Thursday, February 24, 2011

ಇದು ಕುಮಾರಣ್ಣ-ರಾಧಿಕಾ "ಸಮಯ" ಕಣ್ರೀ

Picture Courtesy: Bangalore Mirror
ಕಸ್ತೂರಿ ಮನರಂಜನಾ ಛಾನಲ್, ಸುದ್ದಿ ಛಾನಲ್ ಆಗಿ ಬದಲಾಗ್ತಾ ಇದ್ಯಂತೆ, ಸುವರ್ಣದ ಕ್ಯಾಪ್ಟನ್ ರಂಗನಾಥ್ ಅದಕ್ಕೆ ಚೀಫ್ ಆಗಿ ಬರ್ತಾರಂತೆ ಎಂಬ ಸುದ್ದಿ, ಮಾಧ್ಯಮದ ವಲಯದಲ್ಲಿ ಈಗೊಂದು ತಿಂಗಳಿನಿಂದ ಕೇಳಿ ಬರುತ್ತಿತ್ತು, ಅದಕ್ಕೆ ಪೂರಕವಾಗಿ ಕಸ್ತೂರಿಯಲ್ಲೂ ರಿಪೋರ್ಟರುಗಳು, ನ್ಯೂಸ್ ಆಂಕರ್ ಗಳು ಇತ್ಯಾದಿಗಳು ಬೇಕು ಅಂತ ಸ್ಕ್ರಾಲಿಂಗ್ ಬರೋಕೆ ಶುರುವಾಗಿತ್ತು. ಈ ನಡುವೆ ಬೆಂಗಳೂರಿನ ಆಂಗ್ಲ ದೈನಿಕವೊಂದು ಫೆ.24ರಂದು ಮಾಜಿ ಮುಖ್ಯ ಮಂತ್ರಿ ಎಚ್  ಡಿ ಕುಮಾರಸ್ವಾಮಿ ಪಕ್ಷಕ್ಕೆ ಮತ್ತು ರಾಧಿಕಾ ಳಿಗಾಗಿ ಸಮಯ ಛಾನಲ್ ಕೊಳ್ಳುತ್ತಿದ್ದಾರೆ ಎಂಬ ಸುದ್ದಿಯನ್ನು ಬಹಿರಂಗ ಪಡಿಸಿದೆ. ಕುಮಾರಣ್ಣನ ರಾಜಕೀಯ ವಲಯದಲ್ಲೂ ಸದರಿ ಸುದ್ದಿಯನ್ನು ಖಚಿತ ಪಡಿಸಲಾಗುತ್ತಿದೆ. "ಕಸ್ತೂರಿ" ಅನಿತಕ್ಕ ನಿಗೆ "ಸಮಯ" ಚೋಟಿ  ಮೇಮ್ ಸಾಬ್ ರಾಧಿಕಾ ಳಿಗೆ ಎಂಬುದು ನಿರ್ಣಾಯಕ ಹಂತಕ್ಕೆ ಬಂದಂತಾಗಿದೆ. 
          ಕಸ್ತೂರಿ ಮನರಂಜನಾ ಛಾನಲ್ ಅನ್ನು ಪತ್ನಿ ಅನಿತಾ ಅವರಿಗಾಗಿ ಆರಂಭಿಸಿದ ಕುಮಾರಣ್ಣ ಒಂದು ಹಂತದಲ್ಲಿ ಸದರಿ ಛಾನಲ್ ನಿಂದ ನಷ್ಟವಾಗುತ್ತಿದೆ ಎಂಬ ಹಿನ್ನೆಲೆಯಲ್ಲಿ ಮಾರಲು ಯತ್ನಿಸಿದ್ದೂ ಉಂಟು, ಆರಂಭದಲ್ಲಿ ಹುರುಪಿನಿಂ ದ ಬೇರೆ ಮಾದ್ಯಮಗಳಿಂದ ವಲಸೆ ಬಂದವರಿಗೆ ಹೆಚ್ಚಿನ ಸಂಬಳದ ಆಮಿಷ ಇತ್ತಾದರೂ, ನಂತರದಲ್ಲಿ ಆಡಳಿತ ಮಂಡಳಿಯಲ್ಲಿದ್ದ  ಕೆಲವರ ನಿಲುವುಗಳಿಂದ ಕಸ್ತೂರಿ ಛಾನಲ್ ನಷ್ಟ ಅನುಭವಿಸುವಂತಾದ ಸಂಗತಿ ಈಗ ಗುಟ್ಟಾಗಿ ಉಳಿದಿಲ್ಲ. ಇತರೆ ಛಾನಲ್ ಗಳಲ್ಲಿ ಬರುವ ಜನಪ್ರಿಯ ಕಾರ್ಯಕ್ರಮಗ ಳನ್ನೆ ಹೋಲು ವ ನಕಲು ಕಾರ್ಯಕ್ರಮಗಳನ್ನೆ ಪ್ರಸಾರ ಮಾಡುತ್ತಿರುವ ಕಸ್ತೂರಿ ಸುದ್ದಿ ಪ್ರಸಾರ ದಲ್ಲೂ ನಗೆಪಾಟಲಿಗೀಡಾಗಿದ್ದು ಎಲ್ಲ ರಿಗೂ ತಿಳಿದ ಸಂಗತಿ. ಈ ಹಿನ್ನೆಲೆಯ ಲ್ಲಿ ಕಸ್ತೂರಿ ಸುದ್ದಿ ವಾಹಿನಿಯಾಗಿ ಬದಲಾಗುತ್ತಿದೆ ಎಂಬ ಸುದ್ದಿಯಿತ್ತು. ಕುಮಾರಣ್ಣ   ಬಹಳಹಿಂದೆಯೇಪಕ್ಷಕ್ಕೊಂದು ಮುಖವಾಣಿಯಂತಿರುವ ಸುದ್ದಿ ವಾಹಿನಿ ಮಾ  ಡಬೇಕುಎಂದುಯೋಚಿಸಿದ್ದರು.
            ಇದೇ ಸನ್ನಿವೇಶದಲ್ಲಿ .ಉ.ಕ. ಭಾಗದ ಸಕ್ಕರೆ ಕಾರ್ಖಾನೆಗಳ ಮೇಲೆ ಅಧಿಪತ್ಯ ಸ್ಥಾಪಿಸಿರುವ ಕಾಂಗ್ರೆಸ್ ಎಂಎಲ್ ಎ ಸತೀಶ್ ಜಾರಕಿಹೊಳಿ, ಕಾಂಗ್ರೆಸ್ ಮುಖಂಡ ಸಿದ್ದರಾಮಯ್ಯ ಮತ್ತಿತರ ಹತ್ತು ಮಂದಿಸೇರಿ ಛಾನಲ್ ಹುಟ್ಟುಹಾಕಿದರಾದರೂ ಹೆಚ್ಚಿನ ಶೇರು ಹೊಂದಿರುವುದು ಸತೀಶ್ ಜಾರಕಿಹೊಳಿ.ಹೀಗೆ ಎಲ್ಲರೂ ಸೇರಿ  " ಸಮಯ" ಛಾನಲ್ ಹುಟ್ಟು ಹಾಕಿದರಾದರೂ ಸರಿಯಾದ ನಿರ್ವಹಣೆ ಯಿಲ್ಲದೇ ಸೊರಗಿದ್ದ ಚಾನಲ್  ಅನ್ನುಮೇಲೆ ತ್ತಲು ಶಶಿಧರ ಭಟ್ಟರನ್ನು ಕರೆತಂದರು, ಸಧ್ಯ "ಸಮಯ" ದ  ಕಾರ್ಯಕ್ರಮಗಳ ಪರಿಸ್ಥಿತಿ ಸುಧಾರಿಸಿತ್ತಿದೆ ಎಂಬಷ್ಟರಲ್ಲಿ ಜಾರಕಿಹೊಳಿ ಛಾನಲ್ ನಿರ್ವಹಣೆಯ ಉಸಾಬರಿ ಬೇಡವೆಂದು ನಿರ್ಧರಿಸಿದ್ದಾರೆ.ಲಾಭದಾಯಕವಾಗಿ ಛಾನೆಲ್ ನಡೆಯುವ ಲಕ್ಷಣ ಕಾಣದಿದ್ದುದರಿಂದ ನಷ್ಟಕ್ಕೆ ಬ್ರೇಕ್ ಹಾಕಲು ನಿರ್ಧರಿಸಿದ್ದಾರೆ. ಪರಿಣಾಮ   "ಸಮಯ" ದ ನಿರ್ವಹಣೆ ಹೊರೆಯಾಗಿದ್ದರಿಂದ ಉ.ಭಾ.ತದ ಚಾ  ನಲ್ಒಂದಕ್ಕೆ ಸಮಯ ವನ್ನು ಮಾರುವ ಸಿದ್ದತೆಯಲ್ಲಿದ್ದರು, ಸುಮಾರು 40ಕೋಟಿಗೆ ಮಾತುಕತೆಯೂ ನಡೆಯುತ್ತಿದೆ  ಎಂಬಮಾಹಿತಿಯೂ ಇತ್ತು.  ಎಲ್ಲಾಲೆಕ್ಕ ಹಾಕಿದರೂ
20 ರಿಂದ 30ಕೋಟಿಗೆ ಬಾಳುವ ಸಮಯ ವಾಹಿನಿಯನ್ನ  ತಮ್ಮ ರಾಜಕೀಯ ಜೀವನದ ಹಳೆಯ  ಗೆಳೆಯಕುಮಾರಣ್ಣನಿಗೆ ಜಾರಕಿ ಹೊಳಿ ಮಾರು ವ ನಿರ್ದಾರ ಕೈಗೊಂಡಿದ್ದಾರೆ. ಅದೂ ಅನಾಮತ್ತು ಸುಮಾರು 60ಕೋಟಿಗೆ ಸಮಯ  ಛಾನಲ್ಅನ್ನ ಕೊಳ್ಳಲು ಕುಮಾರಣ್ಣ ಮುಂದೆ ಬಂದಿದ್ದಾರೆ.
         "ಸಮಯ  ಛಾನೆಲ್ ಸೇಲಿಗಿದೆ ಎಂಬುದು ,  ತಿಳಿದಿ  ದೆ ಈ ಕುರಿತು ಅದರ ಮುಖ್ಯಸ್ಥರೊಂದಿಗೆ ಇನ್ನಷ್ಟೇ ಮಾತುಕತೆ ನಡೆಸುತ್ತಿದ್ದೇನೆ. ವ್ಯವಹಾರವಿನ್ನೂಮುಗಿದಿಲ್ಲ "   ಎಂದುಕುಮಾರಸ್ವಾಮಿ ಹೇಳುತ್ತಾರಾದರೂ ಅವರ ಆಪ್ತ ವಲಯಗಳ ಮಾಹಿತಿಯನುಸಾರ ಒಪ್ಪಂದ ಪತ್ರಕ್ಕೆ ಜಾರಕಿಹೊಳಿ-ಕುಮಾರಸ್ವಾಮಿ ಸಹಿ ಹಾಕಿದ್ದಾರೆ, ರಿಜಿಷ್ಟ್ರೇಷನ್ ಸಂಬಂಧಿ ಕೆಲಸ ಗಳು ಬಾಕಿ ಉಳಿದಿವೆ ಎನ್ನುತ್ತಾರೆ. ಪೂರ್ಣ ಹೊಣೆಗಾರಿಕೆಗಳು ಮುಗಿದ ನಂತರ ಹಿರಿಯ ಪತ್ರಕರ್ತರುಗಳನ್ನು ಛಾನೆಲ್ ಗೆ ಸೆಳೆಯಲು  ಕುಮಾರಣ್ಣ ಯತ್ನಿಸಬಹುದು. ಅಲ್ಲಿಗೆ ಮತ್ತೊಮ್ಮೆ ಶಶಿಧರಭಟ್ಟ ರಸ್ಥಾನ ಪಲ್ಲಟವಾಗುತ್ತದೆಯೇ ಕಾದು ನೋಡಬೇಕು. ಕುಮಾರಣ್ಣನ ಅಚ್ಚುಮೆಚ್ಚಿನ ಪತ್ರಕರ್ತ ರಂಗನಾಥ್ ಬಂದರೂ ಅಚ್ಚರಿಯೇನಿಲ್ಲ.
      ಅಂದಹಾಗೆ ಸದರಿ ಸಮಯ ವಾಹಿನಿಯನ್ನು ಕುಮಾರಣ್ಣ  ತಮ್ಮ ಪ್ರೇಯಸಿ ರಾಧಿಕಾ ರಾಣಿಯ  ಹೆಸರಿನಲ್ಲಿಖರೀದಿಸುತ್ತಿದ್ದಾರೆ ಎಂದು ಅವರ ಆಪ್ತ ವಲಯದ ಮಾಹಿತಿ ಹೇಳುತ್ತಿದೆ. ಕಸ್ತೂರಿ-ಸಮಯ ಎರಡೂ ಛಾನಲ್ ಗಳು  ಕಸ್ತೂರಭಾರಸ್ತೆಯ ಲ್ಲೆ ಇದ್ದು ಎರಡೂ ಕಟ್ಟಡಗಳ ನಡುವೆ ಒಂದು ಪೆಟ್ರೋಲ್ ಬಂಕ್ ಇದೆಯಂತೆ ಅಲ್ಲಿಗೆ ಎರಡೂ ಛಾನಲ್ ಗಳನ್ನು ನಿರ್ವಹಿಸಲು ಕುಮಾ ರಣ್ಣನಿಗೆಹೆಚ್ಚಿ ನಶ್ರಮವಾಗದು!  ಕನ್ನಡದಲ್ಲಿ ಈಗಾಗಲೇ 5ಸುದ್ದಿ ವಾಹಿನಿಗಳಿವೆ, ಈ ಪೈಕಿ ಸುದ್ದಿ ವಾಹಿನಿಗಳೀಗೆ ಒಂದು ಚೌಕಟ್ಟು ಹಾಕಿ ಕೊಟ ದ್ದು ಮಾತ್ರ ಟಿವಿ9 . ಆದರೆ ಕನ್ನಡದ ಎ   ಲ್ಲಾಛಾನಲ್ಗಳು ಸುದ್ದಿಪ್ರಸಾರದಲ್ಲಿ ಮತ್ತು ಗ್ರಾಫಿಕ್ಸ್ ನಲ್ಲಿ ಮೇಲ್ಪಂಕ್ತಿಯನ್ನು ಅನುಸಿರಿಸಿದ್ದು  ಮಾತ್ರ NDTV, CNNIBN,TIMES NOW ಗಳನ್ನ, ಕುಮಾರಣ್ಣನ ಹೊಸ ಛಾನಲ್ ನಲ್ಲೂ ಈ    ವಿಚಾರದಲ್ಲಿ ಅಂತಹ ಮಹತ್ವದ ಬದಲಾವಣೆಯಾಗದು ಆದರೆ ರಾಜಕಾರಣಿಗಳು ಛಾನಲ್ ಗಳನ್ನು ಹೊಂದುವ ಮೂಲಕ ಪಕ್ಕದ ತಮಿಳುನಾಡು ಮತ್ತು ಆಂದ್ರಪ್ರದೇಶದ   ರಾಜಕಾರಣಿಗಳ ಮಾದರಿ ಅನುಸಿ ರಿಸಿದ್ದು ಮಾತ್ರ ಸರಿಯಲ್ಲ. ಇ ದರಿಂ ದ ಸುದ್ದಿ ಛಾನಲ್ ಗಳ ವಿಶ್ವಾಸಾರ್ಹತೆ ಉಳಿ ಯುವುದೇ?

ಮಾಧ್ಯಮದ ಅಂಗಡಿಗಳು ಮತ್ತು ಪತ್ರಕರ್ತರು!

ಕಾಸ್ಟ್ ಕಟಿಂಗ್ ಮತ್ತು ನಿಶ್ಚಿತ ಆದಾಯದ ಕೊರತೆಯಿಂದ ಮಾಧ್ಯಮ ಸಂಸ್ಥೆಗಳು ಪತ್ರಕರ್ತರನ್ನು ಪರ್ಫಾರ್ಮೆನ್ಸ್ ವೀಕ್ ಎಂಬ ಕಾರಣ ನೀಡಿ ತೆಗೆಯುವ ಪ್ರಕ್ರಿಯೆ ಈಗ ನಡೆಯುತ್ತ...