Sunday, June 20, 2010

ವಿಶ್ವವಿದ್ಯಾಲಯಗಳ ಕರ್ಮಕಾಂಡ ಎಲ್ಲಿಗೆ ಬಂತು?

ಸೇವಾ ವಲಯದಲ್ಲಿರುವ ಶಿಕ್ಷಣ ಕ್ಷೇತ್ರ ಸುಧಾರಿಸಲಾಗದಷ್ಟು ಹದಗೆಟ್ಟಿದೆ, ಶಿಕ್ಷಣ ವ್ಯಾಪಾರೀಕರಣವಾಗಿ ಮಾರ್ಪಟ್ಟಿದೆ, ಭ್ರಷ್ಟಾಚಾರ ತಾಂಡವವಾಡುತ್ತಿದೆ ಎಂದರು ಒಬ್ಬ ಸೂಕ್ಷ್ಮ ಮನಸ್ಥಿತಿಯ ಮಾಜಿ ಶಾಸಕರು. ಹೌದು ಅವರ ಮಾತಿನಲ್ಲಿ ಸತ್ಯವಿದೆ ಅನಿಸಿತು. ಇವತ್ತು ನಮ್ಮ ಆಶಯಗಳನ್ನು ಸಾಕಾರ ಮಾಡುವ ನಿಟ್ಟಿನಲ್ಲಿ, ನಾಗರೀಕತೆಯ ಹೆಜ್ಜೆ ಗುರುತು ಮೂಡಿಸುವ ದಿಸೆಯಲ್ಲಿ ಅತ್ಯಂತ ಮಹತ್ವದ ಹೊಣೆಗಾರಿಕೆ ಹೊತ್ತಿರುವುದು ಶಿಕ್ಷಣ ಕ್ಷೇತ್ರವೇ ಆಗಿದೆ. ಇವೇ ಕೆಟ್ಟು ಕೆರ ಹಿಡಿದರೆ ಏನು ಮಾಡಬೇಕು? ನಮ್ಮ ಶಿಕ್ಷಣ ವ್ಯವಸ್ಥೆಯಲ್ಲೇ ನಂಬಿಕೆ ಕಳೆದು ಕೊಂಡರೆ ಆತ್ಮ ವಿಶ್ವಾಸವನ್ನು ಹುಡುಕುವುದೆಲ್ಲಿ? ಬದುಕಿನ ಹಾದಿಯನ್ನು ನಿರೂಪಿಸುವ ಸಂಸ್ಥೆಗಳೇ ಅಡ್ಡಹಾದಿ ಹಿಡಿದರೆ ಹೇಗೆ? ಅದರ ನಿರ್ವಾಹಕರು ದಿಕ್ಕು ತಪ್ಪಿದರೆ ಎಚ್ಚರಿಸುವವರಾರು? ಇಂತಹದ್ದೊಂದು ಸ್ಥಿತಿಗೆ ಕಾರಣಗಳೇನು? ಪರಿಸ್ಥಿತಿ ಸುಧಾರಣೆ ಹೇಗೆ ಸಾಧ್ಯವಾಗಬಹುದು? ಎಂಬೆಲ್ಲಾ ಪ್ರಶ್ನೆಗಳು ಹುಟ್ಟುವುದು ಸಹಜ.
ಮೊನ್ನೆ ಮೊನ್ನೆ ಮೈಸೂರು ವಿವಿ ಯ ಮಾಜಿ ಕುಲಪತಿ ಜೆ ಶಶಿಧರ ಪ್ರಸಾದ್ ವಿರುದ್ದ ಭ್ರಷ್ಟಾಚಾರ-ಸ್ವಜನ ಪಕ್ಷಪಾತ, ಅಕ್ರಮ ನೇಮಕಾತಿ ಕುರಿತು ಕೇಸು ದಾಖಲಾಗಿದೆ. ಈಗ್ಯೆ 10ವರ್ಷಗಳಿಂದ ವಿವಿ ಹಗರಣಗಳು ಒಂದಿಲ್ಲೊಂದು ರೀತಿಯಲ್ಲಿ ಬಯಲಿಗೆ ಬರುತ್ತಿದ್ದವಾದರೂ ಕ್ರಿಮಿನಲ್ ಕೇಸು ದಾಖಲಾಗುವ ಮಟ್ಟಿಗೆ ಹೋಗಿರಲಿಲ್ಲ. ಈ ವಿಚಾರದಲ್ಲಿ ರಾಜ್ಯಪಾಲರ ದಿಟ್ಟಕ್ರಮ ಮೆಚ್ಚುವಂತಹುದು. ಸರಕಾರಗಳ ಅಂಕೆಗೆ ಸಿಲುಕದೇ ಅಟಾನಮಸ್ ಬಾಡಿ ಎಂಬ ಹಣೆಪಟ್ಟಿಯೊಂದಿಗೆ ಕಾರ್ಯ ನಿರ್ವಹಿಸುವ ವಿವಿಗಳು ವಿವಾದಕ್ಕೆ ಸಿಲುಕುತ್ತಿರುವುದು ಇದೇ ಮೊದಲೇನಲ್ಲ ಬಿಡಿ. ನೋಡಿ ನಮ್ಮ ರಾಜ್ಯದಲ್ಲಿ ಉನ್ನತ ಶಿಕ್ಷಣನೀಡುವ ದಿಸೆಯಲ್ಲಿ ಸುಮಾರು 21 ಅಧಿಕೃತ ವಿವಿಗಳು ಕಾರ್ಯನಿರ್ವಹಿಸುತ್ತವೆ. 8ಕ್ಕೂ ಹೆಚ್ಚು ಖಾಸಗಿ ವಾರ್ಸಿಟಿಗಳಿವೆ. ಈ ಪೈಕಿ ವಿಜಾಪುರದಲ್ಲಿ ಸ್ಥಾಪನೆಗೊಂಡ ಮಹಿಳಾ ವಿವಿ ಯಲ್ಲಿ ಅರ್ಹತೆಯಿಲ್ಲದವರನ್ನು ನೇಮಕ ಮಾಡಿಕೊಳ್ಳಲಾಗಿದೆ, ಹಲವು ಬಾಬ್ತುಗಳಿಗೆ ಸಿಕಾಪಟ್ಟೆ ಖರ್ಚು ತೋರಿಸಲಾಗಿದೆ ಎಂಬ ಆರೋಪವಿದೆ. ದಾವಣಗೆರೆ ವಿವಿಯಲ್ಲಿ ಅರ್ಹತೆಯಿಲ್ಲದವರನ್ನು ಕುಲಪತಿಗಳನ್ನಾಗಿ ಮಾಡಲಾಗಿದೆ,ಅಕ್ರಮ ನೇಮಕಾತಿ ಹಗರಣ, ಮೈಸೂರು ವಿವಿಯಲ್ಲಿ ಸ್ವಜನ ಪಕ್ಷಪಾತ, ಅಕ್ರಮ ನೇಮಕಾತಿ, ದುಂದುವೆಚ್ಚ, 400ಕ್ಕೂ ಅಧಿಕ ನಕಲಿ ಪದವಿ ಸರ್ಟಿಫಿಕೇಟ್ ಪತ್ತೆ, ಶಿವಮೊಗ್ಗ ವಿವಿಯಲ್ಲಿ ಪರೀಕ್ಷಾ ಅಕ್ರಮ , ನಕಲಿ ಅಂಕಪಟ್ಟಿ ಹಂಪೆ ಕನ್ನಡ ವಿವಿಯಲ್ಲಿ ಕೋಟಿ ಅನುದಾನ ಕೊಟ್ಟರು ಪ್ರಯೋಜನವಿಲ್ಲದ ಕಾರ್ಯ, ತುಮಕೂರು ವಿವಿ ಯಲ್ಲಿ ಪದವಿ ಪ್ರವೇಶ ಕುರಿತ ಗೋಂದಲ, ಬೆಂಗಳೂರು ವಿವಿಯಲ್ಲಿ ಜಾತಿ ರಾಜಕೀಯ, ಸ್ವಜನ ಪಕ್ಷಪಾತ, ಪರೀಕ್ಷಾ ಅಕ್ರಮ, ನೇಮಕಾತಿ ಹಗರಣ, ಸೆಕ್ಸು ಹೀಗೆ ಪಟ್ಟಿ ಮಾಡುತ್ತಾ ಹೋದರೆ ಅದರದ್ದೇ ಒಂದು ಚರಿತ್ರೆಯಾದೀತು.
ರಾಜ್ಯದ 21ವಿವಿಗಳ ಪೈಕಿ 15ಕ್ಕೂ ಹೆಚ್ಚು ಮಂದಿ ಲಿಂಗಾಯಿತ ವರ್ಗದ ಜನರ ಉಪಕುಲಪತಿಗಳಾಗಿದ್ದರೆ, 2ರಲ್ಲಿ ಪ.ಜಾ, 1ರಲ್ಲಿ ಒಕ್ಕಲಿಗ ಮತ್ತಿತರ ಜಾತಿಗಳವರು ಸ್ಥಾನ ಪಡೆದಿದ್ದಾರೆ ಅಂದರೆ ಉಪ ಕುಲಪತಿಯ ಸ್ಥಾನಕ್ಕೂ ಜಾತಿ ಲಾಬಿ ಎಷ್ಟರ ಮಟ್ಟಿಗೆ ಕೆಲಸ ಮಾಡುತ್ತದೆ ಎಂಬುದನ್ನು ಅರಿಯಬಹುದು. ಪ್ರಸಕ್ತ ದಿನಗಳಲ್ಲಿ ಸರ್ಕಾರಿ ವಿವಿಗಳಲ್ಲಿ ಇರುವ ವಿಷಯವಾರು ಕೇಂದ್ರಗಳಿಗೆ ವರ್ಷಕ್ಕೊಬ್ಬರು ಜಾತಿಯಾಧರಿಸಿ ಮುಖ್ಯಸ್ಥರ ಸ್ಥಾನವನ್ನು ಅಲಂಕರಿಸುತ್ತಾರೆ. ಇದೇ ಮಾನದಂಡವನ್ನು ವಿದ್ಯಾರ್ಥಿಗಳಿಗೂ ಅನ್ವಯಿಸಿ ಜಾತಿವಾರು ಅಂಕ, Rank , ಚಿನ್ನದ ಪದಕಗಳನ್ನು ನೀಡಲಾಗುತ್ತದೆ, ಇಲ್ಲಿ ಪ್ರತಿಭೆಗೆ ಮನ್ನಣೆಯಿಲ್ಲ! ಪ್ರೊಫೆಸರನಿಗೆ, ಅದ್ಯಾಪಕನಿಗೆ ಓಲೈಸುವ ವಿದ್ಯಾರ್ಥಿಗಳಿಗೆ ಮಾತ್ರವೇ ಪ್ರಾಶಸ್ತ್ಯ. ಎಂಫಿಲ್, ಪಿಎಚ್ ಡಿ ಮಾಡಲು ಬರುವ ವಿದ್ಯಾರ್ಥಿಗಳ ಗೋಳಂತೂ ಹೇಳ ತೀರದು, ಸದರಿ ಪದವಿಗಳನ್ನು ಪಡೆಯುವ ವೇಳೆಗೆ ಹೆಣ ಹೋಗುತ್ತದೆ. ವಿದ್ಯಾರ್ಥಿನಿಯಾಗಿದ್ದರಂತೂ ತನು-ಮನ-ಧನ ಎಲ್ಲವನ್ನು ಅರ್ಪಿಸ ಬೇಕಾದ ಸನ್ನಿವೇಶಗಳೂ ಹಲವರಿಗೆ ಎದುರಾಗಿವೆ. ಇಷ್ಟೆಲ್ಲ ಹೈರಾಣಗಳಿಗೆ ಸಿಲುಕಿ ಸುಧಾರಿಸಿ ಕೊಳ್ಳಲಾಗದವರು ಪದವಿಯನ್ನೇ ಮರೆತ ಸಂಧರ್ಭಗಳೂ ಇವೆ. ಎಸ್ ಸಿ /ಎಸ್ಟಿ ವಿದ್ಯಾರ್ಥಿಗಳಿಗೆ ಪ್ರತಿ ವಿವಿಗಳು ಕಡ್ಡಾಯವಾಗಿ ವರ್ಷದಲ್ಲಿ ಒಬ್ಬರಿಗೆ ಪಿಎಚ್ಡಿ ಮಾರ್ಗದರ್ಶನ ನೀಡುವ ಆದೇಶವಿದೆ ಹಾಗಾಗಿ ಅದೊಂದು ಅವಕಾಶ ಬಿಟ್ಟರೆ ಸದರಿ ಜಾತಿಯವರಿಗೆ ಪಿ ಎಚ್ ಡಿ ಪದವಿಗೆ ಅವಕಾಶ ಲಭಿಸುವುದು ಕಡಿಮೆ. ಇತ್ತೀಚೆಗೆ ಬೆಂಗಳೂರು ವಿವಿಗೆ ಸರ್ಕಾರ ಇಬ್ಬರು ಪ.ಜಾತಿಯ ರಿಜಿಸ್ಟ್ರಾರ್ ಗಳನ್ನು ನೇಮಿಸಿತು ಆದರೆ ವಿವಿಯ ಆಡಳಿತ ಅವರಿಗೆ ಅವಕಾಶವನ್ನೇ ನೀಡಲಿಲ್ಲ. ಮುಂದೆ ಇದು ನ್ಯಾಯಾಲಯದ ಮೆಟ್ಟಿಲು ಹತ್ತಿದಾಗ ಸದರಿ ಹುದ್ದೆಗಳನ್ನೇ ವಿವಿ ರದ್ದು ಮಾಡಿತು. ಇನ್ನೂ ರಾಜ್ಯದಲ್ಲಿರು ವ 8ಕ್ಕೂ ಹೆಚ್ಚಿನ ಖಾಸಗಿ ವಿವಿಗಳು ಬಹುತೇಕ ರಾಜ್ಯದ ಪ್ರಬಲ ರಾಜಕಾರಣಿಗಳ ಅಂಕೆಯಲ್ಲಿವೆ. ಅಲ್ಲಿ ಶಿಕ್ಷಣವನ್ನು ವ್ಯವಸ್ಥಿತವಾಗಿ ಮಾರಾಟಕ್ಕಿಡಲಾಗಿದೆ, ಮಂಗಳೂರಿನ ಯಾನೆ ಪೋಯಿ ಎಂಬ ವಿವಿ ಕಳೆದ ಎರಡು ವರ್ಷಗಳಿಂದ ಸರ್ಕಾರ ಪ್ರವೇಶ ಪರೀಕ್ಷೆಯ ಮೂಲಕ ಪ್ರತಿಭಾವಂತರನ್ನು ವೃತ್ತಿ ಶಿಕ್ಷಣ ಪ್ರವೇಶಕ್ಕೆ ಆಯ್ಕೆ ಮಾಡಿದ್ದರೂ ಅವರಿಗೆ ಪ್ರವೇಶ ನಿರಾಕರಿಸಲಾಗಿದೆ ಈ ಬಗ್ಗೆ ಸರ್ಕಾರ ಯಾವುದೇ ಕ್ರಮ ಜರುಗಿಸಿಲ್ಲ. ಖಾಸಗಿ ವಿವಿಗಳು ಭಾರೀ ಮೊತ್ತದ ಹ ಣ ಪಡೆದು ಎಂಫಿಲ್, ಹಾಗೂ ಪಿಎಚ್ ಡಿ ಪದವಿ ಪ್ರಧಾನ ಮಾಡುವ ಕಾರ್ಖಾನೆಗಳಾಗಿ ಮಾರ್ಪಟ್ಟಿವೆ. ವೃತ್ತಿ ಶಿಕ್ಷಣ ಪ್ರವೇಶದ ಸಂಧರ್ಭದಲ್ಲ ಸರ್ಕಾರವನ್ನೇ ಹೇಳಿದಂತೆ ಕೇಳಿಸುವ ಮಟ್ಟಿಗೆ ಖಾಸಗಿ ವಿವಿಗಳ ಲಾಬಿ ಬೆಳೆದು ನಿಂತಿದೆ. ಆದರೆ ಕೇಳುವವರು ಯಾರು? ನ್ಯಾಯವನ್ನು ಹುಡುಕುವುದೆಲ್ಲಿ?
ಜ್ಞಾನ ಆಯೋಗದ ಶಿಫಾರಸ್ಸಿನಂತೆ ಉನ್ನತ ಶಿಕ್ಷಣ ದಗುಣಮಟ್ಟ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಸರ್ಕಾರ ಹಣದ ಹೊಳೆಯನ್ನೆ ಹರಿಸುತ್ತಿದೆ. 2020ರ ವೇಳೆಗೆ ಭಾರತವನ್ನು ಸೂಪರ್ ಪವರ್ ಮಾಡು ವನಿಟ್ಟಿನಲ್ಲಿ ಮೂಲಭೂತ ಸೌಕರ್ಯಗಳನ್ನು ವಿವಿಗಳಿಗೆ ನೀಡಲಾಗುತ್ತಿದ. ಐ ಎ ಎಸ್ ಅಧಿಕಾರಿಗ ಳರೇಂಜಿಗೆ ಪದವಿ ಕಾಲೇಜುಗಳ ಅದ್ಯಾಪಕರ ವೇತನವನ್ನ ಏರಿಸಲಾಗಿದೆ. ಸುಸಜ್ಜಿತ ಕಟ್ಟಡಗಳಿಗೆ ಅನುದಾ ನನೀಡಲಾಗುತ್ತಿದೆ. ಸ್ಪರ್ಧಾತ್ಮಕ ಜಗತ್ತಿನಲ್ಲಿ ವಿದ್ಯಾರ್ಥಿಗಳ ಹಿತ ಕಾಯುವ ದೃಷ್ಟಿಯಿಂದ ಪದವಿ ಕಾಲೇಜು ವಿದ್ಯಾರ್ಥಿಗಳಿಗೆ ವ್ಯಕ್ತಿ ವಿಕಸನದ ಮಾದರಿಯಲ್ಲ ವಿವಿ ಧರೀತಿಯ ಶಿಕ್ಷಣ ನೀಡಲು ಯುಜಿಸಿ ಅನುದಾನ ನೀಡಲಾಗುತ್ತಿದೆ. ಇವತ್ತು ಎಷ್ಟು ಕಾಲೇಜುಗಳಲ್ಲಿ ಇವುಗಳ ಬಳಕೆಯಾಗುತ್ತಿದೆ ಕೇಳುವವರಾರು?ಈ ಬಗ್ಗೆ ಎಷ್ಟು ಜನರಿಗೆ, ವಿದ್ಯಾರ್ಥಿಗಳಿಗೆ ತಿಳುವಳಿಕೆ ಇದೆ? ಈ ರೀತಿ ಶಿಕ್ಷಣ ವ್ಯವಸ್ಥೆಯೇ ಹದಗೆಟ್ಟರೆ ಭವಿಷ್ಯದ ಭಾರತ ದಕಲ್ಪನೆ ಏನು? ನೀವೇ ಹೇಳಿ?

ಮಾಧ್ಯಮದ ಅಂಗಡಿಗಳು ಮತ್ತು ಪತ್ರಕರ್ತರು!

ಕಾಸ್ಟ್ ಕಟಿಂಗ್ ಮತ್ತು ನಿಶ್ಚಿತ ಆದಾಯದ ಕೊರತೆಯಿಂದ ಮಾಧ್ಯಮ ಸಂಸ್ಥೆಗಳು ಪತ್ರಕರ್ತರನ್ನು ಪರ್ಫಾರ್ಮೆನ್ಸ್ ವೀಕ್ ಎಂಬ ಕಾರಣ ನೀಡಿ ತೆಗೆಯುವ ಪ್ರಕ್ರಿಯೆ ಈಗ ನಡೆಯುತ್ತ...