Wednesday, May 27, 2009

ಕರುಣಾನಿಧಿ ಮತ್ತು 'ಪವರ್' ಪಾಲಿಟಿಕ್ಸ್

"...Prabhakaran is my good friend...". "India could not forgive the LTTE for assassinating Rajiv Gandhi"

Some say there was a person over 17 lakh years ago. His name was Rama. Do not touch the bridge (Ramar Sethu) constructed by him. Who is this Rama? From which engineering college did he graduate? Is there any proof for this? ” ಇಂತಹ ಮಾತುಗಳನ್ನಾಡುವ ಮೂಲಕ ರಾಷ್ಟ್ರ ರಾಜಕಾರಣದಲ್ಲಿ ವಿವಾದದ ಕೇಂದ್ರ ಬಿಂದು ವಾಗಿದ್ದವರು ಮುತ್ತುವೇಲು ಅಲಿಯಾಸ್ ಕಲೈಗ್ನರ್ ಅಲಿಯಾಸ್ ಮುತಾಮಿಜ್ ಕವಿಗ್ನರ್ ಎಂ ಕರುಣಾನಿಧಿ. ತಮಿಳನ್ನೇ ಉಸಿರಾಡಿ ತಮಿಳರ ಹಿತರಕ್ಷಣೆಗಾಗಿ ಏನು ಬೇಕಾದರೂ ಮಾಡಲುತಯಾರಾಗಿ ಬಿಡುವ ಅಸಾಮಿ ಈ ಕರುಣಾನಿಧಿ. ಕೇಂದ್ರದಲ್ಲಿ ಯುಪಿಎ ಅಧಿಕಾರಕ್ಕೆ ಬಂದಿದೆ, ಈ ಪೈಕಿ ಕಾಂಗ್ರೆಸ್ ೨೦೬, ಡಿಎಂಕೆ ೧೮, ತೃಣಮೂಲ ಕಾಂಗ್ರೆಸ್ ೧೯,ಎನ್್ಸಿಪಿ ೮, ಐಯುಎಂಎಲ್ ೨ ಮತ್ತು ನ್ಯಾಷನಲ್ ಕಾಂಗ್ರೆಸ್ ೩ ಸ್ಥಾನಗಳೊಂದಿಗೆ ಒಕ್ಕೂಟದಲ್ಲಿ ಸೇರ್ಪಡೆಯಾಗಿವೆ.ಅಧಿಕಾರ ಹಿಡಿಯುವ ಸಂಧರ್ಭದಲ್ಲಿ ತಮಗೆ ಇಷ್ಟೇ ಸಂಖ್ಯೆಯ ಕ್ಯಾಬಿನೆಟ್ ಸಚಿವರು ಬೇಕು ಇಂತಹುದೇ ಖಾತೆಗಳು ಬೇಕು ಎಂದು ಖ್ಯಾತೆ ತೆಗೆದು ಹಟ ಹಿಡಿದಿದ್ದು ಇದೇ ಕರುಣಾನಿಧಿ. ಅಂತೂ ಇಂತೂ 3ಸಂಪುಟ ದರ್ಜೆ, ೪ ರಾಜ್ಯ ಸಚಿವ ಸ್ಥಾನಗಳನ್ನು ಡಿಎಂಕೆ ಪಡೆದು ಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಖಾತೆಗಾಗಿ ಕ್ಯಾತೆ ತೆಗೆದ ಕರುಣಾನಿಧಿ ರಾಜೀವ್ ಗಾಂಧಿ ಹಂತಕ ಪ್ರಭಾಕರನ್ ನನ್ನು ವಹಿಸಿಕೊಂಡು ಮಾತನಾಡುತ್ತಾರೆ, ಆತನ ಮೇಲೆ ಶ್ರೀಲಂಕಾ ಸೇನೆ ದಾಳಿ ಮಾಡುವ ಸಂಧರ್ಬದಲ್ಲಿ ಅದನ್ನು ನಿಲ್ಲಿಸುವಂತೆ ಉಪವಾಸ ಕುಳಿತು ಅಂತರ ರಾಷ್ಟ್ರೀಯ ಮಟ್ಟದಲ್ಲಿ ಒತ್ತಡ ಹೇರುವ ಯತ್ನ ಮಾಡುತ್ತಾರೆ. ಪ್ರಭಾಕರನ್ ಹತ್ಯೆಯಾದ ದಿನ ಕರಾಳ ದಿನ ಆಚರಿಸುತ್ತಾರೆ, ಇಂತಹ ವ್ಯಕ್ತಿಯನ್ನು ಕಾಂಗ್ರೆಸ್ ಮಂದಿ ಆದರಿಸಿ ಸರ್ಕಾರ ರಚನೆಯಲ್ಲಿ ಸೇರಿಸಿ ಕೊಳ್ಳುತ್ತಾರೆ, ರಾಹುಲ್ ಗಾಂದಿ ಪ್ರಧಾನಿಯಾದರು ಅಂದು ಕೊಳ್ಲುವಾಗಲೇ ಮನಮೋಹನ್ ಸಿಂಗ್ ಪುನರಾಯ್ಕೆಯಾಗುತ್ತಾರೆ ಅಂದರೆ ಇದರ ಹಿಂದಿನ ರಾಜಕೀಯವೇನು? ಒಂದು ಕಡೆ ಸಿಖ್ಖರನ್ನು ಎದುರು ಹಾಕಿಕೊಳ್ಳಲು ಇಚ್ಚಿಸದ ಕಾಂಗ್ರೆಸ್ ಮನಮೋಹನ್ ಸಿಂಗ್ ರನ್ನೇ ಪ್ರಧಾನಿಯಾಗಿ ಮುಂದುವರೆಸುವ ಸಂಕಲ್ಪ ಮಾಡುತ್ತದೆ, ಇತ್ತ ತಮಿಳರನ್ನು ಒಲಿಸಿ ಕೊಳ್ಳುವ ನಿಟ್ಟಿನಲ್ಲಿ ಡಿಎಂಕೆ ಯಂತಹ ಪ್ರಾದೇಶಿಕ ಪಕ್ಷವನ್ನು ಅಪ್ಪಿಕೊಂಡರೆ, ಮತ್ತೊಂದೆಡೆ ಕಮ್ಯುನಿಸ್ಟ ರನ್ನು ಬಗ್ಗು ಬಡಿಯಲು ತೃಣಮೂಲ ಕಾಂಗ್ರೆಸ್ ಅನ್ನು ಅಪ್ಪಿಕೊಳ್ಳುತ್ತದೆ. ರಾಜಕಾರಣದ ಒಳಗುಟ್ಟುಗಳೇನೇ ಇರಲಿ ಇನ್ನು ಒಂದು ವರ್ಷಗಳಲ್ಲಿ ಕೇಂದ್ರ ಸರ್ಕಾರದಲ್ಲಿ ಪ್ರಮುಖ ಬದಲಾವಣೆ ಮಾತ್ರ ನಿಶ್ಚಿತ! ಇರಲಿ ಕೇಂದ್ರ ಸರ್ಕಾರದಲ್ಲಿ ತನ್ನ ಸಂಸದರ ಅರ್ಧದಷ್ಟು ಸಂಖ್ಯೆಯ ಅತ್ಯಂತ ಪ್ರಭಾವಶಾಲಿ ಖಾತೆಗಳನ್ನು ಪಡೆದಿರುವ ಕರುಣಾನಿಧಿ ರಾಜ್ಯದ ಅಭಿವೃದ್ಧಿಯ ಮಟ್ಟಿಗೆ ತೊಡರುಗಾಲು. ನೀರಿನ ವಿಚಾರ ಬಂದಾಗ,ಉದ್ಯಮಗಳ ಹೂಡಿಕೆ, ಯೋಜನೆಗಳ ಅನುಷ್ಠಾನ ಹೀಗೆ ಎಲ್ಲದರಲ್ಲಿಯೂ ಈತ ಕರ್ನಾಟಕದ ಮಟ್ಟಿಗೆ ಕಂಟಕ, ಆತ ಬೆಳೆದು ಬಂದ ಹಿನ್ನೆಲೆಯು ಅಂತಹುದೇ ಆತ ಸಾಗಿ ಬಂದ ಕಥೆಯು ಒಂದು ರೋಚಕ ಅಧ್ಯಾಯವೇ ಸರಿ.
'ದೇಹ ಮಣ್ಣಿಗೆ, ಜೀವನ ತಮಿಳರಿಗೆ' ಎಂಬ ಧ್ಯೇಯ ವಾಕ್ಯದೊಂದಿಗೆ ಸಮಾಜ ಸೇವೆಗೆ ಧುಮುಕಿದ ಕರುಣಾನಿಧಿ ಹುಟ್ಟಿದ್ದು ತಮಿಳುನಾಡಿನ ತಂಜಾವೂರು ಜಿಲ್ಲೆಯ ತಿರುಕ್ಕುವಲೈ ನಲ್ಲಿ 3ನೇ ಜೂನ್ ೧೯೨೪, ಈತನ ತಾಯಿ ದೇವಸ್ಥಾನದಲ್ಲಿ ನರ್ತಕಿ. ರಾಜಕೀಯಕ್ಕೆ ಬರುವ ಮುನ್ನ ಸಿನಿಮಾರಂಗದಲ್ಲಿ ಹೆಸರು ಮಾಡಿದವರು. ತನ್ನ 20ನೇ ವಯಸ್ಸಿನಲ್ಲಿಯೇ ಸಿನಿಮಾಗಳಿಗೆ ಚಿತ್ರಕಥೆ-ಸಂಭಾಷಣೆ ಬರೆಯಲು ಆರಂಭಿಸಿದ ಕರುಣಾನಿಧಿ, ಕವನ, ಹಾಡು, ಕಥೆ ಗಳನ್ನು ಬರೆದರು, ಇವರು ಕಥೆ ಚಿತ್ರಕಥೆ ಬರೆದ ಸಿನಿಮಾಗಳು ತಮಿಳು ಚಿತ್ರರಂಗದಲ್ಲಿ ದಾಖಲೆ ನಿರ್ಮಿಸಿದವು.70ಕ್ಕೂ ಹೆಚ್ಚು ಸಿನಿಮಾ ಕಥೆಗಳು 100ಕ್ಕೂ ಹೆಚ್ಚು ಇತರೆ ಸಾಹಿತ್ಯ ಕೃತಿ ರಚಿಸಿದ ಹೆಗ್ಗಳಿಕೆ ಇವರದು. 1942ರಲ್ಲಿ ಮುರಸೋಳಿ ಎಂಬ ಪತ್ರಿಕೆಯನ್ನು ಆರಂಭಿಸಿ ಬೇರೆ ಬೇರೆ ಪತ್ರಿಕೆಗಳಲ್ಲು ಸಂಪಾದಕರಾಗಿ, ಅಂಕಣಕಾರರಾಗಿ ವೃತ್ತಿ ಬದುಕು ನಡೆಸಿದವರು. ಮೊದಲ ಭಾರಿಗೆ ಈತ ಚುನಾವಣಾ ರಾಜಕೀಯ ಪ್ರವೇಶಿಸಿದ್ದು 1957ರಲ್ಲಿ ಸತತವಾಗಿ ಇದುವರೆಗೂ 10ಭಾರಿ ವಿಧಾನಸಭಾ ಚುನಾವಣೆಗಳಲ್ಲಿ ಗೆಲುವು ಪಡೆದಿರುವ ಕರುಣಾನಿಧಿ 60ವರ್ಷಗಳಿಂದಲೂ ರಾಜಕೀಯ ನಡೆಸಿದ್ದಾರೆ.1969ರಿಂದ ಸತತವಾಗಿ 5ಭಾರಿ ಮುಖ್ಯಮಂತ್ರಿ ಪದವಿಗೆ ಏರಿದ್ದಾರೆ. ಇದೀಗ ಅವರ 3ಜನ ಪತ್ನಿಯ ಪೈಕಿ ಎರಡನೇ ಪತ್ನಿಯ ಪುತ್ರ ಸ್ಟಾಲಿನ್ ಗೆ ಉಪಮುಖ್ಯಮಂತ್ರಿ ಪದವಿ ನೀಡುವ ಮೂಲಕ ತಮಿಳುನಾಡಿನ ರಾಜಕೀಯಾಂಗಣದಲ್ಲಿ
ತಮ್ಮ ಶಕೆಯನ್ನು ಮುಂದುವರಿಸಿದ್ದಾರೆ. ಜನಸಾಮಾನ್ಯರ ಸಮಸ್ಯಗಳು, ಭ್ರಷ್ಠಾಚಾರದ ಆರೋಪ, ಹಿಂದಿ ಭಾಷೆಯ ವಿರುದ್ಧದ ಚಳುವಳಿ ತಮಿಳು ಹುಲಿಗಳ ಪರವಾದ ಹೋರಾಟ ಹೀಗೆ 14ಬಾರಿ ಜೈಲು ಕಂಡಿದ್ದಾರೆ. ಅಪ್ಪಟ ತಮಿಳು ಪ್ರೇಮಿಯಾಗಿ ಮಲೇಷಿಯಾ ಮತ್ತು ಪ್ಯಾರೀಸ್ ನಲ್ಲಿ ಜಾಗತಿಕ ತಮಿಳು ಸಮಾವೇಶ ನಡೆಸಿದ ಕೀರ್ತಿ ಇವರಿಗಿದೆ.ಅಣ್ಣಾಮಲೈ ಮತ್ತು ಮಧುರೈ ಕಾಮರಾಜ್ ಯುನಿವರ್ಸಿಟಿ ಯಿಂದ ಎರಡು ಗೌರವ ಡಾಕ್ಟರೇಟ್ ಸೇರಿದಂತೆ ಇತರೆ ಪ್ರತಿಷ್ಟಿತ ಪುರಸ್ಕಾರ ಇವರ ಬೆನ್ನಿಗಿದೆ. ಮೂಲತ: ಮಾಂಸಹಾರಿ ಯಾದರು ರೋಡಿಸಿಕೊಂಡದ್ದು ಸಸ್ಯಾಹಾರವನ್ನು ಮಾತ್ರ. ಹಿಂದೂ ಸಂಪ್ರದಾಯ ಮತ್ತು ಆಚರಣೆಗಳ ವಿರುದ್ಧ ಅಸಹನೆ ಇಟ್ಟುಕೊಂಡಿರುವ ಕರುಣಾನಿಧಿ ಪ್ರಗತಿ ಪರ ಚಿಂತನೆ ರೂಡಿಸಿಕೊಂಡವರು. ಪ್ರತಿ ನಿತ್ಯ ಯೋಗ ಮಾಡುವುದು ಅವರ ೮೫ ನೇ ವಯಸ್ಸಿನ ಯಶಸ್ಸಿನ ಗುಟ್ಟು.ಪ್ರಾದೇಶಿಕ ಪಕ್ಷವೊಂದರ ಮುಖಂಡನಾಗಿ ಅಂದು ಕೊಂಡ ಸಿದ್ಧಾಂತಗಳಿಗೆ ಅಪಚಾರವಾಗದಂತೆ ಅಂದು ಕೊಂಡದ್ದನ್ನು ಸಾಧಿಸುವ ಇಂತಹ ಛಲಗಾರ ನಮ್ಮಲ್ಲೂ ಇದ್ದಾರ ! ?

ಮಾಧ್ಯಮದ ಅಂಗಡಿಗಳು ಮತ್ತು ಪತ್ರಕರ್ತರು!

ಕಾಸ್ಟ್ ಕಟಿಂಗ್ ಮತ್ತು ನಿಶ್ಚಿತ ಆದಾಯದ ಕೊರತೆಯಿಂದ ಮಾಧ್ಯಮ ಸಂಸ್ಥೆಗಳು ಪತ್ರಕರ್ತರನ್ನು ಪರ್ಫಾರ್ಮೆನ್ಸ್ ವೀಕ್ ಎಂಬ ಕಾರಣ ನೀಡಿ ತೆಗೆಯುವ ಪ್ರಕ್ರಿಯೆ ಈಗ ನಡೆಯುತ್ತ...