Sunday, August 14, 2011

ಸ್ವಾತಂತ್ರ್ಯ ಎಲ್ಲಿಗೆ ಬಂತು ? ಯಾರಿಗೆ ಬಂತು?

ಇವತ್ತು 64ನೇ ಸ್ವಾತಂತ್ರ್ಯ ದಿನಾಚರಣೆ,ದೇಶಕ್ಕೆ ಸ್ವಾತಂತ್ರ್ಯ ಬಂದು 6ವರೆ ದಶಕಗಳು ಸದ್ದಿಲ್ಲದಂತೆ ಸರಿದು ಹೋಗಿವೆ. ಸತತವಾಗಿ 90ವರ್ಷಗಳಿಗೂ ಅಧಿಕ ಕಾಲ ನೆತ್ತರು ಹರಿಸಿ, ಮಾನಸಿಕ ತೊಳಲಾಟಕ್ಕೆ ಸಿಲುಕಿ , ಅಪಮಾನವನ್ನೆದುರಿಸಿ ಗಳಿಸಿದ ಸ್ವಾತಂತ್ರ್ಯದ ಪರಿಕಲ್ಪನೆ ಇವತ್ತು ಹೇಗಿದೆ? ಸ್ವಾತಂತ್ರ್ಯಾ ನಂತರದ ದಿನಗಳಲ್ಲಿ ದೇಶದಲ್ಲಿ ಆಗಿಹೋದ ಘಟನೆಗಳು, ಪ್ರಸಕ್ತ ರಾಜಕೀಯ,ಸಾಮಾಜಿಕ ಮತ್ತು ಆರ್ಥಿಕ ವಿದ್ಯಮಾನಗಳು ಹೇಗಿವೆ? ನಿಜವಾದ ಸ್ವಾತಂತ್ರ್ಯ ಸಿಕ್ಕಿರುವುದು ಯಾರಿಗೆ ? ಸ್ವತಂತ್ರ ಭಾರತದಲ್ಲಿ ಆಗುತ್ತಿರುವುದೇನು? ಎಂಬೆಲ್ಲ ಪ್ರಶ್ನೆಗಳು ನಮ್ಮೆದುರಿಗಿವೆ. 

       ಭಾರತೀಯ  ಎನಿಸಿಕೊಂಡ ಪ್ರತಿಯೊಬ್ಬರು ಪ್ರಜ್ಞಾಪೂರ್ವಕವಾಗಿ ಸ್ವಾತಂತ್ರ್ಯದ  ಆಶೋತ್ತರಗಳನ್ನು ಅರಿಯುವುದು ಅನಿವಾರ್ಯವಾಗಿದೆ. ಪ್ರಸಕ್ತ ವಿದ್ಯಮಾನಗಳು ನಮ್ಮ ಹಿರಿಯುರು  ಕಷ್ಟಪಟ್ಟು ದೊರಕಿಸಿಕೊಟ್ಟ ನೈಜ ಆಶಯಗಳಿಗೆ ಪೂರಕವಾಗಿ ನಡೆಯುವ ಬದಲಾಗಿ ತದ್ವಿರುದ್ದದ ದಿಕ್ಕಿನಲ್ಲಿ ಸಾಗಿವೆ. ಸಧ್ಯ ದೇಶದಲ್ಲಿ 2001ರ ಜನಗಣತಿ ಅಂಕಿಅಂಶಗಳ ಪ್ರಕಾರ ಹಿಂದೂಗಳೂ ಶೇ.80.5ರಷ್ಟು,ಮುಸ್ಲಿಂ ಶೇ.13.4%,ಕ್ರಿಶ್ಚಿಯನ್ ಶೇ.2.3%, ಸಿಖ್ಖರು 1.9% ಮಂದಿ ಇದ್ದಾರೆ.2011ರ ಜನಗಣತಿಯ ಪ್ರಕಾರ ದೇಶದಲ್ಲಿ 35 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು, 640ಜಿಲ್ಲೆಗಳೂ,5924 ಉಪಜಿಲ್ಲೆಗಳು,7935ನಗರಗಳು,6,40,867ಹಳ್ಳಿಗಳು ದಾಖಲಾಗಿವೆ. ಅಂದರೆ 10ವರ್ಷಗಳಲ್ಲಿ 47ರಾಜ್ಯಗಳು,461ಉಪ ಜಿಲ್ಲೆಗಳು, 224ನಗರಗಳು, 2279ಹಳ್ಳಿಗಳು ಹೊಸದಾಗಿ ಸೇರ್ಪಡೆಗೊಂಡಿವೆ. ಅನಾಮತ್ತು 1,210ಮಿಲಿಯನ್ ಜನಸಂಖ್ಯೆ ಯನ್ನು ಹೊಂದಿರುವ ದೇಶ ಜಾಗತಿಕವಾಗಿ ಜನಸಂಖ್ಯೆಯಲ್ಲಿ 2ನೇ ಸ್ಥಾನ ಗಿಟ್ಟಿಸಿದೆ. ಕಳೆದ ಒಂದು ಶತಮಾನದ ಜನಸಂಖ್ಯೆಗೆ ಇದನ್ನು ಹೋಲಿಕೆ ಮಾಡುವುದಾದರೆ 4ಪಟ್ಟು ಜನಸಂಖ್ಯೆ ಏರಿಕೆ ಕಂಡಿದೆ. 1901ರಲ್ಲಿ ಇದ್ದ ಜನಸಂಖ್ಯೆ ಪ್ರಮಾಣ 238.4ಮಿಲಿಯನ್! 
            ದೇಶದಲ್ಲಿ 6000ಕ್ಕೂ ಮಿಕ್ಕಿದ ವಿವಿಧ ವರ್ಗದ ಜನಾಂಗದವರಿದ್ದಾರೆ ಸಂಸ್ಕೃತಿಯ ನೂರಾರು ವಿಧಗಳು ಇಲ್ಲಿ ಕಾಣುತ್ತವೆ. ದೇಶದ ಸಾಂಸ್ಕೃತಿಕ ಪರಂಪರೆಗೆ 5500ವರ್ಷಗಳಿಗೂ ಮಿಕ್ಕಿದ ಇತಿಹಾಸವಿದೆ. ಧಾರ್ಮಿಕ/ದಾರ್ಶನಿಕ ಪರಂಪರೆಯ ವಿಚಾರಕ್ಕೆ ಬಂದರೆ  ಜಾಗತಿಕವಾಗಿ ಸಮಸ್ತ ದೇಶಗಳಿಗೂ ಸಡ್ಡು ಹೊಡೆದು ಸವಾಲಾಗಿ ನಿಲ್ಲಬಲ್ಲ ಛಾತಿ ಭಾರತಕ್ಕಿದೆ.ಸ್ವಾತಂತ್ರ್ಯ ಪೂರ್ವದಲ್ಲಿ ಕೇವಲ ಶೇ.5ರಷ್ಟು ಜಿಡಿಪಿ ಯನ್ನು ಆರ್ಥಿಕ ಕ್ಷೆತ್ರದ ಹಿನ್ನೆಡೆ ಇವತ್ತು ಜಗತ್ತಿಗೆ ಸವಾಲಾಗುವಂತೆ ಶೇ.10ಕ್ಕೇರಿದೆ, ದೇಶದ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವನ್ನೇ ನಮ್ಮಡೆಗೆ ನೋಡುವಂತೆ ಮಾಡಿದೆ. ಕಂಪ್ಯೂಟರ್ ಕ್ಷೇತ್ರದ ಸಾಧನೆ ಜಗತ್ತಿನಲ್ಲಿ ಸಾರ್ವಕಾಲಿಕವಾದ ಛಾಪು ಮೂಡಿಸಿದೆ. ಜಗತ್ತಿನ ಯಾವುದೇ ರಾಷ್ಟ್ರ ಕಂಪ್ಯೂಟರ್ ಕ್ಷೇತ್ರಕ್ಕೆ ಸಂಬಂಧಿಸಿದ ಸೇವೆಗಳಿಗಾಗಿ ಭಾರತದ ಯುವ ಜನಾಂಗದತ್ತ ನೋಡುವಂತಹ ಹೆಮ್ಮೆಯ ಸಾಧನೆಯಿದೆ. ಅಮೇರಿಕಾದಂತಹ ದೇಶದ ಬಲಿಷ್ಠ ಅಧ್ಯಕ್ಷ ಬಾರಕ್ ಒಬಾಮ ಭಾರತೀಯ ತರುಣರ ಕುರಿತು ಎಷ್ಟರ ಮಟ್ಟಿಗೆ disturb ಆಗುತ್ತಾನೆಂದರೆ  ಅಧಿಕಾರಕ್ಕೆ ಬಂದ ತಕ್ಸಣ ಭಾರತೀಯರಿಗೆ ಹೊರಗುತ್ತಿಗೆ ಸೇವೆಯನ್ನು ರದ್ದು ಗೊಳಿಸುತ್ತಾನೆ. ತನ್ನ ದೇಶದ ಆರ್ಥಿಕತೆ ಮತ್ತು ನಿರುದ್ಯೋಗ ಸಮಸ್ಯೆಯನ್ನು ಸರಿದೂಗಿಸುಲು ಹರ ಸಾಹಸ ಮಾಡುತ್ತಾನೆಂದರೆ ಅದಕ್ಕೆ ಭಾರತ ದೇಶ ಮತ್ತು ಇಲ್ಲಿನ್ ವಿದ್ವತ್,ಶೈಕ್ಷಣಿಕ ಸಂಪನ್ನರಾದ ಯುವ ಭಾರತದ ತರುಣರು ಕಾರಣವಲ್ಲವೇ?

              ಆದರೆ ಇಂತಹ ದೇಶದಲ್ಲಿ ಕಳೆದ 6ದಶಕಗಳಲ್ಲಿ ಆಗಿರುವುದೇನು?  ಸ್ವಾತಂತ್ರ್ಯದ ಪರಿಕಲ್ಪನೆ ಎಷ್ಟರ ಮಟ್ಟಿಗಿದೆ? ಎಂಬ ವಿಚಾರಗಳು ಗಹನವಾಗಿ ಚರ್ಚೆಯಾಗಬೇಕು. ದೇಶದಲ್ಲಿ ಕೋಮುಗಲಭೆಗಳಾಗಿವೆ, ಇನ್ನಿಲ್ಲದಂತ 'ಬರ' ನಮ್ಮನ್ನಾವರಿಸಿದೆ, ಕೃಷಿ ಕ್ಷೇತ್ರಗಳು ಕೈಗಾರಿಕ ಆರ್ಥಿಕ ವಲಯಗಳಿಂದಾಗಿ ಕಡಿಮೆಯಾಗುತ್ತಿವೆ, ಭೂಮಿ ಕಳೆದುಕೊಂಡ ರೈತ ನಗರ ಪ್ರದೇಶಗಳಲ್ಲಿ ಬಂಡವಾಳಶಾಹಿಗಳ ಗುಲಾಮ ಗಿರಿ ಮಾಡಲು ಹೊರಟ್ಟಿದ್ದಾನೆ.  ರಾಜಕೀಯ ಅರ್ಥ ಕಳೆದುಕೊಂಡಿದ್ದು ಬಂಡವಾಳ ಶಾಹಿಗಳು ರಾಜಕೀಯಕ್ಕೆ ಬಂದ ಮೇಲೆ ಪ್ರಜಾಪ್ರಭುತ್ವ ವ್ಯವಸ್ಥೆ ಅರ್ಥ ಹೀನವಾಗಿ ಹೋಗಿದೆ.  ರಾಜಕೀಯ ನೇತಾರರ ಪರಿಪಕ್ವವಿಲ್ಲದ ನಿಲುವುಗಳೂ, ಸ್ವಾರ್ಥ ಸಾಧನೆಯ ಹಪಾಹಪಿ ದೇಶವನ್ನೇ ಬಂಡವಾಳಶಾಹಿಗಳಿಗೆ ಒಪ್ಪಿಸುವ ಮೂಲಕ ಮತ್ತೆ ಸ್ವಾತಂತ್ರ್ಯ ಭಾರತದ  ಆಶೋತ್ತರಗಳಿಗೆ ಧಕ್ಕೆ ತಂದಿದ್ದಾರೆ. ನಮಗೆ ಗೊತ್ತಿಲ್ಲದಂತೆ ಬಂಡವಾಳ ಶಾಹಿಗಳೂ ಎಲ್ಲ ದಿಕ್ಕುಗಳಿಂದಲೂ ಶ್ರೀ''ಸಾಮಾನ್ಯ'' ನನ್ನು ಆಳಲಾರಂಭಿಸಿದ್ದಾರೆ.ಸಾಮಾಜಿಕ/ ಧಾರ್ಮಿಕ ವ್ಯವಸ್ಥೆಯ ಕಟ್ಟುಪಾಡುಗಳೂ ಕೊಂಚವೂ ಬದಲಾಗದೇ ಹಾಗೆಯೇ ಉಳಿದುಕೊಂಡಿವೆ. ಧಾರ್ಮಿಕ ವ್ಯವಸ್ಥೆ ಕೂಡಾ ಬಂಡವಾಳಶಾಹಿ ಎಲ್ಲ ಗುಣಗಳನ್ನು ಮೈಗೂಡಿಸಿಕೊಳ್ಳುವ ಮೂಲಕ ದೊಡ್ಡ ನಿರಾಶೆಯನ್ನು ಹುಟ್ಟುಹಾಕಿದೆ. ಸಾಮಾಜಿಕ ಅನಿಷ್ಠಗಳನ್ನು ತೊಡೆಯಲು ಸಂವಿಧಾನ  ಎಲ್ಲ ರೀತಿಯ ರಕ್ಷಣೆ ಒದಗಿಸಿದ್ದರೂ ಕೂಡ ಅದು ಪುಸ್ತಕದ ಬದನೇಕಾಯಿ ಆಗಿದೆ. ಇವತ್ತಿಗೂ ಜೀತಪದ್ದತಿ, ಮಲಹೊರುವ ಪದ್ದತಿ , ಜಾತಿ ಪದ್ದತಿ ಹಿಂದೆಂದಿಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಬೂದಿ ಮುಚ್ಚಿದ ಕೆಂಡದಂತೆ ನಡೆಯುತ್ತಿವೆ. ಆದರೆ ಪ್ರಗತಿ ಪರ ಮುಖವಾಡಗಳ ಮರೆಯಲ್ಲಿ ಇವಕ್ಕೆ ಹೆಚ್ಚಿನ ಪ್ರಾಶಸ್ತ್ಯ ಸಿಗುತ್ತಿಲ್ಲವಷ್ಡೆ. 
          ಇವತ್ತು ದೇಶದಲ್ಲಿ ನಿರುದ್ಯೋಗ ಸಮಸ್ಯೆ, ಬಡತನ, ಹಸಿವು, ಜಾತೀಯತೆಯ ಪ್ರಮಾಣ ನಿರೀಕ್ಷಿತ ಪ್ರಮಾಣದಲ್ಲಿ ಕಡಿಮೆಯಾಗಿಲ್ಲ ಕಾರಣ ಅನುಷ್ಠಾನ ಹಂತದಲ್ಲಿ ಆಗುತ್ತಿರುವ ಲೋಪದೋಷಗಳು, ಮಿತಿಮೀರಿದ ಭ್ರಷ್ಟಾಚಾರ ಪಕ್ಷಪಾತ ಧೋರಣೆ ಕಾರಣವಾಗಿವೆ. ಜನರ ಮೂಲಭೂತ ಸಮಸ್ಯೆಗಳನ್ನೆ ಬಂಡವಾಳ ಮಾಡಿಕೊಂಡು ಅಧಿಕಾರಕ್ಕೆ ಬರುವ ರಾಜಕೀಯ ನೇತಾರರು ಅಧಿಕಾರ ಸಿಕ್ಕ ತಕ್ಷಣ ಮೂಲ ವಿಷಯಗಳನ್ನು ಬದಿಗೆ ಸರಿಸಿ ಭ್ರಷ್ಟಾಚಾರಕ್ಕೆ ಒತ್ತಾಸೆಯಾಗಿ ನಿಲ್ಲುತ್ತಿದ್ದಾರೆ. ದೇಶದ ರಕ್ಷಣೆಗಾಗಿ ಶಸ್ತ್ರಾಸ್ತ್ರ ಖರೀದಿ, ಭೋಫೋರ್ಸ್ ಹಗರಣ, ಭೂಪಾಲ್ ಅನಿಲ ದುರಂತ, 70ರ ದಶಕದ ತುರ್ತು ಪರಿಸ್ಥಿತಿ, ಕಾಮನ್ ವೆಲ್ತ್ ನ ಹಗರಣ, 2ಜಿ ಸ್ಪೆಕ್ರ್ಟ್ಂ ಹಗರಣ  ಇತ್ಯಾದಿಗಳು ನಮ್ಮ ನೈತಿಕ ದಿವಾಳಿತನವನ್ನು, ನಿರ್ವಹಣೆಯ ಅಸಮರ್ತತೆಯನ್ನು ಎತ್ತಿ ತೋರಿಸುತ್ತಿವೆ. 70ರ ದಶಕದಲ್ಲಿ ಸ್ವತಂತ್ರ ಭಾರತ ಪ್ರಗತಿಗೆ ಪೂರಕವಾದ ಚಳುವಳಿಗಳು ಬಂದವಾದರೂ ಮುಂದಿನ ದಿನಗಳಲ್ಲಿ ದಿಕ್ಕು ತಪ್ಪಿದ ನಾವೆಯಂತಾದ ಚಳುವಳಿಗಳು ಪರಿಸ್ಥಿತಿಯ ಕೈಗೊಂಬೆಯಾಗಿದ್ದು ದುರಂತವೇ ಸರಿ. ಸ್ವಾತಂತ್ರ್ಯ ಎಂದರೆ ಸ್ವೇಚ್ಚಾಚಾರವಲ್ಲ ಅದರ ಹಿಂದೆ ಕೋಟ್ಯಾಂತ ಜೀವಗಳ ಭಾವನೆಯಿದೆ ಸುಂದರ ರಾಷ್ಟ್ರದ ಪರಿಕಲ್ಪನೆಯಿದೆ, ಅದಕ್ಕೆ ಪೂರಕವಾದ ವಿಚಾರಗಳ ಸಾಂಗತ್ಯವಿದೆ ಆದರೆ ಅವನ್ನೆಲ್ಲ ಕಡೆಗಣಿಸುವ ಮೂಲಕ ಮಸಿಬಳಿಯಲಾಗುತ್ತಿದೆ. ಶ್ರೀ ಸಾಮಾನ್ಯನ ಜಾಗೃತಿ ಮತ್ತು ಪಾಲ್ಗೊಳ್ಳುವಿಕ ಮಾತ್ರ ಸಧೃಢ ರಾಷ್ಟ್ರದ ನಿರ್ಮಾಣಕ್ಕೆ ತಳಹದಿಯನ್ನು ಭದ್ರಪಡಿಸಬಲ್ಲದು. ರಾಷ್ಟ್ರೀಯತೆಯ ಕೆಚ್ಚು ಪ್ರತಿಯೊಬ್ಬ ಭಾರತೀಯನಿಗೆ ಬಂದಾಗ ಮಾತ್ರ ಅದು ಸಾಧ್ಯವಾದೀತು ಅಲ್ಲವೇ?

ಮಾಧ್ಯಮದ ಅಂಗಡಿಗಳು ಮತ್ತು ಪತ್ರಕರ್ತರು!

ಕಾಸ್ಟ್ ಕಟಿಂಗ್ ಮತ್ತು ನಿಶ್ಚಿತ ಆದಾಯದ ಕೊರತೆಯಿಂದ ಮಾಧ್ಯಮ ಸಂಸ್ಥೆಗಳು ಪತ್ರಕರ್ತರನ್ನು ಪರ್ಫಾರ್ಮೆನ್ಸ್ ವೀಕ್ ಎಂಬ ಕಾರಣ ನೀಡಿ ತೆಗೆಯುವ ಪ್ರಕ್ರಿಯೆ ಈಗ ನಡೆಯುತ್ತ...