Sunday, November 29, 2009

ಜಾಗತೀಕರಣದ ಬಿಸಿಯಲ್ಲಿ ಬದುಕುಗಳಅವಸಾನ!

ಜಾಗತೀಕರಣದ ಬಿಸಿ ನಿದಾನವಾಗಿ ಸುಡಲಾರಂಭಿಸಿದೆ, ಕಳೆದ ವರ್ಷ ಅಮೇರಿಕಾದ ಆರ್ಥಿಕ ಕುಸಿತ, ಈಗ ದುಬೈನ ಆರ್ಥಿಕ ಹಿಂಜರಿತ ದೇಶದ ಆರ್ಥಿಕತೆಯ ಮೇಲೆ ಉದ್ಯೋಗಗಳ ಮೇಲೆ ಪರಿಣಾಮ ಬೀರಲಾರಂಬಿಸಿದೆ. ದಶಕಗಳ ಹಿಂದೆ ಇದೇ ಮನಮೋಹನ ಸಿಂಗ್,ಪ್ರಧಾನಿಯಾಗಿದ್ದ ನರಸಿಂಹರಾವ್ ಸಂಪುಟದಲ್ಲಿ ವಿತ್ತ ಸಚಿವರಾಗಿದ್ದಾಗ ಮುಕ್ತ ಆರ್ಥಿಕ ಉದಾರೀಕರಣದ ಮೂಲಕ ಬಹುರಾಷ್ಟ್ರೀಯ ಉದ್ಯಮಗಳಿಗೆ ದೇಶದ ಹೆಬ್ಬಾಗಿಲನ್ನು ತೆರೆದಿಟ್ಟರು. ಆಗ ಅದನ್ನು ಸಮರ್ಥವಾಗಿ ವಿರೋಧಿಸುವ ಯಾವ ಕ್ರಿಯೆಗಳು ಬಲವಾಗಿ ನಡೆಯಲಿಲ್ಲ, ಅನೇಕ ಸಾರ್ವಜನಿಕ ಚಳುವಳಿಗಳು ಅದನ್ನ ವಿರೋದಿಸಿದವಾದರೂ ಎಂಎನ್ ಸಿಗಳ ಭಿಕ್ಷೆ ಮತ್ತು ಎಂಜಲನ್ನು ಪಡೆದು ಬಾಯಿ ಭದ್ರ ಪಡಿಸಿಕೊಂಡವು. ಅಲ್ಲಿಗೆ ವ್ಯವಸ್ಥಿತವಾಗಿ ನಮ್ಮ ಬದುಕಿನೊಳಗೆ ಜಾಗತೀಕರಣದ ಕಬಂಧ ಬಾಹು ಆಕ್ಟೋಪಸ್ ನಂತೆ ವಿಸ್ತರಿಸಲಾರಂಭಿಸಿತು. ಆರಂಭದಲ್ಲಿ ಎಲ್ಲವೂ ಚೆನ್ನಾಗಿಯೇ ಇರುತ್ತದೆ. ಆಧುನೀಕರಣದ ಭ್ರಮೆಗೆ ಬಿದ್ದ ನಮ್ಮ ಜನ ಕೂಡ ಅದನ್ನು ಅನಿವಾರ್ಯವೆಂದು ಭಾವಿಸಲಾರಂಭಿಸಿದರು. ನಮ್ಮ ಜನರಿಗೆ ಸಿನಿಕತನ ಬೆಳೆಯಿತು, ತಮ್ಮ ತಲೆಮಾರುಗಳಿಂದ ಪಾಲನೆಯಾಗುತ್ತಿದ್ದ ಜೀವ ನಕ್ರಮವನ್ನು ಮರೆತರು, ಪದ್ದತಿಗಳನ್ನು ಸಿದ್ದಾಂತಗಳನ್ನು ಗಾಳಿಗೆ ತೂರಿದರು. ಆಧುನೀಕರಣವನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಸಮರ್ಥಿಸಿಕೊಳ್ಳಲಾರಂಬಿಸಿದರು, ಬದುಕನ್ನುಬದಲಿಸಿಕೊಳ್ಳಲಾರಂಭಿಸಿದರು. ಆದರೆ ಅವತ್ತಿಗೆ ಜಾಗತೀಕರಣದ ಬಿಸಿ ತಕ್ಷಣವೇ ನಮ್ಮನ್ನು ನಡುಬೀದಿಯ ಭಿಕ್ಷುಕರನ್ನಾಗಿ ಮಾಡುತ್ತದೆ, ಬದುಕು ಮೂರಾಬಟ್ಟೆಯಾಗುತ್ತದೆ ಎಂಬ ಸ್ಪಷ್ಟ ಸುಳಿವನ್ನು ನಿರ್ಲಕ್ಷಿಸಿದರು. ಅವತ್ತಿಗೆ ಅವತ್ತಿನ ಬದುಕು ಖುಷಿಯಾಗಿದ್ದರೆ ಸಾಕು ಎಂಬ ಮನಸ್ಥಿತಿ ನಮ್ಮ ಜನರಲ್ಲಿದ್ದುದೇ ಈಗ ಆರಂಭವಾಗಿರುವ ತಳಮಳ, ತಲ್ಲಣಗಳಿಗೆ ಕಾರಣವಾಗಿದೆ.
ನಿಮಗೆ ತಿಳಿದಿರಲಿ ಮುಕ್ತ ಆರ್ಥಿಕ ಉದಾರೀಕರಣ ನೀತಿ ಎಂದರೆ ಜಗತ್ತಿನ ಬಲಾಡ್ಯ ರಾಷ್ಟ್ರಗಳು ಅಭಿವೃದ್ದಿ ಯನೆಪದಲ್ಲಿ ಇತರೆ ರಾಷ್ಟ್ರಗಳ ಮೇಲೆ ಬಲವಂತವಾಗಿ ಹೇರಲ್ಪಡುವ ನೀತಿ. ಇದರನುಸಾರ ಸದರಿ ಗುಂಪಿನಲ್ಲಿರುವ ಯಾವುದೇ ರಾಷ್ಟ್ರ ನಮ್ಮ ದೇಶದಲ್ಲಿ ಬಂಡವಾಳ ಹೂಡಬಹುದು. ಅದೂ ಶಾಶ್ವತವಾಗ ಉಳಿಯುವಂತಹ ವ್ಯವಹಾರಗಳ ಮೇಲಲ್ಲ ತಾತ್ಕಾಲಿಕ ಗುತ್ತಿಗೆ ಅವಧಿಯವರೆಗೆ ಮಾತ್ರ. ಹೀಗೆ ಬಂಡವಾ ಳಹೂಡುವವರಿಗೆ ಎಲ್ಲ ರೀತಿಯ ಮೂಲಭೂತ ಸೌಲಭ್ಯ , ರಕ್ಷಣೆ ಹಾಗೂ ತೆರಿಗೆ ರಹಿತ ವಾದ ವ್ಯವಸ್ಥೆಯನ್ನ ಕಲ್ಪಿಸಿಕೊಡಬೇಕು. ಅಲ್ಲಿ ಉತ್ಪಾದನೆಯಾಗುವ ಉತ್ತಮಗುಣಮಟ್ಟದ ಪದಾರ್ಥಗಳು ನಮ್ಮವರಿಗೆ ಸಿಗಲಾರದು, ದೇಶೀಯ ಉದ್ಯೋಗ ನೀತಿ ಅವರಿಗೆ ಅನ್ವಯಿಸಲಾರದು, ನಮ್ಮ ದೇಶದ ಕಾನೂನು ಕಟ್ಟಳೆಯಲ್ಲೂ ಅವರಿಗೆ ಸಡಿಲತ ಇರುತ್ತದೆ ಸರ್ಕಾರವೇ ಅವ ರರಕ್ಷಣೆಗೆ ಮುಂದಾಗಿ ನಿಲ್ಲುತ್ತವೆ. ದೇಶದ ಪ್ರಜಾಸತ್ತೆ ವ್ಯವಸ್ಥೆಗೆ ಇದು ಸಂಪೂರ್ಣ ವಿರುದ್ದ.
ಹೀಗೆ ಜಾಗತೀಕರಣದ ನೆರಳಿನಲ್ಲಿ ನಮ್ಮ ದೇಶಕ್ಕೆ ಕಾಲಿರಿಸಿದ್ದು ಟೆಕ್ಸ್ ಟೈಲ್ಸ್ ಅಂಡ್ ಗಾರ್ಮೆಂಟ್ ಇಂಡಸ್ಟ್ರಿ, ಮೆಟಲ್ ಅಂಡ್ ಮೆಟಲ್ ಉತ್ಪಾದನೆಗಳು, ಮಾಹಿತಿ ತಂತ್ರಜ್ಞಾನ ಪಾರ್ಕುಗಳು, ಹೊರಗುತ್ತಿಗೆ ಉದ್ದಿಮೆಗಳು, ಜೆಮ್ಸ್ ಅಂಡ್ ಜ್ಯೂಯಲರಿ, ಕಟ್ಟಡ ನಿರ್ಮಾಣ, ಸಾರಿಗೆ, ಅದಿರು, ಕಲಿದ್ದಲು, ತೈಲ ಉದ್ದಿಮೆಗಳು ಪ್ರಮುಖವಾದವುಗಳು . ಕಳೆದ ವರ್ಷಅಮೇರಿಕಾ ಆರಂಭಿಸಿದ ಬಂಡವಾಳ ಹಿಂತೆಗೆತದ ಪರಿಣಾಮ ದೇಶದ ೧.5ಮಿಲಿಯನ್ ನಷ್ಟು ಜನರು ಉದ್ಯೋಗ ಕಳೆದುಕೊಂಡರು. ದೇಶದ ಕಾರ್ಮಿಕ ಇಲಾಖೆಯ ಸರ್ವೆ ಅನುಸಾರ ದೇಶದ 11ರಾಜ್ಯಗಳಲ್ಲಿರುವ ೨೦ ಪ್ರಮು ಖವಾಣಿಜ್ಯ ಕೇಂದ್ರಗಳಲ್ಲಿ 2581ಘಟಕಗಳು ಕಣ್ಮುಚ್ಚಿದವು. ಈಗ ಉದ್ಯೋಗ ವಂಚಿತ ಭಾರತೀಯರ ಸಂಖ್ಯೆ ಏರುಗತಿಯಲ್ಲಿದ್ದು ಅದು ೧೬.2ಮಿಲಿಯನ ್ಆಗಿದೆ. ಈಗ ದುಬೈನಲ್ಲಿ ಸಂಭವಿಸಿರುವ ಆರ್ಥಿಕ ಕುಸಿತ ನಮ್ಮ ದೇಶದ ಆರ್ಥಿಕತೆಗೂ ದೊಡ್ಡ ಪೆಟ್ಟು ನೀಡಿದೆ. ದುಬೈನಲ್ಲಿರು ವಭಾರತೀಯರು ಅಲ್ಲಿ ನಜನಸಂಖ್ಯೆಯ ಶೇ.43ರಷ್ಟಿದ್ದಾರೆ. ಅಲ್ಲಿ ಉದ್ದಿಮೆ ನಡೆಸುವವರು, ನೌಕರರಾಗಿ, ಕಾರ್ಮಿಕರಾಗಿ ಕೆಲಸ ಮಾಡುವವರು ಬಹುತೇಕ ನಮ್ಮವರೇ ಆಗಿದ್ದಾರೆ. ನಮ್ಮ ದೇಶದ ಹಲವ ಉತ್ಪನ್ನಗಳ ಗ್ರಾಹಕರು ಆಗಿರುವುದರಿಂ ದ ದೇಶದ ಆರ್ಥಿಕತೆಗೂ ಬಾರೀ ಪೆಟ್ಟು ಬೀಳಲಿದೆ.
ಜಾಗತೀಕರಣ ಕಾಲಿರಿಸುತ್ತಿದ್ದಂತೆ ನಮ್ಮ ಕೃಷಿ ಭೂಮಿಗಳು ಆರ್ಥಿಕವಲಯದ ಪಾಲಾಗುತ್ತಿವೆ, ದೇಶೀಯ ಉತ್ಪನ್ನಗಳು ಮೂಲೆಗುಂಪಾಗಿವೆ, ಆಧುನೀಕರಣದ ಪ್ರಭಾವದಿಂದಾಗಿ ಇರುವ ಕೃಷಿ ಭೂಮಿಗಳು ಬರಡಾಗುತ್ತಿವೆ, ಶಿಕ್ಷಣದ ಆದ್ಯತೆಗಳು ಬದಲಾಗಿವೆ, ಸಂಬಂಧಗಳು ಯಾತ್ರಿಕವಾಗಿವೆ, ಅಭಿರುಚಿ-ಸಂಸ್ಕೃತಿ ಬದಲಾಗಿದೆ, ಭಾಷಾ ವ್ಯವಸ್ಥೆ ದಿಕ್ಕೆಟ್ಟು ಹೋಗಿದೆ, ಪ್ರಗತಿ ಪರ ಚಳುವಳಿಗಳನ್ನು ವ್ಯವಸ್ಥಿತವಾಗಿ ಕೆಡವಲಾಗಿದೆ, ಅಪರಾಧಗಳು ಹೆಚ್ಚಿವೆ, ಸಾಮಾಜಿಕ ನ್ಯಾಯ ದಿಕ್ಕಾಪಾಲಾಗಿದೆ, ಹೀಗೆ ಹೇಳುತ್ತಾ ಹೋದರೆ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಇದೆಲ್ಲದರ ನಡುವೆ ಇದ್ದಕ್ಕಿದ್ದಂತೆ ಎಂಎನ್ ಸಿಗಳಲ್ಲಿ ಕೆಲಸ ಕಳೆದುಕೊಂಡು ಬದುಕಿನ ಭರವಸೆಯನ್ನು ಕಳೆದುಕೊಂಡವರೆಷ್ಟ ಜನರೋ. ಇವತ್ತು ನಾವು ದೈನಂದಿ ನಜೀವನದಲ್ಲಿ ಬಳಸುವ ಪ್ರತೀ ವಸ್ತುವೂ ಚಡ್ಡಿ-ಬನೀನು ಸೇರಿದಂತೆ ಎಲ್ಲ ಪದಾರ್ಥಗಳು ವಿದೇಶಿ ಸಹಯೋಗದ ಕಂಪನೆಗಳ ಬಳುವಳಿಯೇ. ಅದ ನಮ್ಮನ್ನು ಎಷ್ಟು ಆವರಿಸಿಕೊಂಡಿದೆಯಂದರೆ ನೀರಿನ ಮಡುವಿನಿಂ ದಹೊರಬರಲಾರದಷ್ಟು. ನಮಗೆ ಅಧುನೀಕರಣ ಬೇಕು, ಉದ್ಯೋಗ ಬೇಕು, ಅಭಿವೃದ್ದಿ ಬೇಕು ಆದರೆ ನಮ್ಮ ತನವನ್ನು ಹರಾಜಿಗಿಟ್ಟುಕೊಳ್ಳುವ ವ್ಯವಸ್ಥೆಯಲ್ಲ.ಎಲ್ಲಿ ದೇಸೀ ಜೀವನ ಪ್ರೀತಿ ಇಲ್ಲವೋ , ಬದ್ದತೆ, ಸಿದ್ದಾಂತಗಳಿರುವುದಿಲ್ಲವೋ ಅಲ್ಲಿಯವರೆಗೂ ಜಾಗತೀಕರಣದ ಭೂತ ನಮ್ಮನ್ನು ಹಿಂಬಾಲಿಸುತ್ತಲೇ ಇರುತ್ತದೆ.

Friday, November 20, 2009

ಪೊಲೀಸರ ರಕ್ಷಣೆಯಲ್ಲಿ ಪತ್ರಕರ್ತ ಇರಬೇಕಾ??

ಕಳೆದ ಕೆಲವು ತಿಂಗಳಿಂದ 'ವಿಜಯ ಕರ್ನಾಟಕ' ದಿನಪತ್ರಿಕೆಯಲ್ಲಿ, ವೃತ್ತಿಯಲ್ಲಿ ನಾನು ಕೈಗೊಂಡಿರುವ ಕ್ರಮ ಮತ್ತು ಬೆಂಗಳೂರು ಪೊಲೀಸ್ ಇಲಾಖೆಯ ಕಾರ್ಯ ನಿರ್ವಹಣೆ ಕುರಿತು ಹಲವಾರು ಪ್ರತಿಕೂಲ ವರದಿಗಳು ಪ್ರಕಟವಾಗಿರುತ್ತವೆ. ಬೆಂಗಳೂರು ಆವೃತ್ತಿಯ(ದಿ:17/11/2009 ರ ವಿ.ಕ) ಪುಟಗಳಲ್ಲಿ "ಕಾನೂನು ಎಷ್ಟಕ್ಕೆ ಬಿಕರಿಯಾಗಿತ್ತು ಹೇಳಿ ಬಿದರಿಯವರೇ? ಶೀರ್ಷಿಕೆಯಡಿಯಲ್ಲಿ ಪ್ರಕಟವಾಗಿರುವ ಲೇಖನವನ್ನು ಗಮನಿಸಿದ್ದೇನೆ. ನೀವು ದಿ.30/06/2009 ರಂದು ತಮ್ಮ ಅಂಗರಕ್ಷಕರನ್ನಾಗಿ ಪೊಲೀಸರನ್ನು ನಿಯೋಜಿಸಲು ಅರ್ಜಿ ಸಲ್ಲಿಸಿರುವುದು ಸರಿಯಷ್ಟೇ. ಈ ಬಗ್ಗೆ ಸೂಕ್ತ ವಿಚಾರಣೆ ನಡೆಸಿ , ವರದಿಯ ಆಧಾರದ ಮೇಲೆ ನಿಮಗೆ ಪೊಲೀಸ್ ಅಂಗರಕ್ಷಕರನ್ನು ನಿಯೋಜಿಸುವುದು ಸರಿಯಲ್ಲ ಎಂಬ ನಿರ್ದಾರಕ್ಕೆ ನಾನು ಬಂದಿರುವ ವಿಷಯ ನಿಮಗೆ ಗೊತ್ತಿದೆ. ಈ ಬಗ್ಗೆ ತಮ್ಮ ಪತ್ರಿಕಾ ವರದಿಗಾರರು ಮತ್ತು ಹಲವು ಉನ್ನತ ಮೂಲಗಳಿಂದ ಸಾಕಷ್ಟು ಒತ್ತಡ ಬಂದಿದ್ದರೂ ನಾನು ನನ್ನ ನಿರ್ಧಾರಕ್ಕೆ ಬದ್ಧನಾಗಿದ್ದೇನೆ. ಈ ಕಾರಣದಿಂದಲೇ ಕೆಲವು ತಿಂಗಳಿನಿಂದ ನಾನು ಕೈಗೊಂಡ ವೃತ್ತಿಪರ ಕ್ರಮಗಳ ಬಗ್ಗೆ ಮತ್ತು ಬೆಂಗಳೂರು ಪೊಲೀಸ್ ಕಾರ್ಯ ನಿರ್ವಹಣೆಯ ಕುರಿತು ಹಲವಾರು ಪ್ರತಿಕೂಲ ವರದಿಗಳು 'ವಿಕ'ದಲ್ಲಿ ಪ್ರಕಟವಾಗಿರುತ್ತವೆ. ಮತ್ತು ಈ ಲೇಖನವೂ ಸಹಾ ಅದೇ ಕಾರಣದಿಂದ ಪ್ರಕಟವಾಗಿದೆ ಎಂದು ನಾನು ನಂಬಲು ಬಲವಾದ ಕಾರಣಗಳಿವೆ. ಆದರೂ ಸಹಿತ ಪತ್ರಿಕಾ ಧರ್ಮವನ್ನು ತಿಳಿದಿರುವ ತಾವು, ಈ ತರಹದ ಕೃತ್ಯವನ್ನು ಎಸಗುವುದಿಲ್ಲ ಎಂದು ನಂಬಲು ಪ್ರಯತ್ನಿಸುತ್ತಿದ್ದೇನೆ.
ಈ ನನ್ನ ಪ್ರತಿಕ್ರಿಯೆಯಿಂದ ತಮ್ಮ ಪತ್ರಿಕೆಯಲ್ಲಿ ತಾವು ಸಾಕಷ್ಟು ವಿವಾದಗಳನ್ನು ಸೃಷ್ಟಿಸುವ ಮತ್ತು ಪ್ರತಿಕೂಲ ವರದಿಗಳನ್ನು ಬರೆಯುವ ಸಾಧ್ಯತೆ ಇದೆ ಎಂಬ ಅರಿವು ನನಗೆ ಇದೆ. ಎಂತಹುದೇ ಪ್ರಬಲವಾದ ಪತ್ರಿಕೆಯಾದರೂ ಸಹಿತ ಎಷ್ಟೇ ಪ್ರತಿಕೂಲ ವರದಿಗಳನ್ನು ಪ್ರಕಟಿಸಿದರೂ , ರಾಜ್ಯದ ಜನತೆಯು ಸಾಕಷ್ಟು ವಿವೇಚನೆಯಿಂದ ಮತ್ತು ಸತ್ಯಾಸತ್ಯತೆಯನ್ನು ಪರಿಶೀಲಿಸಿ ಸತ್ಯವನ್ನು ತಿಳಿಯಲು ಶಕ್ತರಾಗಿದ್ದಾರೆ ಎಂದು ನಾನು ನಂಬಿದ್ದೇನೆ.
ಹಲವಾರು ಕಾರಣಗಳಿಂದಾಗಿ 'ವಿಕ' ದಿನಪತ್ರಿಕೆಯು ಇಂದು ರಾಜ್ಯದ ಪ್ರಮುಖ ದಿನಪತ್ರಿಕೆಯಾಗಿ ಹೊರಹೊಮ್ಮಿದೆ. ಈಗ ಅದು ಶತ ಶತಮಾನಗಳಿಂದ ಪತ್ರಿಕಾ ಧರ್ಮವನ್ನು ಪಾಲಿಸಿಕೊಂಡು ಬಂದಿರುವ ಟೈಮ್ಸ್ ಆಫ್ ಇಂಡಿಯಾ ಸಮೂಹಕ್ಕೆ ಸೇರಿದೆ. ಪ್ರತಿಷ್ಟಿತ ಮತ್ತು ಗೌರವಾನ್ವಿತ ಪತ್ರಿಕಾ ಸಮೂಹವಾದ ಟೈಮ್ಸ್ ಆಫ್ ಇಂಡಿಯಾ ಸಮೂಹಕ್ಕೆ ಸೇರಿರುವ 'ವಿಕ' ಪತ್ರಿಕೆ ಪತ್ರಿಕಾ ಧರ್ಮಕ್ಕೆ ಅನುಗುಣವಾಗಿ ನಡೆಯಲಿ ಎಂದು ಆಶಿಸುತ್ತೇನೆ. ಹೀಗೊಂದು ಸುದೀರ್ಘ ಪತ್ರವನ್ನು 'ವಿಕ'ದ ಸಂಪಾದಕ ವಿಶ್ವೇಶ್ವರ ಭಟ್ ಗೆ ಬರೆದದ್ದು ಬೆಂಗಳೂರು ನಗರದ ಪೊಲೀಸ್ ಆಯುಕ್ತ ಶಂಕರ ಬಿದರಿ. ಎಲ್ಲರಿಗೂ ತಿಳಿದಂತೆ ಪತ್ರಿಕಾ ಲೋಕದಲ್ಲಿ ಸಂಚಲನ ಹುಟ್ಟಿಸಿದ್ದು, ಕಾಲಾನುಕೂಲಕ್ಕೆ ಬದಲಾಗುತ್ತಾ(ಮುಖಪುಟ, ವಿನ್ಯಾಸ, ಸುದ್ದಿಗಳು ಲೇಖನಗಳು) ಓದುಗರಿಗೆ ಹೊಸತನದ ಮುದ ನೀಡಿತು. ಆ ಮೂಲಕ ಜಡ್ಡು ಕಟ್ಟಿದ ಕನ್ನಡ ಪತ್ರಿಕೋಧ್ಯಮಕ್ಕೂ ಚುರುಕು ಮುಟ್ಟಿಸಿತು. ಪರಿಣಾಮ ಪ್ರಜಾವಾಣಿಯಂತಹ ಪತ್ರಿಕೆ ಕೂಡ ಬದಲಾವಣೆಗೆ ಸಿದ್ಧವಾಯಿತು. ಶತಮಾನದ ಕುರುಹುವಾಗಿರುವ 'ಸಂಯುಕ್ತ ಕರ್ನಾಟಕ' ಪತ್ರಿಕೆ ಸಹಾ ಹೊಸ ವಿನ್ಯಾಸ ಪಡೆಯಿತು. 'ಕನ್ನಡ ಪ್ರಭ'ದ ಮುಖಪುಟದ ಸುದ್ದಿ ಬಿಟ್ಟು ಒಳಗಿನದೆಲ್ಲಾ ಅಜೀರ್ಣವೇ ಸರಿ. ಇಂತಹ ಸನ್ನಿವೇಶದಲ್ಲಿ 'ಟೈಮ್ಸ್ ಆಫ್ ಇಂಡಿಯಾ' ದ ಬೆಂಗಳೂರು ಟೈಮ್ಸ್ ಪುಟದ ಅನುಕರಣೆ ಲವಲವಿಕೆಯೊಂದಿಗೆ 'ವಿಜಯ ಕರ್ನಾಟಕ' ಮತ್ತೊಮ್ಮೆ ಹೊಸ ರೂಪ ತಂದಿದೆ, ಪತ್ರಿಕೆಯ ಅಂಕಣಗಳು ಸುದ್ದಿ ವಿಶ್ಲೇಷಣೆಗಳು ಚೆನ್ನಾಗಿವೆ. ಆದರೆ 'ವಿಕ' ಎಲ್ಲೋ ಒಂದು ಕಡೆ ಇನ್ನೂ ಸಂಘ ಪರಿವಾರದ ಮುಖವಾಣಿಯಂತಿದೆ.
ವಿಶ್ವೇಶ್ವರ ಭಟ್ ಚಿಕ್ಕ ವಯಸ್ಸಿಗೆ ಮೀರಿದ ಹಲವು ಸ್ಥಾನಗಳನ್ನೇ ಅಲಂಕರಿಸಿದವರು ನಿರೀಕ್ಷೆಗೂ ಮೀರಿದ ವೇಗದಲ್ಲಿ ಬೆಳೆದವರು ಪತ್ರಿಕೆಯನ್ನು ಬೆಳೆಸಿದ್ದಾರೆ. ಆದರೆ ಪತ್ರಕರ್ತನಿಗಿರುವ ಇಗೋ ಜಾಗೃತಗೊಂಡರೆ ಆಗಬಹುದಾದ ಅನಾಹುತ ಮತ್ತು ಅದಕ್ಕಿಂತ ದೊಡ್ಡ ಅಪಾಯ ಮತ್ತೊಂದಿರಲಾರದು. ನಮ್ಮ ಭಟ್ಟರ ವಿಷಯದಲ್ಲೂ ಇಂತಹ ಇಗೋ ಕೆಲಸ ಮಾಡಿರುವ ಸಾಧ್ಯತೆ ಇದೆ. ಕೇಂದ್ರದಲ್ಲಿ ಮಂತ್ರಿಯಾಗಿದ್ದ ಅನಂತಕುಮಾರ್ ಗೆ ಮಾಧ್ಯಮ ಸಲಹೆಗಾರರಾಗಿದ್ದ ಭಟ್ಟರು, ರಾಷ್ಟ್ರಪತಿ ಅಬ್ದುಲ್ ಕಲಾಂ ಜೊತೆ ವಿದೇಶ ಪ್ರವಾಸದಲ್ಲೂ ಜೊತೆಯಾಗಿದ್ದರಲ್ಲದೇ ಹಲವು ಉತ್ತಮ ಬರಹಗಳನ್ನು, ಪುಸ್ತಕಗಳನ್ನು ಕೊಡುಗೆಯಾಗಿ ನೀಡಿದ ಹೆಮ್ಮೆ ಅವರಿಗಿದೆ, ಓದಿದ ಖುಷಿ ನಮಗೂ ಇದೆ!. ಇಂತಿಪ್ಪ ಭಟ್ಟರು ಒಮ್ಮೆ ಅಡ್ವಾಣಿಯವರು ರಾಜ್ಯಕ್ಕೆ ಭೇಟಿ ನೀಡಿದ್ದ ಸಮಯದಲ್ಲಿ ರಾಜ್ಯದ ಮುಖ್ಯಮಂತ್ರಿ ನಡವಳಿಕೆ ಹೇಗಿರಬೇಕು, ಹೇಗೆ ನಡೆದುಕೊಳ್ಳಬೇಕು, ನಮ್ಮವರು ಹೇಗೆ ಸಿಡುಕುತ್ತಾರೆ ಏನೆಲ್ಲ ತಪ್ಪು ಮಾಡುತ್ತಾರೆ ಅದರ ಅಡ್ಡ ಪರಿಣಾಮವೇನು? ಎಂದೆಲ್ಲಾ ವಿವರವಾಗಿ ಬರೆದಿದ್ದರು. ಇದು ಪರೋಕ್ಷಾಗಿ ಮುಖ್ಯ ಮಂತ್ರಿ ಯಡಿಯೂರಪ್ಪನವರಿಗೆ ಉರಿಹತ್ತುವಂತೆ ಮಾಡಿತ್ತು. ಯಾಕೆಂದರೆ ಭಟ್ಟರ 'ಪೂರ್ವಾಪರ'ಗಳ ಸ್ಪಷ್ಟ ಅರಿವಿದ್ದ ಯಡ್ಡಿ ಸದರಿ ವರದಿಯಿಂದ ಕಂಗೆಟ್ಟು ಭಟ್ಟರಿಗೆ ಫೋನಾಯಿಸಿ ಜನ್ಮ ಜಾಲಾಡಿದ್ದರು. ಭಟ್ಟರಿಗೆ ಬೆವರಿಳಿದಿತ್ತು,(ಭಟ್ಟರು ಅನಂತಕುಮಾರ ಬೆಂಬಲಿಗರು ಅದಕ್ಕೆ ಹೀಗೆಲ್ಲ ಬರೆಯುತ್ತಿರಬಹುದು ಎಂಬು ಅವರ ಸಿಟ್ಟಿಗೆ ಕಾರಣವಾಗಿತ್ತು) ಆದರೆ ವಾಸ್ತವದಲ್ಲಿ ಭಟ್ಟರ ಉದ್ದೇಶ ಆ ರೀತಿ ಇರಲಿಲ್ಲ.
ಕೆಲ ವರ್ಷಗಳ ಹಿಂದೆ 'ಟೈಮ್ಸ್' ಗ್ರೂಪಿಗೆ ಸೇರ್ಪಡೆಗೊಂಡ ನಂತರ 'ವಿಕ'ದ ಖದರ್ರು ಬೇರೆಯಾಗಿದೆ. ಅಂತೆಯೇ ಭಟ್ಟರ ಖದರ್ರು ಸಹಾ. ಆದ್ದರಿಂದಲೇ ಅವರಿಗೆ ಅಂಗರಕ್ಷಕರನ್ನು ಹೊಂದುವ ಐಡಿಯಾ ಹೊಳೆದಿದೆ. ಸರಿ ಅದನ್ನು ಕಾರ್ಯರೂಪಕ್ಕೆ ತರಲು ಶತಾಯ ಗತಾಯ ಪ್ರಯತ್ನಿಸಿದ್ದಾರೆ. ಆದರೆ ಶಿಸ್ತು ಹಾಗೂ ದಿಟ್ಟತನಕ್ಕೆ ಹೆಸರಾದ ಬೆಂಗಳೂರು ನಗರ ಪೊಲೀಸ್ ಆಯುಕ್ತರಾದ ಶಂಕರ ಬಿದರಿಯವರು ಭಟ್ಟರ ಕೋರಿಕೆಯನ್ನು ಸಾರಾ ಸಗಟಾಗಿ ತಿರಸ್ಕರಿಸಿದ್ದಾರೆ. ಇದರಿಂದ ಭಟ್ಟರು ವಿಚಲಿತರಾದಂತಿದೆ. ರವಿಬೆಳಗೆರೆಯಂತಹ ಪತ್ರಕರ್ತರೇ ಆತ್ಮರಕ್ಷಣೆಗಾಗಿ ಪರವಾನಗಿ ಹೊಂದಿದ ಪಿಸ್ತೂಲು ಮತ್ತು ತಮ್ಮ ಪತ್ರಿಕಾ ಕಛೇರಿಗೆ ತಮ್ಮದೇ ಆದ ಭದ್ರತಾ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಹಾಗಿರುವಾಗ ಭಟ್ಟರಿಗೆ ಅಂಗರಕ್ಷಕರನ್ನು ಹೊಂದುವ ಅವಸರ ಮತ್ತು ಅವಶ್ಯಕತೆ ಏನಿತ್ತೋ ತಿಳಿಯುತ್ತಿಲ್ಲ. ವಿಶ್ವೇಶ್ವರಭಟ್ಟರು ಪ್ರಾಜ್ಞ ಮನಸ್ಥಿತಿಯ, ಸಂವೇದನಾ ಶೀಲ ಗುಣವುಳ್ಳವರು ಹಾಗಿದ್ದೂ ಹೀಗೇಕೆ ಮಾಡಿಕೊಂಡರೋ ? ಜನಮಾನಸದಲ್ಲಿ ಸ್ಥಾನ ಪಡೆದ ಪತ್ರಿಕೆಗೆ ಜನತೆಯ ಬೆಂಬಲವೂ ಸದಾ ಇರುತ್ತದೆ. ಇಂತಹ ಸನ್ನಿವೇಶದಲ್ಲಿ ಪತ್ರಕರ್ತ ಗಟ್ಟಿಗೊಳ್ಳುತ್ತಾನೆ. ಆತನಿಗೆ ಸಂವಿಧಾನ ರಕ್ಷಣೆ ಬೇಕು. ಅದಕ್ಕಾಗಿ ರಾಷ್ಟ್ರೀಯ ಮಟ್ಟದಲ್ಲಿ ಚಿಂತನೆ ನಡೆಯಬೇಕು. ಪತ್ರಕರ್ತರಿಗೆ ಕಾನೂನು ಬೆಂಬಲ ದಕ್ಕಿಸಿಕೊಳ್ಳುವ ಬಗ್ಗೆ ಪ್ರಯತ್ನವಾಗಬೇಕು. ಆದರೆ ತೀರಾ ಪೊಲೀಸ್ ರಕ್ಷಣೆಯಲ್ಲಿ, ಅಂಗರಕ್ಷಕರನ್ನಿಟ್ಟುಕೊಂಡು ಪತ್ರಕರ್ತರು ಓಡಾಡುವಂತಾಗ ಬಾರದು. ಅದು ಪತ್ರಿಕಾ ಧರ್ಮಕ್ಕೆ, ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆಯೇ ಸರಿ. ಹಾಗಂತ ಒಂದು ಜನಮಾನಸದ ಪತ್ರಿಕೆಯನ್ನು ವೈಯುಕ್ತಿಕ ವಿಚಾರಕ್ಕೆ ಬಳಸಿಕೊಳ್ಳುವುದು ಖಂಡಿತಾ ಸರಿಯಾದುದಲ್ಲ ಹೌದಲ್ವಾ?

Sunday, November 15, 2009

ದೌರ್ಜನ್ಯ ವಕೀಲಿಕೆಯ ಭಾಗವಾಗಿದೆಯೇನೋ ಎಂಬ ಅನುಮಾನ!


" ದೌರ್ಜನ್ಯ ವಕೀಲಿಕೆಯ ಭಾಗವಾಗಿದೆಯೇನೋ ಅನ್ನುವ ಅನುಮಾನ ಶುರುವಾಗಿದೆ,ನಿತ್ಯವೂ ಕಕ್ಷಿದಾರರ ಮೇಲೆ ವಿವಿಧ ರೀತಿಯ ದೌರ್ಜನ್ಯಗಳು ನಡೆಯುತ್ತಲೇ ಇರುತ್ತವೆ! ಅಪರೂಪಕ್ಕೊಮ್ಮೆ ಮಾಧ್ಯಮದವರ ಮೇಲೂ ದೌರ್ಜನ್ಯವಾಗಿದೆ. ನ್ಯಾಯವಾದಿಗಳು ನ್ಯಾಯಕ್ಕಾಗಿ ಹೋರಾಡುವುದಷ್ಟೇ ಅಲ್ಲ, ಅವರ ಹೋರಾಟದ ಹಾದಿಯೂ ನ್ಯಾಯ ಮಾರ್ಗದಲ್ಲಿರಲಿ!! "ಹೀಗೆಂದವರು ಜೀ ಕನ್ನಡ ವಾಹಿನಿಯ ಮಧುಸೂಧನ್. ಹೌದು ಇಂತಹದ್ದೊಂದು ಮಾತನ್ನು ಒಪ್ಪಬೇಕಾ? ಯಾಕೆ ಹೀಗೆ ಪುನರಾವರ್ತನೆಯಾಗುತ್ತಿದೆ? ಕಾನೂನು ಎಲ್ಲರಿಗೂ ಒಂದೇ ಅಲ್ಲವಾ? ಕರಿಕೋಟು ತೊಟ್ಟವರು ಏನು ಮಾಡಿದರೂ ನಡೆಯುತ್ತದೆ ಎಂಬ ಭಾವನೆ ಯಾಕೆ ಸಾರ್ವಜನಿಕವಾಗಿ ವ್ಯಕ್ತವಾಗುತ್ತಿದೆ?? ಎಂಬೆಲ್ಲ ಪ್ರಶ್ನೆಗಳು ಪುನಹ ಕಾಡಿದ್ದು ಕಳೆದ ವಾರದ ಬೆಳವಣಿಗೆಯ ನಂತರ.

ಹೌದು ಯಾಕೆ ಹೀಗೆ ? ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನ್ಯಾಯಾಂಗ, ಕಾರ್ಯಾಂಗ,ಶಾಸಕಾಂಗ ಪ್ರಧಾನವಾಗಿದ್ದರೆ ಪ್ರತ್ಯೇಕವಾಗಿ ಪ್ರಜಾಪ್ರಭುತ್ವದ ಕಾವಲು ನಾಯಿಯಂತಿರುವುದು ಪತ್ರಿಕಾರಂಗ. ಇಲ್ಲಿ ಯಾರು ಹೆಚ್ಚು , ಯಾರು ಕಡಿಮೆ ಎಂಬ ವಿಚಾರಗಳ ಅವಲೋಕನ ಅನಗತ್ಯ. ಅವರವರದೇ ನೆಲೆಗಟ್ಟಿನಲ್ಲಿ ಅವರು ಹೆಚ್ಚು ಶಕ್ತರು ಹಾಗೂ ಸಮಾಜದಲ್ಲಿ ಜನಸಾಮಾನ್ಯರನ್ನು ಪ್ರತಿನಿಧಿಸುವವರು. ಎಲ್ಲರಿಗೂ ಅವರವರದೇ ಆದ ಗುರುತರ ಹೊಣೆಗಾರಿಕೆಗಳು ಇವೆ. ಹೀಗಿರುವಾಗ ಪರಸ್ಪರರನ್ನು ಗೌರವಿಸುವ, ಮತ್ತು ವಿಶ್ವಾಸಕ್ಕೆ ತೆಗೆದುಕೊಳ್ಳುವ ಜವಾಬ್ದಾರಿ ಇರುತ್ತದೆ. ಅದೇ ಸಮಯದಲ್ಲಿ ಬಾಹ್ಯವಾಗಿ ನಮ್ಮ ನಡವಳಿಕೆಗಳು ಹೇಗೆ ಇರಬೇಕೆಂಬುದನ್ನು ಸಹಾ ಅರಿಯ ಬೇಕಾಗುತ್ತದೆ, ಯಾಕೆಂದರೆ ಅದು ಒಟ್ಟು ಸಮಾಜದ ಮೇಲೆ ಪ್ರತಿಕೂಲ ಪರಿಣಾಮವನ್ನು ಬೀರುತ್ತದೆ. ಹಾಗಾಗದಂತೆ ತಡೆಯಬೇಕಾದುದು ಪರಸ್ಪರರ ಕರ್ತವ್ಯ ಕೂಡ! ಆ ನಿಟ್ಟಿನಲ್ಲಿ ಕಳೆದ ವಾರ ಬೆಂಗಳೂರಿನ ಹೈಕೋರ್ಟ್ ಆವರಣದಲ್ಲಿ ಮಾಧ್ಯಮ ಪ್ರತಿನಿಧಿಯೊಬ್ಬರ ಮೇಲೆ ನಡೆದ ಹಲ್ಲೆ ಹೆಚ್ಚು ಪ್ರಸ್ತುತವೆನಿಸುತ್ತದೆ ಕೂಡಾ. ಪ್ರಸಕ್ತ ಸಂಧರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳ ಹಲ್ಲೆ ಮಾಮೂಲು ಸಂಗತಿಯಾಗಿದೆ, ಆದರೆ ಸಮಾಜದ ಒಂದು ಪ್ರಜ್ಞಾವಂತ ಗುಂಪಿನಿಂದ ಸಾರ್ವಜನಿಕ ಹಲ್ಲೆ ಕಾನೂನು ಮೀರಿ ನಡೆದಾಗ ಅದು ಪ್ರಶ್ನಾರ್ಹವೇ ಆಗಿದೆ. ರಾಜ್ಯದ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶ ಸಿ ದಿನಕರನ್ ಅಕ್ರಮ ಆಸ್ತಿಗಳಿಸಿದ್ದಾರೆ ಹಾಗಾಗಿ ಅವರನ್ನು ಸುಪ್ರಿಂ ಕೋರ್ಟ್ ನ್ಯಾಯಾಧೀಶರ ಆಯ್ಕೆ ಪ್ರಕ್ರಿಯೆಯಿಂದ ಕೈಬಿಡಬೇಕು , ಅವರು ನ್ಯಾಯಾಲಯ ಕಲಾಪಗಳನ್ನು ನಡೆಸಬಾರದು ಎಂದು ಪ್ರತಿಭಟನೆ ನಡೆಸಿದರು. ಅದೂ ಕೋರ್ಟ್ ಆವರಣದಲ್ಲಿ ಮತ್ತು ಕಲಾಪ ನಡೆಯುವ ವೇಳೆ, ಕೆಲವು ನ್ಯಾಯಾಧೀಶರನ್ನು ಕೊಠಡಿಯೊಳಗೆ ಕೂಡಿಹಾಕಿದ್ದಲ್ಲದೇ, ಅಡ್ಡಿ ಪಡಿಸುವ ಯತ್ನವಾಗಿ ರಾಷ್ಟ್ರಗೀತೆಯನ್ನು ಹಾಡಲಾಯಿತು. ಈ ಸಂಧರ್ಭದಲ್ಲಿ ಸ್ಥಳಕ್ಕೆ ಧಾವಿಸಿದ ಮಾಧ್ಯಮ ಪ್ರತಿನಿಧಿಗಳು ಘಟನೆಯನ್ನು ಕಂಡರು ದೃಶ್ಯವಾಹಿನಿಗಳವರು ಚಿತ್ರೀಕರಿಸಿಕೊಂಡರು, ಅದು ಜನ ಸಾಮಾನ್ಯರ ಹಿತಾಸಕ್ತಿಯಿಂದ. ಆದರೆ ಇದನ್ನು ಸಹಿಸದ ಕೆಲವು ದುಷ್ಕರ್ಮಿ ವಕೀಲರುಗಳು( ಕ್ಷಮಿಸಿ ಎಲ್ಲರೂ ಅಲ್ಲ) ಸಿಎನ್ ಎನ್ ಐ ಬಿ ಎನ್ ಚಾನಲ್ ನ ಛಾಯಾಗ್ರಾಹಕ ವೆಂಕಟೇಶ್ ಮೇಲೆ ಹಲ್ಲೆ ನಡೆಸಿ ಬಟ್ಟೆ ಹರಿದರು, ಹಲವು ಪತ್ರಕರ್ತರನ್ನು ಮನಬಂದಂತೆ ಥಳಿಸಿದರು. ಇದು ವಕೀಲರುಗಳ ಹೋರಾಟದ ನ್ಯಾಯವಾದ ಮಾರ್ಗವೇ? ಇರಲಿ ಸ್ವಲ್ಪ ವಿಷಯಾಂತರ ಮಾಡೋಣ ಇಂತಹ ಹಲ್ಲೆಗಳು ಕೇವಲ ವಕೀಲರಿಂದ ಮಾತ್ರವೇ ಸಂಭವಿಸುತ್ತಿಲ್ಲ. ಸಮಾಜದ ಗಣ್ಯರೆನಿಸಿಕೊಂಡವರಿಂದಲೂ ಹಲ್ಲೆಗಳು ನಡೆದಿವೆ. ಕೆಲ ವರ್ಷಗಳ ಹಿಂದೆ ಮೈಸೂರಿನ ಪತ್ರಕರ್ತ ಸಂತೋಷ ನಡುಬೆಟ್ಟನನ್ನು ಚಾಮುಂಡಿ ಬೆಟ್ಟದ ಹಾದಿಯಲ್ಲಿ ಕ್ಷುಲ್ಲಕ ವಿಷಯಕ್ಕೆ ನಟ ಪುನೀತು ಬಡಿದಿದ್ದ, ನಾಗರಹೊಳೆ ಅರಣ್ಯದಲ್ಲಿ ಅರಣ್ಯ ಸಂರಕ್ಷಣಾಧಿಕಾರಿ ಅಣ್ಣಯ್ಯ ಎಂಬಾತ ಈ ಟಿವಿ ಗೆಳೆಯರನ್ನು ಬಡಿದು ಕ್ಯಾಮೆರಾ ಹಾಳುಗೆಡವಿದ್ದ, ಹಾಸನದಲ್ಲಿಯೂ ಕೆಲವು ವಕೀಲರುಗಳಿಂದ ಪತ್ರಕರ್ತರ ಮೇಲೆ ದೌರ್ಜನ್ಯ ನಡೆದಿತ್ತು, ಮೊನ್ನೆ ಮೊನ್ನೆ ಶುಭಾಪೂಂಜಾ ಜೊತೆ ಕಾಣಿಸಿಕೊಂಡ ನಟ ವಿಜಯ್ ದೃಶ್ಯ ಮಾಧ್ಯಮದವರನ್ನು ತಡವಿಕೊಂಡಿದ್ದ ಹೀಗೆ ಅಂಕೆಗೆ ಸಿಗದಷ್ಟು ಲೆಕ್ಕದಲ್ಲಿ ಪತ್ರಕರ್ತರ ಮೇಲೆ ದೌರ್ಜನ್ಯ ನಿರಂತರವಾಗಿದೆ. ಯಾವ ಪ್ರಕರಣದಲ್ಲೂ ಇದುವರೆಗೂ ನ್ಯಾಯ ದಕ್ಕಿಲ್ಲ ಎಂಬುದು ದುರಂತದ ಸಂಗತಿಯೇ ಸರಿ. ಈ ಪ್ರಕರಣ ಕುರಿತು ಹೇಳಿಕೆ ನೀಡಿರುವ ರಾಜ್ಯದ ಕಾನೂನು ಸಚಿವ ಪ್ರಕರಣ ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ. ಆದರೆ ಫಲಿತಾಂಶ ಮಾತ್ರ ಇನ್ನೂ ಆಗಿಲ್ಲ.

ಇಂತಹ ಸಂಧರ್ಭದಲ್ಲಿ ರಾಜ್ಯ ಮಟ್ಟದ ಪತ್ರಿಕೆಯೊಂದರಲ್ಲಿ ಮಾಧ್ಯಮಗಳ ಕುರಿತು ಮೀಡಿಯಾ ಮಿರ್ಚಿ ಅಂಕಣ ಬರೆಯುವ, ಮಾದ್ಯಮ ಲೋಕದ ಒಳ-ಹೊರಗನ್ನು ಬಲ್ಲ ಸೂಕ್ಷ ಪ್ರಜ್ಞೆಯ ಜಿ ಎನ್ ಮೋಹನ್ ಮಾಧ್ಯಮ ಮಿತ್ರ ಮೇಲೆ ನಡೆಯುತ್ತಿರುವ ಹಲ್ಲೆ ಖಂಡಿಸಿ ಅಭಿಪ್ರಾಯ ಸೂಚಿಸುವಂತೆ ಕೋರಿದ್ದರು, ಈ ಮೇರೆಗೆ ಮೀಡಿಯಾ ಮಿರ್ಚಿ ಅಂತರ್ಜಾಲ ತಾಣದಲ್ಲಿ ಹಲವು ಗಣ್ಯರು, ಪತ್ರಕರ್ತರ ಅಭಿಪ್ರಾಯಗಳನ್ನು ಸಂಗ್ರಹಿಸಿದ್ದಾರೆ, ಆ ಪ್ರತಿಕ್ರಿಯೆಗಳನ್ನು ಒಟ್ಟು ಮಾಡಿ ರಾಜ್ಯಪಾಲರಿಗೆ ಅರ್ಪಿಸಿ ಪತ್ರಕರ್ತರಿಗೆ ರಕ್ಷಣೆ ಕೋರುವ ಸ್ತುತ್ಯಾರ್ಹ ಪ್ರಯತ್ನ ಮಾಡುತ್ತಿದ್ದಾರೆ, ಆದರೆ ಕಾನೂನು ಸಚಿವರ ಹೇಳಿಕೆಯಿಂದ ತೃಪ್ತರಾದಂತಿರುವ ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ ಇನ್ನೂ ತೂಕಡಿಕೆಯಲ್ಲಿದೆ, ಇದು ಸರಿಯಲ್ಲ. ಕಾನೂನು ಎಲ್ಲರಿಗೂ ಒಂದೇ ಅದು ಯಾರಪ್ಪನ ಮನೆಯ ಆಸ್ತಿಯೂ ಅಲ್ಲ ಹಾಗಾಗಿ ಅದನ್ನು ಪ್ರತಿನಿಧಿಸುವವರೂ ಕೂಡ ಒಂದು ತೂಕದಿಂದ ನಡೆದುಕೊಂಡರೆ ಒಳಿತು ಇಲ್ಲವಾದಲ್ಲಿ ವ್ಯವಸ್ಥೆ ಅವರ ವಿರುದ್ಧ ತಿರುಗಿ ಬೀಳುವ ದಿನಗಳು ದೂರವಿಲ್ಲ ಎಂಬುದನ್ನು ಅರಿಯಬೇಕಲ್ಲವೇ?

ಕೊನೆ ಮಾತು: ರಾಜ್ಯದಲ್ಲಿ ಈಗ ಉದ್ಯೋಗ ಖಾತ್ರಿ ಯೋಜನೆ ಜಾರಿಯಲ್ಲಿದೆ ಇದು ಜನ ಸಾಮಾನ್ಯರಿಗೆ ಉದ್ಯೋಗ ಒದಗಿಸುವ ಬದಲು ಪಂಚಾಯತ್ ವ್ಯವಸ್ಥೆಯ ಅಧಿಕಾರಿಗಳು ಮತ್ತು ಇಂಜಿನಿಯರುಗಳ ಜೋಳಿಗೆ ತುಂಬಿಸುವ ಅಕ್ಷಯ ಯೋಜನೆಯಾಗಿದೆ. ದೇಶದ ೩.೫೨ ಕೋಟಿ ಗ್ರಾಮೀಣ ಜನರಿಗೆ ಉದ್ಯೋಗ ಒದಗಿಸುವ ಮಹತ್ತರ ಯೋಜನೆ. ರಾಜ್ಯದಲ್ಲಿ 13.50855ಕೋಟಿ ಜನರಿಗೆ ಉದ್ಯೋಗ ಒದಗಿಸುವ ಗುರಿ ಹೊಂದಲಾಗಿದೆ. ಆರಂಭದಲ್ಲಿ ಯೋಜನೆಯ ಕಠಣ ಮಾರ್ಗಸೂಚಿಗಳಿಂದ ಕುಂಟುತ್ತಾ ಸಾಗಿದ್ದ ಯೋಜನೆ , ಈಗ ಸಡಿಲಗೊಂಡಿರುವ ಮಾರ್ಗದರ್ಶಿಸೂತ್ರಗಳಿಂದ ಅಧಿಕಾರ/ರಿ ಶಾಹಿಗಳ ಮತ್ತು ಕಂಟ್ರಾಕ್ಟುದಾರರ ಅಕ್ಷಯ ಪಾತ್ರೆಯಾಗಿ ಪರಿವರ್ತನೆಯಾಗಿದೆ. ಪ್ರಸ್ತುತ ಹಾಸನ ಜಿಲ್ಲೆಯಲ್ಲಿ ಇಂದಿನವರೆಗೆ ಕೇವಲ 14ಕೋಟಿರೂಪಾಯಿಗಳ ಕೆಲಸ ವಾಗಿದೆ ಆದರೆ ಮಾದ್ಯಮಗಳ್ಲಲಿ ಮಾತ್ರ ಜಿ.ಪಂ. ನ ಹಿರಿಯ ಅಧಿಕಾರಿಗಳು ಮತ್ತು ಅಧ್ಯಕ್ಷ/ಉಪಾಧ್ಯಕ್ಷರುಗಳು ಸಾರ್ವಜನಿಕರಿಗೆ ೨೫-30ಕೋಟಿ ಕೆಲಸವಾಗಿದೆಯೆಂಬ ಸುಳ್ಳುಹೇಳುತ್ತಿದ್ದಾರೆ. ಜಿಲ್ಲೆಯಾಧ್ಯಂತ ಹಲವೆಡೆ ಜನಸಂಖ್ಯೆಗನುಗುಣವಾಗಿ ಕ್ರಿಯಾ ಯೋಜನೆ ತಯಾರಿಸುವ ಬದಲು ದುಡ್ಡು ಮಾಡಲು ಕ್ರಿಯಾಯೋಜನೆ ತಯಾರಿಸಲಾಗಿದೆ. ಇದಕ್ಕೆ ಸ್ಪಷ್ಟ ಪಾರದರ್ಶಕ ಉದಾಹರಣೆಯೆಂದರೆ ಕೆರೆ ಅಭಿವೃದ್ದಿ ಕ್ರಿಯಾ ಯೋಜನೆಗಳು. ಶೇ.೨೦ ಜೆಸಿಬಿ ಬಳಸುತ್ತೇವೆಂದು ಹೇಳಲಾಗುತ್ತಿದ್ದರೂ ಶೇ.100ರಷ್ಟು ಜೆಸಿಬಿ ಬಳಕೆಯಾಗಿದೆ. ದುಡಿಯುವ ಕೈಗಳಿಗೆ ಕೆಲಸವಿಲ್ಲವಾಗಿದೆ, ಅವರ ಜಾಬ್ ಕಾರ್ಡುಗಳು ಕಂಟ್ರಾಕ್ಟರುಗಳ ಬಳಿ ಇಲ್ಲವೇ ವಾರ್ಡು ಸದಸ್ಯರುಗಳ ಬಳಿ ಸಂಗ್ರಹವಾಗಿವೆ. ಕೆಲಸ ಮಾಡದೇ, ಅರೆಬರೆ ಕೆಲಸ ಮಾಡಿ ಲಕ್ಷಾಂತರ ರೂ ಕೊಳ್ಳೆ ಹೊಡೆಯಲಾಗಿದೆ.ಈ ಬಗ್ಗೆ ಪ್ರಶ್ನಿಸಿದರೆ ಆ ಬಗ್ಗೆ ದೂರುಕೊಡಿ ಪರಿಶೀಲಿಸುತ್ತೇವೆ ಎಂಬ ಹೊಣೆಗೇಡಿತನದ ಉತ್ತರ ನೀಡುತ್ತಾರೆ. ಜಿಲ್ಲಾ ಕೇಂದ್ರದಲ್ಲಿ ಕುಳಿತು ಮಜಾ ಉಡಾಯಿಸುವ ಅಧಿಕಾರಿ, ಜನಪ್ರತಿನಿಧಿ ಇದುವರೆಗೂ ಎಷ್ಟು ತಾಲೂಕುಗಳಿಗೆ, ಎಷ್ಟು ಪಂಚಾಯ್ತಿಗಳಿಗೆ ಮತ್ತು ಹಳ್ಳಿಗಳಿಗೆ ಭೇಟಿ ನೀಡಿ ಪರಿಶೀಲಿಸಿದ್ದಾರೆ ? ತಪ್ಪಿತಸ್ಥರ ವಿರುದ್ಧ ಏನು ಕ್ರಮವಾಗಿದೆಯೆಂಬ ಬಗ್ಗೆ ಉತ್ತರವಿಲ್ಲ. ಗ್ರಾಮಪಂಚಾಯಿತಿಗಳಿಗೆ ಸುವರ್ಣ ಗ್ರಾಮ ಯೋಜನೆ ಸೇರಿದಂತೆ ಇನ್ನಿತರ ಅಭಿವೃದ್ದಿ ಯೋಜನೆಗಳು ಜಾರಿಯಲ್ಲಿವೆ. ಇಲ್ಲಿ ಒಂದೇ ಕೆಲಸಕ್ಕೆ ಹಲವು ಯೋಜನೆಗಳನ್ನು ಸೇರಿಸಿ ಹಾಡುಹಗಲೇ ಜನಸಾಮಾನ್ಯರ ಹಣ ದೋಚಲಾಗುತ್ತಿದೆ. ಅರಣ್ಯ ಇಲಾಖೆ, ತೋಟಗಾರಿಕೆ ಇಲಾಖೆ, ಕಾವೇರಿ ನೀರಾವರಿ ನಿಗಮ, ಜಲಾನಯನ ಹೀಗೆ ಇತರೆ ಇಲಾಖೆಗಳಲ್ಲಿ ಅನುಷ್ಠಾನಗೊಳ್ಳುವ ಉದ್ಯೋಗ ಖಾತ್ರಿ ಯೋಜನೆ ಲೆಕ್ಕಕ್ಕೆ ಸಿಗುವುದೇ ಇಲ್ಲ.ಇದೆಲ್ಲದರ ನಡುವೆ ರಾಮ-ಕೃಷ್ಣ ನ ಲೆಕ್ಕ ದಂತೆ ಆಗುವ-ಆಗದ ಕೆಲಸಗಳಿಗೆ ಎಂಬಿ ಬರೆಯುವ ಜಿ.ಪಂ. ಇಂಜಿನಿಯರುಗಳು ಕೋಟಿಗೆ ತೂಗುತ್ತಿದ್ದಾರೆ ಇಂತಿಷ್ಟು ಎಂದು %ಕೊಟ್ಟರೆ ಮುಗಿಯಿತು. ಅಸಲಿಗೆ ಸದರಿ ಯೋಜನೆ ನಮ್ಮ ಜಿಲ್ಲೆಗೆ ಅಗತ್ಯವೇ ಇರಲಿಲ್ಲ. ಆದರೂ ಬಂದ ಯೋಜನೆಯನ್ನಾದರೂ ಸರಿಯಾದ ರೀತಿಯಲ್ಲಿ ಜಾರಿಗೆ ತರಲು ಭ್ರಷ್ಠಾಚಾರದಿಂದ ಮುಕ್ತವಾಗಿ ನಿರ್ವಹಿಸಲು ಅಧಿಕಾರಿಗಳಿಗೇನು ದಾಡಿ ಬಂದಿದೆ?

Tuesday, November 10, 2009

ಶಂಕರ್ ನಾಗ್ ನೆನಪಿಗೊಂದು ವೆಬ್ ಸೈಟು!

ಶಂಕರ್ ನಾಗ್ ಒಬ್ಬ ವ್ಯಕ್ತಿಯಾಗಿ, ಶಕ್ತಿಯಾಗಿ ನಾಡಿನ ಜನಮನದಲ್ಲಿ ಅಜರಾಮರ. ಯಾವುದೇ ಸ್ಟಾರ್ ಗಿರಿಯ ಹಂಬಲವಿಲ್ಲದೇ ತನ್ನದೇ ಆದ ಆಲೋಚನೆಗಳಿಗೆ ರೂಪು ಕೊಡುತ್ತಾ, ಹೊಸ ಚಿಂತನೆಗಳನ್ನು ಹರವಿಕೊಳ್ಳುತ್ತಾ ಸಾರಸ್ವತ ಲೋಕದಲ್ಲಿ ಹೊಸ ಅಲೆಯನ್ನು ಸೃಷ್ಟಿಸಿದ ಧೀಮಂತ. ನಾಟಕದ ಹುಚ್ಚು ಹತ್ತಿಸಿಕೊಂಡು ಇದ್ದ ಬ್ಯಾಂಕ್ ಆಫ್ ಇಂಡಿಯಾದ ನೌಕರಿಗೆ ತಿಲಾಂಜಲಿ ಇಟ್ಟು ಕನಸುಗಳನ್ನು ಕಟ್ಟಿದ, ಕನಸನ್ನು ನಿಜ ಮಾಡಿದ, ತಾನೂ ಬೆಳೆದ, ತನ್ನೊಂದಿಗೆ ಹಲವರನ್ನು ಬೆಳೆಸಿದ, ವ್ಯವಸ್ಥೆಯಲ್ಲಿ ಒಂದು ಹೊಸ ಸಂಚಲನವನ್ನು ಹುಟ್ಟುಹಾಕಿದ ಸಾಹಸಿ ಆತ! ಬದುಕಿದ್ದು 3ದಶಕಗಳಾದರೂ ಸಾಧಿಸಿದ್ದು ಮತ್ತು ನಮ್ಮೊಂದಿಗೆ ಬಿಟ್ಟು ಹೋಗಿದ್ದು ಎಂದೆಂದಿಗೂ ಮರೆಯಲಾಗದ ಕನಸುಗಳ ಸಾಕಾರವನ್ನು ಹೊಸ ಸಂಚಲನದ ಸೃಷ್ಟಿಯನ್ನು. ಶಂಕರ್ ಗೆ ಅಂತ ಒಂದು ಅಭಿಮಾನಿ ಸಂಘವಿರಲಿಲ್ಲ ಆದರೆ ಆತ ತನ್ನ ನಾಟಕಗಳ ಮೂಲಕ ಜಗತ್ತಿನ ಹಲವು ದೇಶಗಳನ್ನು ಸುತ್ತಿದ್ದ. ದೇಶಿ ಪರಂಪರೆಯನ್ನು ವಿದೇಶದಲ್ಲೂ ಪಸರಿಸಿದ್ದ, ಒಂದೇ ಒಂದು ಟೆಲಿ ಸೀರಿಯಲ್ ಸ್ವಾಮಿ ಅಂಡ್ ಹಿಸ್ ಪ್ರೆಂಡ್ಸ್ ಆತನಿಗೆ ಜಾಗತಿಕ ಖ್ಯಾತಿಯನ್ನು ತಂದು ಕೊಟ್ಟಿತು. ದೇಶದಲ್ಲಿಯೇ ಮೊದಲನೆಯದು ಎನ್ನುವಂತಹ ಕಂಟ್ರಿಕ್ಲಬ್ ನಿರ್ಮಿಸಿದ ಶಂಕರ್ ಒಂದೊಳ್ಳೆಯ ಪತ್ರಿಕೆಯನ್ನು, ನಮ್ಮದೇ ಆದ ಕನ್ನಡದ ಛಾನಲ್ ಅನ್ನು, ಬಡವರಿಗೆ ಕಡಿಮೆ ಬೆಲೆಯ ಮನೆಯನ್ನು, ನಂದಿ ಬೆಟ್ಟಕ್ಕೆ ರೋಪ್ ವೇ ಯನ್ನು, ಮೆಟ್ರೋ ರೈಲು ಯೋಜನೆಗೆ ಹೀಗೆ ಬಿಡುವಿಲ್ಲದ ಕನಸುಗಳನ್ನು ಕಟ್ಟಿಕೊಂಡಿದ್ದ . ಆದರೆ ಸಾಧಿಸುವುದು ಇನ್ನು ಇದೆಯೆನ್ನುವಾಗಲೇ ವಿಧಿ ಅವರನ್ನು ಸೆಳೆದು ಕೊಂಡು ಬಿಟ್ಟಿತು. ಇಂತಹ ಶಂಕರ್ ನಾಗ್ ನೆನಪಿಗಾಗಿ ಅವರ ಜನ್ಮ ದಿನವಾದ ನವೆಂಬರ್ 9ರಂದು ಹಿರಿಯ ಪತ್ರಕರ್ತ ರಾದ ಎಂ ಕೆ ಭಾಸ್ಕರ ರಾವ್ "ಶಂಕರ್ ನಾಗ್" ವೆಬ್ ಸೈಟನ್ನು ಸೃಜಿಸಿದ್ದಾರೆ. ನವೆಂಬರ್ 9ರಂದು ಅದು ಚಾಲನೆಗೊಂಡಿದೆ. ಖ್ಯಾತ ನಾಟಕಕಾರ ಗಿರಿಶ್ ಕಾರ್ನಾಡ್ ಅದನ್ನು ಉದ್ಘಾಟಿಸಿದ್ದಾರೆ. ಅಲ್ಲಿ ಶಂಕರ್ ನೆನಪಿನ ಅಪರೂಪದ ವಿವರಣೆಯಿದೆ, ಚಿತ್ರ ಸಂಪುಟವಿದೆ, ಕೆಲವು ಆಯ್ದ ಚಿತ್ರಗಳ ಲಿಂಕ್ ನೀಡಲಾಗಿದೆ. ನೀವೂ ಒಮ್ಮೆ ಭೇಟಿ ನೀಡಿ. ವಿಳಾಸ ಹೀಗಿದೆ. ಶಂಕರ್ ನಾಗ್ . ಇನ್. ಹಾಗೆ ಮತ್ತೊಂದು ವಿಚಾರ ಪ್ರಸಿದ್ದ ಅಂತರ್ ಜಾಲ ತಾಣ ಫೇಸ್ ಬುಕ್ ನಲ್ಲೂ ಶಂಕರ್ ನಾಗ್ ಫ್ಯಾನ್ ಕ್ಲಬ್ ಇದೆ, ಅಲ್ಲಿ ವಿಶೇಷವಾಗಿ ಶಂಕರ್ ಬಗ್ಗೆ ಚರ್ಚೆ ಸಂವಾದ ಇರುತ್ತೆ ಅಲ್ಲಿಗೂ ಹೋಗಿ ಬನ್ನಿ.

Sunday, November 1, 2009

ಅನ್ನದ ಭಾಷೆ ಎಂದರೇನು? ಕನ್ನಡ ಎಲ್ಲಿದೆ ಗೊತ್ತಾ???

ವರಕವಿ ದ.ರಾ. ಬೇಂದ್ರೆ ಮೈಸೂರಿನ ಮಹಾರಾಜ ಕಾಲೇಜಿಗೆ ಭೇಟಿ ನೀಡಿದ ಸಂಧರ್ಭದಲ್ಲಿ ಕುವೆಂಪು ರವರೊಂದಿಗೆ ತೆಗೆಸಿದ ಫೋಟೋ
ಅನ್ನದ ಭಾಷೆ ಎಂದರೇನು? ಕನ್ನಡ ಎಲ್ಲಿದೆ? ಇಂತಹದ್ದೊಂದು ಪ್ರಶ್ನೆ ಕೇಳಿಕೊಳ್ಳುವ ದುರ್ಗತಿ ಸ್ವಾಭಿಮಾನಿ ಕನ್ನಡಿಗರದ್ದು ಅದು ದೌರ್ಭಾಗ್ಯದ ಸಂಗತಿಯೂ ಹೌದು. ಹಾಗಾದರೆ ಸ್ವಾಭಿಮಾನಿ ಗಳಲ್ಲದ ಕನ್ನಡಿಗರು ಯಾರು? ಇಂತಹ ವಿಭಿನ್ನ ಮನೋಭಾವದ ಗುಂಪು ಯಾಕೆ ಸೃಷ್ಟಿಯಾಗಿದೆ? ಇದರ ಪರಿಣಾಮಗಳೇನು? ನವೆಂಬರ್ ತಿಂಗಳಲ್ಲಿ ಮಾತ್ರ ಕನ್ನಡ ಪ್ರೀತಿ ಯಾಕೆ ಜಾಗೃತವಾಗಬೇಕು? ಕನ್ನಡದ ಹೆಸರಿನಲ್ಲಿ ಇವತ್ತು ಏನೆಲ್ಲ ಆಗುತ್ತಿದೆ? ಯಾರ್ಯಾರು ಯಾವ ಯಾವ ರೀತಿಯ ಲಾಭ ಲೆಕ್ಕಾಚಾರಗಳನ್ನು ಕನ್ನಡ ಭಾಷೆಯನ್ನು ಮುಂದಿಟ್ಟುಕೊಂಡು ಮಾಡುತ್ತಿದ್ದಾರೆ? ಸರ್ಕಾರಗಳು ಏನು ಮಾಡುತ್ತಿವೆ? ಈ ನಡುವೆ ನಮ್ಮ ಕನ್ನಡಿಗರ ಮನಸ್ಥಿತಿ ಹೇಗಿದೆ? ನಮ್ಮ ಕನ್ನಡ ಸಂಸ್ಕೃತಿಗೆ ಯಾವ ರೀತಿಯ ಧಕ್ಕೆಯಾಗಿದೆ? ನಮ್ಮ ಕನ್ನಡವನ್ನು ಯಾಗಿಗೆಲ್ಲ ಅಡ ಇಡಲಾಗಿದೆ? ಮುಂದಿನ ದಿನಗಳಲ್ಲಿ ಇದರ ಪರಿಣಾಮಗಳೇನು? ಎಂಬೆಲ್ಲಾ ಪ್ರಶ್ನೆಗಳು ಬೇತಾಳನಂತೆ ನಮ್ಮನಾವರಿಸಿವೆ. ಆದರೆ ಇವೆಲ್ಲಾ ಪ್ರಶ್ನೆಗೆ ಉತ್ತರ ಹುಡುಕಾಡುವವರು ಮಾತ್ರ ಅದೇ ಸ್ವಾಭಿಮಾನಿ ಕನ್ನಡಿಗರು! ಕನ್ನಡ ಭಾಷೆಗೆ, ಕನ್ನಡ ಸಂಸ್ಕೃತಿಗೆ , ಕನ್ನಡ ಜನರ ಹಿತಾಸಕ್ತಿಗೆ ನಮ್ಮ ನೆಲದಲ್ಲೆ ನಾವೇ ಹೋರಾಟ ಮಾಡಬೇಕಾದ ಅನಿವಾರ್ಯ ಪರಿಸ್ಥಿತಿ ಎದುರಾಗಿದೆ. ಒನ್ಸ್ ಎಗೈನ್ ಇಂತಹದ್ದೊಂದು ಪರಿಸ್ಥಿತಿಗೆ ಕಾರಣ ವಾಗಿರುವುದು ಮತ್ತದೇ ಜಾಗತೀಕರಣ!!
ಅದು ಹೇಗೆ? ಎಂಬ ಪ್ರಶ್ನೆಗೆ ಉತ್ತರ ಕಂಡು ಕೊಳ್ಳುವ ಮೊದಲು ನಮ್ಮ ಅನ್ನದ ಭಾಷೆ ಕಸ್ತೂರಿ ಕನ್ನಡದ ಬಗೆಗೆ ಒಂದಿಷ್ಟು ಅರಿಯೋಣ.ಕನ್ನಡ ಭಾಷೆ ಭಾರತದ ದ್ರಾವಿಡ ಭಾಷೆಗಳಲ್ಲಿ ಪ್ರಮುಖವಾದ ಭಾಷೆ, ಸುಮಾರು 40ಮಿಲಿಯನ್ ಜನ ಕನ್ನಡ ಮಾತನಾಡುತ್ತಾರೆ, ಜಾಗತಿಕ ಮಟ್ಟದಲ್ಲಿ ಅತ್ಯಂತ ಹೆಚ್ಚು ಬಳಸಲ್ಪಡುವ ಭಾಷೆಯಾಗಿ ಕನ್ನಡಕ್ಕೆ 27ನೇ ಸ್ಥಾನವಿದೆ. ಕನ್ನಡ ತನ್ನ ಒಡಲಲ್ಲಿ ತುಳು, ಕೊಡವ, ಬ್ಯಾರಿ ಮತ್ತು ಕೊಂಕಣಿ ಭಾಷೆಗಳಿಗೆ ಮಾತೃ ಸ್ಥಾನದಲ್ಲಿದೆ. 1600ವರ್ಷಗಳಷ್ಟು ಹಳೆಯದಾದ ಇತಿಹಾಸ ಹೊಂದಿರುವ ಕನ್ನಡ ಬಾಷೆಯ ಬರವಣಿಗೆ ಪ್ರಾಕಾರ ಆರಂಭವಾಗಿದ್ದು 5ಮತ್ತು 6ನೇ ಶತಮಾನದಲ್ಲಿ. ಕನ್ನಡದ ಪ್ರಥಮ ಶಾಸನ ಹಲ್ಮಿಡಿ ಶಾಸನ ಸಿಕ್ಕ ಮೇಲೆ ಸುಮಾರು 30000ಸಾವಿರಕ್ಕೂ ಹೆಚ್ಚು ಕನ್ನಡದ ಶಾಸನಗಳು ಸಿಕ್ಕಿದ್ದು ಕನ್ನಡದ ಅಸ್ತಿತ್ವ ಎಷ್ಟು ಹಳೆಯದು ಎಂಬುದನ್ನು ಸಾರಿ ಸಾರಿ ಹೇಳುತ್ತವೆ. ಕನ್ನಡ ಸಾಹಿತ್ಯಕ್ಕೆ ಹೆಚ್ಚಿನ ಪ್ರೋತ್ಸಾಹ ದೊರಕಿದ್ದು 9ಮತ್ತು 10ನೇ ಶತಮಾನದಲ್ಲಿದ್ದ ರಾಷ್ಟ್ರಕೂಟರ ಆಡಳಿತದಲ್ಲಿ. ಕನ್ನಡದಲ್ಲಿ ಬಂದಷ್ಟು ಸಾಹಿತ್ಯ ಪ್ರಾಕಾರಗಳು ಜಗತ್ತಿನ ಯಾವ ಭಾಷೆಯಲ್ಲೂ ಬಂದಿರಲಾರದು. ಕನ್ನಡದಲ್ಲಿ ದ್ವಿಪದಿಗಳು, ತ್ರಿಪದಿಗಳು,ವಚನ ಸಾಹಿತ್ಯ, ರಗಳೆ, ವ್ಯಾಕರಣ, ಜೈನಸಾಹಿತ್ಯ,ಭಕ್ತಿ ಸಾಹಿತ್ಯ, ದಾಸ ಸಾಹಿತ್ಯ, 15ನೇ ಶತಮಾನ ದಲ್ಲಿ ಬಂದ ಕರ್ನಾಟಕ ಸಂಗೀತ ಪರಂಪರೆ ಹೊಸ ಮೈಲುಗಲ್ಲನ್ನೇ ಸೃಷ್ಟಿಸಿದೆ. 20ನೇ ಶತಮಾನದ ಆಧುನಿಕ ಕನ್ನಡ ಪರಂಪರೆಯಲ್ಲಿ ನವೋದಯ ಸಾಹಿತ್ಯ,ನವ್ಯೋತ್ತರ ಸಾಹಿತ್ಯ, ದಲಿತ ಬಂಡಾಯ ಸಾಹಿತ್ಯ ಕರ್ನಾಟಕದ ಸಾಂಸ್ಕೃತಿಕ ಪರಂಪರೆ ಮತ್ತು ಸಾಮಾಜಿಕ ಪರಂಪರೆಯನ್ನು ಶ್ರೀಮಂತ ಗೊಳಿಸಿರುವುದಷ್ಟೇ ಅಲ್ಲ ಸೂಕ್ಷ್ಮ ಸಂವೇದನೆಯ ಮೂಲಕ ಜಾಗತಿಕ ಭೂಪಟದಲ್ಲಿ "ಕನ್ನಡ" ಹೊಸ ಸಂಚಲನವನ್ನೇ ಉಂಟುಮಾಡಿದೆ. ಕನ್ನಡದ ಸಾಹಿತಿಗಳಿಗೆ ಇತರೆಲ್ಲ ಭಾಷೆಯ ಸಾಹಿತಿಗಳಿಗಿಂತ ಅತೀ ಹೆಚ್ಚಿನ ಜ್ಞಾನಪೀಠಿಗಳನ್ನು ಪಡೆದಿದೆ. 47ಕ್ಕೂ ಹೆಚ್ಚು ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕಾರಗಳನ್ನ ಪಡೆದಿದೆ. ಕರ್ನಾಟಕ ರಾಜ್ಯದಲ್ಲಿಯೇ ಕನ್ನಡ ಭಾಷೆಯನ್ನು ೨೦ ಶೈಲಿಗಳಲ್ಲಿ ಮಾತನಾಡುವುದನ್ನು ಕಾಣಬಹುದು. ಅವುಗಳಲ್ಲಿ ವಿಶಿಷ್ಠವಾದುದು ಕುಂದಾಪುರದ ಕುಂದಕನ್ನಡ, ನಾಡವ ಕನ್ನಡ, ಹವ್ಯಕರ ಹವಿಗನ್ನಡ, ಅರೆಭಾಷೆ, ಸೋಲಿಗ ಭಾಷೆ, ಬಡಗ, ಗುಲ್ಬರ್ಗ ಕನ್ನಡ, ದಾರವಾಡ ಕನ್ನಡ, ರಾಯಚೂರು ಕನ್ನಡ, ಮೈಸೂರು ಕನ್ನಡ, ಮಂಡ್ಯ ಕನ್ನಡ, ಮಂಗಳೂರು ಕನ್ನಡ, ಚಿತ್ರದುರ್ಗ ಕನ್ನಡ, ಕೊಳ್ಳೆಗಾಲದ ಭಾಷೆ ಹೀಗೆ ವೈವಿಧ್ಯವಿದೆ. ಯಕ್ಷಗಾನ, ಭರತನಾಟ್ಯ, ಕರ್ನಾಟಕ ಸಂಗೀತ ಜಗತ್ತಿಗೆ ಕರ್ನಾಟಕದ ಹೆಮ್ಮೆಯ ಕೊಡುಗೆ. ಬೇಲೂರು-ಹಳೆಬೀಡು,ಹಂಪೆ, ಶ್ರವಣಬೆಳಗೊಳ,ಪಟ್ಟದಕಲ್ಲು-ಐಹೊಳೆ,ಗೋಲಗುಮ್ಮಟ ದಂತಹ ಅಂತರ ರಾಷ್ಟ್ರೀಯ ಸ್ಮಾರಕಗಳು, ಶ್ರೇಷ್ಠ ಕವಿಗಳು,ಅರಸ ಪರಂಪರೆ, ಮುತ್ಸದ್ದಿ ರಾಜಕಾರಣಿಗಳು, ಕ್ರೀಡಾಪಟುಗಳು, ನಟರು,ನಿರ್ದೇಶಕರು, ಕಲಾವಿದರು ನಮ್ಮಲ್ಲಿದ್ದಾರೆ.
ಇಂತಹದ್ದೊಂದು ಶ್ರೀಮಂತ ಪರಂಪರೆ ಇದ್ದಾಗ್ಯೂ ನಮಗೇಕೇ ಇಂತಹ ದುರ್ಗತಿ? ಕರ್ನಾಟಕ ರಾಜ್ಯ ಪ್ರಾಕೃತಿದತ್ತವಾಗಿ ಸಾಂಸ್ಕೃತಿಕವಾಗಿ ಸಂಪದ್ಭರಿತವಾಗಿದೆ ಹಾಗಾಗಿ ಬಹಳ ಹಿಂದಿನಿಂದಲೂ ಅಕ್ಕಪಕ್ಕದ ರಾಜ್ಯದವರು ಉತ್ತರ ಭಾರತದ ಮಂದಿ ಅಂದರೆ ಆಂಧ್ರ ವಾಳ್ಳುಗಳು,ತಮಿಳು ಕೊಂಗರು,ರಾಜಾಸ್ಥಾನದ ಸೇಟುಗಳು, ಮರಾಠಿಗಳು, ಬಿಹಾರಿಗಳು, ಬಂಗಾಲಿಗಳು, ಮಲೆಯಾಳಿಗಳು, ಉತ್ತರಪ್ರದೇಶದವರು ಹೀಗೆ ಸಮಸ್ತರು ಇಲ್ಲಿ ಬಂದು ನೆಲೆಗೊಂಡರು. ಈ ನಡುವೆ ಜಾಗತೀಕರಣದ ಭೂತದಿಂದಾಗಿ ರಾಜ್ಯದಲ್ಲಿ ಹಲವು ಉದ್ದಿಮೆಗಳು ಸ್ಥಾಪಿಸಲ್ಪಟ್ಟವು. ಬೆನ್ನಲ್ಲೇ ದೇಶ ವಿದೇಶಿಗರ ವಲಸೆಯು ಹೆಚ್ಚಿತು ಪರಿಣಾಮ ನಮ್ಮ ಆಲೋಚನೆಗಳು ಬದುಕಿನ ರೀತಿ ರಿವಾಜುಗಳು ಬದಲಾದವು. ನಮ್ಮ ಸಂಸ್ಕೃತಿಯಲ್ಲಿ ಬದಲಾವಣೆ ಆಯಿತು, ಬಾಷೆಯಿಂದ ವಿಮುಖತೆ ಆಯಿತು ಇದು ಎಷ್ಟರ ಮಟ್ಟಿಗೆ ಇತ್ತೆಂದರೆ ಮಗು ಹುಟ್ಟುತ್ತಲೇ ಅದು ಕನ್ನಡ ಕಲಿತರೆ ತಮಗೆ ಅಪಮಾನ ಎಂದು ತಂದೆತಾಯಿಯರು ಭಾವಿಸುವಂತಾಯಿತು. ಕನ್ನಡೇತರರ ಬಗೆಗಿನ ಅಭಿಮಾನ ಜಾಸ್ತಿಯಾಯಿತು, ಕನ್ನಡ ಶಾಲೆಗಳಿಗಿಂತ ಆಂಗ್ಲಭಾಷೆ ಮಾಧ್ಯಮ ಶಾಲೆಗಳಿಗೆ ಆದ್ಯತೆ ಹೆಚ್ಚಿತು. ರಾಜಕಾರಣಿಗಳು ಮತಬ್ಯಾಂಕಿಗೆ ಇತರೆ ಭಾಷಿಕರನ್ನು ಓಲೈಸಲು ನಿಂತರು. ನಮ್ಮ ನೆಲೆಯಲ್ಲಿ ನಾವೇ ಕನ್ನಡಕ್ಕೆ ಹೋರಾಡುವ ಪರಿಸ್ಥಿತಿಗೆ ಇದೇ ವೇದಿಕೆಯಾಯಿತು. ಕನ್ನಡ ಚಳುವಳಿಯನ್ನು ಇತ್ತೀಚಿನ ದಿನಗಳಲ್ಲಿ ಯಶಸ್ವಿಯಾಗಿ ಪ್ರವರ್ದಮಾನಕ್ಕೆ ತಂದ ನಾರಾಯಣಗೌಡರು ಕನ್ನಡದ ರಕ್ಷಣೆಗೆ ರಕ್ಷಣಾ ವೇದಿಕೆ ಹುಟ್ಟುಹಾಕಿದರೆ, ಇತರರನೇಕರು ಹೊಟ್ಟೆ ಪಾಡಿಗೆ ಅದೇ ಮಾದರಿಯ ಸಂಘಟನೆಗಳನ್ನು ಹುಟ್ಟುಹಾಕಿದರು. ಕನ್ನಡ ರಕ್ಷಣೆಗೆ ಬದಲಾಗಿ ಸುಲಿಗೆಗೆ ನಿಂತು ಆ ಮೂಲಕ ಕನ್ನಡ ಚಳುವಳಿಯನ್ನು ದಿಕ್ಕು ತಪ್ಪಿಸುವ ಕೆಲಸವನ್ನು ಯಶಸ್ವಿಯಾಗಿ ಮಾಡಲಾಗುತ್ತಿದೆ. ರಾಷ್ಟ್ರದಲ್ಲಿ ಶಾಸ್ತ್ರೀಯ ಭಾಷೆಯ ಸ್ತಾನಮಾನವನ್ನು ೩ ಭಾಷೆಗಳಿಗೆ ಮಾತ್ರ ನೀಡಲಾಗಿದೆ. ಈಗ ತಮಿಳುಭಾಷೆಗೆ ಮಾತ್ರ ಶಾಸ್ತ್ರೀಯ ಸ್ಥಾನಮಾನ ಸಿಗುತ್ತಿದೆ. ಕನ್ನಡಕ್ಕೆ 2ವರ್ಷಗಳ ಹಿಂದೆಯೇ ಶಾಸ್ತ್ರೀಯ ಸ್ಥಾನಮಾನವಿದ್ದರೂ ತಮಿಳುನಾಡಿನ ಕೊಂಗರ ಕುಚೇಷ್ಟೇಯಿಂದ ಅದು ನಮಗಿನ್ನು ಬಿಸಿಲ್ಗುದುರೆಯಾಗಿದೆ. ತಿರುವಳ್ಳುವರ್ ಪ್ರತಿಮೆ ಸ್ಥಾಪನೆಯಾದಾಕ್ಷಣ ಎಲ್ಲವೂ ಸರಿಯಾಗುತ್ತದೆ ಎನ್ನುವ ಸರ್ಕಾರಗಳು ರಾಜಕಾರಣಿಗಳು, ಮತ್ತು ಕೆಲವು ಸಾಹಿತ್ಯ ವಲಯದ ಅತಿಬುದ್ದಿವಂತರು ಈಗ ಏನೆನ್ನುತ್ತಾರೆ ಗೊತ್ತಿಲ್ಲ. ಕನ್ನಡ ನಮ್ಮ ಭಾವಸ್ಪೂರ್ತಿಯಾಗಿ, ನಮ್ಮ ಒಡಲಾಳದ ಧ್ವನಿಯಾಗಿ ನಮ್ಮ ನಿತ್ಯದ ಉಸಿರಾಗಿರುವಾಗ ಕನ್ನಡದ ಬಗ್ಗೆ ತಾತ್ಸಾರ ಅಸಡ್ಡೆ ಏಕೆ?

ಮಾಧ್ಯಮದ ಅಂಗಡಿಗಳು ಮತ್ತು ಪತ್ರಕರ್ತರು!

ಕಾಸ್ಟ್ ಕಟಿಂಗ್ ಮತ್ತು ನಿಶ್ಚಿತ ಆದಾಯದ ಕೊರತೆಯಿಂದ ಮಾಧ್ಯಮ ಸಂಸ್ಥೆಗಳು ಪತ್ರಕರ್ತರನ್ನು ಪರ್ಫಾರ್ಮೆನ್ಸ್ ವೀಕ್ ಎಂಬ ಕಾರಣ ನೀಡಿ ತೆಗೆಯುವ ಪ್ರಕ್ರಿಯೆ ಈಗ ನಡೆಯುತ್ತ...