Wednesday, December 26, 2012

ಶಂಕರ್ ನಾಗ್ ಪುತ್ರಿಯ 'ಉದ್ಯಮ' ಕನಸು-ನನಸು


ಸಿನಿಮಾ ತಾರೆಯರ ಮಕ್ಕಳು ಸಿನಿಮಾಗೆ ಬರೋದು ರಾಜಕಾರಣಿಗಳ ಮಕ್ಕಳು ರಾಜಕಾರಣಿಗಳಾಗಲು ಹವಣಿಸೋದು ಮಾಮೂಲು ಸಂಗತಿ. ಅದ್ರೆ ಇಲ್ಲಿ ಕೊಂಚ ಬದಲಾವಣೆುದೆ, ಅದೇನಪ್ಪಾ ಅಂದ್ರೆ ನಿಮಗೆ ಶಂಕ್ರಣ್ಣನ ಮಗಳು ಕಾವ್ಯ ಗೊತ್ತಲ್ವಾ ಅವರು ಈಗ ಉದ್ಯಮಿಯಾಗುತ್ತಿದ್ದಾರೆ. ಇನ್ನಾ ಗೊತ್ತಾಗ್ಲಿಲ್ವಾ.. ಓಕೆ "ಷಯಕ್ಕೆ ಬರ್ತೀನಿ. ಕನ್ನಡ ಚಿತ್ರರಂಗದ ಧ್ರುವತಾರೆ ವರ್ಕಾಲಿಕ್‌ ನಟ ನಿರ್ದೇಶಕ ಆಟೋರಾಜ ಶಂಕರ್‌ ನಾಗ್‌ ತೀರಿಕೊಂಡು 22ವರ್ಷಗಳು ಕಳೆದು ಹೋಗಿದೆ. ಅಂದು ದಾವಣಗೆರೆ ಸಮೀಪದ ಆನಗೋಡು ಬಳಿ ಸಂಭ"ಸಿದ ದುರಂತದಲ್ಲಿ ಕಿಂಚಿತ್ತೂ ಘಾಸಿಯಾಗದೇ ಅಮನೊಂದಿಗೆ ಉಳಿದದ್ದೇ 5ವರ್ಷದ ಪೋರಿ ಕಾವ್ಯ ಶಂಕರ್‌ನಾಗ್‌! ಅದೇ ಪೋರಿ ಈಗ ಅರುಂಧತಿನಾಗ್‌ ರ ನೆರಳಲ್ಲಿ ಬೆಳೆದ 27ರ ಹರೆಯದ ಗೃಹಿಣಿ! 2ವರ್ಷಗಳ ಹಿಂದೆಯಷ್ಟೇ ಇಷ್ಟಪಟ್ಟ ಬಾಲ್ಯದ ಒಡನಾಡಿ ಸಲೀಲ್‌ ಎಂಬುವವರೊಂದಿಗೆ ಹಸೆಮಣೆ ಏರಿ ಸುದ್ದಿಯಾಗಿದ್ದ ಕಾವ್ಯ ಈಗ ಮತ್ತೊಮೆ ಸುದ್ದಿಯಾಗುತ್ತಿರುವುದು ಸೋಪ್‌ ಉದ್ಯಮಕ್ಕೆ ಕಾಲಿಡುತ್ತಿರುವುದರಿಂದ. 
ಕ್ರಿಯೇಟಿವಿಟಿಗೆ ಮತ್ತೊಂದು ಹೆಸರೇ ಶಂಕರ್‌ ನಾಗ್‌, ಸಿನಿಮಾ ಸಾಧ್ಯತೆಗಳನ್ನು ಮೀರಿ ಸಮಾಜ ಮುಖಿಯಾಗಿ ಚಿಂತಿಸುತ್ತಾ ಹತ್ತು ಹಲವು ಚಿಂತನೆಗಳಿಗೆ ರೂಪು ನೀಡಲು ಶ್ರಮಿಸುತ್ತಿದ್ದ ಶಂಕರ್‌ ಅದೇ ಕಾರಣಕ್ಕಾಗಿ ಇಂದಿಗೂ ಕನ್ನಡಿಗರ ಮನದಾಳದಲ್ಲಿ ಹಸಿರಾಗಿದ್ದಾರೆ. ಹೀಗೆ ಶಂಕರ್‌ನಾಗ್‌ ಕಂಡ ಕನಸುಗಳಲ್ಲಿ ಸಾಕಾರಗೊಂಡಿದ್ದು ಬೆಂಗಳೂರು ಮೆಟ್ರೋ ಮತ್ತು ಅದಕ್ಕಿಂತಲೂ ಮುಂಚೆ ತಾನು ಉದ್ಯಮದಲ್ಲಿ ದುಡಿದದ್ದನ್ನೆಲ್ಲ ಖರ್ಚು ಮಾಡಿ, ಸಾಲ ಸೋಲ ಮಾಡಿ ನಿರ್ಮಿಸಿದ್ದು ದೇಸೀ ರೆಸಾರ್ಟ್‌ ನ ಮೊದಲ ಅದ್ಭುತ ಕಲ್ಪನೆ ಕಂಟ್ರಿಕ್ಲಬ್‌! ಅಲ್ಲಿನ ರಂಗಶಂಕರ ಜಾಗತಿಕ ನಾಟಕ ಪ್ರದರ್ಶನಗಳ ತವರಾಗಿ ಪರಿಗಣಿತವಾಗಿದೆ. ವಿವಿಧ ದೇಶಗಳ ವಿವಿಧ ಭಾಷೆಯ ನಾಟಕಗಳು ವರ್ಷದ 360ದಿನವೂ ಅಲ್ಲಿ ಲಭ್ಯ. ಅದು ಲಾಭವೋ ನಷ್ಟವೋ ಶಂಕರನ ಕನನ್ನು ನನಸು ಮಾಡಲು ಪತ್ನಿ ಅರುಂಧತಿ ನಾಗ್‌ ಶ್ರಮಿಸುತ್ತಿರುವ ಪರಿಯಂತೂ ಅಪರಿಮಿತವೇ ಹೌದು. 
ಹೀಗೆ ತಂದೆ-ತಾಯಿ, ದೊಡ್ಡಪ್ಪ-ದೊಡ್ಡಮ ಸಿನಿಮಾ ರಂಗದಲ್ಲಿದ್ದರೂ ಆ ನೆರಳನ್ನು ಅನುಸರಿಸದ ಶಂಕರ್‌ ಪುತ್ರಿ ಕಾವ್ಯ ಶಂಕರ್‌ ನಾಗ್‌ ಭರತ ನಾಟ್ಯ ಪಟುವಾದರೂ ಹೆಚ್ಚು ವಾಲಿಕೊಂಡಿದ್ದು ಶೈಕ್ಷಣಿಕ "ಷಯಕ್ಕೆ, ಬೆಂಗಳೂರಿನ ಜಿಕೆ"ಕೆ ಯಲ್ಲಿ ವೈಲ್ಡ್‌ ಲೈಫ್‌ ಬಯಾಲಜಿ ತೆಗೆದುಕೊಂಡು ಸ್ನಾತಕ ಪದ" ಗಳಿಸಿರುವ ಅವರು ಶಾಲಾ ಗೆಳತಿ ಮಯೂರ ಕಡೂರ್‌ ಜೊತೆ ಸೇರಿಕೊಂಡು ರಸಾಯನಿಕ ರ"ತವಾದ ದೇಸೀ ಸೋಪ್‌ ಅನ್ನು ಉತ್ಪಾದಿಸುವ ಪ್ಯಾಕ್ಟರಿಯನ್ನು ಆರಂಭಿಸಿದ್ದಾರೆ. ಈ ಕುರಿತು ಎರಡು ಅಂತರ್ಜಾಲ ಪುಟವನ್ನು ಸಹಾ ತೆರೆದಿರುವ ಕರತಯಾರಿಕಾ ಸೋಪ್‌ ಗಳನ್ನು ಉತ್ಪಾದಿಸುತ್ತಿದ್ದಾರೆ ಮತ್ತು ಅದನ್ನು ವಿದೇಶಗಳಿಗೂ ಮಾರಾಟ ಮಾಡಲು ಜಾಲವನ್ನು ವಿಸ್ತರಿಸುತ್ತಿದ್ದಾರೆ. ಈ ಕುರಿತು ಆಂಗ್ಲ ದೈನಿಕವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಇದೇ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ. ಅಲ್ಲಿ ತಾವು ದೇಸೀ ಉತ್ಪನ್ನವನ್ನು ತಯಾರಿಸುವ ಉದ್ಯಮಿಯಾಗುತ್ತಿರುವ ಕನಸನ್ನು ಬಿಚ್ಚಿಟ್ಟಿದ್ದಾರೆ. 
ಕಾವ್ಯ ನಾಗ್‌ ಮತ್ತು ಮಯೂರ ಕಡೂರ್‌ ಹಳೆಯ ಗೆಳತಿಯರು, ಸ್ವಂತ ಉದ್ಯಮದ ಕನಸು ಕಂಡ 27ರ ನವ ತರುಣಿಯರು. ಇಬ್ಬರೂ ಒಟ್ಟಿಗೆ ಓದಿದ್ದು ನಗರದ ವ್ಯಾಲೀ ಸ್ಕೂಲ್‌ ನಲ್ಲಿ, ಅವರಿಬ್ಬರೂ ತಮನ್ನು ಮಂಗಗಳು ಎಂದೇ ಪ್ರೀತಿಯಿಂದ ಕರೆದುಕೊಳ್ಳುತ್ತಾರಂತೆ ! ಕಾವ್ಯ ವೈಲ್ಡ್‌ ಲೈಫ್‌ ಬಯಾಲಜಿಯ ಸ್ನಾತಕ ಪಧವೀಧರೆಯಾದರೆ ಮಯೂರ ದಂತ ವೈದ್ಯ ವಿದ್ಯಾರ್ಥಿನಿ. ಕಾವ್ಯ ಹೆಚ್ಚು ಸಮಯ ಕಳೆದದ್ದು ಶಂಕರ್‌ ನಾಗ್‌ ರ 2ಎಕರೆ ವಿಸ್ತೀರ್ಣದಲ್ಲಿರುವ ಮಣಿಪಾಲ್‌ ಕೌಂಟಿಯ ಫಾರ್ಮ ಹೌಸ್‌ ನಲ್ಲಿ. ಶಾಲೆಗೆ ಹೋಗಿ ಬಂದ ನಂತರ ಹೆಚ್ಚಾಗಿ ಅಲ್ಲಿಯೇ ದಿನಗಳನ್ನು ಕಳೆದ ಕಾವ್ಯ ಪ್ರಕೃತಿ ಪ್ರಿಯೆ, ಸುತ್ತಲೂ ಪ್ರಾಣಿಗಳಿರಬೇಕು ಭೂಮಿಯಲ್ಲಿ ಕೆಲಸ ಮಾಡಬೇಕು ಎಂಬುದು ಅವರ ಅನುಭವದ ಮಾತು ಹೌದಂತೆ. ಅವರ ಶಾಲಾವರಣದಲ್ಲಿ ಅತೀ ಹೆಚ್ಚು ಮಂಗಳು ದಾಂಗುಡಿಯಿಡುತ್ತಿದ್ದವಂತೆ, ಅವುಗಳ ಒಡನಾಟ, ತಮಾಷೆ ಸ್ವಭಾವ ಎಲ್ಲ ಇಷ್ಟವಾಗಿ ಇವರು ಆರಂಭಿಸಿರುವ "ಸೋಪ್‌" ಉದ್ಯಮಕ್ಕೂ ಡು ಬಂದರ್‌ ಎಂಬ ಹೆಸರನ್ನಿಟ್ಟಿದ್ದಾರೆ. ಹಿಂದಿ ಭಾಷೆಯಲ್ಲಿ ಬಂದರ್‌ ಎಂದರೆ ಮಂಗ ಎಂಬ ಆರ್ಥ"ದೆ ಹಾಗಾಗಿ ಅದೇ ಹೆಸರನ್ನು ಆಯ್ದುಕೊಂಡಿದ್ದಾರೆ.  ನಾಯಿಗಳು ಮತ್ತು ಗಿನಿಪಿಗ್‌ ಗಳನ್ನು ಸಹಾ ಸಾಕಿಕೊಂಡಿರುವ ಕಾವ್ಯಳಿಗೆ ಅಮ ಅರುಂಧತಿ ನಾಗ್‌ ಎಲ್ಲ ಹಂತಗಳಲ್ಲೂ ಪ್ರೋತ್ಸಾಹ ನೀಡುವುದರ ಜೊತೆಗೆ ವಿಮರ್ಶೆಯನ್ನೂ ಮಾಡುತ್ತಾರಂತೆ. ಶೈಕ್ಷಣಿಕ ಅವಧಿಯಲ್ಲಿ ಅವರು ಕಾಸರಗೋಡಿನ ಪ್ರಯೋಗಾಲಯದಲ್ಲಿ ಕೈಗೊಂಡ ಓಂದು ಸಂಶೋಧನೆಯ ಫಲವೇ ಅವರ ಉದ್ಯಮ ಆರಂಭಕ್ಕೆ ಕಾರಣವಾಗಿದೆ ಎನ್ನುತ್ತಾರೆ. ರಂಗಭೂಮಿ ಮತ್ತು ಚಿತ್ರರಂಗದ ಹಿನ್ನೆಲೆಯಿದ್ದರೂ ಉದ್ಯಮಿಯಾಗಿದ್ದು ಯಾಕೆ ಎಂದು ಪ್ರಶ್ನಿಸಿದರೆ ಅದು ತನ್ನ ಆಯ್ಕೆಯಾಗಿರಲಿಲ್ಲ ನನಗೆ ಇಷ್ಟವಾಗಿದ್ದನ್ನೆ ಮಾಡಿದ್ದೇನೆ ಶಾಲಾ ದಿನಗಳಲ್ಲಿ ನಟಿಸಿದ್ದು ನೃತ್ಯ ಮಾಡಿದ್ದು ಬಿಟ್ಟರೆ ಮತ್ತೇ ಬೇರೆನಿಲ್ಲ, ನನ್ನ ಅಮ ನನಗೆ ಇಂಥದ್ದನ್ನೇ ಮಾಡು ಎಂದೇನೂ ಒತ್ತಡ ಹೇರಿಲ್ಲ, ಪ್ರಕೃತಿಯ ನಡುವೆ ಹೆಚ್ಚು ಕಳೆದಿದ್ದರಿಂದ ನನ್ನ ಆಲೋಚನಾ "ಧಾನವೂ ಬೇರೆಯೇ ಆಗಿದೆ, ನಾನು 5ವರ್ಷದವಳಿರುವಾಗ ಅಪ್ಪ ಹೋಗಿದ್ದಾರೆ, ನಾಟಕಗಳನ್ನು ನೋಡಿ ಆನಂದಿಸುತ್ತೇನಷ್ಟೇ ಎನ್ನುತ್ತಾರೆ. 
      ಕಾವ್ಯ ಶಂಕರ್‌ ನಾಗ್‌ ಸಿನಿಮಾ ಜಗತ್ತಿಗೆ ಅಭಿಮುಖವಾಗಿ ವಿಭಿನ್ನ ನೆಲೆಗಟ್ಟಿನಲ್ಲಿ ಹೊಸ ಆಯಾಮಕ್ಕೆ ಕಾಲಿರಿಸಿದ್ದಾರೆ, ಆ ಮೂಲಕ ಸಮಾಜಮುಖಿಯಾಗುವ ಅಪ್ಪನ ಗುಣವನ್ನೇ ಕಾಯ್ದುಕೊಂಡಿದ್ದಾರೆ. ಶಂಕರ್‌ನಾಗ್‌ ರ ಕನಸಿನ ಕುಡಿ ದೇಸೀ ಶೈಲಿಯ ಹ್ಯಾಂಡಿಮೇಡ್‌ ಸೋಪ್‌ ಉದ್ಯಮ ಬೆಳೆಯಲಿ ಕನ್ನಡ ನಾಡಿನಾಧ್ಯಂತ ತನ್ನ ಕಂಪನ್ನು ಪಸರಿಸಲಿ ಎಂದು ಜನತಾ ಮಾಧ್ಯಮ ಹಾರೈಸುತ್ತದೆ. ಕಾವ್ಯ ಶಂಕರ್‌ ನಾಗ್‌ ಮತ್ತು ಮಯೂರ ಕಡೂರ್‌ ತಮ ಉದ್ಯಮದ ಮತ್ತು ಉತ್ಪಾದನೆಯನ್ನು ಸಾರ್ವಜನಿಕರಿಗೆ ತಿಳಿಸುವ ಸಲುವಾಗಿಯೇwww.dobandar.com  ಮತ್ತು www.dobandar.itshandmade.in  ಎಂಬ ಅಂತರ್ಜಾಲ ತಾಣವನ್ನು ಆರಂಭಿಸಿದ್ದಾರೆ ಆಸಕ್ತರು ಭೇಟಿ ನೀಡಬಹುದು, ನೀವು ಕಾವ್ಯ ಶಂಕರ್‌ ನಾಗ್‌ ಗೆ ಗುಡ್‌ ಲಕ್‌ ಹೇಳಿ

ಮಾಧ್ಯಮದ ಅಂಗಡಿಗಳು ಮತ್ತು ಪತ್ರಕರ್ತರು!

ಕಾಸ್ಟ್ ಕಟಿಂಗ್ ಮತ್ತು ನಿಶ್ಚಿತ ಆದಾಯದ ಕೊರತೆಯಿಂದ ಮಾಧ್ಯಮ ಸಂಸ್ಥೆಗಳು ಪತ್ರಕರ್ತರನ್ನು ಪರ್ಫಾರ್ಮೆನ್ಸ್ ವೀಕ್ ಎಂಬ ಕಾರಣ ನೀಡಿ ತೆಗೆಯುವ ಪ್ರಕ್ರಿಯೆ ಈಗ ನಡೆಯುತ್ತ...