Friday, September 4, 2009

ಶಿಕ್ಷಕರ ಸ್ಥಿತಿ ಏನಾಗಿದೆ ಗೊತ್ತಾ ???

ಈ ಮಾಸವಿಡೀ ಶಿಕ್ಷಕರ ದಿನಾಚರಣೆ, ಶಿಕ್ಷಕರನ್ನು ಸ್ಮರಿಸುವ ಗೌರವಿಸುವ ಸುದಿನ. ದಿನಾಚರಣೆಯ ಮುನ್ನಾ ದಿನ ಪತ್ರಿಕೆಗಳಲ್ಲಿ ಪ್ರಕಟವಾಗುವ ಲೇಖನಗಳು, ಸಮಾರಂಭ ಗಳಲ್ಲಿ ಪಾಲ್ಗೊಳ್ಳುವ ಗಣ್ಯರು ಎಲ್ಲರೂ ಶಿಕ್ಷಕರನ್ನು ಸ್ತುತಿಸುವವರೇ. ಕಾರ್ಯಕ್ರಮಕ್ಕೆ ಬಂದ ಕೆಲ ಗಣ್ಯರೆನಿಸಿಕೊಂಡವರಿಂದ ಉಚಿತ ಗೀತೋಪದೇಶ ಬೇರೆ. ಕರೆಸಿದ ತಪ್ಪಿಗೆ ಅದನ್ನು ಸಹಿಸಿಕೊಳ್ಳುವ ದುರ್ಗತಿ ಶಿಕ್ಷಕರದ್ದು. ಶಿಕ್ಷಕರನ್ನು ಗೌರವಿಸುವ ವೇದಿಕೆಗಳಲ್ಲೂ ರಾಜಕಾರಣಿಗಳದ್ದೇ ಕಾರುಬಾರು ಇರುತ್ತದೆ. ಶಾಲಾ-ಕಾಲೇಜುಗಳ ಎಲ್ಲಾ ಸಮಾರಂಭಗಳಲ್ಲೂ ದಾಂಗುಡಿ ಇಡುವ ರಾಜಕಾರಣಿಗಳು ಇಂತಹ ಸ್ಮರಣೀಯ ದಿನಗಳಲ್ಲಾದರೂ ಸಾಧನೆ ಮಾಡಿದ ಶಿಕ್ಷಕರು, ಹಿರಿಯ ಶಿಕ್ಷಕರುಗಳು ಮಾತ್ರ ವೇದಿಕೆಯಲ್ಲಿ ಕೂರಿಸಿ ರಾಜಕಾರಣಿಗಳು ಮತ್ತು ಇತರೆ ಗಣ್ಯರು ವೇದಿಕೆಯ ಕೆಳಗೆ ಕುಳಿತು ಸಹಕರಿಸಿದರೆ ಶಿಕ್ಷಕರ ದಿನಾಚರಣೆಗೂ ಒಂದು ಅರ್ಥ ಬಂದೀತು.

ಶಿಕ್ಷಕ ವೃತ್ತಿ ಜಗತ್ತಿನೆಲ್ಲೆಡೆ ಗೌರವಿಸಲ್ಪಡುವಂತಹದ್ದು, ಸಮಾಜದ ವಿವಿಧ ಸ್ಥರಗಳಲ್ಲಿ ಹಂಚಿ ಹೋಗುವ ಕೋಟ್ಯಾಂತರ ವ್ಯಕ್ತಿತ್ವಗಳನ್ನು ಸೃಷ್ಟಿಸುವ ಸಂಚಲನಾತ್ಮಕ ಕ್ರಿಯೆಯಲ್ಲಿ 'ಗುರು' ಸದಾ ನಿರತ. ಬದುಕುಗಳನ್ನು ರೂಪಿತವಾಗುವ ಮುನ್ನಾ ದಿನಗಳಲ್ಲಿ ಅಕ್ಷರದ ಅಕ್ಕರೆಯನ್ನು ಕಲಿಕೆಯ ಸೊಬಗನ್ನು ಭಾವನಾತ್ಮಕವಾಗಿ ಚಿಂತನ-ಮಂಥನಗಳನ್ನು ಸೃಷ್ಟಿಸುವ ಗುರು, ಮಾರ್ಗದರ್ಶಿಯಾಗಿ ಆಪ್ತಮಿತ್ರನಾಗಿ, ಸಹೋದರನಾಗಿ, ಮಾತಾ-ಪಿತರಿಗಿಂತ ಹೆಚ್ಚು ಸ್ಪಂದನೆಗೆ ಸಿಗುವ ಏಕೈಕ ವ್ಯಕ್ತಿಯಾಗಿರುತ್ತಾನೆ.

ಹಿಂದಿನ ಪರಿಸರದಲ್ಲಿ ಗುರುವಿಗೆ ಇದ್ದ ಸ್ಥಾನ-ಮಾನ-ಆದ್ಯತೆಗಳು ಇಂದಿನ ಆಧುನಿಕ ಪರಿಸರದಲ್ಲಿ ಇರುವ ಸ್ಥಾನ-ಮಾನ-ದ್ಯತೆಗಳಿಗೆ ಹೋಲಿಸಿದರೆ ಅಜಗಜಾಂತರ ವ್ಯತ್ಯಾಸವಿದೆ. ಶಿಕ್ಷಕರನ್ನು ಸಮಾಜ ನೋಡುವ ನೋಟ ಬದಲಾಗಿದೆ. ಅದಕ್ಕೆ ಹತ್ತು ಹಲವು ಕಾರಣಗಳು ಇರಬಹುದು. ಮೊದಲಾದರೆ ಶಿಕ್ಷಕ ಎನಿಸಿಕೊಂಡವರಿಗೆ ಅರ್ಪಣಾ ಮನೋಭಾವ ಇತ್ತು. ಈಗ ಆ ಭಾವ ಬದಲಾಗಿದೆ. ಹೀಗಾಗಲು ವ್ಯವಸ್ಥೆಯ ದೋಷಗಳು ಕಾರಣ ಇರಬಹುದು. ಹ಻ಗಾಗಿಯೇ ಇಂದು ಶಿಕ್ಷಕ ವೃತ್ತಿಯಲ್ಲಿ ಸಂಪೂರ್ಣವಾಗಿ ಪಾವಿತ್ರತೆ ಕಾಣುವುದು ಸಾಧ್ಯವಿಲ್ಲ. ಇಂತಹ ಬೆಳವಣಿಗೆಯಿಂದ ಶಿಕ್ಷಕ ವೃತ್ತಿಯಲ್ಲಿರುವ ಎಷ್ಟೋ ಮಂದಿ ವೃತ್ತಿಯನ್ನೇ ತೊರೆದು ಬೇರೆ ಕೆಲಸಗಳಿಗೆ ಹೋಗುವ ಚಿಂತನೆಯಲ್ಲಿರುತ್ತಾರೆ. ಬದಲಾದ ಪರಿಸರ ಇಂತಹದ್ದಕ್ಕೆ ಒತ್ತು ನೀಡುತ್ತದೆ.

ಶಿಕ್ಷಕನಾಗಿ ನೇಮಕವಾಗುವ ವ್ಯಕ್ತಿಯ ಹೆಗಲನ್ನು ಹತ್ತು ಹಲವು ಜವಾಬ್ದಾರಿ ಹೇರಿಕೊಳ್ಳುತ್ತವೆ ಮತ್ತು ಅಣಕಿಸಲಾರಂಬಿಸುತ್ತವೆ. ಶಿಕ್ಷಕರಿಗೆ ಯೋಜನಾ ಹೊರೆ ಜಾಸ್ತಿಯಾಗಿದೆ. ಶಿಕ್ಷಣದ ಗುಣಮಟ್ಟ ಕಾಯ್ದು ಕೊಳ್ಳುವುದು ಸಾಧ್ಯವಾಗುತ್ತಿಲ್ಲ. ಕಾಲಕಾಲಕ್ಕೆ ಇಲಾಖಾಧಿಕಾರಿಗಳು ಬೇಡುವ ವರದಿನೀಡಲಾಗುತ್ತಿಲ್ಲ. ಶಾಲಾ ಸಮಿತಿಗಳ ಗೂಂಡಾ ವರ್ತನೆ, ಯಾವುದೇ ಇಲಾಖಾಧಿಕಾರಿಯೂ ಸಹಾ ಯಾವುದೇ ಶಾಲೆಗೆ ಭೇಟಿ ನೀಡಿ ತಪಾಸಣೆ ಮಾಡುವ ಅಧಿಕಾರ ಿರುವಾಗ ಮುಕ್ತ ವಾತಾವರಣದಲ್ಲ ಶಿಕ್ಷಕರು ಕಾರ್ಯ ನಿರ್ವಹಿಸುವುದಾದರೂ ಹೇಗೆ ? ಪ್ರಸಕ್ತ ವ್ಯವಸ್ಥೆಯಲ್ಲಿ ಪ್ರತಿಯೊಬ್ಬ ಶಿಕ್ಷಕನೂ 15ಕ್ಕೂ ಹೆಚ್ಚು ತರಬೇತಿಗಳು ಮತ್ತು ಯೋಜನಾ ಅನುಷ್ಠಾನಗಳಲ್ಲಿ ಪಾಲ್ಗೊಳ್ಳಬೇಕಾಗುತ್ತದೆ.

ಶೈಕ್ಷಣಿಕ ವರ್ಷದ ಆರಂಭದಿಂದಲೇ ಅಕ್ಷರ ದಾಸೋಹ, ಪ್ರತಿಬಾ ಕಾರಂಜಿ, ಕ್ರೀಡಾಕೂಟ, ಶಾಲಾ ಕಟ್ಟಡ ನಿರ್ಮಾಣ, ಗೈರು ಹಾಜರಾತಿ ಆಂಧೋಲನ, ಸಮುದಾಯದತ್ತ ಶಾಲೆ, ನನ್ನೊಳಗಿನ ನಾನು,ಜೀವನ ವಿಜ್ಞಾನ, ಜೀವನ ಶಿಕ್ಷಣ,ಆಂಗ್ಲಭಾಷೆ ತರಭೇತಿ, ಚೈತನ್ಯ, ತರಣಿ-1, ತರಣಿ-2, ನಲಿಕಲಿ, ಬಹುಮುಖಿ, ರಂಗಕಲೆ, ಕ್ರಿಯಾ ಸಂಶೋಧನೆ, ವಿಷಯ ಸಂಪದ್ದೀಕರಣ, ಗಣಕ ತರಭೇತಿ, ಮೂಲಭೂತ ಸೌಕರ್ಯಾಭಿವೃದ್ದಿ, ಕಟ್ಟಡಗಳ ನವೀಕರಣ, ಶಾಲಾಭಿವೃದ್ದಿ ಸಮಿತಿ, ಜನಗಣತಿ, ಮಕ್ಕಳ ಗಣತಿ ಹೀಗೆ ಒಂದೇ ಎರಡೇ? ವರ್ಷವಿಡೀ ಬಿಡುವಿಲ್ಲದಂತೆ ಹೀಗೆ ಶಿಕ್ಷಕ ಪಾಲ್ಗೊಂಡರೆ ಅದೆಷ್ಟರ ಮಟ್ಟಿಗೆ ಮಕ್ಕಳಿಗೆ ಪಾಠ ಹೇಳಿಕೊಡಲು ಸಾಧ್ಯ? ಗುಣಮಟ್ಟ ಕಾಯ್ದು ಕೊಳ್ಳುವುದು ಹೇಗೆ? ಶಿಕ್ಷಕರನ್ನು ಹೈರಾಣ ಮಾಡುವ ಇಂತಹ ಯೋಜನೆಗಳು, ಉಸ್ತುವಾರಿಗಳು ಬೇಕೆ? ಶಿಕ್ಷಣದ ಅಭಿವೃದ್ದಿಗೆ ವಿಶ್ವಬ್ಯಾಂಕ್ ನೆರವು ನೀಡುತ್ತದೆ. ಪೊಗದಸ್ತಾಗಿ ಅಲ್ಲಿಂದ ಬರುವ ಹಣವನ್ನು ಥೈಲಿಗೆ ತುಂಬಿಸಿಕೊಳ್ಳುವ ನಿಟ್ಟಿನಲ್ಲಿ ಮಂತ್ರಿ ಮಹೋದಯರು ಹಾಗೂ ಹಿರಿಯ ಐ ಎ ಎಸ್ ಅಧಿಕಾರಿಗಳು ತಳಮಟ್ಟದಲ್ಲಿ ಏನಾಗುತ್ತಿದೆ ಎಂಬುದರ ಅರಿವಿಲ್ಲದೆ ಯೋಜನೆಯನ್ನು ಜಾರಿಗೆ ತರುತ್ತಾರೆ. ಅದೂ ಸಾಲದೆಂಬಂತೆ ಕ್ಷೆತ್ರ ಶಿಕ್ಷಣಾಧಿಕಾರಿಗಳ ಅಧಿಕಾರವನ್ನು ವಿಕೇಂದ್ರೀಕರಣಗೊಳಿಸಿ ಅನೇಕ ಉಪ ಹುದ್ದೆಗಳನ್ನು ಸೃಷ್ಟಿಸಲಾಗಿದೆ, ಅಲ್ಲಿಗೂ ಪಾಠ ಹೇಳುವ ಶಿಕ್ಷಕರನ್ನೇ ನೇಮಿಸಲಾಗಿದೆ. ಈ ಬೆಳವಣಿಗೆಯಂತೂ ಶಿಕ್ಷಕರಿಗೆ ನುಂಗಲಾರದಂತಹ ತುತ್ತಾಗಿದೆ. ಇಲಾಖೆಯು ಜಾರಿಗೆ ತರುವ ಯೋಜನೆಗಳ ಬಗ್ಗೆ ಕನಿಷ್ಟ ತಿಳುವಳಿಕೆಯಿಲ್ಲದ ವ್ಯಕ್ತಿಗಳು ಸಹಾ ಶಾಲಾಭಿವೃದ್ದಿ ಸಮಿತಿಯಲ್ಲಿ ಸೇರಿ ಶಿಕ್ಷಕರನ್ನು ನಿಯಂತ್ರಣದಲ್ಲಿಡ ಬಯಸುತ್ತಾರೆ.ರಾಜಕೀಯ ಬೆರೆಸುತ್ತಾರೆ. ಇವೆಲ್ಲಾ ಸೇರಿ ಶಿಕ್ಷಕರನ್ನು ಹಿಂಡಿ ಹಿಪ್ಪೆ ಮಾಡಿ ಬಿಡುತ್ತವೆ.

ಶಿಕ್ಷಕ ಸಮುದಾಯದಲ್ಲಿ ವೃತ್ತಿಗೆ ಅಗೌರವ ತಂದು ಕೊಡುವಂತೆ ನಡೆದುಕೊಳ್ಳುವ ಮಂದಿಯೂ ನಮ್ಮ ನಡುವೆ ಇದ್ದಾರೆ. ಕುಡಿತ, ತಂಬಾಕು, ಇಸ್ಪೀಟು, ಕೇರಂ, ಕಾಮ, ರಾಜಕೀಯ ಹೀಗೆ ಎಲ್ಲವೂ ಬೆರೆತ ಶಿಕ್ಷಕರೂ ಇಡೀ ಸಮುದಾಯಕ್ಕೆ ಕಂಟಕ ಪ್ರಾಯರು, ಅವರ ಸಂಖ್ಯೆ ಕಡಿಮೆ ಎನ್ನುವುದು ನೆಮ್ಮದಿಯ ಸಂಗತಿಯಾಗಿದೆ. ಇದೆಲ್ಲಾ ಒತ್ತಟ್ಟಿಗಿರಲಿ ಶಿಕ್ಷಕ ಸಮುದಾಯವನ್ನು ಅನಗತ್ಯವಾಗಿ ಹಾಡಿ ಹೊಗಳುವುದನ್ನು ಬಿಟ್ಟು ಅವರ ಸಮಸ್ಯೆಗಳನ್ನು ಆಲಿಸಿ-ಮುಕ್ತ ವಾತಾವರಣದಲ್ಲಿ ಶಿಕ್ಷಕ ವೃತ್ತಿಯನ್ನು ನಿರ್ವಹಿಸಲು ಅವಕಾಸ ಮಾಡಿದರೆ ಅದಕ್ಕಿಂತ ಬೇರೆ ಗೌರವ ಬೇಕಿಲ್ಲ ಅಲ್ಲವೇ? ಅಂದ ಹಾಗೆ ನಿಮ್ಮ ಬದುಕಿಗೆ ತಿರುವು ನೀಡಿದ, ಬದುಕು ರೂಪಿಸಿದ ಗುರುಗಳನ್ನು ನೆನಪು ಮಾಡಿಕೊಂಡಿರಾ ? ಅವರಿಗೆ ಶುಬಾಶಯ ಹೇಳಿದ್ರಾ?

2 comments:

Unknown said...

Hi, that article is very interresting.. You cud have published this in your newspaper. let the various parts of society knw the atcual reason behind this precious day.. and how this day can be celeberated...n and the importance of a teacher in once career/ future...:-)

Unknown said...

Hope everyhting is going fine with you....I'm gonna come to Arkalgud on 16th.. I wil meet you over there...take care...

ಮಾಧ್ಯಮದ ಅಂಗಡಿಗಳು ಮತ್ತು ಪತ್ರಕರ್ತರು!

ಕಾಸ್ಟ್ ಕಟಿಂಗ್ ಮತ್ತು ನಿಶ್ಚಿತ ಆದಾಯದ ಕೊರತೆಯಿಂದ ಮಾಧ್ಯಮ ಸಂಸ್ಥೆಗಳು ಪತ್ರಕರ್ತರನ್ನು ಪರ್ಫಾರ್ಮೆನ್ಸ್ ವೀಕ್ ಎಂಬ ಕಾರಣ ನೀಡಿ ತೆಗೆಯುವ ಪ್ರಕ್ರಿಯೆ ಈಗ ನಡೆಯುತ್ತ...