Sunday, June 7, 2009

ಶಿಕ್ಷಣ ಮತ್ತು ಶಿಕ್ಷಕರ ಸಂಘದ ಚುನಾವಣೆಯು.......

ರಾಜ್ಯದಲ್ಲಿ ಈ ಬಾರಿ 500ಕ್ಕೂ ಹೆಚ್ಚು ಸರ್ಕಾರಿ ಶಾಲೆಗಳು ಮುಚ್ಚುತ್ತಿವೆ ಎಂದರು ಶಿಕ್ಷಣ ಇಲಾಖೆಯ ನನ್ನ ಪರಿಚಯದ ಅಧಿಕಾರಿ ಮಿತ್ರರು. ಅರೆಕ್ಷಣ ಯೋಚಿಸಿದೆ, ಸರ್ಕಾರಿ ಶಾಲೆಗಳು ಖಾಸಗಿ ಶಾಲೆಗಳಿಗಿಂತ ಯಾವುದರಲ್ಲಿ ಕಡಿಮೆ ಇವೆ? ನನಗೆ ತಿಳಿದಿರುವ ಮಟ್ಟಿಗೆ ಸ್ವತಂತ್ರ ಭಾರತದಲ್ಲಿ ೧೯೬೮, ೧೯೮೬ ಹಾಗೂ 1992ರಲ್ಲಿ ಶಿಕ್ಷಣದ ಗುಣ ಮಟ್ಟಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಶಿಕ್ಷಣ ನೀತಿಗಳು ಪರಿಷ್ಕರಣೆಯಾಗಿವೆ. ಶಿಕ್ಷಣದ ಮೂಲಭೂತ ಸೌಕರ್ಯ ಅಭಿವೃದ್ದಿಗೆ
ಸರ್ವ ಶಿಕ್ಷಣ ಅಭಿಯಾನ ಯೋಜನೆ ಜಾರಿಗೆ ಬಂದಿದೆ. ಸದರಿ ಯೋಜನೆಯಡಿಯಲ್ಲಿ ಕೋಟ್ಯಾಂತರ ರೂಪಾಯಿಗಳನ್ನು ಶಿಕ್ಷಣಕ್ಕಾಗಿ ವ್ಯಯಿಸಲಾಗುತ್ತಿದೆ.ಮಕ್ಕಳು ಈಗ ಆರಾಮವಾಗಿ ತಾವಿರುವ ಹಳ್ಳಿಗಳಲ್ಲಿ, ಊರುಗಳಲ್ಲಿ, ನಗರಗಳಲ್ಲಿ ಸುಸಜ್ಜಿತ ಸರ್ಕಾರಿ ಶಾಲೆಗಳಿ ಹೋಗಿ ಶಿಕ್ಷಣ ಪಡೆಯಬಹುದು, ಉತ್ತಮ ಕಟ್ಟಡ, ಕುಡಿಯುವ ನೀರಿನ ವ್ಯವಸ್ಥೆ, ಉಚಿತ ಸಮವಸ್ತ್ರ, ಪಠ್ಯ ಪುಸ್ತಕ, ಬೈಸಿಕಲ್, ಬಿಸಿಯೂಟ ಹಾಗೂ ಅರ್ಹತೆ ಮಾನದಂಡದಲ್ಲಿ ಆಯ್ಕೆಯಾಗುವ ಪ್ರತಿಬಾವಂತ ಶಿಕ್ಷಕರ ಪಾಠ ಇವೆಲ್ಲ ಇದ್ದರೂ ಶಾಲೆಗಳು ಮಕ್ಕಳಿಲ್ಲದೇ ಮುಚ್ಚುವ ಪರಿಸ್ಥಿತಿಗೆ ಬರುತ್ತಿದೆ ಹೌದಲ್ವ ? ಹಾಗಾದರೆ ಇಂತಹದ್ದೊಂದು ಪರಿಸ್ಥಿತಿಗೆ ಕಾರಣಗಳೇನು?.
ಖಾಸಗಿ ಶಾಲೆಗಳೇ? ಪೋಷಕರ ಮನೋಭಾವವೇ? ಶಿಕ್ಷಕರ ಧೋರಣೆಯೇ? ನಮ್ಮ ಶಿಕ್ಷಣ ನೀತಿಯೇ? ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯವೇ? ಯೋಜನೆಗಳ ಅನುಷ್ಠಾನದ ಹಿನ್ನೆಡೆಯೇ? ಹೀಗೆ ಹತ್ತು ಹಲವು ಪ್ರಶ್ನೆಗಳು ನಮ್ಮ ಮುಂದೆ ಹಾದು ಹೋಗುತ್ತವೆ. ಕಳೆದ ವರ್ಷ ಇದೇ ಸಂಧರ್ಭದಲ್ಲಿ ಇಂತಹದ್ದೊಂದು ಪರಿಸ್ಥಿತಿಗೆ ಕಾರಣವೇನು? ಎಂಬ ಪ್ರಶ್ನೆಯಿಟ್ಟುಕೊಂಡು ಸುದ್ದಿ ವಾಹಿನಿಯೋದು ಚರ್ಚೆ ಕಾರ್ಯಕ್ರಮವನ್ನು ಪ್ರಸಾರ ಮಾಡಿತ್ತು. ಆಗ ಖಾಸಗಿ ಶಾಲೆಗಳ ಬಗ್ಗೆ ವಕಾಲತ್ತು ವಹಿಸಿದ್ದ ಮಹನೀಯರೊಬ್ಬರು ಸರ್ಕಾರಿ ವ್ಯವಸ್ಥೆಗಿಂತ ಉಚ್ಚಮಟ್ಟದ ಮೂಲ ಸೌಕರ್ಯ ಒದಗಿಸಿ ದುಡ್ಡು ವಸೂಲು ಮಾಡುತ್ತೇವೆ ಇದನ್ನು ಯಾರು ಪ್ರಶ್ನಿಸುವಂತಿಲ್ಲ ಎಂದಿದ್ದರು, ಅಂತಹದ್ದೊಂದು ಸಮರ್ಥನೆಯನ್ನು ಒಪ್ಪಲು ಸಾಧ್ಯವಿಲ್ಲದಿದ್ದರೂ ಸರ್ಕಾರ ಶಿಕ್ಷಣದ ಸುಧಾರಣೆಗೆ ಮಾಡುತ್ತಿರುವ ಪ್ರಯತ್ನಕ್ಕೆ ಹೋಲಿಸಿದರೆ ಖಾಸಗಿ ಶಾಲೆಗಳು ಏನೇನೂ ಅಲ್ಲ. ಏಕೆಂದರೆ ಸರ್ಕಾರಿ ಶಾಲೆಗಳಿಗಿಂತ ಉತ್ತಮ ಸೌಲಭ್ಯವೇನಾದರು ಖಾಸಗಿ ಶಿಕ್ಷಣ ಸಂಸ್ಥೆಗಳು ಒದಗಿಸುತ್ತಿದ್ದರೆ ಅದೂ ಪದವಿ ವೃತ್ತಿ ಪರ ಶಿಕ್ಷಣದಲ್ಲಿ ಮಾತ್ರ. ಉಳಿದಂತೆ ಮಾದ್ಯಮಿಕ ಹಂತದಿಂದ ಪ್ರೌಡಶಾಲೆ ಹಂತದವರೆಗೂ ಸರ್ಕಾರಿ ಶಾಲೆಗಳ ಶಿಕ್ಷಣ ಮತ್ತು ಸೌಲಭ್ಯದ ಮುಂದೆ ಖಾಸಗಿ ಶಾಲೆಗಳ ಶಿಕ್ಷಣ ಏನೇನೂ ಅಲ್ಲ. ಇನ್ನು ಅತ್ಯಂತ ವ್ಯವಸ್ತಿತವಾಗಿ ಶಿಕ್ಷಣದ ವ್ಯಾಪಾರೀಕರಣಕ್ಕಿಳಿದಿರುವ ದಕ್ಷಿಣ ಕನ್ನಡದ ಹಲವು ಶಿಕ್ಷಣ ಸಂಸ್ಥೆಗಳು ದುಬಾರಿ ಶುಲ್ಕ ಪಾವತಿಸಿಕೊಂಡು ಉಳ್ಳವರಿಗೆ ಮತ್ತು ಅತೀ ಬುದ್ದಿವಂತರನ್ನು ಆಯ್ಕೆಮಾಡಿಕೊಂಡು ಪ್ರಗತಿ ಸಾಧಿಸುತ್ತಿವೆ ಎನ್ನಬಹುದು. ಉಳಿದಂತೆ ಕೇಂದ್ರೀಯ ಶಾಲೆ ಎಂಬ ಹೆಸರಿನಲ್ಲಿ , ಶಾಲೆಗಳಿಗೆ ಆಂಗ್ಲ ಹೆಸರಿಡುವ ಮೂಲಕ, ಕೇಂದ್ರ ಪಠ್ಯ ಕ್ರಮ ಹೀಗೆ ಒಂದಿಲ್ಲೊಂದು ಗಿಮಿಕ್ ಮಾಡುವ ಖಾಸಗಿ ಶಿಕ್ಷಣ ಸಂಸ್ಥೆಗಳು ಮೇಲ್ ಮಧ್ಯಮ, ಮದ್ಯಮ ವರ್ಗದವರ ಮಕ್ಕಳನ್ನು ಸೆಳೆಯುವಲ್ಲಿ ಯಶಸ್ವಿಯಾಗುತ್ತಿವೆ. ಧಾರ್ಮಿಕತೆ ಮತ್ತು ಜ್ಞಾನ ಪ್ರಸಾರದ ಪ್ರತಿನಿಧಿಗಳಾಗಬೇಕಿದ್ದ ಮಠಾಧಿಪತಿಗಳು (ಕೆಲವರು ಮಾತ್ರ) ಶಿಕ್ಷಣದ ವ್ಯಾಪಾರೀಕರಣಕ್ಕೆ ನಿಂತು ಸರ್ಕಾರಿ ವ್ಯವಸ್ಥೆಗೆ ಸಡ್ಡು ನಿಂತಿದ್ದಾರೆ. ಇದರಿಂದಾಗಿ ಪೋಷಕರು ಜಾಗತೀಕರಣದ ಬಿಸಿಯ ಪ್ರಭಾವವೋ ಎಂಬಂತೆ ಆಂಗ್ಲ ಮಾಧ್ಯಮದ ಆಸೆಗೆ ಬಲಿ ಬಿದ್ದು ಸಾಲವೋ ಸೋಲವೋ ಮಾಡಿ ಮಕ್ಕಳನ್ನು ಖಾಸಗಿ ಆಂಗ್ಲ ಶಾಲೆಗಳಿಗೆ ಸೇರಿಸಲು ಮುಗಿಬೀಳುತ್ತಿದ್ದಾರೆ(ಮುಂದೆ ಶಿಕ್ಷಣ ಕಲಿತ ಆ ಮಗು ತಂದೆ-ತಾಯಿರನ್ನೇ ಅನಾಥರನ್ನಾಗಿ ಮಾಡಿ ತನ್ನ ಲೆವೆಲ್ ನೋಡಿ ಕೊಂಡು ಬೇರೆ ಹೋಗುವುದು ಆಮೇಲಿನ ಮಾತು ಬಿಡಿ). ಸರ್ಕಾರಿ Sಯೋಜನೆಗಳು, ಆಂಧೋಲನಗಳು ಇವರಿಗೆ ಕಣ್ಣಿಗೆ ಕಾಣುತ್ತಿಲ್ಲ ಹೀಗೇಕೆ?. ಇನ್ನೊಂದು ದುರಂತದ ಸಂಗತಿ ಏನು ಗೊತ್ತಾ? ಪೋಷಕರಿರಲಿ ಸ್ವತ: ಶಿಕ್ಷಣ ಇಲಾಖೆಯ ಅಧಿಕಾರಿಗಳು ಮತ್ತು ಶಿಕ್ಷಕರು ತಮ್ಮ ಮಕ್ಕಳನ್ನು (ಬೆರಳೇಣಿಕೆ ಮಂದಿಯನ್ನು ಹೊರತುಪಡಿಸಿ) ಖಾಸಗಿ ಶಾಲೆಗೆ ಸೇರಿಸುತ್ತಿದ್ದಾರೆ, ಮತ್ತು ಸೇರಿಸಿದ್ದಾರೆ. ಅದಕ್ಕಾಗಿಯೇ ಶೇ.95ರಷ್ಟು ಶಿಕ್ಷಕರು ಮತ್ತು ಅಧಿಕಾರಿಗಳು ನಗರ ಕೇಂದ್ರಿತ ಪ್ರದೇಶಗಳಿಗೆ ತಮ್ಮ ವಾಸಸ್ಥಾನ ಬದಲಿಸಿದ್ದಾರೆ. ಶಿಕ್ಷಕರು ಹಳ್ಳಿ ಶಾಲೆಗಳಿಗೆ ಪ್ರತಿನಿತ್ಯ ನಗರ ಪ್ರದೇಶಗಳಿಂದಲೇ ಸಂಚರಿಸುತ್ತಾರೆ. ಇದಕ್ಕೆ ಅವರು ಕೊಡುವ ಉತ್ತರ ಮತ್ತು ಪ್ರಶ್ನೆ, ನಮ್ಮನ್ನೇ ಯಾಕೇ ಟಾರ್ಗೆಟ್ ಮಾಡ್ತೀರಿ? ಬೇರೆ ಇಲಾಖೆ ನೌಕರರ ಮಕ್ಕಳು ಹೋಗೋಲ್ವಾ? ಅಷ್ಟಕ್ಕೂ ನಮಗೆ ಹಳ್ಳಿಲೀ ಉಳಿಯೋಕೆ ಏನು ಕ್ವಾಟ್ರಾಸ್ ಕಟ್ಟಿಸಿ ಬಿಟ್ಟಿದಾರೆ ನೋಡಿ? . ಅಲ್ಲ ಸ್ವಾಮಿ ಸಮುದಾಯಕ್ಕೆ ಮಾದರಿಯಾಗಿ ನಿಲ್ಲಬೇಕಾದವರೇ ಹೀಗೆ ಪ್ರಶ್ನೆ ಕೇಳಿದರೆ ಆದೀತೆ?ಇನ್ನು ಯೋಜನೆಗಳ ಪ್ರಶ್ನೆ. ಸರ್ಕಾರಗಳು ಗಿಮಿಕ್ ಗಾಗಿಯೇ ಬಿಸಿಯೂಟ, ಸೈಕಲ್, ಪುಸ್ತಕ, ಸಮವಸ್ತ್ರ ನೀಡುತ್ತಾರೆ ಎನ್ನಲಾಗುತ್ತೆ, ಇಂತಹ ಆರೋಪಗಳ ಮಧ್ಯೆ ಶಿಕ್ಷಣ ಇಲಾಖೆಯ ನೌಕರರು ಯೋಜನೆ ಎಷ್ಟರ ಮಟ್ಟಿಗೆ ಯೋಜನೆ ಯಶಸ್ಸಿಗೆ ಶ್ರಮಿಸುತ್ತಾರೆ, ಎಷ್ಟು ಪಾರದರ್ಶಕವಾಗಿ ಮೂಲ ಸೌಕರ್ಯಾಭಿವೃದ್ದಿಗೆ ಮುಂದಾಗುತ್ತಾರೆ ಎಂದು ನೋಡಿದರೆ ಅಲ್ಲಿಯೂ ತೃಪ್ತಿದಾಯಕವಾದ ಉತ್ತರ ಸಿಗಲಾರದು. ನಮ್ಮದೂ ಅಂದು ಕೊಂಡು ಮಾಡುವವರ ಸಂಖ್ಯೆ ಕಡಿಮೆ ಬದಲಿಗೆ ಗಂಟೆ ಹೊಡೆದಾಗ ಶಾಲೆ, ಕರ್ತವ್ಯ ಎನ್ನುವಂತಾಗಿದೆ(ಇದಕ್ಕೆ ಅಪವಾದವೆಂಬಂತೆ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸುವವರು ಇದ್ದಾರೆ), ಕೆಲವು ಶಿಕ್ಷಕರು ರಾಜಕೀಯ ಮಾಡಿಕೊಂಡೋ, ಇಲ್ಲವೇ ಶಿಕ್ಷಣ ಸುಧಾರಣೆ ಹಂತದಲ್ಲಿ ಸಿಕ್ಕಿರುವ ಸಿಆರ್ಪಿ, ಬಿಆರ್ಪಿ, ಸಿಎಇಓ ಹುದ್ದಗಳ ಜವಾಬ್ದಾರಿ ಅರಿವಿಲ್ಲದೇ ತಾವೇಹಿರಿಯ ಅಧಿಕಾರಿಗಳಂತೆ ವರ್ತಿಸುತ್ತಾದರ್ಪ ದಬಾವಣೆ ಮಾಡುತ್ತಾ ಕಾಲ ತಳ್ಳುತ್ತಿರುವ ಮಂದಿಗೂ ಕಡಿಮೆ ಏನಿಲ್ಲ.ಹೀಗಿರುವಾಗ ಯೋಜನೆ ಸಮರ್ಪಕ ಅನುಷ್ಠಾನ ಹೇಗೆ ಸಾಧ್ಯ? ಇನ್ನು ಶಿಕ್ಷಣ ನೀತಿ ವಿಚಾರಕ್ಕೆ ಬರೋಣ. ಸ್ವತಂತ್ರ ಭಾರತದ ನಂತರ ೨-೩ ದಶಕಗಳ ನಂತರ ರಾಷ್ಟ್ರೀಯ ಶಿಕ್ಷಣ ನೀತಿ ರಚಿಸಲು ಮುಂದಾದ ನಮ್ಮ ಸರ್ಕಾರಿ ವ್ಯವಸ್ಥೆ ಊರೆಲ್ಲ ಕೊಳ್ಳೆ ಹೋದ ಮೇಲೆ ದಿಡ್ಡಿ ಬಾಗಿಲು ಮುಚ್ಚಿದರು ಎಂಬಂತೆ ಖಾಸಗಿ ಶಾಲೆಗಳು ಊರ ತುಂಬಾ ಶುರುವಾದ ಮೇಲೆ ಸರ್ಕಾರಿ ಶಾಲೆಗಳನ್ನು ತೆರೆಯಲು, ಶಿಕ್ಷಕರ ನೇಮಕಾತಿ ಮಾಡಲು , ಮೂಲ ಸೌಕರ್ಯ ಒದಗಿಸಲು, ಸುಲಭ ಶಿಕ್ಷಣದ ಚಿಂತನೆಗೆ ಮುಂದಾದರೆ ಫಲವೇನು? ಬಿಸಿಯೂಟ ಯೋಜನೆ ಒಂದು ಉತ್ತಮ ಯೋಜನೆಯೇನೋ ಸರಿ ಇದು ಮಕ್ಕಳಿಗೆ ಆಹಾರ ಒದಗಿಸುವ ಜೊತೆಗೆ ಸಮಾನತೆಗೆ ಪೂರಕವಾಗಿ ಜಾರಿಗೆ ಬಂದಿದೆ. ಆದರೆ ಆಗಿರೋದು ಏನು ಸ್ವಾಮಿ ? ಪರಿಶಿಷ್ಠರು ಅಡುಗೆ ಕಾರ್ಯ ನಿರ್ವಹಿಸುವಲ್ಲಿ ಅನ್ಯ ಜಾತಿಯ ಮಕ್ಕಳು ಬಿಸಿಯೂಟ ಮಾಡೋಲ್ಲ, ಇನ್ನು ಕೆಲವೆಡೆ ಇದನ್ನು ಮನಗಂಡ ಸ್ಥಳೀಯ ಕುಹಕಿಗಳು ಪರಿಶಿಷ್ಠರನ್ನು ನಿಯಮ ಬಾಹಿರವಾಗಿ ಬದಿಗೆ ಸರಿಸಿ ಸವರ್ಣೀಯರಿಂದ ಅಡುಗೆ ಮಾಡಿಸಿ ಪರಿಶಿಷ್ಠರನ್ನು ಪಾತ್ರೆ ತೊಳೆಯುವ ಕೆಲಸಕ್ಕೆ ಹಚ್ಚಿವೆ ಇದು ಯೋಜನೆಯ ಅನುಷ್ಠಾನವೇ? ಇರಲಿ ಬಿಡಿ ಸರ್ಕಾರಿ ಶಾಲೆಗೆ ಬರುವವರಾದರೂ ಯಾರು ?
ಲಿತರು, ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶ ಪಡೆಯಲಾಗದ ಆರ್ಥಿಕ ದುರ್ಬಲರು, ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶ ದೊರಕದ ದಡ್ಡ ಮಕ್ಕಳು . ಅವರಲ್ಲೂ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣ ಪಡೆಯುವವರ ಸಂಖ್ಯೆ ಕ್ಷೀಣಿಸುತ್ತಿದೆ. ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ಜುಟ್ಟಿಗೆ ಮಲ್ಲಿಗೆ ಎಂಬಂತೆ ಅವರೂ ಸಾಲ ಸೋಲ ಮಾಡಿ ಖಾಸಗಿ ಶಾಲೆಗಳಿಗೆ ಮಕ್ಕಳನ್ನು ಕಳುಹಿಸುತ್ತಿದ್ದಾರೆ, ಹೀಗಾದರೆ ಸರ್ಕಾರಿ ಶಾಲೆಗಳ ಕಥೆ ಏನು? ಮೊದಲು ಶಿಕ್ಷಕರು ಸುಧಾರಣೆಯಾಗಬೇಕು , ಆಮೇಲೆ ಪೋಷಕರು ಆಮೇಲೆ ಯೋಜನೆ ಮತ್ತೊಂದು ಮಗದೊಂದು ಅಲ್ವಾ? ಈಗ ಶಿಕ್ಷಕರ ಚುನಾವಣೆ ನಡೆಯುತ್ತಿದೆ ಅಲ್ಲಿಯೂ ಜಾತಿಗಳ ವಿಂಗಡಣೆಯಾಗಿದೆ, ರಾಜಕೀಯ ಪಕ್ಷಗಳ ಚುನಾವಣೆ ಆಮಿಷದಂತೆ ಗುಂಡು ತುಂಡು ಪಾರ್ಟಿ ಯಾವ ೆಗ್ಗು ತಗ್ಗಿಲ್ಲದೇ ನಡೆಯುತ್ತಿದೆ. ಅವಿರೋಧವಾಗಿ ನಡೆಯಬಹುದಾಗಿದ್ದ ವ್ಯವಸ್ಥೆ ಏಕೆ ಹೀಗಾಯ್ತು ಎಂದರೆ ? ನಾವೇನು ಮನುಷ್ಯರಲ್ವ ಸ್ವಾಮಿ ಎನ್ನುತ್ತಾರೆ. ಹೌದು ಮನುಷ್ಯರೇ ಆದರೆ ಸಮಾಜದ ಮಾರ್ಗದರ್ಶಕ ಸ್ಥಾನದಲ್ಲಿರುವ ಅವರು ಸ್ವಲ್ಪವಾದರೂ ಸಿದ್ದಾಂತ ಮತ್ತು ನೈತಿಕತೆಯ ಚೌಕಟ್ಟಿನಲ್ಲಿ ಹೋಗಬೇಡವೇ?

ಮಾಧ್ಯಮದ ಅಂಗಡಿಗಳು ಮತ್ತು ಪತ್ರಕರ್ತರು!

ಕಾಸ್ಟ್ ಕಟಿಂಗ್ ಮತ್ತು ನಿಶ್ಚಿತ ಆದಾಯದ ಕೊರತೆಯಿಂದ ಮಾಧ್ಯಮ ಸಂಸ್ಥೆಗಳು ಪತ್ರಕರ್ತರನ್ನು ಪರ್ಫಾರ್ಮೆನ್ಸ್ ವೀಕ್ ಎಂಬ ಕಾರಣ ನೀಡಿ ತೆಗೆಯುವ ಪ್ರಕ್ರಿಯೆ ಈಗ ನಡೆಯುತ್ತ...