Friday, June 20, 2008

ಜಾಗತೀಕರಣದ ಸುಳಿಯಲ್ಲಿ "ಮಾಧ್ಯಮಗಳ ಅನಿವಾರ್ಯತೆ ಮತ್ತು ಆದ್ಯತೆಗಳು"



ಸಮೂಹ ಸಂವಹನ ಮಾಧ್ಯಮಗಳು ಪ್ರಸಕ್ತ ಸಂಧರ್ಭಗಳಲ್ಲಿ ಸ್ಫರ್ಧಾತ್ಮಕವಾಗಿ ಕೆಲಸ ಮಾಡಬೇಕಾಗಿದೆ. ಈ ದಿಸೆಯಲ್ಲಿ ಮುದ್ರಣ, ದೃಶ್ಯ ಹಾಗೂ ಶೃವ್ಯ ಮಾಧ್ಯಮಗಳ ನಡುವೆ ಇತ್ತೀಚಿನ ದಿನಗಳಲ್ಲಿ ಏರ್ಪಡುತ್ತಿರುವ ಬಾಹ್ಯ ಮತ್ತು ಆಂತರಿಕ ಪೈಪೋಟಿ ಸಮೂಹ ಸಂವಹನ ಮಾಧ್ಯಮಗಳಿಗಿರಬೇಕಾದ ರಚನಾತ್ಮಕ ದ್ಯೇಯೋದ್ದೇಶಗಳಿಗೆ ತಿಲಾಂಜಲಿ ನೀಡಿದೆ. ಜಾಗತೀಕರಣದ ದಿಸೆಯಿಂದ ುಂಟಾಗಿರುವ ಪ್ರವೃತ್ತಿ ಮತ್ತು ಮೂಲ ಾಶಯಗಳಿಗೆ ವ್ಯತಿರಿಕ್ತವಾದ ಅನಿವಾರ್ಯ ನಿಲುವುಗಳಿಂದಾಗಿ ಮಾಧ್ಯಮಗಳ ಬದ್ಧತೆ ಮತ್ತು ಸ್ವಂತಿಕೆ ಕಳೆದು ಹೋಗುತ್ತಿದೆ. ಇದು ದೂರದ ಅಪಾಯವೂ ಹೌದು ಸಧ್ಯದ ಅನಿವಾರ್ಯತೆಯೂ ಹೌದು. ಈ ನಡುವೆ ಮಾಧ್ಯಮಗಳು ಪ್ರಚುರಪಡಿಸುವ ಸುದ್ದಿಯ ಗುಣಮಟ್ಟ, ವಿಚಾರವನ್ನು ಜನರಿಗೆ ತಲುಪಿಸುವ ವೈಖರಿ, ಭಾಷೆ, ಸೇವೆಗಾಗಿ ಪಡೆಯುವ ದರ ೆಲ್ಲವೂ ಮಾಧ್ಯಮಗಳ ಅಳಿವು ಮತ್ತು ಉಳಿವನ್ನೇ ಅವಲಂಬಿಸಿರುತ್ತದೆ. ಆದ್ದರಿಂದಲೇ ಉಳಿವಿಗಾಗಿ ನಡೆಯುವ ಹೋರಾಟದಲ್ಲಿ ಮಾಡು ಇಲ್ಲವೇ ಮಡಿ ಎಂಬ ನಾಣ್ಣುಡಿಯಂತೆ ಮಾದ್ಯಮಗಳು ಬದಲಾವಣೆ ಇಲ್ಲವೇ ಹೊಂದಾಣಿಕೆಯನ್ನು ಭಾಷೆ, ಮುದ್ರಣ, ವಿಷಯ ವಸ್ತುವಿನ ಗುಣಮಟ್ಟ ಮತ್ತು ಸೇವೆಗಾಗಿ ಪಡೆಯುವ ದರಗಳಲ್ಲಿ ಮಾಡಿಕೊಳ್ಳಬೇಕಾಗುತ್ತದೆ. ಈ ದಿಸೆಯಲ್ಲಿ ಯಾವುದೇ ಮಾದ್ಯಮದ ುಳಿವಿಗೆ ಈ ಮೇಲ್ಕಂಡ ಅಂಶಗಳಷ್ಟೇ ಜಾಹೀರಾತು ಸಹಾ ಪ್ರಧಾನ ಪಾತ್ರ ವಹಿಸುತ್ತದೆ. ಇಂದು ಜನರ ಾಸಕ್ತಿ ಮತ್ತು ಆದ್ಯತೆಗಳನ್ನು ಆಧರಿಸಿ ಕಾಲಮಾನಕ್ಕೆ ತಕ್ಕಂತೆ ಮಾಧ್ಯಮಗಳು ತಮ್ಮ ಆಧ್ಯತೆಗಳನ್ನು ಸಹಾ ಬದಲಾವಣೆ ಮಾಡಿಕೊಳ್ಳಬೇಕಾಗಿದೆ.. ಒಂದು ಸಣ್ಣ ುದಾಹರಣೆಯನ್ನೇ ನೋಡುವುದಾದರೆ ಸರ್ಕಾರಿ ಒಡೆತನದಲ್ಲಿರುವ ದೂರದರ್ಶನ ೆಲ್ಲ ಜನರನ್ನು ತಲುಪುವಲ್ಲಿ ಅಗ್ರಸ್ಥಾನ ಪಡೆದಿದ್ದರೂ ಇತರೆ ಖಾಸಗಿ ವಾಹಿನಿಗಳಷ್ಟು ಜನಪ್ರಿಯತೆ ಗಳಿಸುವಲ್ಲಿ ಹಿಂದೆ ಬಿದ್ದಿದೆ. ಏಕೆಂದರೆ ಜನರ ನಿರೀಕ್ಷೆಗೆ ಅಭಿರುಚಿಗೆ ಹತ್ತಿರವಾಗಿ ಖಾಸಗಿ ವಾಹಿನಿಗಳು ಕಾರ್ಯಕ್ರಮ ರೂಪಿಸುತ್ತಿವೆ ಅದಕ್ಕೆ ಪೂರಕವಾಗಿ ಜಾಹಿರಾತುಗಳು ಹರಿದು ಬರುತ್ತಿವೆ ಹೀಗಾಗಿ ಒಂದು ನಿರ್ದಿಷ್ಠ ಚೌಕಟ್ಟಿನಲ್ಲಿ ಕಾರ್ಯ ನಿರ್ವಹಿಸುವ ದೂರದರ್ಶನ ಯಾರಿಗೆ ಬೇಕಾಗಿದೆ ಎನ್ನುವಂತಾಗಿದೆ, ಅದೇ ರೀತಿ ರಾಜ್ಯದ ಪ್ರಮುಖ ಪತ್ರಿಕೆಗಳೂ ಸುದ್ದಿಗಿಂತ ಜಾಹಿರಾತಿನ ಮೋಹಕ್ಕೆ ಬಿದ್ದು ವಿವಿಧ ರೀತಿಯ ಕಸರತ್ತುಗಳನ್ನು ಮಾಡುತ್ತಿವೆ. ಪತ್ರಿಕೆಯ ಮೂಲ ಾಶಯಗಳಿಗೆ ವಿಭಿನ್ನವಾದ ರೀತಿಯ ಜಾಹಿರಾತುಗಳನ್ನು ಸೆಳೆಯುವ ಭರದಲ್ಲಿ ಸುದ್ದಿ ಸಮಾಚಾರಗಳು ಗುಣಮಟ್ಟ ಕಳೆದುಕೊಳ್ಳುತ್ತಿವೆ. ಪತ್ರಿಕೆಯ ವಿನ್ಯಾಸ,ಮುದ್ರಣ ಗುಣಮಟ್ಟ,ಸೇವಾ ದರ, ಭಾಷೆಯ ಬಳಕೆ ಎಲ್ಲವೂ ಜಾಗತೀಕರಣದ ೊಳಸುಳಿಗಳೇ ಆಗಿವೆ. ಇನ್ನು ಆಕಾಶವಾಣಿಗೆ ಪ್ರತಿಸ್ಫರ್ಧಿಯಾಗಿಖಾಸಗಿ ಎಫ್ ಎಂ ಛಾನೆಲ್ಗಳು ಸಿನಿಮಾಗಳನ್ನೆ ಆಧಿರಿಸಿದ ಕಾರ್ಯಕ್ರಮಗಳನ್ನು ಮಾತ್ರ ನೀಡುತ್ತಿವೆ ಈ ಅಬ್ಬರದಲ್ಲಿ ಆಕಾಶವಾನಿಯ ಗುಣಾತ್ಮಕ ಕಾರ್ಯಕ್ರಮಗಳು ಯಾರಿಗೆ ಬೇಕಾಗಿವೆ?

ಮಾಧ್ಯಮದ ಅಂಗಡಿಗಳು ಮತ್ತು ಪತ್ರಕರ್ತರು!

ಕಾಸ್ಟ್ ಕಟಿಂಗ್ ಮತ್ತು ನಿಶ್ಚಿತ ಆದಾಯದ ಕೊರತೆಯಿಂದ ಮಾಧ್ಯಮ ಸಂಸ್ಥೆಗಳು ಪತ್ರಕರ್ತರನ್ನು ಪರ್ಫಾರ್ಮೆನ್ಸ್ ವೀಕ್ ಎಂಬ ಕಾರಣ ನೀಡಿ ತೆಗೆಯುವ ಪ್ರಕ್ರಿಯೆ ಈಗ ನಡೆಯುತ್ತ...