ಟಿದ್ದು ರಾಜಸ್ಥಾನದಲ್ಲಿ, ಬೆಳೆದಿದ್ದು ಬೆಂಗಳೂರಿನಲ್ಲಿ, ಕಳೆ ದ18ವರ್ಷಗಳಿಂ ದ ಅವರ ಕುಟುಂಬ ಬೆಂಗಳೂರಿನಲ್ಲಿಯೇ ನೆಲೆಸಿದೆ. ತಂದೆ ಎ ಕೆ ರೇ ಭಾರತೀ ಯ ವಾಯುಪಡೆಯಲ್ಲಿ ಡೆಂಟಿಸ್ಟ್ ಆಗಿ ನಿವೃತ್ತರಾಗಿದ್ದಾರೆ, ಆದರೂ ಬೆಂಗಳೂರಿನ ರಿಚ್ ಮಂಡ್ ರಸ್ತೆಯಲ್ಲಿ ಇವತ್ತಿಗೂ ಸ್ವಂತ ಕ್ಲಿನಿಕ್ ನಲ್ಲಿ ಪ್ರಾಕ್ಟೀಸ್ ನಡೆಸುತ್ತಾರೆ. ತಾಯಿ ಸುನೀತಾ ರೇ ಮಕ್ಕಳ ಸೈಕಾಲಜಿಸ್ಟ್ ಆಗಿದ್ದಾರೆ. ಐಂದ್ರಿತಾ ಬಾಲ್ಯ ಮತ್ತು ಪ್ರಾಥಮಿಕ ವಿಧ್ಯಾಭ್ಯಾಸ ಬೆಂಗಳೂರಿನಲ್ಲಿ. ಓದಿದ್ದು ಬಾಲ್ಡ್ ವಿನ್ ಪ್ರೌಢಶಾಲೆಯಲ್ಲಿ. ಈಗ ತಂದೆಯಂತಯೇ ಡೆಂಟಿಸ್ಟ್ ಆಗುವ ಕನಸು ಕಾಣುತ್ತಿರುವ ಅಂದ್ರಿ ತ ಅಂಬೇಡ್ಕರ್ ಡೆಂಟಲ್ ಕಾಲೇಜಿನಲ್ಲ ಪ್ರಥಮ ವರ್ಷದ ವಿದ್ಯಾರ್ಥಿಯಾಗಿದ್ದಾರೆ. ಈ ನಡುವ ಮುಂಬೈಗೆ ತೆರಳ ಸಣ್ಣಪುಟ್ಟ ಜಾಹಿರಾತು ಮತ್ತು ಮಾಡೆಲಿಂಗ್ ನಲ್ಲಿ ಪಾಲ್ಗೊಳ್ಳುತ್ತಿದ್ದ ಅಂದ್ರಿತಾ ಕನ್ನಡ ಚಿತ್ರರಂಗಕ್ಕೆ ಪ್ರವೇಶ ಪಡೆದದ್ದು ಮಹೇಶಬಾಬು ನಿರ್ದೆಶನ ದ ಮೆರವಣಿಗೆ ಚಿತ್ರದ ಮೂಲ ಕ. ಇಲ್ಲಿಯವರೆಗೆ ಆಕೆ ಕನ್ನಡದಲ್ಲಿ ಅಭಿನಯಿಸಿದ್ದು 7ಚಿತ್ರಗಳು, ತೆಲುಗಿನಲ್ಲಿ ಒಂದು ಮತ್ತು ಹಿಂದಿಯಲ್ಲ ಒಂದು. ಇಂತಹ ಅಂದ್ರಿತಾ ನಾಗತ್ತಿಹಳ್ಳಿ ನಿರ್ದೇಶನದ "ನೂರು ಜನ್ಮಕೂ " ಚಿತ್ರದಲ್ಲಿ ಅಭಿನಯಿಸಲು ಹಾಕಾಂಗ್ ಗೆ ತೆರಳಿದ್ದರು.
ಡಿಸೆಂಬರ್ 10ರಂದು ತಂಡ ಭಾರತಕ್ಕೆ ವಾಪಾಸ್ ಆದಾಗ ಆದ ರಂಪ ರಾಮಾಯ ಣ ನಿಮಗೆಲ್ಲರಿಗೂ ತಿಳಿದದ್ದೇ. ಇಡೀ ಪ್ರಕರಣದಲ್ಲಿ ಮೇಲ್ನೋಟಕ್ಕೆ ನಿರ್ದೇಶ ಕನಾಗತ್ತಿಹಳ್ಳಿ ಚಂದ್ರಶೇಖರ್ ತಪ್ಪಿತಸ್ಥರಂತೆ ಕಾಣಿಸುತ್ತಿದ್ದರಾದರೂ, ಅವರ ಪರ ವಕಾಲತ್ತು ವಹಿಸಿದವರೇ ಹೆಚ್ಚು. ಮೇಷ್ಟ್ರು ನಮ್ಮವರು ಎಂಬ ಕಾರಣಕ್ಕೋ ಏನೋ. ಇಡೀ ಘಟನೆಗೆ ಸಂಬಂಧಿಸಿದಂತೆ ಐಂದ್ರಿತಾ ರೇ ಮಾಹಿತಿ ನೀಡಿ ಮೇಷ್ಟ್ರು ವುಮನೈಸರ್ ಎಂದು ಸ್ಪಷ್ಟ ಮಾತುಗಳಲ್ಲಿ ಆರೋಪಿಸಿದರು. ಆದರೆ ನಾಗತ್ತಿಹಳ್ಳಿ ಮತ್ತು ಮಾಧ್ಯಮಗಳು ಕಪಾಳ ಮೋಕ್ಷ ಪ್ರಕರಣವನ್ನೇ ಮುಖ್ಯ ವಾಹಿನಿಗೆ ತಂದರಲ್ಲದೇ ಅಸಲಿ ಆರೋಪವನ್ನು ಮರೆಮಾಚಿದರು. ಇಲ್ಲಿ ನಾಗತ್ತಿಹಳ್ಳಿ ತಪ್ಪಿತಸ್ಥರು ಎಂದು ಹೇಳುತ್ತಿಲ್ಲವಾದರೂ ಆರೋಪದ ವಾಸ್ತವ ನೆಲೆಗಟ್ಟಿನ್ಲಲಿ ಸಮರ್ಪಕ ಚರ್ಚೆ ಯಾಗಿದ್ದರೆ. ಸಿನಿಮಾ ಮಂದಿಗೆ ಸರಿಯಾದ ಸಂದೇಶ ರವಾನೆಯಾಗುತ್ತಿತ್ತು, ಆದರೆ ಆದದ್ದೇ ಬೇರೆ.
ಅಷ್ಟಕ್ಕೂ ಸದರಿ ವಿಚಾರದ ಚರ್ಚೆ ಏಕೆಂದರೆ ನಾಗತ್ತಿಹಳ್ಳಿ ಮತ್ತು ಐಂದ್ರಿತಾ ಇಬ್ಬರೂ ಸಾರ್ವಜನಿಕ ವ್ಯಕ್ತಿಗಳು. ಅವರ ನಡವಳಿಕೆಗಳು ಮತ್ತು ನಿಲುವುಗಳು ಸಾರ್ವಜನಿಕವಾಗಿ ಸಭ್ಯವಾಗಿರಬೇಕಾಗುತ್ತದೆ. ಅದರಲ್ಲೂ ಸಿನಿಮಾ ಮಾಧ್ಯಮ ಇತರ ಮಾಧ್ಯಮಗಳಿಗಿಂತ ಹೆಚ್ಚು ಪರಿಣಾಮಕಾರಿಯಾಗಿ ಜನರನ್ನು ತಲುಪುತ್ತದೆ. ಅವರ ಕ್ರಿಯೆಗಳನ್ನು ಜನ ಗಮನಿಸುತ್ತಾರೆ ಮತ್ತು ಅವಿವೇಕಿಗಳೂ ಅದನ್ನು ಅನುಕರಿಸುತ್ತಾರೆ. ಈಪೈಕಿ ಎರಡನೇ ಕೆಟಗರಿಯ ಜನರೇ ಹೆಚ್ಚು! ಹಾಗಾಗಿ ವಾಸ್ತವಾಂಶಗಳು ಚರ್ಚಾರ್ಹ ಹಾಗೂ ತಪ್ಪ-ಒಪ್ಪುಗಳು ತಿಳಿಯುತ್ತವೆ. ಸಿನಿಮಾ ಮಂದಿಯೆಂದರೆ ಮೊದಲೇ ಜನರಿಗೆ ಅಸಡ್ಡೆ 'ಶೀಲ' ಕಳೆದುಕೊಂಡವರು, ಮಜಾ ಮಾಡುವವರು ಎಂಬಿತ್ಯಾದಿ ಕಲ್ಪನೆಗಳು ಇವೆ. ಇವುಗಳಲ್ಲಿ ಕೆಲವು ನಿಜವಾದರೂ ಕೆಲವಕ್ಕೆ ರೆಕ್ಕೆ ಪುಕ್ಕ ಎರಡೂ ಇರುವುದಿಲ್ಲ. ಅಷ್ಟಕ್ಕೂ ಸಿನಿಮಾ ಲೋಕದಲ್ಲಿ ಇಂತಹ ಘಟನೆಗಳು ಇದೇ ಮೊದಲೇನಲ್ಲ, ಹಿಂದೆ ಪುಟ್ಟಣ್ಣ ಕಣಗಾಲ್ ರಂತ ಹ ನಿರ್ಧೇಶಕರು ಅಂದು ಕೊಂಡ ನಟನೆ ಬಾರದಿದ್ದಾಗ ಕಪಾಳ ಮೋಕ್ಷ ಮಾಡಿದ ಉದಾಹರಣೆಯಿದೆ. ರವಿಚಂದ್ರನ್ ಹಳ್ಳಿಮೇಷ್ಟ್ರು ಚಿತ್ರಕ್ಕೆ ಕರೆತಂದ ನಾಯಕಿ ರವಿಚಂದ್ರನ್ ಮೇಲೆ ರೇಪ್ ಕೇಸು ದಾಖಲಿಸಿದ ಘಟನೆಯಿದೆ.ಮೊನ್ನೆ ಮೊನ್ನೆಯಷ್ಟೇ ಮೈಸೂರು ಲೋಕೇಶ್ ಮಗ ಆದಿಲೋಕೇಶನ ಅವಾಂತರ ಬಯಲಿಗೆ ಬಂದಿದೆ. ಶೃತಿಯ ಸಹೋದರ ಶರಣ್ ಪ್ರೀತಿಸಿ ವಂಚಿಸಿ ಮದುವೆಯಾದ ನಿದರ್ಶನವಿದೆ, ಸಾಯಿ ಪ್ರಕಾಶ್ ಸೆಟ್ ನಲ್ಲಿ ನಟಿಯರೊಂದಿಗೆ ಅಸಹ್ಯವಾಗಿ ನಡೆದುಕೊಂಡ ಪ್ರಕರಣ, ನಟಿ ಮಹಾಲಕ್ಷ್ಮಿಯೊಂದಿಗೆ ನಟ ಜೈಜಗದೀಶ್ ಅಸಭ್ಯವಾಗಿ ವರ್ತಿಸಿ ತಪರಾಕಿ ಪಡೆದ ಘಟನೆ, ಪ್ರಭಾಕರ್ ಬಗೆಗೆ ಅಸಹ್ಯದ ಕಥೆಗಳಿವೆ ಹೀಗೆ ಹಲವು. ಇವು ವಾಸ್ತವ ಜಗತ್ತಿನಲ್ಲಿ ಸಿನಿಮಾ ಮಂದಿಯ ಬಗ್ಗೆ ಅಸಹ್ಯವನ್ನು ಹುಟ್ಟುಹಾಕುತ್ತವೆ. ಸಿನಿಮಾ ಜಗತ್ತಿನ ಕೆಲವು ಮಂದಿ ನಿರ್ಧೇಶಕರು,.ನಿರ್ಮಾಪಕರು, ಸಹ ನಿರ್ಧೇಶಕರು , ನಟರು ತೆರೆಯ ಹಿಂದೆ ಎಷ್ಟೋ ಮಂದಿ ಹೆಣ್ಣು ಮಕ್ಕಳ ಬದುಕು ಹಾಳುಮಾಡಿದ ನಿದರ್ಶನವಿದೆ. ಇಂದಿಗೂ ಅದು ಜಾರಿಯಲ್ಲಿದೆ ತೆರೆ ಯಮರೆಯಲ್ಲಿ! ಆದರೆ ವೃತ್ತಿ ಬದುಕು ಕಂಡು ಕೊಳ್ಳುವ ಮಂದಿ ಇದನ್ನೆಲ್ಲಾ ಸಹಿಸಿಕೊಂಡು ಸಿಕ್ಕ ಅವಕಾಶಗಳನ್ನು ಪಡೆದುಕೊಂಡು ಇಂದಿಗೂ ಅತಂತ್ರ ಬದುಕು ಸವೆಸುತ್ತಿದ್ದಾರೆ. ಸಿನಿಮಾ-ನಾಟಕ ನಮ್ಮ ಸಂಸ್ಕೃತಿಯ ಭಾಗ ಅವು ಸಧಭಿರುಚಿಯ ವಿಚಾರಗಳನ್ನು ನಮ್ಮ ನಡುವೆ ಉಳಿಸಬೇಕು, ತರಬೇಕು ಆದರೆ ಇದಕ್ಕೆಲ್ಲಾ ವ್ಯತಿರಿಕ್ತವಾದ ಕ್ರಿಯೆಗಳು ಜಾರಿಯಲ್ಲಿವೆ. ಸಹ್ಯವೆನಿಸುವಂತಹ ವಾತಾವರಣ ಕಣ್ಮರೆಯಾಗಿದೆ ಇದು ಆರೋಗ್ಯವಂತ ಸಮಾಜ ದಲಕ್ಷಣಗಳಲ್ಲ. ಹೇಳೋದು ವೇದಾಂತ ಮಾಡೋದು ಅನಾಚಾರ, ಸಮಾಜಕ್ಕೊಂದು ಮುಖ ಅಂತರಂಗಕ್ಕೆ ಮತ್ತೊಂದು ಮುಖ ಎಂಬಂತಿದೆ ಸಧ್ಯದ ಸ್ಥಿತಿ. ಇಂತಹವೆಲ್ಲಾ ಸಮಾಜದ ಸ್ವಾಸ್ಥ್ಯ ಕೆಡಿಸದೇ ಇರಬಲ್ಲವೇ. ಒಳ್ಳೆಯ ಸಂಗತಿಗಳನ್ನು ಕಾಮಾಲೆ ಕಣ್ಣಿನಿಂದ ನೋಡುವಂತೆ ಇಂತಹ ಸಂಗತಿಗಳು ಮಾಡಬಲ್ಲವಲ್ಲವೇ? ನೀವೇನು ಹೇಳ್ತೀರಿ?

ಈ ಲೇಖನವನ್ನು ಯಥಾವತ್ತಾಗಿ ದಟ್ಸ್ ಕನ್ನಡ.ಕಾಮ್ ನಲ್ಲಿ ಪ್ರಕಟಿಸಿದ ಸಂಪಾದಕರಾದ ಶ್ಯಾಮ್ ಸುಂದರ್ ಅವರಿಗೆ ಧನ್ಯವಾದಗಳು. ಸದರಿ ಲೇಖನದ ಲಿಂಕ್ ಹೀಗಿದೆ

http://thatskannada.oneindia.in/movies/controversy/2009/12/14-nagathi-aindrita-contro-in-different-light.html

Sunday, December 6, 2009

ಹಿಂಬಾಗಿಲು ಪ್ರವೇಶದ ಗಂಜಿ ಕೇಂದ್ರಗಳು ಬೇಕಾ??

ಇಂತಹದ್ದೊಂದು ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಆಗಾಗ್ಯೆ ಕೇಳಿಬರುತ್ತಿದೆ. ಸರಿಸುಮಾರು 500ಕೋಟಿಗು ಹೆಚ್ಚು ವಾರ್ಷಿಕ ನಿರ್ವಹಣಾ ವೆಚ್ಚ ಹೊಂದಿರುವ 'ಮೇಲ್ಮನೆ' ಎಂಬ ರಾಜಕಾರಣಿಗಳ ಗಂಜಿಕೇಂದ್ರದಿಂದ ಏನು ಪ್ರಯೋಜನವಾಗಿದೆ? ಅವರು ಮೇಲ್ಮನೆಯಲ್ಲಿ ನೀಡುವ ಸಲಹೆ,ಸೂಚನೆಗಳಿಗೆ ಯಾವ ಕಿಮ್ಮತ್ತು ಲಭಿಸಿದೆ, ವಿಶೇಷ ಸಂಧರ್ಭದಲ್ಲಿ ನೀಡುವ ವರದಿಗಳ ಕಥೆ ಏನಾಗಿದೆ? ರಾಜಕೀಯದ ಲವಲೇಶವೂ ಇಲ್ಲದೇ ವ್ಯವಸ್ಥೆಯ ವಿವಿಧ ಸ್ಥರಗಳಿಂದ ಆಯ್ಕೆಯಾಗುವ 'ಮಹಾಮಹಿಮ'ರು ಮೇಲ್ಮನೆಗೆ ಬಂದು ಸಾಧಿಸಿರುವುದಾದರೂ ಏನು? ಈ ಮೇಲ್ಮನೆಯಿಂದ ಯಾರಿಗೆ ಪ್ರಯೋಜನವಾಗಿದೆ? ಎಂಬುದು ಚರ್ಚಾರ್ಹ ವಿಚಾರ. ಈಗ ಸ್ಥಳೀಯ ಸಂಸ್ಥೆಗಳ ಚುನಾವಣೆ ಬಂದಿದೆ. ಈ ಸಂಧರ್ಭ ಇಂತಹದ್ದೊಂದು ಚರ್ಚೆ ಹೆಚ್ಚು ಪ್ರಸ್ತುತವೆನಿಸಿಸುತ್ತದೆ.
ಮೊದಲಿಗೆ 'ವಿಧಾನ ಪರಿಷತ್' ಎಂದರೇನು? ಎಂದರೇನು? ಎಂಬುದನ್ನು ನೋಡೋಣ. ಪ್ರಜಾಪ್ರಭುತ್ವದ ರಾಜಕೀಯ ವ್ಯವಸ್ಥೆಯಲ್ಲಿ ಕೇಂದ್ರದಲ್ಲಿ ರಾಜ್ಯಸಭೆ ಇರುವಂತೆ ರಾಜ್ಯಗಳಲ್ಲಿ ವಿಧಾನಸಭೆಗೆ ಗಳಿಗೆ ದೇಶದ ಆರು ರಾಜ್ಯಗಳಲ್ಲಿ ಮಾತ್ರ ವಿಧಾನ ಸಭೆ ಅಸ್ತಿತ್ವದಲ್ಲಿದೆ. ರಾಜ್ಯದ ವಿಧಾನ ಸಭೆಗಳಲ್ಲಿ ಹೆಚ್ಚು ಅಂದರೆ ೫೦೦ ಮತ್ತು ಕಡಿಮೆ ಎಂದರೆ ೬೦ ಶಾಸಕ ಸ್ಥಾನಗಳಿರಬಹುದು. ಅತೀ ಕಡಿಮೆ ಶಾಸಕ ಸ್ಥಾನಗಳನ್ನು ಹೊಂದಿರುವ ರಾಜ್ಯಗಳು ಮೂರು ಪಾಂಡಿಚೆರಿ, ಮಿಜೋರಾಂ, ಅರುಣಾಚಲ ಪ್ರದೇಶ. ಈ ರಾಜ್ಯಗಳ ಶಾಸಕ ಸ್ಥಾನಗಳು ಕೇವಲ ೩೦ ಆಗಿದೆ!. ಸಧ್ಯ ದೇಶದ 28ರಾಜ್ಯಗಳ ಪೈಕಿ ಕರ್ನಾಟಕವೂ ಸೇರಿದಂತೆ ಆಂದ್ರಪ್ರದೇಶ, ಬಿಹಾರ, ಜಮ್ಮು ಮತ್ತು ಕಾಶ್ಮೀರ, ಮಹಾರಾಷ್ಟ್ರ ಹಾಗೂ ಉತ್ತರ ಪ್ರದೇಶಗಳಲ್ಲಿ ಮಾತ್ರ ವಿದಾನ ಪರಿಷತ್ ಗಳು ಅಸ್ತಿತ್ವದಲ್ಲಿವೆ. ಇಂತಹ ವ್ಯವಸ್ಥೆಯನ್ನು ಇರಿಸಿಕೊಳ್ಳುವುದು ಇಲ್ಲವೇ ತೆಗೆಯುವುದು ಆಯಾ ರಾಜ್ಯಗಳ ಶಾಸಕಾಂಗದ ನಿರ್ದಾರಕ್ಕೆ ಒಳಪಟ್ಟಿರುತ್ತದೆ.
ವಿಧಾನ ಸಭೆಯ ಒಟ್ಟು ಸದಸ್ಯರ ೧/೩ ರಷ್ಟು ಸಂಖ್ಯೆಯಲ್ಲಿ ಮೇಲ್ಮನೆಗೆ ಸದಸ್ಯರು ಇರುತ್ತಾರೆ. ಆ ಲೆಕ್ಕಾಚಾರಕ್ಕೆ ಬಂದರೆ ರಾಜ್ಯದಲ್ಲಿರುವ ೨೨೪ ಶಾಸಕರಿಗೆ ಮೇಲ್ಮನೆಯಲ್ಲಿ 75ಮಂದಿ ಸದಸ್ಯರಿರಬೇಕು. ಆದರೆ ಕೇವಲ 72ಮಂದಿ ಸದಸ್ಯರಿದ್ದಾರೆ. ಈ ಪೈಕಿ 23ಮಂದಿ ವಿಧಾನ ಸಭಾ ಸದಸ್ಯರಿಂದ ಚುನಾಯಿತರಾದರೆ, 7ಮಂದಿ ಪಧವಿಧರ ಕ್ಷೇತ್ರ, 7ಮಂದಿ ಶಿಕ್ಷಕರ ಕ್ಷೇತ್ರದಿಂದ, 24ಮಂದಿ ಸ್ಥಳೀಯ ಸಂಸ್ಥೆ ಪ್ರತಿನಿಧಿಗಳಿಂದ ಆಯ್ಕೆಯಾಗುತ್ತಾರೆ. ಉಳಿದಂತೆ 11ಮಂದಿಯನ್ನು ಸಾರ್ವಜನಿಕ ವಲಯದ ವಿವಿಧ ಕ್ಷೇತ್ರದಲ್ಲಿ ಹೆಸರು ಮಾಡಿದ ಗಣ್ಯರನ್ನು ನಾಮಕರಣ ಮಾಡಲಾಗುತ್ತದೆ. ಇವರ ಅಧಿಕಾರಾವಧಿ ನಿರಂತರ 6ವರ್ಷ. ಅದೇ ವಿಧಾನ ಸಭಾ ಸದಸ್ಯರಿಗೆ ಕೇವಲ 5ವರ್ಷ. ತುರ್ತು ಪರಿಸ್ಥಿತಿಯಲ್ಲಿ ಮಾತ್ರ ಮುಖ್ಯ ಮಂತ್ರಿ , ರಾಜ್ಯಪಾಲರಿಗೆ ಮನವಿ ಮಾಡಿದರೆ 6ತಿಂಗಳು ಮುಂದುವರೆಯಬಹುದು. ಹಾಗೂ 5ವರ್ಷಗಳಿಗೆ ಮುನ್ನವೇ ರಾಜಕೀಯ ಅತಂತ್ರ ಸ್ಥಿತಿ ಉಂಟಾದರೆ ವಿಧಾನ ಸಭೆ ವಿಸರ್ಜಿಸಲ್ಪಡುತ್ತದೆ. ಆದರೆ ಇಂತಹ ಯಾವುದೇ ಗೋಜಲುಗಳು ವಿಧಾನ ಪರಿಷತ್ ಸದಸ್ಯರಿಗಿಲ್ಲ. ಅವರ ಅವಧಿ 6ವರ್ಷ ಅಭಾದಿತ. ಇಂತಹ ಸದಸ್ಯರುಗಳು ಸರ್ಕಾರದ ಹಣಕಾಸು ಮಂಡನೆ ವಿಚಾರ ಚರ್ಚಿಸಬಹುದು, ತಿದ್ದುಪಡಿ ಸೂಚಿಸಬಹುದು, ಅನುಮೋದಿಸಬಹುದು.ಅದೂ ಕೇವಲ 14ದಿನಗಳ ಅವಧಿಯೊಳಗೆ ವಿನಹ ಯಾವುದೇ ಶಾಸನಾತ್ಮಕ ನಿರ್ಣಯವನ್ನು ಕೈಗೊಳ್ಳುವಂತಿಲ್ಲ. ಇಲ್ಲಿಗೆ ಆಯ್ಕೆಯಾಗುವ ಪ್ರತೀ ಸದಸ್ಯನಿಗೂ ತಲಾ 50ಲಕ್ಷರೂಪಾಯಿಗಳ ಅಭಿವೃದ್ದಿ ಅನುದಾನವನ್ನು ವಾರ್ಷಿಕವಾಗಿ ಕೊಡಲಾಗುತ್ತದೆ. ಅಂದರೆ 6ವರ್ಷಕ್ಕೆ 3ಕೋಟಿ ಅಭಿವೃದ್ದಿ ಅನುದಾನವನ್ನು ವಿವೇಚನಾ ಕೋಟದಲ್ಲಿ ಬಳಸಬಹುದು. ಆಡಳಿತ ನಡೆಸುವ ಸರ್ಕಾರಗಳು ಮಾತ್ರ ಇದಕ್ಕೆ ತದ್ವಿರುದ್ದ. ಈ ಸದಸ್ಯರ ಸಧ್ಯದ ಗೌರವ ಧನ 22500ರೂ.ಗಳಿದ್ದರೆ ಮುಂದಿನ ಜನವರಿವೇಳೆಗೆ ಇದು 44ಸಾವಿರ ರೂಪಾಯಿಗಳಾಗಲಿದೆ. ಮತ್ತು ಓಡಾಟದ ಖರ್ಚಿಗೆ ತಿಂಗಳಿಗೆ 25ಸಾವಿರ, ಸಭಾ ಭತ್ಯೆ ಇತ್ಯಾದಿ ಇದ್ದೇ ಇರುತ್ತೆ. ಇಂತಹದ್ದೊಂದು ವ್ಯವಸ್ಥೆಗೆ ಆಂದ್ರಪ್ರದೇಶದಲ್ಲಿ ಭಾರೀ ವಿರೋಧ ವ್ಯಕ್ತವಾಗಿ ರದ್ದಾಗಿತ್ತು. ಆದರೆ 2007ರಲ್ಲಿ ಇದು ಅಲ್ಲಿ ಮತ್ತೆ ಅಸ್ಥಿತ್ವಕ್ಕೆ ಬಂದಿದೆ.
ಈಗ ಅಸಲು ವಿಷಯಕ್ಕೆ ಬರೋಣ,ಇಂತಹ ವಿಧಾನ ಪರಿಷತ್ ಗಳಿಗೆ ಆಯ್ಕೆಯಾಗುವವರು ಎಂತಹವರು ? ಯಾರ ಹಿತಾಸಕ್ತಿಗಾಗಿ ಇವರೆಲ್ಲ ಮೇಲ್ಮನೆಗೆ ಬರುತ್ತಾರೆ? ಅಲ್ಲಿ ಅವರು ಕಡಿಯೋದೇನು? ಜನ ಸಾಮಾನ್ಯರಿಗೆ ಇವರಿಂದ ಏನು ಉಪಯೋಗ? ಎಂಬ ಪ್ರಶ್ನಯಿದೆ. ವಿಧಾನ ಪರಿಷತ್ ಅನ್ನೊದು ವಿಧಾನ ಸಭೆಗೆ ಒಂದು ಸಲಹಾ ಸಮಿತಿ ಇದ್ದಂತೆ, ಇನ್ನೊಂದು ಅರ್ಥದಲ್ಲಿ ಜನಮಾನಸದಲ್ಲಿ ಸ್ಥಾನ ಕಳೆದುಕೊಂಡ ರಾಜಕಾರಣಿಗಳನ್ನು ಓಲೈಸುವ ಇಲ್ಲವೇ ರಾಜಕಾರಣಿಗಳು ತಮ್ಮ ಹಿಂಬಾಲಕನಿಗೆ ಅಧಿಕಾರಾವಕಾಶ ಮಾಡಿಕೊಡುವ ಹಿಂಬಾಗಿಲು ಪ್ರವೇಶದ ಒಂದು 'ಗಂಜಿಕೇಂದ್ರ'. ಇಂತಹ ಗಂಜಿಕೇಂದ್ರಗಳಿಗೆ ವಿಧಾನಸಭೆ-ಲೋಕಸಬೆ ಚುನಾವಣೆಗಳಲ್ಲಿ ಪಕ್ಷದ ಏಜೆಂಟನಾಗಿ ಜೀತ ಮಾಡಿಕೊಂಡು ಬದುಕುವ ಇಲ್ಲವೇ ಪಾರ್ಟಿಗೆ ದಂಡಿಯಾಗಿ ದುಡ್ಡು ಸುರಿಯುವ ವ್ಯಕ್ತಿಗಳನ್ನು ಚುನಾವಣೆಗೆ ತರಲಾಗುತ್ತದೆ. ಮತ್ತು ನೇರ ಚುನಾವಣೆಯಲ್ಲಿ ಸೋತು ಸುಣ್ಣವಾದವನನ್ನು ಜಾತಿಯ ದೃಷ್ಟಿಯಿಂದ ಓಲೈಸಿ ಮೇಲ್ಮನೆ ಚುನಾವಣೆಗೆ ತರಲಾಗುತ್ತದೆ. ಇಲ್ಲಿಯೂ ರಾಜಕೀಯ ಹಿತಾಸಕ್ತಿಯಿಂದ ವಿವಿಧ ರಾಜಕೀಯ ಪಕ್ಷಗಳ ಒಳ ಒಪ್ಪಂದಗಳ ಮೂಲಕ ತಮ್ಮ ಬೇಳೆ ಬೇಯಿಸಿ ಕೊಳ್ಳುತ್ತವೆ. ದುಡ್ಡು ಸುರಿದು ಸದಸ್ಯನಾದವನು ತನ್ನ ಬಂಡವಾಳ ಶಾಹಿ ಸಾಮ್ರಾಜ್ಯದ ರಕ್ಷಣೆಗೆ ಅಧಿಕಾರವನ್ನು ದುರುಪಯೋಗ ಪಡಿಸಿಕೊಂಡರೆ ಮುಖಂಡರುಗಳ ಹಿತಾಸಕ್ತಿಯಿಂದ ಆಯ್ಕೆಯಾದವನು ಸ್ವತಂತ್ರ ವಿವೇಚನೆ ಇಲ್ಲದೇ ಆಯಾ ಪಕ್ಷದ ಮುಖಂಡರ ಇಲ್ಲವೇ ಪಕ್ಷದ ನೆರಳಿನಲ್ಲಿ ಜೀತದಾಳಿನಂತೆ ಆದೇಶ ಪಾಲಿಸುತ್ತಾನೆ. ಇಂತಹ ಸದಸ್ಯರುಗಳಿಂದ ಯಾವ ಜನೋಪಯೋಗಿ ಕೆಲಸಗಳು ನಡೆಯುಲು ಸಾಧ್ಯ ?ಅಷ್ಟಕ್ಕೂ ತಮಗೆ ಕೊಟ್ಟ ಅಭಿವೃದ್ದಿ ಅನುದಾನ, ಅವಕಾಶಗಳನ್ನು ರಾಜ್ಯದ ಎಷ್ಟು ಮಂದಿ ವಿಧಾನ ಪರಿಷತ್ ಸದಸ್ಯರು ಸಮರ್ಪಕವಾಗಿ ಜನಸೇವೆ ಗೆ ಬಳಸುತ್ತಾರೆ. ವಿಧಾನ ಪರಿಷತ್ ಸದಸ್ಯರುಗಳೆಂದರೆ ಕೊಟ್ಟಿಗೆಯಲ್ಲಿ ಕಟ್ಟಿದ ಗೊಡ್ಡು ಹಸುಗಳು!. ಇಂತಹ ಗೊಡ್ಡು ದನಗಳಿಂದ ಯಾವ ಪ್ರಯೋಜನವೂ ಆಗಲಾರದು. ಈಗ ನಡೆಯುತ್ತಿರುವ ಮೇಲ್ಮನೆ ಚುನಾವಣೆಗಳಲ್ಲಿ ನೇರ ಹಣಾಹಣಿ ಇರುವೆಡೆ ಸ್ಥಳೀಯ ಸಂಸ್ಥೆ ಪ್ರತಿನಿಧಿಗಳಿಗೆ ೧೦೦೦ ದಿಂದ ೫೦೦೦ ರೂಗಳವರೆಗೆ ನೀಡಿ ಪ್ರತೀ ಪ್ರತೀ ಮತಗಳನ್ನು ಖರಿದಿಸಲಾಗುತ್ತಿದೆಯೆಂಬ ಸುದ್ದಿ ಇದೆ. ಹೀಗೆ ದುಡ್ಡು ಚೆಲ್ಲಿ ಆಯ್ಕೆಯಾಗುವವರಿಂದ ನಾವು ನಿರೀಕ್ಷಿಸುವುದಾದರೂ ಏನನ್ನು? ನೀವೇ ಹೇಳಿ? ಇಂತಹದ್ದೊಂದು ವ್ಯವಸ್ಥೆಗೆ ಕೋಟಿರೂ. ಗಳ ವೆಚ್ಚವನ್ನು ಯಾಕಾದರೂ ಮಾಡಬೇಕು? ಅದಕ್ಕೆ ಹೇಳಿದ್ದು ಹಿಂಬಾಗಿಲು ಪ್ರವೇಶದ ಗಂಜಿಕೇಂದ್ರ ಬೇಕಾ??

ಮಾಧ್ಯಮದ ಅಂಗಡಿಗಳು ಮತ್ತು ಪತ್ರಕರ್ತರು!

ಕಾಸ್ಟ್ ಕಟಿಂಗ್ ಮತ್ತು ನಿಶ್ಚಿತ ಆದಾಯದ ಕೊರತೆಯಿಂದ ಮಾಧ್ಯಮ ಸಂಸ್ಥೆಗಳು ಪತ್ರಕರ್ತರನ್ನು ಪರ್ಫಾರ್ಮೆನ್ಸ್ ವೀಕ್ ಎಂಬ ಕಾರಣ ನೀಡಿ ತೆಗೆಯುವ ಪ್ರಕ್ರಿಯೆ ಈಗ ನಡೆಯುತ್ತ...