Thursday, September 30, 2010

ಅಯೋಧ್ಯಾ ವಿವಾದ: ಮುಗಿಯದ ಕಗ್ಗಂಟು....!



ಅಯೋಧ್ಯಾ ಪ್ರಕರಣ ಕುರಿತು ಅಲಹಾಬಾದ್ ಮಹತ್ವದ ತೀರ್ಪನ್ನು ತನ್ನ ಪರಿಧಿಯಲ್ಲಿ ಪ್ರಕಟಿಸಿದೆ, ಆದರೆ ಸದರಿ ತೀರ್ಪಿನಿಂದ ಸಮಸ್ಯೆ ಇನ್ನೂ ಜಟಿಲವಾಗುವ ಅಪಾಯ ಎದುರಾಗಿದೆ. ಸದರಿ ವಿವಾದಿತ ಜಾಗವನ್ನು ರಾಮನ ದೇಗುಲಕ್ಕೆ, ನಿರ್ಮೋಹಿ ಅಖಾಡಕ್ಕೆ ಹಾಗೂ ಬಾಬರಿ ಮಸೀದಿ ಕ್ರಿಯಾ ಸಮಿತಿಗೆ ಹಂಚಿ ಸಾಮಾಜಿಕ ನ್ಯಾಯ ದೊರಕಿಸಲಾಗಿದೆ ಎಂದು ಹೇಳಲಾಗುತ್ತಿದೆಯಾದರೂ ಆ ಮೂಲಕ ಸರಳವಾಗಿದ್ದ ಸಮಸ್ಯೆಯನ್ನು ಮತ್ತಷ್ಟು ಕಗ್ಗಂಟಾಗಿಸಿದೆ. ಬಹುಶ: ವಾದಿ-ಪ್ರತಿವಾದಿಗಳ ವಾದ, ಸಾಕ್ಷ್ಯಗಳನ್ನು ಮಾತ್ರವೇ ಪರಿಗಣಿಸಿ ತನ್ನ ಚೌಕಟ್ಟಿನೊಳಗೆ ಲಖನೌ ಪೀಠ ತೀರ್ಪು ನೀಡಿದಂತಾಗಿದೆ. ಇಲ್ಲಿ ವಿವಾದಿತ ಸ್ಥಳ ಯಾರಿಗೆ ಸೇರಬೇಕು ಎನ್ನುವುದಕ್ಕಿಂತ ವಾಸ್ತವ ನೆಲೆಗಟ್ಟಿನಲ್ಲಿ ಪ್ರಸಕ್ತ ಸಂಧರ್ಭಕ್ಕೆ ಪೂರಕವಾಗಿ ದೇಶದ ಸಾಂಸ್ಕೃತಿಕ ಒಗ್ಗಟ್ಟನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಹಾಕುವ ಪ್ರಯತ್ನ ಬಹು ಮುಖ್ಯವಾದುದು ಎಂದು ಅನಿಸುತ್ತದೆ.
ನಮ್ಮ ದೇಶ ಸಾವಿರಾರು ವರ್ಷಗಳ ಕಾಲ ಪರಕೀಯರ ಆಳ್ವಿಕೆಗೆ ದೌರ್ಜನ್ಯಕ್ಕೆ ಸಿಲುಕಿ ನಲುಗಿದೆ. ಆದರೆ ಭರತ ಖಂಡವನ್ನು ಸುಮಾರು 300ವರ್ಷಗಳ ಕಾಲ ಆಳಿದ ಮುಸಲ್ಮಾನರು ಹಿಂದೂಗಳ ಸಾಮಾಜಿಕ ಮತ್ತು ಸಾಂಸ್ಕೃತಿಕ ಬದುಕು ಮತ್ತು ಭಾವನೆಗಳ ಮೇಲೆ ಎಸಗಿದ ಆಕ್ರಮಣ, ದೌರ್ಜನ್ಯ ಎಂದಿಗೂ ಮರೆಯಲಾಗದಂತಹುದು. ಇವತ್ತು ಭರತ ಖಂಡವೇನಾದರೂ ಛಿದ್ರವಾಗಿದೆ ಎಂದರೆ ಅದಕ್ಕೆ ಪ್ರಮುಖ ಕಾರಣ ಇತಿಹಾಸದ ಪುಟಗಳಲ್ಲಿ ಸೇರಿ ಹೋದ ಮುಸಲ್ಮಾನರು!ಹರಿದು ಹಂಚಿ ಹೋದ ರಾಷ್ಟ್ರಗಳಾದ ಭಾಂಗ್ಲಾ, ಪಾಕೀಸ್ತಾನ, ಕಾಬೂಲ್, ಬರ್ಮಾ, ಜಾವಾ, ಸುಮಾತ್ರ, ಕಾಂಬೋಡಿಯಾ ಇತ್ಯಾದಿಗಳಲ್ಲಿ ಇವತ್ತಿಗೂ ಹಿಂದೂಗಳ ಮೇಲೆ ನಿರಂತರವಾದ ಹಲ್ಲೆ ಜಾಗೃತ ಸ್ಥಿತಿಯಲ್ಲಿದೆ,ಧರ್ಮ ಬದಲಿಸುವ ಕ್ರಿಯೆಗೆ ಒಪ್ಪದ ಹಿಂದೂಗಳ ಮಾರಣ ಹೋಮ ನಡೆಯುತ್ತಿದೆ, ಇದಕ್ಕೆ ಸಾಕ್ಷ್ಯಧಾರಗಳು ಸಹಾ ಜಾಗತಿಕ ಮಟ್ಟದಲ್ಲಿ ಲಭ್ಯವಿದೆ . ಹಿಂದೂಗಳ ಭಾವನೆಯ ಸಂಕೇತವಾದ ಸಾಂಸ್ಕೃತಿಕ ಸ್ಮಾರಕಗಳು, ದೇಗುಲಗಳನ್ನು ನಾಶಪಡಿಸುವ ಕ್ರಿಯೆ ಜಾರಿಯಲ್ಲಿದೆ. ಹೀಗಿದ್ದಾಗ್ಯೂ ಭಾರತದಲ್ಲಿ ಮತೀಯವಾದವನ್ನು ತೊಡೆದು ಹಾಕುವ ರೀತಿಯಲ್ಲಿ ಸಾಂಸ್ಕೃತಿಕ-ಸಾಮಾಜಿಕ ಒಗ್ಗಟ್ಟು ಇರುವುದನ್ನು ಕಾಣಬಹುದು. ಭಾವೈಕ್ಯತೆಯ ಮಂದಿರಗಳು, ಗುಮ್ಮಟಗಳು ಧಾರ್ಮಿಕ ಕೇಂದ್ರಗಳನ್ನು ಸಹಜೀವನದ ಬದುಕುಗಳನ್ನು ಭಾರತದಲ್ಲಿ ಮಾತ್ರ ಕಾಣಲು ಸಾಧ್ಯ. ವಿಶಾಲವಾಗಿ ಆಲೋಚಿಸುವವರನ್ನ, ಹೃದಯ ವೈಶಾಲ್ಯವನ್ನ ಹೊಂದಿದ, ಪರಸ್ಪರರ ಭಾವನೆಗಳನ್ನು ಗೌರವಿಸುವ ಜನರಿರುವುದು ಬಾರತದಲ್ಲೇ ಅಂದರೆ ತಪ್ಪಾಗಲಾರದೇನೋ. ಆದರೆ ಪ್ರಸಕ್ತ ಸನ್ನಿವೇಶದಲ್ಲಿ ಆಗುತ್ತಿರುವುದೇನು? ಸದ್ದಿಲ್ಲದೇ ಗರಿಗೆದರುತ್ತಿರುವ ಕೋಮು ಶಕ್ತಿಗಳು ಮತ್ತು ಆ ಮೂಲಕ ರಾಜಕೀಯ ಲಾಭ ಮಾಡಿಕೊಳ್ಳಲು ಹವಣಿಸುವ ರಾಜಕೀಯ ಪಕ್ಷಗಳು ಪ್ರಜಾತಾಂತ್ರಿಕ ವ್ಯವಸ್ಥೆಯನ್ನು ಆತಂಕದಲ್ಲಿ ಸಿಲುಕುವಂತೆ ಮಾಡಿವೆ. ಪರಿಣಾಮ ಚದುರಿಹೋದ ದುಷ್ಟರು ದೇಶದ ಬಾಹ್ಯ ಮತ್ತು ಆಂತರಿಕ ಭದ್ರತೆಗೆ ನಿರಂತರವಾಗಿ ಅಪಾಯವನ್ನು ತಂದೊಡ್ಡಿದ್ದಾರೆ. ಈ ಹಿನ್ನೆಲೆಯಲ್ಲಿ ಅಯೋಧ್ಯಾ ವಿವಾದವನ್ನು ಪರಿಗಣಿಸುವುದಾದರೆ ಕೆಲವು ವಿಚಾರಗಳ ಮಂಥನ ಅಗತ್ಯವಾದೀತೇನೋ. ಹಿಂದೂ ಪರಂಪರೆಯನ್ನು ಸಾರುವ ರಾಮಾಯಣ-ಮಹಾಭಾರತ ಐತಿಹಾಸಿಕವಾದ ಸಂಗತಿ. ಇದರ ವಾಸ್ತವತೆಗೆ ಅಖಂಡ ಭಾರತದ ವಿವಿದೆಡೆ ಇಂದಿಗೂ ಕಂಡು ಬರುವ ಐತಿಹಾಸಿಕ ಕುರುಹುಗಳು ಸಾಕ್ಷಿಯಾಗಿ ನಿಂತಿವೆ. ಅವು ಒಂದು ದೇಶದ ಜನರ ಭಾವನೆಗಳಿಗೆ, ಬದುಕಿಗೆ ಸಂಬಂಧಿಸಿದ ಅತಿ ಮುಖ್ಯ ವಿಚಾರಗಳು ಹೌದು. ಆದರೆ ಅಖಂಡ ಭಾರತದ ಮೇಲೆ ಧಾಳಿ ಮಾಡಿದ ಮತ್ತು ಆಳ್ವಿಕೆ ನಡೆಸಿದ ಘಜನಿ ಮಹಮ್ಮದ್, ಮಹ್ಮದ್ ಘೋರಿ,ಬಾಬರ್, ಅಲೆಕ್ಸಾಂಡರ್, ಔರಂಗಜೇಬ ಮತ್ತು ತೊಘಲಕ್ ಅರಸರು ಗಳು ಶತಮಾನಗಳ ಹಿಂದೆ ನಮ್ಮ ಸಾಂಸ್ಕೃತಿಕ ಐತಿಹ್ಯಗಳ ಮೇಲೆ ನಡೆಸಿದ ಧಾಳಿಯ ಪರಿಣಾಮ ಇವತ್ತಿಗೂ ಹಿಂದೂಗಳು ಚೇತರಿಸಿಕೊಳ್ಳಲಾಗದಂತಹ ಸ್ಥಿತಿಯನ್ನು ನಿರ್ಮಿಸಿದೆ. ಹಿಂದೂಗಳ ಅನೇಕ ಭಾವನಾತ್ಮಕ ಐತಿಹ್ಯಗಳ ಮೇಲೆ ಅಳಿದು ಹೋದ ಮುಸ್ಲಿಂ ಅರಸರು ದಬ್ಬಾಳಿಕೆಯ ಸಂಕೇತವಾಗಿ ಮಸೀದಿ-ದರ್ಗಾ ಮತ್ತಿತರ ಸ್ಮಾರಕಗಳನ್ನು ನಿರ್ಮಿಸಿದ್ದಾರೆ. ಇದು ಅಂದಿನವರ ಪೈಶಾಚಿಕ ಕೃತ್ಯವೇ ಸರಿ, ಆದರೆ ಈಗೇನಾಗಿದೆ ? ಇದು ನಾಗರೀಕ ಜಗತ್ತು, ಮತೀಯವಾದ, ಸಂಘರ್ಷಕ್ಕೆ ಎಡೆಮಾಡುವಂತ ವಿಚಾರಗಳು ಅನಪೇಕ್ಷಿತವಾದವುಗಳಾಗಿವೆ. ಬಾಬರಿ ಮಸೀದಿ ಜಾಗ ಶ್ರೀ ರಾಮನ ಜನ್ಮಭೂಮಿಯೇ ಇದ್ದಿರಬಹುದು ಹಾಗೆಯೇ ಅಲ್ಲಿ ರಾಮದೇಗುಲವನ್ನು ಧ್ವಂಸಗೊಳಿಸಿ ಬಾಬರನು ಮಸೀದಿಯನ್ನು ನಿರ್ಮಿಸಿರಬಹುದು ಈ ಕುರಿತು ವಿಚಾರ ಇತ್ಯರ್ಥ ಕಾಣುವ ಮುಂಚೆಯೇ ಬಿಜೆಪಿ ಮತ್ತು ಸಂಘ ಪರಿವಾರದವರು ಬಾಬರಿ ಮಸೀದಿಯನ್ನು ಧ್ವಂಸಗೊಳಿಸಿದ್ದು ತಪ್ಪು ಆ ಮೂಲಕ ಮಹ್ಮದೀಯ ದೊರೆಗಳಿಗಿಂತ ತಾವೇನೂ ಭಿನ್ನವಲ್ಲ ಎಂದು ತೋರಿದಂತಾಗಿದೆ. ಇಲ್ಲಿ ಮಸೀದಿ ಉರುಳಿಸಿದ್ದು ಹಿಂದೂಗಳಿಗೆ ದೊರೆತ ಜಯವೆಂದೇ ಅವರು ಭಾವಿಸಬಹುದೇನೋ ಆದರೆ ಅದರ ನಂತರದ ಪರಿಣಾಮ ಬಾಂಗ್ಲಾ,ಪಾಕೀಸ್ತಾನ್, ಕಾಬೂಲ್ ಮತ್ತಿತರೆಡೆಗಳಲ್ಲಿರುವ ಹಿಂದೂಗಳ ಮೇಲೆ ತೀವ್ರತರವಾದ ಪರಿಣಾಮವನ್ನೆ ಬೀರಿದೆ ಮತ್ತು ಈಗಲೂ ಬೀರುತ್ತಿದೆ. 1528ರಲ್ಲಿ ನಿರ್ಮಾಣವಾಗಿದೆಯೆನ್ನಲಾದ ಮಸೀದಿಯಲ್ಲಿ 1949ರ ಸುಮಾರಿಗೆ ಪ್ರಾರ್ಥನೆ ನಿಂತಿದೆ, ನಂತರ ಹಿಂದೂಗಳು ಅಲ್ಲಿ ರಾಮನ ವಿಗ್ರಹವನ್ನು ಗರ್ಭಗುಡಿಯಲ್ಲಿ ಪ್ರತಿಷ್ಠಾಪಿಸಿದ್ದಾರೆ ಅಲ್ಲಿಂದ ಶುರುವಾದ ವಿವಾದ ಅಲಹಾಬಾದ್ ಕೋರ್ಟಿನಲ್ಲಿ ತಾರ್ಕಿಕ ಅಂತ್ಯವನ್ನು ಸಾಕ್ಷ್ಯಗಳ ಆಧಾರದಲ್ಲಿ ಕೋರ್ಟಿನ ಇತಿಮಿತಿಯಲ್ಲಿ ಪ್ರಕಟವಾಗಿದೆ. ನಾನು ಈ ಮೊದಲೇ ಹೇಳಿದಂತೆ ಇದು ಸಾಕ್ಷ್ಯ ಮತ್ತು ಆಧಾರಗಳ ಮೇಲೆ ಮಾತ್ರ ತೀರ್ಮಾನಿಸ ಬಹುದಾದ ವಿಚಾರವಲ್ಲ. ಪ್ರಸಕ್ತ ಸಂಧರ್ಭದ ಸ್ಥಿತಿ, ದೇಶದ ಭಾವೈಕ್ಯತೆ ಹಿನ್ನೆಲೆಯಲ್ಲಿ ತೀರ್ಪು ಬಂದಿದ್ದರೆ ಚೆನ್ನಾಗಿರುತ್ತಿತ್ತು. ಈಗ ದೊರೆತ ತೀರ್ಪಿನಿಂದ ಬಾಬರಿ ಕ್ರಿಯಾ ಸಮಿತಿ ಮತ್ತು ವಿಶ್ವ ಹಿಂದೂ ಪರಿಷತ್ ಮತ್ತು ಸಂಘ ಪರಿವಾರಿಗಳಿಗೆ ಅತೃಪ್ತಿ ಉಂಟಾಗಿದೆ. ಹಂಚುವ ಪ್ರಕ್ರಿಯೆ ಮತ್ತುಷ್ಟು ಕಗ್ಗಂಟನ್ನು ಹೆಚ್ಚಿಸಿದೆ , ಸದರಿ ತೀರ್ಪನ್ನು ಸುಪ್ರೀಂ ಕೋರ್ಟಿನಲ್ಲಿ ಪ್ರಶ್ನಿಸುವ ಮಾತನ್ನು ಎರಡೂ ಕಡೆಯವರು ಮಾದ್ಯಮಗಳ ಮುಂದೆ ಹೇಳಿಕೊಂಡಿದ್ದಾರೆ. ವಿವಾದ ಮುಂದುವರೆಯುವ ಬಗ್ಗೆ ಸರ್ವರಲ್ಲೂ ಆತಂಕವನ್ನುಂಟು ಮಾಡಿದೆ. ವಿವಿಧತೆಯಲ್ಲಿ ಏಕತೆಯನ್ನು ಮೆರೆಯುವ ಭಾರತದಂತಹ ದೇಶದಲ್ಲಿ ಇತಿಹಾಸದಲ್ಲಿ ಗತಿಸಿ ಹೋದ ವಿಚಾರಗಳನ್ನು ಕೆದಕುವ ಬದಲಿಗೆ ವಾಸ್ತವ ಜಗತ್ತಿನ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ನಿಲುವುಗಳು ವ್ಯಕ್ತವಾದರೆ ದೇಶದ ಜನ ನೆಮ್ಮದಿಯ ಬದುಕು ಕಾಣಲು ಸಾಧ್ಯವಾಗಬಹುದೇನೋ. ಆದರೆ ಇದು ಸಾಧ್ಯವೇ?

ಮಾಧ್ಯಮದ ಅಂಗಡಿಗಳು ಮತ್ತು ಪತ್ರಕರ್ತರು!

ಕಾಸ್ಟ್ ಕಟಿಂಗ್ ಮತ್ತು ನಿಶ್ಚಿತ ಆದಾಯದ ಕೊರತೆಯಿಂದ ಮಾಧ್ಯಮ ಸಂಸ್ಥೆಗಳು ಪತ್ರಕರ್ತರನ್ನು ಪರ್ಫಾರ್ಮೆನ್ಸ್ ವೀಕ್ ಎಂಬ ಕಾರಣ ನೀಡಿ ತೆಗೆಯುವ ಪ್ರಕ್ರಿಯೆ ಈಗ ನಡೆಯುತ್ತ...