Sunday, July 12, 2009

ವಿಧ್ಯಾರ್ಥಿ ಶಕ್ತಿ ಎಲ್ಲಿದೆ ಮಾರಾಯ್ರೆ?

ಅದು ಸ್ವಾತಂತ್ರ್ಯ ಚಳುವಳಿಯ ದಿನಗಳು, ಲಕ್ಷಾಂತರ ಮಂದಿ ಯುವಕರು ಸ್ವಾತಂತ್ರ್ಯ ಚಳುವಳಿಯ ಕರೆಗೆ ಒಗೊಟ್ಟಿದ್ದರು. ಈ ಪೈಕಿ ಹಲವು ಮಂದಗಾಮಿ ಗಳಾದರೆ, ಇನ್ನು ಕೆಲವರು ತೀವ್ರ ಗಾಮಿಗಳಾದರು. ಚಳುವಳಿಯ ಕಾವು ತೀವ್ರತೆ ಪಡೆದುಕೊಂಡಿತು. ಗಾಂಧೀಜಿಯವರ ನೇತೃತ್ವದ ಸ್ವಾತಂತ್ರ್ಯ ಹೋರಾಟ ನಿರ್ದಿಷ್ಠ ಗತಿಯನ್ನು ತಲುಪಿಕೊಂಡಿತು. ಅದರಲ್ಲಿ ಪಾಲ್ಗೊಂಡ ಎಷ್ಟೋ ಮಂದಿ ಯುವಜನರು ಅಮರರಾದರು. ಸ್ವಾಮಿ ವಿವೇಕಾನಂದರು, ಸುಬಾಸ್ ಚಂದ್ರ ಬೋಸ್, ಭಗತ್ ಸಿಂಗ್, ಚಂದ್ರಶೇಖರ ಅಜಾದ್ ಹೀಗೆ ಅನೇಕ ಮಹಾನ್ ವ್ಯಕ್ತಿಗಳು ಅಮರರಾಗುವ ಮೂಲಕ ಯುವಶಕ್ತಿಯ ಪ್ರೇರಕ ಶಕ್ತಿಯಾಗಿ ರೂಪು ಗೊಂಡರು. ಸ್ವಾತಂತ್ರ್ಯ ನಂತರದಲ್ಲೂ ಹಲವು ಚಳುವಳಿಗಳು ಹುಟ್ಟಿದ್ದು ಕಾಲೇಜು ಆವರಣದಲ್ಲೇ. ಅಲ್ಲಿ ಸಕ್ರಿಯವಾಗಿ ಪಾಲ್ಗೊಂಡ ಅನೇಕರು ಇಂದು ನಮ್ಮೆದುರಿನ ರಾಜಕಾರಣಿಗಳಾಗಿ, ಸಮಾಜದ ವಿವಿಧ ಸ್ಥರದ ಗಣ್ಯರಾಗಿ, ಎಲೆಮರೆಯ ಕಾಯಾಗಿಯೂ ಉಳಿದಿದ್ದಾರೆ. ಅಂದಿನ ದಿನಗಳ ಅವರ ಮನಸ್ಥಿತಿ
, ಅವರ ಮುಂದಿದ್ದ ಸಿದ್ದಾಂತಗಳು, ಬದ್ದತೆಗಳು ವಿದ್ಯಾರ್ಥಿ ಶಕ್ತಿಯ ಜಾಗೃತಿಗೆ, ಉಳಿವಿಗೆ ಪೂರಕವಾಗಿದ್ದವು. ಆದರೆ ಇಂದಿನ ಯುವಜನರ ಮನಸ್ಥಿತಿ, ಅವರ ಆಯ್ಕೆ, ಅಭಿರುಚಿಗಳು ದಿಕ್ಕೆಟ್ಟ ಸ್ಥಿತಿಯಲ್ಲಿವೆ. ಅದಕ್ಕೆ ಸೂಕ್ತ ಪರಿಸರದ ಕಾರಣವೂ, ಮಾರ್ಗದರ್ಶನದ ಕೊರತೆಯು ಇರಬಹುದು.
ಇರಲಿ ಈಗ ನಾನಿಲ್ಲಿ ಪ್ರಸ್ತಾಪಿಸ ಹೊರಟ್ಟಿದ್ದು ವಿದ್ಯಾರ್ಥಿ ಯುವಜನರ ಆಸಕ್ತಿ ಅಭಿರುಚಿ, ಅಧ್ಯಯನ ಶೀಲತೆ, ಚಳುವಳಿ ಮತ್ತು ಬದ್ದತೆಗಳ ಬಗ್ಗೆ. ಇಂತಹದೊಂದು ವಿಷಯ ಕಳೆದ ೭-೮ ವರ್ಷಗಳಲ್ಲಿ ನನ್ನನ್ನು ಅದೆಷ್ಟೋ ಬಾರಿ ಕಾಡಿಸಿದೆ. ಆದರೆ ಅದಕ್ಕೆ ರೂಪ ದೊರೆತದ್ದು ಮಾತ್ರ ಮುಕ್ತ ಮುಕ್ತ ದಾರವಾಹಿ ನಿರ್ದೇಶಕ ಟಿ. ಎನ್ ಸೀತಾರಾಂ ರವರ ಮಾತುಗಳನ್ನು ಆಲಿಸಿದ ನಂತರವಷ್ಠೇ."ಇಂದಿಗೂ ಯುವಜನರಿಗೆ ರಾಷ್ಟ್ರ ಭಕ್ತಿ, ಸಾಮಾಜಿದ ಪ್ರಜ್ನೆ ಸುಪ್ತವಾಗಿದೆ, ಆದರೆ ಅದನ್ನು ಸಂವಹನ ಮಾಡುವಲ್ಲಿ ನಾವು ಎಡವಿದ್ದೇವೆ, ಈ ನಿಟ್ಟಿನಲ್ಲಿ ಸರಿಯಾದ ಪ್ರಯತ್ನವಾಗಬೇಕಿದೆ"ಎಂದವರಯ ಸೀತಾರಾಮ್. ಪ್ರಸಕ್ತ ಸಂಧರ್ಭದಲ್ಲಿ ವಿದ್ಯಾರ್ಥಿ ಯುವಜನರ ಎಲ್ಲ ಚಟುವಟಿಕೆಗಳ ಮೇಲೂ ಜಾಗತೀಕರಣದ ನೆರಳಿದೆ. ಹಾಗಾಗಿ ಬದುಕಿನ ಓಟದಲ್ಲಿ, ಸಾಮಾಜಿಕ ಸ್ಥಿತಂತ್ಯರದ ಕಾಲಘಟ್ಟದಲ್ಲಿ ಅನೇಕ ಎಡರು-ತೊಡರುಗಳು ಬೃಹತ್ತಾಗಿ ನಮ್ಮೆದುರು ತೆರೆದುಕೊಳ್ಳುತ್ತಿವೆ. ಇವು ನಮ್ಮ ಸಮಾಜಿಕ ವ್ಯವಸ್ಥೆಯ ಮೇಲೆ ಗುರುತರವಾದ ವ್ಯತಿರಿಕ್ತ ಪರಿಣಾಮಗಳನ್ನು ಬೀರುತ್ತವೆ. ನಮ್ಮ ಶೈಕ್ಷಣಿಕ ವ್ಯವಸ್ಥೆಯ ಆಗುಹೋಗುಗಳು, ಮತ್ತು ಪರಿಸರ ಹಿಂದೆ ಹೇಗಿತ್ತು ? ಈಗ ಹೇಗಿದೆ? ಅಲ್ಲಿನ ಸಕಾರಾತ್ಮಕ ಅಂಶಗಳೇನು? ನಕಾರಾತ್ಮಕ ಅಂಶಗಳೇನು? ವ್ಯವಸ್ಥೆಯ ನಿಲುವು ಹೇಗಿದೆ? ಎಂಬ ಅಂಶಗಳು ಚರ್ಚೆಯಾಗಬೇಕು.
ಹಿಂದೆ ನಮ್ಮಲ್ಲಿ ಖಾಸಗಿ ಶಾಲೆಗಳ ಕೊರತೆಯಿತ್ತು, ಸರ್ಕಾರಿ ಶಾಲೆಗಳ ಅಸ್ತಿತ್ವವಿತ್ತು.ಸಿದ್ದಾಂತಳ ಬೆನ್ನು ಬಿದ್ದ, ಕನಸುಗಳನ್ನು ಬಿತ್ತುವ ಅದ್ಯಾಪಕ ವೃಂದವಿತ್ತು. ಜಾಗೃತಿಯ ತುಡಿತವಿತ್ತು. ಸಮಾಜದ ಸ್ಪಂದನೆಯ ಅಂಶಗಳಿಗೆ ತೆರೆದುಕೊಳ್ಳುವ ಅವಕಾಶವಿತ್ತು. ಆದರೆ ಈಗಿನ ಪರಿಸ್ಥಿತಿ ಹಾಗಿಲ್ಲ. ನರ್ಸರಿ ಕಿಂಡರ್ ಗಾರ್ಟನ್ ಗಳು, ಕೇಂದ್ರೀಯ ಶಾಲೆಗಳು, ಆಂಗ್ಲ ಶಿಕ್ಷಣದ ಶಾಲೆಗಳ ಹವಾ ಬೀಸಿದೆ. ಅಂತರರಾಷ್ಟ್ರೀಯ ಗುಣಮಟ್ಟದ ಶಿಕ್ಷಣದ ನೀಡುವ ಹೆಸರಿನ ಅನೇಕ ಶಾಲೆಗಳು ಎದ್ದು ನಿಂತಿವೆ. ದುಡ್ಡಿನ ಹಪಾಹಪಿಗೆ ಬಿದ್ದ ಗುರುವೃಂದ (ಕೆಲವರನ್ನು ಹೊರತು ಪಡಿಸಿ!) ಮನೆಪಾಠದ ನೆಪದಲ್ಲಿ ಸುಲಿಗೆಗೆ ನಿಂತು ಆದರ್ಶದ ಕನಸಿಗೆ, ಮಕ್ಕಳ ವ್ಯಕ್ತಿತ್ವ ವಿಕಾಸನದಂತಹ ವಿಚಾರಗಳಿಗೆ ತಿಲಾಂಜಲಿ ನೀಡಿದ್ದಾರೆ. ಇದು ಕೇವಲ ಗುರು ವೃಂದದ ತಪ್ಪಲ್ಲ, ಪೋಷಕರ ಸಂಪೂರ್ಣ ಪಾತ್ರವೂ ಇಲ್ಲಿದೆ. ಜಾಗತೀಕರಣದ ಪರಿಣಾಮ ಮನೆಯಂಗಳಕ್ಕೆ ಬಂದಿರುವ ನೂರಾರು ಟಿವಿ ವಾಹಿನಿಗಳು ಪೋಷಕರ, ಯುವ ಜನರ ಕನಸುಗಳು ದೇಶೀಯ ಹಿಡಿತದಿಂದ ದಿಕ್ಕು ತಪ್ಪಲು ಕಾರಣವಾಗಿವೆ. ಅದು ಓದಿನ ವಿಷಯದ ಆಯ್ಕೆ ಇರಬಹುದು, ಉದ್ಯೋಗದ ಆಯ್ಕೆ ಇರಬಹುದು, ತಾವು ಅನುಸರಿಸುವ ರೀತಿ-ರಿವಾಜುಗಳು, ಧರಿಸುವ ಉಡುಪು, ಮಾತುಗಳು ಹೀಗೆ ಎಲ್ಲವೂ ಒಂದು ಅಂಕೆಯನ್ನು ಮೀರಿ ಬೆಳೆದು ನಿಂತಿವೆ. ಪೋಷಕರ ಒತ್ತಾಸೆಯ ಮೇರೆಗೆ ಇಂತಹುದೆ ಕೋರ್ಸ್ ಗೆ ಸೇರಬೇಕು, ಇಂತಹುದ್ದೇ ಉದ್ಯೋಗ ಹಿಡಿಯಬೇಕು, ಇಂತಹ ಶಾಲೆಯಲ್ಲೇ ಓದಬೇಕು ಎಂಬ ಮನಸ್ಥಿತಿ ವಿದ್ಯಾರ್ಥಿಗಳ ಮೇಲೆ ಪರಿಣಾಮ ಬೀರಿದೆ. ಅದಕ್ಕೆ ತಕ್ಕನಾಗಿ ವರ್ತಿಸುವ ವಿದ್ಯಾರ್ಥಿಗಳು ಸ್ವಂತಿಕೆಯನ್ನು ಕಳೆದು ಕೊಂಡು ಒಂದೋ ಶತಾಯ ಗತಾಯ ಓದಿ ಗುರಿ ತಲುಪುತ್ತಾರೆ, ಇಲ್ಲ ಸಮಾಜ ಕಂಟಕರಾಗಿ ಉಳಿದು ಬಿಡುತ್ತಾರೆ. ಎರಡು ಸಂಧರ್ಭಗಳಲ್ಲಿ ಸೈದ್ದಾಂತಿಕ ನೆಲೆಗಟ್ಟು ಇಲ್ಲದಿರುವುದರಿಂದ ಅಂತಹವರು ಸಮಾಜ ವಿಮುಖಿಗಳಾಗಿ ವರ್ತಿಸುತ್ತಾರೆ. ಕಳೆದ ಎರಡು ದಶಕಗಳ ಹಿಂದೆ ಈಗಿರುವಷ್ಟರ ಮಟ್ಟಿಗೆ ಶಿಕ್ಷಣದ ಖಾಸಗಿಕರಣವಿರಲಿಲ್ಲ, ಹಾಗಾಗಿ ಅಲ್ಲಿ ಗುಣಾತ್ಮಕ ಅಂಶಗಳನ್ನು ಕಾಣಲು ಸಾಧ್ಯವಿತ್ತು. ಅರ್ಹರು ಮಾತ್ರ ಅರ್ಹ ಶಿಕ್ಷಣ ಹೊಂದುವ ಅವಕಾಶವಿತ್ತು. ಬದಲಾದ ಪರಿಸ್ಥಿತಿಯಲ್ಲಿ ಕ್ಯಾಪಿಟೇಶನ್, ಡೊನೇಶನ್ ಹಾವಳಿಯನ್ನು ಮಟ್ಟಹಾಕುವ ನಿಟ್ಟಿನಲ್ಲಿ ಸರ್ಕಾರವೆ ಹತ್ತು ಹಲವು ವೃತ್ತಿ ಶಿಕ್ಷಣ ಕಾಲೇಜುಗಳನ್ನು ತೆರೆದಿದ್ದರೂ ಅದು ಅತ್ಯಂತ ತಡವಾಗಿ ಆಗಿದ್ದರಿಂದ ನಿರಿಕ್ಷಿತ ಫಲವು ಸಿಗದಂತಾಗಿದೆ.
ಶಿಕ್ಷಣದ ಆಗುಹೋಗುಗಳಲ್ಲಿ ಕೇವಲ ಪ್ರಾಜ್ಞರಷ್ಟೆ ಕೂತು ಚರ್ಚಿಸಿದರೆ ಸಾಲದು ಅಲ್ಲಿ, ಪೋಷಕರು, ವಿದ್ಯಾರ್ಥಿಗಳು, ಶಿಕ್ಷಕರ ಪಾಲುದಾರಿಕೆ ಅವಶ್ಯವಿದೆ ಎಂಬ ಸತ್ಯವನ್ನು ಅಧಿಕಾರ ಶಾಹಿಗಳು ತಿಳಿದುಕೊಳ್ಳಬೇಕಿದೆ. ವಿದ್ಯಾರ್ಥಿಗಳು ಅಷ್ಟೇ ಅಧ್ಯಯನದ ಪ್ರಾಮುಖ್ಯತೆ, ಶೈಕ್ಷಣಿಕ ಪರಿಸರದ ವಿವಿಧ ಹಂತಗಳಲ್ಲಿ ತಾವು ಹೇಗೆ ನಡೆದುಕೊಳ್ಳಬೇಕು ಎಂಬ ಬದ್ದತೆಯನ್ನು ಪ್ರದರ್ಶಿಸಬೇಕಿದೆ. ಸಂವೇದನಾಶೀಲ ಮನ:ಸ್ಥಿತಿ ವಿದ್ಯಾರ್ಥಿಗಳಿಗೆ ಪರಿಪೂರ್ಣ ವ್ಯಕ್ತಿತ್ವವನ್ನು ತಂದು ಕೊಡಬಲ್ಲದು. ಬಾಹ್ಯ ಪ್ರಪಂಚಕ್ಕೆ ಅವರು ಪ್ರದರ್ಶಿಸುವ ರೀತಿ-ರಿವಾಜುಗಳು ಸಹಾ ಆರೋಗ್ಯ ಪೂರ್ಣವಾಗಿರಬೇಕಾಗುತ್ತದೆ.
ಕೆಟ್ಟ ಮೇಲೆ ಬುದ್ದಿ ಬಂತು ಎಂಬಂತೆ ಇವತ್ತು ಸರ್ಕಾರ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಿದೆ. ಈ ನಿಟ್ಟಿನಲ್ಲಿ ಹತ್ತು ಹಲವು ಯೋಜನೆಗಳು ಜಾರಿಗೆ ಬಂದಿವೆ, ಶಾಲಾ-ಕಾಲೇಜುಗಳು ಸ್ಥಾಪನೆಯಾಗಿದೆ. ಹಲವೆಡೆ ಮೂಲ ಸೌಕರ್ಯಗಳ ಕೊರತೆಯಿದೆ. ಹೆಚ್ಚಿನ ದುಡ್ಡು ತೆತ್ತು ಹೋಗುವ ಶಾಲಾ -ಕಾಲೇಜುಗಳಲ್ಲು ಅಲ್ಲಲ್ಲಿ ಜೊಳ್ಳುತನವಿದೆ. ಆದರೆ ಇವುಗಳ ಬಗೆಗೆ ಪ್ರಶ್ನಿಸುವ ಜಾಗೃತಾವಸ್ಥೇ ಮಾತ್ರ ನಮ್ಮ ಯುವಜನರಲ್ಲಿ ಸತ್ತು ಹೋಗಿದೆ. ಎಲ್ಲರೂ ಸಿದ್ದಪಾಠಗಳ, ಟ್ಯೂಶನ್ ಸಂಸ್ಥೆಗಳ ಮೊರೆ ಹೋಗಿದ್ದಾರೆ. ದೇಶೀಯ ಸಂಸ್ಕ್ರತಿ ಮರೆತು ರಾಕ್-ಪಾಪ್ ಸಂಗೀತ, ಉಡುಪುಗಳು, ಅಭಿರುಚಿಗಳನ್ನು ಬದಲಿಸಿಕೊಂಡಿದ್ದಾರೆ.ಸಾಮಾನ್ಯರು ಸಹಾ ಸ್ವಲ್ಪ ಬುದ್ದಿವಂತಿಕೆಯಿದ್ದರೂ ಆಡಳಿತಸೇವೆಯ ಹುದ್ದೆಗಳಿಗೆ ಹೋಗುವ ಅವಕಾಶವಿದೆ, ಹೀಗಿದ್ದಾಗ್ಯೂ ಇಂಜಿನಿಯರಿಂಗ್ ಮತ್ತು ವೈದ್ಯಕೀಯ ಶಿಕ್ಷಣದ ಮೊರೆ ಹೋಗಲಾರಂಬಿಸಿದ್ದಾರೆ. ಪರಿಣಾಮ ಪ್ರತಿಭಾ ಪಲಾಯನ ನಿರಂತರವಾಗಿ ಆಗುತ್ತಿದೆ. ಇಂತಹ ಕ್ರಿಯಿಗಳಿಗೆ ಕಡಿವಾಣ ಬೀಳಬೇಕಿದೆ, ವಿದ್ಯಾರ್ಥಿ ಯುವಜನರನ್ನು ಕಾಲದಿಂದ ಕಾಲಕ್ಕೆ ವಿವಿಧ ವಿಷಯಗಳ ಬಗ್ಗೆ ಜಾಗೃತಿಯ ಅರಿವಿನಲ್ಲಿ ಇರಿಸಲು ವಿದ್ಯಾರ್ಥಿ ಸಂಘಗಳು ಬೇಕಿವೆ. ಉತ್ತಮ ಸಿದ್ದಾಂತ ಬದ್ಧತೆ ಇರಿಸಿಕೊಂಡ ಶಿಕ್ಷಕರು ಈ ನಿಟ್ಟಿನಲ್ಲಿ ಪ್ರಯತ್ನ ಮಾಡಬೇಕಿದೆ. ನಮ್ಮ ದೇಶದಲ್ಲಿ 35ಕ್ಕೂ ಹೆಚ್ಚು ವಿದ್ಯಾರ್ಥಿ ಸಂಘಟನೆಗಳಿವೆ, ಅವುಗಳಲ್ಲಿ ಬಹುತೇಕವು ರಾಜಕೀಯ ಪಕ್ಷಗಳ ಅಂಗ ಸಂಸ್ಥೆಗಳು. ಕಾಲಾನು ಕಾಲಕ್ಕತಮ್ಮ ಬೇಳೆ ಬೇಯಿಸಿಕೊಳ್ಳಲು ವಿದ್ಯಾರ್ಥಿ ಶಕ್ತಿಗಳನ್ನು ಅನುಕೂಲಕ್ಕೆ ತಕ್ಕಂತೆ ಬಳಸಿಕೊಳ್ಳುವಂತಹ ಛಾತಿ ಇರುವಂತಹವು. ಇಂತಹದ್ದರಿಂದ ಹೊರತಾಗಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ನಂತಹ ಸಂಘಟನೆ ವಿದ್ಯಾರ್ಥಿಗಳ ಸರ್ವಾಂಗೀಣ ಬೆಳವಣಿಗೆಗೆ ಪೂರಕವಾದಂತಹ ಅನೇಕ ವಿಚಾರಗಳನ್ನು ಇಟ್ಟುಕೊಂಡಿದೆ. 1948ರಲ್ಲಿ ಬಾಂಬೆಯ ಕಾಲೇಜೊಂದರ ಉಪನ್ಯಾಸಕ ಯಶವಂತರಾವ್ ಕೇಳ್ಕರ್ ಎಬಿವಿಪಿ ಸಂಘಟನೆಯನ್ನು ಆರಂಭಿಸಿದರು. 1949ರಲ್ಲಿ ಅಧಿಕೃತವಾಗಿ ಅದು ರಾಷ್ಟ್ರದ ಎಲ್ಲೆಡೆಯೂ ಕಾರ್ಯಾರಂಬಿಸಿತು. ವ್ಯಕ್ತಿತ್ವ ವಿಕಸನ, ಸಂಸ್ಕೃತಿ ಪರಿಚಯ, ವಿನಿಮಯ, ರಾಷ್ಟ್ರೀಯ ವಿಚಾರಗಳ ಅರಿವು, ಮೂಲಭೂತ ಸೌಕರ್ಯಗಳಿಗಾಗಿ ಚಳುವಳಿಯನ್ನು ಅದು ರೂಪಿಸಿತು. ಇದೇ ದಾರಿಯಲ್ಲಿ ಅಸ್ಸಾಂ ಗಣ ಪರಿಷತ್, ಸೋಷಲಿಷ್ಟ್ ಪಕ್ಷಗಳ ವಿದ್ಯಾರ್ಥಿ ಸಂಘಟನೆಗಳು ಕಾರ್ಯಾರಂಬಿಸಿದವು. ಆದರೆ ಇತ್ತೀಚಿನ ವರ್ಷಗಳಲ್ಲಿ ಅವುಗಳ ಚಟುವಟಿಕೆ ತೀವ್ರತೆ ಪಡೆದುಕೊಂಡಿಲ್ಲ. ಸಧ್ಯದ ಪರಿಸ್ಥಿತಿಯಲ್ಲಿ ವಿದ್ಯಾರ್ಥಿಗಳ ಜಾಗೃತಾವಸ್ಥೆಗೆ, ವಿದ್ಯಾರ್ಥಿ ಶಕ್ತಿಗೆ ಧ್ವನಿಯಾಗಲು ವಿದ್ಯಾರ್ಥಿ ಸಂಘಟನೆಗಳು ವೇದಿಕೆ ರೂಪಿಸಬೇಕಿದೆ.

ಮಾಧ್ಯಮದ ಅಂಗಡಿಗಳು ಮತ್ತು ಪತ್ರಕರ್ತರು!

ಕಾಸ್ಟ್ ಕಟಿಂಗ್ ಮತ್ತು ನಿಶ್ಚಿತ ಆದಾಯದ ಕೊರತೆಯಿಂದ ಮಾಧ್ಯಮ ಸಂಸ್ಥೆಗಳು ಪತ್ರಕರ್ತರನ್ನು ಪರ್ಫಾರ್ಮೆನ್ಸ್ ವೀಕ್ ಎಂಬ ಕಾರಣ ನೀಡಿ ತೆಗೆಯುವ ಪ್ರಕ್ರಿಯೆ ಈಗ ನಡೆಯುತ್ತ...