Wednesday, April 4, 2012

"ಪ್ರೀತಿ"ಯ ಅಗಲಿಕೆ.....:(


//'ಪ್ರೀತಿ'ಯ ಬನದಲ್ಲಿ ಅರಳಿದ
ಬೊಗಸೆ ಕಂಗಳ ಮುದ್ದು ಕಂದ
ಕನಸು, ಬಯಕೆಗಳ ಗಮ್ಯ ತಲುಪುವ
ಮೊದಲೇ ಅನಿರೀಕ್ಷಿತವಾಗಿ
ಅಗಲಿಕೆ ಸರಿಯೇ? 

            //ಬೆಟ್ಟದಷ್ಟು ಆಸೆ
            ದಕ್ಕಿಸಿಕೊಳ್ಳುವ ತವಕ

            ಕುತೂಹಲದ ತುಂಟನಗೆ
            ಕನಸು ತಣಿಯುವ ಮುನ್ನ
            ವಿಧಿ ಕಸಿದದ್ದು ಸರೀನಾ?

//ಅವತ್ತು ಅಮ್ಮನ ದುಗುಡ ಧಾವಂತ
ಕಣ್ಣೀರ ಕಥೆಯ ಅನಾವರಣ
ಅಸಹಾಯಕತೆ, ಅಭದ್ರತೆಯ ಬೀತಿ
ಮದ್ಯೆ ಆಶಾಕಿರಣ,ನಂಬಿದ ದೇವನ
ನೆಮ್ಮದಿಯಲ್ಲಿ ಹೋದದ್ದೆಲ್ಲಿಗೆ?

            //ಸಂಕಟದ ಸಂತೆಯಲ್ಲಿ
            ಬದುಕಿನ ಜಂಜಡದಲ್ಲಿ
            ನಂಬಿದ ಸಖನ ಸೇವೆಯಲ್ಲಿ
            ಉದಿಸಿದ ಅಭದ್ರತೆಯ ಭಾವ
            ವಿಧಿಯಾಟಕ್ಕೆ ಶರಣಾಗಿದ್ದು ಸರಿಯೇ?

(ವರ್ಷದ ಮೊದಲ ರೇವತಿ ಮಳೆ-ಗಾಳಿಗೆ ಹಾಸನ ಜಿಲ್ಲೆಯ ಅರಕಲಗೂಡಿನಲ್ಲಿ ನಡೆದ ರಸ್ತೆ ದುರಂತದಲ್ಲಿ ಪ್ರೀತಿ ಮತ್ತು ಪ್ರೀತಿಯ ಅಮ್ಮ ವಿಧಿವಶರಾದರು ತನಿಮಿತ್ತ ಈ ಅಕ್ಷರ ಕಂಬ

2 comments:

ಜೊಸೆಫ್ ಡಿ' ಸೋಜ said...

Hats up Jai..

ಜೊಸೆಫ್ ಡಿ' ಸೋಜ said...

ದುಃಖದ ಸಮಾದಿಯ ಮೇಲೆ ಹತಾಷೆಯ ಹೂಗಳು...., ಸಮಾದಿಯ ಕೆಳಗೆ ಒಂದಷ್ಟು ನೆನಪುಗಳು...,
ಎಲ್ಲವೂ ಅಳುತ್ತಾವೆ ಗೆಳೆಯ.....,
ನಿಟ್ಟುಸಿರಿನ ನಡುವೆ ಇರುವ ನಾವುಗಳು.....,
ಮರೆತು ಮರೆತಂತೆ ಇರುವ ಕೆಲಸಗಳು....,
ಎಚ್ಚರಿಸುತ್ತಿವೆ ನಾಳೆಯಾ....,

ಮಾಧ್ಯಮದ ಅಂಗಡಿಗಳು ಮತ್ತು ಪತ್ರಕರ್ತರು!

ಕಾಸ್ಟ್ ಕಟಿಂಗ್ ಮತ್ತು ನಿಶ್ಚಿತ ಆದಾಯದ ಕೊರತೆಯಿಂದ ಮಾಧ್ಯಮ ಸಂಸ್ಥೆಗಳು ಪತ್ರಕರ್ತರನ್ನು ಪರ್ಫಾರ್ಮೆನ್ಸ್ ವೀಕ್ ಎಂಬ ಕಾರಣ ನೀಡಿ ತೆಗೆಯುವ ಪ್ರಕ್ರಿಯೆ ಈಗ ನಡೆಯುತ್ತ...