Sunday, November 29, 2009

ಜಾಗತೀಕರಣದ ಬಿಸಿಯಲ್ಲಿ ಬದುಕುಗಳಅವಸಾನ!

ಜಾಗತೀಕರಣದ ಬಿಸಿ ನಿದಾನವಾಗಿ ಸುಡಲಾರಂಭಿಸಿದೆ, ಕಳೆದ ವರ್ಷ ಅಮೇರಿಕಾದ ಆರ್ಥಿಕ ಕುಸಿತ, ಈಗ ದುಬೈನ ಆರ್ಥಿಕ ಹಿಂಜರಿತ ದೇಶದ ಆರ್ಥಿಕತೆಯ ಮೇಲೆ ಉದ್ಯೋಗಗಳ ಮೇಲೆ ಪರಿಣಾಮ ಬೀರಲಾರಂಬಿಸಿದೆ. ದಶಕಗಳ ಹಿಂದೆ ಇದೇ ಮನಮೋಹನ ಸಿಂಗ್,ಪ್ರಧಾನಿಯಾಗಿದ್ದ ನರಸಿಂಹರಾವ್ ಸಂಪುಟದಲ್ಲಿ ವಿತ್ತ ಸಚಿವರಾಗಿದ್ದಾಗ ಮುಕ್ತ ಆರ್ಥಿಕ ಉದಾರೀಕರಣದ ಮೂಲಕ ಬಹುರಾಷ್ಟ್ರೀಯ ಉದ್ಯಮಗಳಿಗೆ ದೇಶದ ಹೆಬ್ಬಾಗಿಲನ್ನು ತೆರೆದಿಟ್ಟರು. ಆಗ ಅದನ್ನು ಸಮರ್ಥವಾಗಿ ವಿರೋಧಿಸುವ ಯಾವ ಕ್ರಿಯೆಗಳು ಬಲವಾಗಿ ನಡೆಯಲಿಲ್ಲ, ಅನೇಕ ಸಾರ್ವಜನಿಕ ಚಳುವಳಿಗಳು ಅದನ್ನ ವಿರೋದಿಸಿದವಾದರೂ ಎಂಎನ್ ಸಿಗಳ ಭಿಕ್ಷೆ ಮತ್ತು ಎಂಜಲನ್ನು ಪಡೆದು ಬಾಯಿ ಭದ್ರ ಪಡಿಸಿಕೊಂಡವು. ಅಲ್ಲಿಗೆ ವ್ಯವಸ್ಥಿತವಾಗಿ ನಮ್ಮ ಬದುಕಿನೊಳಗೆ ಜಾಗತೀಕರಣದ ಕಬಂಧ ಬಾಹು ಆಕ್ಟೋಪಸ್ ನಂತೆ ವಿಸ್ತರಿಸಲಾರಂಭಿಸಿತು. ಆರಂಭದಲ್ಲಿ ಎಲ್ಲವೂ ಚೆನ್ನಾಗಿಯೇ ಇರುತ್ತದೆ. ಆಧುನೀಕರಣದ ಭ್ರಮೆಗೆ ಬಿದ್ದ ನಮ್ಮ ಜನ ಕೂಡ ಅದನ್ನು ಅನಿವಾರ್ಯವೆಂದು ಭಾವಿಸಲಾರಂಭಿಸಿದರು. ನಮ್ಮ ಜನರಿಗೆ ಸಿನಿಕತನ ಬೆಳೆಯಿತು, ತಮ್ಮ ತಲೆಮಾರುಗಳಿಂದ ಪಾಲನೆಯಾಗುತ್ತಿದ್ದ ಜೀವ ನಕ್ರಮವನ್ನು ಮರೆತರು, ಪದ್ದತಿಗಳನ್ನು ಸಿದ್ದಾಂತಗಳನ್ನು ಗಾಳಿಗೆ ತೂರಿದರು. ಆಧುನೀಕರಣವನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಸಮರ್ಥಿಸಿಕೊಳ್ಳಲಾರಂಬಿಸಿದರು, ಬದುಕನ್ನುಬದಲಿಸಿಕೊಳ್ಳಲಾರಂಭಿಸಿದರು. ಆದರೆ ಅವತ್ತಿಗೆ ಜಾಗತೀಕರಣದ ಬಿಸಿ ತಕ್ಷಣವೇ ನಮ್ಮನ್ನು ನಡುಬೀದಿಯ ಭಿಕ್ಷುಕರನ್ನಾಗಿ ಮಾಡುತ್ತದೆ, ಬದುಕು ಮೂರಾಬಟ್ಟೆಯಾಗುತ್ತದೆ ಎಂಬ ಸ್ಪಷ್ಟ ಸುಳಿವನ್ನು ನಿರ್ಲಕ್ಷಿಸಿದರು. ಅವತ್ತಿಗೆ ಅವತ್ತಿನ ಬದುಕು ಖುಷಿಯಾಗಿದ್ದರೆ ಸಾಕು ಎಂಬ ಮನಸ್ಥಿತಿ ನಮ್ಮ ಜನರಲ್ಲಿದ್ದುದೇ ಈಗ ಆರಂಭವಾಗಿರುವ ತಳಮಳ, ತಲ್ಲಣಗಳಿಗೆ ಕಾರಣವಾಗಿದೆ.
ನಿಮಗೆ ತಿಳಿದಿರಲಿ ಮುಕ್ತ ಆರ್ಥಿಕ ಉದಾರೀಕರಣ ನೀತಿ ಎಂದರೆ ಜಗತ್ತಿನ ಬಲಾಡ್ಯ ರಾಷ್ಟ್ರಗಳು ಅಭಿವೃದ್ದಿ ಯನೆಪದಲ್ಲಿ ಇತರೆ ರಾಷ್ಟ್ರಗಳ ಮೇಲೆ ಬಲವಂತವಾಗಿ ಹೇರಲ್ಪಡುವ ನೀತಿ. ಇದರನುಸಾರ ಸದರಿ ಗುಂಪಿನಲ್ಲಿರುವ ಯಾವುದೇ ರಾಷ್ಟ್ರ ನಮ್ಮ ದೇಶದಲ್ಲಿ ಬಂಡವಾಳ ಹೂಡಬಹುದು. ಅದೂ ಶಾಶ್ವತವಾಗ ಉಳಿಯುವಂತಹ ವ್ಯವಹಾರಗಳ ಮೇಲಲ್ಲ ತಾತ್ಕಾಲಿಕ ಗುತ್ತಿಗೆ ಅವಧಿಯವರೆಗೆ ಮಾತ್ರ. ಹೀಗೆ ಬಂಡವಾ ಳಹೂಡುವವರಿಗೆ ಎಲ್ಲ ರೀತಿಯ ಮೂಲಭೂತ ಸೌಲಭ್ಯ , ರಕ್ಷಣೆ ಹಾಗೂ ತೆರಿಗೆ ರಹಿತ ವಾದ ವ್ಯವಸ್ಥೆಯನ್ನ ಕಲ್ಪಿಸಿಕೊಡಬೇಕು. ಅಲ್ಲಿ ಉತ್ಪಾದನೆಯಾಗುವ ಉತ್ತಮಗುಣಮಟ್ಟದ ಪದಾರ್ಥಗಳು ನಮ್ಮವರಿಗೆ ಸಿಗಲಾರದು, ದೇಶೀಯ ಉದ್ಯೋಗ ನೀತಿ ಅವರಿಗೆ ಅನ್ವಯಿಸಲಾರದು, ನಮ್ಮ ದೇಶದ ಕಾನೂನು ಕಟ್ಟಳೆಯಲ್ಲೂ ಅವರಿಗೆ ಸಡಿಲತ ಇರುತ್ತದೆ ಸರ್ಕಾರವೇ ಅವ ರರಕ್ಷಣೆಗೆ ಮುಂದಾಗಿ ನಿಲ್ಲುತ್ತವೆ. ದೇಶದ ಪ್ರಜಾಸತ್ತೆ ವ್ಯವಸ್ಥೆಗೆ ಇದು ಸಂಪೂರ್ಣ ವಿರುದ್ದ.
ಹೀಗೆ ಜಾಗತೀಕರಣದ ನೆರಳಿನಲ್ಲಿ ನಮ್ಮ ದೇಶಕ್ಕೆ ಕಾಲಿರಿಸಿದ್ದು ಟೆಕ್ಸ್ ಟೈಲ್ಸ್ ಅಂಡ್ ಗಾರ್ಮೆಂಟ್ ಇಂಡಸ್ಟ್ರಿ, ಮೆಟಲ್ ಅಂಡ್ ಮೆಟಲ್ ಉತ್ಪಾದನೆಗಳು, ಮಾಹಿತಿ ತಂತ್ರಜ್ಞಾನ ಪಾರ್ಕುಗಳು, ಹೊರಗುತ್ತಿಗೆ ಉದ್ದಿಮೆಗಳು, ಜೆಮ್ಸ್ ಅಂಡ್ ಜ್ಯೂಯಲರಿ, ಕಟ್ಟಡ ನಿರ್ಮಾಣ, ಸಾರಿಗೆ, ಅದಿರು, ಕಲಿದ್ದಲು, ತೈಲ ಉದ್ದಿಮೆಗಳು ಪ್ರಮುಖವಾದವುಗಳು . ಕಳೆದ ವರ್ಷಅಮೇರಿಕಾ ಆರಂಭಿಸಿದ ಬಂಡವಾಳ ಹಿಂತೆಗೆತದ ಪರಿಣಾಮ ದೇಶದ ೧.5ಮಿಲಿಯನ್ ನಷ್ಟು ಜನರು ಉದ್ಯೋಗ ಕಳೆದುಕೊಂಡರು. ದೇಶದ ಕಾರ್ಮಿಕ ಇಲಾಖೆಯ ಸರ್ವೆ ಅನುಸಾರ ದೇಶದ 11ರಾಜ್ಯಗಳಲ್ಲಿರುವ ೨೦ ಪ್ರಮು ಖವಾಣಿಜ್ಯ ಕೇಂದ್ರಗಳಲ್ಲಿ 2581ಘಟಕಗಳು ಕಣ್ಮುಚ್ಚಿದವು. ಈಗ ಉದ್ಯೋಗ ವಂಚಿತ ಭಾರತೀಯರ ಸಂಖ್ಯೆ ಏರುಗತಿಯಲ್ಲಿದ್ದು ಅದು ೧೬.2ಮಿಲಿಯನ ್ಆಗಿದೆ. ಈಗ ದುಬೈನಲ್ಲಿ ಸಂಭವಿಸಿರುವ ಆರ್ಥಿಕ ಕುಸಿತ ನಮ್ಮ ದೇಶದ ಆರ್ಥಿಕತೆಗೂ ದೊಡ್ಡ ಪೆಟ್ಟು ನೀಡಿದೆ. ದುಬೈನಲ್ಲಿರು ವಭಾರತೀಯರು ಅಲ್ಲಿ ನಜನಸಂಖ್ಯೆಯ ಶೇ.43ರಷ್ಟಿದ್ದಾರೆ. ಅಲ್ಲಿ ಉದ್ದಿಮೆ ನಡೆಸುವವರು, ನೌಕರರಾಗಿ, ಕಾರ್ಮಿಕರಾಗಿ ಕೆಲಸ ಮಾಡುವವರು ಬಹುತೇಕ ನಮ್ಮವರೇ ಆಗಿದ್ದಾರೆ. ನಮ್ಮ ದೇಶದ ಹಲವ ಉತ್ಪನ್ನಗಳ ಗ್ರಾಹಕರು ಆಗಿರುವುದರಿಂ ದ ದೇಶದ ಆರ್ಥಿಕತೆಗೂ ಬಾರೀ ಪೆಟ್ಟು ಬೀಳಲಿದೆ.
ಜಾಗತೀಕರಣ ಕಾಲಿರಿಸುತ್ತಿದ್ದಂತೆ ನಮ್ಮ ಕೃಷಿ ಭೂಮಿಗಳು ಆರ್ಥಿಕವಲಯದ ಪಾಲಾಗುತ್ತಿವೆ, ದೇಶೀಯ ಉತ್ಪನ್ನಗಳು ಮೂಲೆಗುಂಪಾಗಿವೆ, ಆಧುನೀಕರಣದ ಪ್ರಭಾವದಿಂದಾಗಿ ಇರುವ ಕೃಷಿ ಭೂಮಿಗಳು ಬರಡಾಗುತ್ತಿವೆ, ಶಿಕ್ಷಣದ ಆದ್ಯತೆಗಳು ಬದಲಾಗಿವೆ, ಸಂಬಂಧಗಳು ಯಾತ್ರಿಕವಾಗಿವೆ, ಅಭಿರುಚಿ-ಸಂಸ್ಕೃತಿ ಬದಲಾಗಿದೆ, ಭಾಷಾ ವ್ಯವಸ್ಥೆ ದಿಕ್ಕೆಟ್ಟು ಹೋಗಿದೆ, ಪ್ರಗತಿ ಪರ ಚಳುವಳಿಗಳನ್ನು ವ್ಯವಸ್ಥಿತವಾಗಿ ಕೆಡವಲಾಗಿದೆ, ಅಪರಾಧಗಳು ಹೆಚ್ಚಿವೆ, ಸಾಮಾಜಿಕ ನ್ಯಾಯ ದಿಕ್ಕಾಪಾಲಾಗಿದೆ, ಹೀಗೆ ಹೇಳುತ್ತಾ ಹೋದರೆ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಇದೆಲ್ಲದರ ನಡುವೆ ಇದ್ದಕ್ಕಿದ್ದಂತೆ ಎಂಎನ್ ಸಿಗಳಲ್ಲಿ ಕೆಲಸ ಕಳೆದುಕೊಂಡು ಬದುಕಿನ ಭರವಸೆಯನ್ನು ಕಳೆದುಕೊಂಡವರೆಷ್ಟ ಜನರೋ. ಇವತ್ತು ನಾವು ದೈನಂದಿ ನಜೀವನದಲ್ಲಿ ಬಳಸುವ ಪ್ರತೀ ವಸ್ತುವೂ ಚಡ್ಡಿ-ಬನೀನು ಸೇರಿದಂತೆ ಎಲ್ಲ ಪದಾರ್ಥಗಳು ವಿದೇಶಿ ಸಹಯೋಗದ ಕಂಪನೆಗಳ ಬಳುವಳಿಯೇ. ಅದ ನಮ್ಮನ್ನು ಎಷ್ಟು ಆವರಿಸಿಕೊಂಡಿದೆಯಂದರೆ ನೀರಿನ ಮಡುವಿನಿಂ ದಹೊರಬರಲಾರದಷ್ಟು. ನಮಗೆ ಅಧುನೀಕರಣ ಬೇಕು, ಉದ್ಯೋಗ ಬೇಕು, ಅಭಿವೃದ್ದಿ ಬೇಕು ಆದರೆ ನಮ್ಮ ತನವನ್ನು ಹರಾಜಿಗಿಟ್ಟುಕೊಳ್ಳುವ ವ್ಯವಸ್ಥೆಯಲ್ಲ.ಎಲ್ಲಿ ದೇಸೀ ಜೀವನ ಪ್ರೀತಿ ಇಲ್ಲವೋ , ಬದ್ದತೆ, ಸಿದ್ದಾಂತಗಳಿರುವುದಿಲ್ಲವೋ ಅಲ್ಲಿಯವರೆಗೂ ಜಾಗತೀಕರಣದ ಭೂತ ನಮ್ಮನ್ನು ಹಿಂಬಾಲಿಸುತ್ತಲೇ ಇರುತ್ತದೆ.

ಮಾಧ್ಯಮದ ಅಂಗಡಿಗಳು ಮತ್ತು ಪತ್ರಕರ್ತರು!

ಕಾಸ್ಟ್ ಕಟಿಂಗ್ ಮತ್ತು ನಿಶ್ಚಿತ ಆದಾಯದ ಕೊರತೆಯಿಂದ ಮಾಧ್ಯಮ ಸಂಸ್ಥೆಗಳು ಪತ್ರಕರ್ತರನ್ನು ಪರ್ಫಾರ್ಮೆನ್ಸ್ ವೀಕ್ ಎಂಬ ಕಾರಣ ನೀಡಿ ತೆಗೆಯುವ ಪ್ರಕ್ರಿಯೆ ಈಗ ನಡೆಯುತ್ತ...